Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 19.03.2021

ಧೈನಂದಿನ ಧ್ಯಾನ(Kannada) – 19.03.2021

ನಂಬಿಕೆ

"ಆತನು ನನ್ನನ್ನು ಕೊಂದರೂ ನಾನು ಆತನಲ್ಲಿ ಭರವಸೆ ಇಡುವೆನು,..." - ಯೋಬ 13:15

ಹಡಗೊಂದು ಹೊರಟಿತು, ಎಲ್ಲರೂ ಬಹಳ ಸಂತೋಷದಿಂದ ಪ್ರಯಾಣ ಮಾಡಿದರು. ಅದರಲ್ಲಿ ವಯಸ್ಸಾದ ಒಬ್ಬ ನಾವಿಕನು ಹೋದರು. ಸ್ವಲ್ಪ ದೂರ ಹೋದಾಗ ದಿಢೀರೆಂದು ಗಾಳಿ, ಬಿರುಗಾಳಿ ಬೀಸಿ, ಹಡಗು ಬಹಳ ಅಲುಗಾಡಿತು. ಆಗ ಆ ಹಡಗನ್ನು ಓಡಿಸುತ್ತಿದ್ದ ನಾವಿಕನಿಗೆ ಏನು ಮಾಡುವುದೆಂದು ತಿಳಿಯದೆ ಇರುವಾಗ, ಅಲ್ಲಿದ್ದ ವಯಸ್ಸಾಗಿದ್ದ ಆ ನಾವಿಕ ಹೇಳಿದರು, ಹಡಗನ್ನು ಒಂದು ಸ್ಥಿತಿಯಲ್ಲಿ ನಿಲ್ಲಿಸಿ ಅಲ್ಲೇ ಅದನ್ನು ನಿಲ್ಲಿಸಿಬಿಡು ಎಂದು. ಅದರಂತೆ ಆ  ಹಡಗಿನ ನಾವಿಕನು ಕೆಲವು ಗಂಟೆಗಳು ಹೋರಾಡಿ ಹಡಗು ನಿಲ್ಲುವಂತೆ ಮಾಡಿದನು. ಕೆಲವೇ ಗಂಟೆಗಳಲ್ಲಿ ಬಿರುಗಾಳಿಯ ದಿಕ್ಕು ಬದಲಾಯಿತು ಆಗ ಇವರು ಹೊರಟರು. ಹಡಗಿನ ನಾವಿಕ ಆ ವಯಸ್ಸಾದ ನಾವಿಕನಿಗೆ ಕೃತಜ್ಞತೆ ಹೇಳಿದನು. ಆಗ ಅವರು "ಭಯಂಕರವಾದ ಬಿರುಗಾಳಿ ಬೀಸುವಾಗ ನಾವು ಹಡಗನ್ನು ಒಂದು ಸ್ಥಿತಿಯಲ್ಲಿ ನಿಲ್ಲಿಸಿ ಅದನ್ನು ಅಲ್ಲಿಯೇ ನಿಲ್ಲಿಸಬೇಕು" ಎಂಬುದನ್ನು ಮರೆಯಬೇಡ ಎಂದರು.

ಯೋಬನೆಂಬ ಧನವಂತನಾಗಿದ್ದ ಮನುಷ್ಯನು ತನ್ನ ಜೀವನದಲ್ಲಿ ಬಿರುಗಾಳಿಯಂತಹ ಹಲವು ಹೋರಾಟಗಳು ಎದ್ದೇಳಿದರೂ ಯೇಸುಕ್ರಿಸ್ತನ ಮೇಲೆ ನಂಬಿಕೆಯಿಂದಿರುತ್ತೇನೆ ಅನ್ನುತ್ತಾರೆ. ಯೋಬನಿಗೆ 10 ಮಕ್ಕಳು, ಕುರಿ, ದನ, ಒಂಟೆಗಳು, ಕತ್ತೆಗಳು, ಅನೇಕ ಕೆಲಸಗಾರರು ಎಂದೆಲ್ಲಾ ಬಹಳ ಐಶ್ವರ್ಯವಂತನಾಗಿದ್ದನು. ಅವನನ್ನು ಊರಿನವರು ಗೌರವಿಸಿದರು, ಮರ್ಯಾದೆ ಕೊಟ್ಟರು. ಆದರೆ ಒಂದು ದಿನ ಅವನ ಜೀವನದಲ್ಲಿ ಬಿರುಗಾಳಿ ಬೀಸುವಾಗ ಒಂದೇ ದಿನದಲ್ಲಿ ತನ್ನ ಮಕ್ಕಳು, ಕುರಿ, ದನ, ಒಂಟೆಗಳು, ಕತ್ತೆಗಳು, ಕೆಲಸಗಾರರು ಎಂದು ಎಲ್ಲವನ್ನು ಕಳೆದುಕೊಂಡನು. ಆಗ "ಕರ್ತನು ಕೊಟ್ಟರು ಕರ್ತನೇ ತೆಗೆದುಕೊಂಡರು, ಕರ್ತನ ನಾಮಕ್ಕೆ ಸ್ತೋತ್ರವಾಗಲಿ" ಎಂದನು. ಮರುದಿನ ಅವನ ಶರೀರ ಪೂರ್ತಿಯಾಗಿ ಹುಣ್ಣುಗಳಿಂದ ತುಂಬಿಕೊಂಡಿತು ಅವನು ಶರೀರವನ್ನೆಲ್ಲಾ ಕೆರೆದುಕೊಳ್ಳುತ್ತಿದ್ದನು. ತನ್ನ ಜೀವನವೆಂಬ ಹಡಗಿನಲ್ಲಿ ನಂಬಿಕೆ ಎಂಬ ಹಡಗಿನ ನಂಗೂರವಾಗಿರುವ (ಆಂಕರ್) ಯೇಸುಕ್ರಿಸ್ತನ ಮೇಲೆ ಹಾಕಿ ಅವರು ನನ್ನನ್ನು ಕೊಂದುಹಾಕಿದರು ಅವರ ಮೇಲೆ ನಂಬಿಕೆಯಿಂದ ಇರುತ್ತೇನೆ ಎಂದನು. ನನ್ನ ಜೀವ ಬೇರ್ಪಟ್ಟರು ನಾನು ನಂಬುವ ನನ್ನ ದೇವರು ನನ್ನ ಆತ್ಮವನ್ನು ಬಿಡಿಸಲು ಶಕ್ತನು ಎಂಬುದನ್ನು ಯೋಬನು ಅರಿತಿದ್ದನು. ಕೊನೆಗೆ ತನ್ನ ಜೀವವನ್ನು ಮಾತ್ರವಲ್ಲ ಎರಡರಷ್ಟು ಆಶೀರ್ವಾದವನ್ನು ಕೂಡ ಹೊಂದಿಕೊಂಡನು.

ಇದನ್ನು ಓದುತ್ತಿರುವ ಸ್ನೇಹಿತರೇ! ನಿಮ್ಮ ಜೀವನದಲ್ಲಿ ಬಿರುಗಾಳಿಯಂತಹ ಕಷ್ಟಗಳು ದುಃಖಗಳು ಎದ್ದೇಳುವಾಗ ಏನು ಮಾಡುತ್ತೀರ? ಕಂಗೆಟ್ಟು, ಉದ್ವೇಗಗೊಂಡು, ಜೀವನದ ಹಡಗನ್ನು ಹಾಳುಮಾಡಿ ಬಿಡಬೇಡಿರಿ.  ನಿಮ್ಮ ನಂಬಿಕೆ ಎಂಬ ನಂಗೂರವು (ಆಂಕರ್)ಯೇಸುಕ್ರಿಸ್ತನ  ಮೇಲೆ ಹಾಕಿ ನೆಲೆಗೊಳ್ಳುವಂತೆ ಮಾಡಿರಿ ನಿಮ್ಮ ಜೀವನದಲ್ಲಿಯೂ ಆಶೀರ್ವಾದವನ್ನು ಹೊಂದಿಕೊಳ್ಳುವುದು ಖಂಡಿತ.
-    Mrs. ಜಾಸ್ಮಿನ್ ಪಾಲ್

ಪ್ರಾರ್ಥನಾ ಅಂಶ:-
ದಿನವೂ ಮುಂಜಾನೆ 5 ಗಂಟೆಗೆ Jiomeet App ನಲ್ಲಿ ನಡೆಯುತ್ತಿರುವ ಆನ್ಲೈನ್ ಪ್ರಾರ್ಥನೆಯಲ್ಲಿ ಅನೇಕರು ಭಾಗವಹಿಸುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)