Village Missionary Movement

கிராம மிஷனரி இயக்கம்


ಧೈನಂದಿನ ಧ್ಯಾನ(Kannada) – 02.01.2021

ಧೈನಂದಿನ ಧ್ಯಾನ(Kannada) – 02.01.2021

ನೀವು ಯಾರು?

"ನಿಮ್ಮ ಹೃದಯವು ಕಳವಳಗೊಳ್ಳದೆ ಇರಲಿ;.... ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು;” - ಯೋಹಾನ 14:1-3

"If you" ಎಂಬ ಇಂಗ್ಲಿಷ್ ಕವಿತೆಗಳು ಅಡಗಿರುವ ಪುಸ್ತಕದಲ್ಲಿ ಪರಲೋಕದಲ್ಲಿ ನಡೆಯುವ ಸಂಭಾಷಣೆಗಳು ಬರೆಯಲ್ಪಟ್ಟಿರುತ್ತವೆ. ಅದರಲ್ಲಿ ಒಬ್ಬರು ತಾನು ಕಂಡ ಕನಸಿನಲ್ಲಿ ಬೆಳಕು ತುಂಬಿದ್ದು ಅಮೃತ ಶಿಲೆಯಂತೆ ನೀರು ಝಳಝಳ ಎಂದು ಹರಿಯುವ ಹಾಗೆ ಒಂದು ಸ್ಥಳದಲ್ಲಿ ನಿಂತಿರುವುದನ್ನು ಕಂಡರು. ಆಗ ಅವರ ಬೆನ್ನಿನ ಹಿಂದೆ ಒಬ್ಬರು, "ಸಹೋದರನೇ ಕರ್ತನಿಗೆ ಸ್ತೋತ್ರ"ಎಂದರು. "ನೀವು ಯಾರು? ನಿಮ್ಮನ್ನು ನಾನು ನೋಡಿದ ಹಾಗೆ ಜ್ಞಾಪಕವಿಲ್ಲ ವೇ"ಎಂದರು ಮೊದಲ ವ್ಯಕ್ತಿ.  "ಇಲ್ಲ, ಒಂದು ಬಾರಿ ನನ್ನನ್ನು ನೋಡಿದ್ದೀರ. ನಮ್ಮ ಬೀದಿಯಲ್ಲಿ ನೀವು ಬಂದು ಕೊಟ್ಟ ಸುವಾರ್ತೆಯ ಪತ್ರಿಕೆ ಓದಿದ್ದರಿಂದಲೇ ಯೇಸುವನ್ನು ತಿಳಿದುಕೊಂಡು ರಕ್ಷಿಸಲ್ಪಟ್ಟೆನು. ಇಂದು ನಾನು ಪರಲೋಕದಲ್ಲಿ ಇರುವುದಕ್ಕೆ ಮುಖ್ಯ ಕಾರಣ ನೀವೇ"ಎಂದರಂತೆ. ಇದರಂತೆ ಮತ್ತೆ ಮತ್ತೆ ಒಬ್ಬೊಬ್ಬರಾಗಿ ಬಂದು ನಾವು ಪರಲೋಕದಲ್ಲಿ ಇರುವುದಕ್ಕೆ ಕಾರಣವೇ ನೀವೇ ಎಂದು ಹೇಳಿದರಂತೆ.

ಹೌದು, ಅಪೊಸ್ತಲನಾದ ಪೌಲನು ಕೊರಿಂಥ ಸಭೆಯವರಿಗೆ ಬರೆಯುವಾಗ, ಕರ್ತನಲ್ಲಿ ನೀವು ಪಡುವ ಪ್ರಯಾಸ ವ್ಯರ್ಥವಾಗುವುದಿಲ್ಲವೆಂದು ತಿಳಿದು, ಕರ್ತನ ಕಾರ್ಯದಲ್ಲಿ ಯಾವಾಗಲೂ ಅಭಿವೃದ್ಧಿಯಾಗುವವರಾಗಿರಿ (1ಕೊರಿಂಥ.15:58) ಎನ್ನುತ್ತಾರೆ. ನಮ್ಮ ದೇವರ ರಾಜ್ಯ ವಿಸ್ತರಣೆಗಾಗಿ ಮಾಡುವ ಕೆಲಸ ಚಿಕ್ಕದೋ, ದೊಡ್ಡದೋ ಯಾವುದು ವ್ಯರ್ಥವಾಗುವುದಿಲ್ಲ, ನಿಶ್ಚಯವಾಗಿ ಪ್ರತಿಫಲವುಂಟು. ನಾವು ಪರಲೋಕಕ್ಕೆ ಹೋಗುವಾಗ ಮೇಲ್ಕಂಡ ಅನುಭವವನ್ನು ನಾವು ಒಬ್ಬೊಬ್ಬರು ಚಿಂತಿಸಲಿದ್ದೇವೆ ಎಂಬುದನ್ನು ನಂಬಿರಿ. ಆದ್ದರಿಂದ ನೀವು ಮಾಡುವ ಸೇವೆಯಾಗಿರಬಹುದು ಅಥವಾ ದೇವರಿಗಾಗಿ ಮಾಡುವ ಯಾವ ಒಂದು ಕಾರ್ಯವಾಗಿರಬಹುದು ಅದರಲ್ಲಿ ನೀವು ಬೇಸರಗೊಳ್ಳಬೇಡಿರಿ. ನೀವು ಯಾರಿಗೆಲ್ಲಾ ಯೇಸು ಕ್ರಿಸ್ತನ ಪ್ರೀತಿಯನ್ನು ಕುರಿತು ಹೇಳಿದ್ದೀರೋ, ಆಸ್ಪತ್ರೆಗೆ ಹೋಗಿ ಸುವಾರ್ತೆ ಹೇಳಿ ಪ್ರಾರ್ಥಿಸಿದಿರೋ ಅವರೆಲ್ಲರನ್ನೂ ಒಂದೇ ದಿನದಲ್ಲಿ ಪರಲೋಕದಲ್ಲಿ ನೋಡಲಿದ್ದೀರ ಎಂಬುದನ್ನು ನೆನೆಸಿ ಸಂತೋಷಪಡಿರಿ.

ಒಳ್ಳೆಯ ಉತ್ತಮ ನಂಬಿಕೆಯುಳ್ಳ ಸೇವಕನೇ  ಯಜಮಾನನು ನಮ್ಮನ್ನು ಘನಪಡಿಸಿ ನಮ್ಮ ತಲೆಯ ಮೇಲೆ ಕಿರೀಟವನ್ನು ಇಡುವ ದಿನವು ಬಹಳ ಸಮೀಪವಾಗಿದೆ. ನಮಗೆ ಕೊಡಲ್ಪಡುವ ಕಿರೀಟದಲ್ಲಿ ಜೋಡಿಸಲ್ಪಟ್ಟಿರುವ ಒಂದೊಂದು ಮುತ್ತುಗಳು ಒಂದೊಂದು ಆತ್ಮಾ ಮಕ್ಕಳನ್ನು ಸೂಚಿಸುತ್ತದೆ. ನಿಮಗೆ ಮುಖ ಪರಿಚಯವಿಲ್ಲದವರು, ನೀವು ಮರೆತುಹೋದ ಅನೇಕ ಆತ್ಮಾ ಮಕ್ಕಳು ನಿಮ್ಮನ್ನು ಸಂಧಿಸಲಿದ್ದಾರೆ. ಒಬ್ಬೊಬ್ಬರ ಬಳಿಯಲ್ಲಿಯೂ ನೀವು ಯಾರು? ಎಂದು ಕೇಳುವಾಗ ನಿಮ್ಮ ಸೇವೆಯ ಪ್ರಯಾಸದ ಪ್ರತಿಫಲವಾಗಿರುವ ಆತ್ಮನ ಫಲಗಳು ಎಂದು ಹೇಳುವರು. ಆ ದಿನ ಬಹಳ ಸಮೀಪವಾಗಿದೆ! ಹಲ್ಲೇಲೂಯ!
-    P. ಜೇಕಬ್ ಶಂಕರ್

ಪ್ರಾರ್ಥನಾ ಅಂಶ:-
ಹೊಸ ಮಿಷನರಿಗಳನ್ನು ರೂಪಿಸುವಂತಹ ವರ್ಷವಾಗಿ ಮುನ್ನಡೆಯಲಿರುವ ಈ ವರ್ಷದಲ್ಲಿ ಅನೇಕ ಸೇವಕರು ರೂಪಿಸಲ್ಪಡುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482


Comment As:

Comment (0)