Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 18.04.2021 (Kids Special)
Share:

By Village Missionary Movement

Sunday, 18-Apr-2021

ಧೈನಂದಿನ ಧ್ಯಾನ(Kannada) – 18.04.2021 (Kids Special)

ವಿಧೇಯತೆ ತೋರಿದ ಮೀನು

 "....ಒಬ್ಬನ ವಿಧೇಯತ್ವದಿಂದ ಎಲ್ಲರೂ ನೀತಿವಂತರಾಗುವರು." - ರೋಮಾ 5:19

ಪ್ರೀತಿಯ ಪುಟಾಣಿಗಳೇ! ಇಂದು Bible ಹೇಳಲ್ಪಟ್ಟ ನಿಜ ಸಂಭವವನ್ನು ಕೇಳಲಿದ್ದೇವೆ. ನೀವೆಲ್ಲರೂ ರೆಡಿಯಾಗಿ ಇದ್ದೀರ? ಒಂದು ದೊಡ್ಡ ಮೀನು ಹೇಗೆ ಯೇಸಪ್ಪಾಗೆ ವಿಧೇಯತೆ ತೋರಿತು ಎಂದು ಕೇಳೋಣವಾ?

ನಿನೆವೆ ಎಂಬ ದೊಡ್ಡ ಪಟ್ಟಣ ವಿತ್ತು. ಇಲ್ಲಿ ಬದುಕುತ್ತಿದ್ದ ಜನರು ಬಹಳ ಪಾಪ ಮಾಡಿದವರಾಗಿದ್ದರು. ಹೀಗೆ ಕ್ರಮವಾಗಿ ಪಾಪ ಮಾಡುತ್ತಿದ್ದರೆ  ದೇವರಿಗೆ ಕೋಪವನ್ನೆಬ್ಬಿಸುತ್ತದಲ್ಲವಾ? ನೀವು ಕೂಡ ನಿಮ್ಮ parents-ಗೆ ಹಿಡಿಸದ ಕೆಟ್ಟ ಕಾರ್ಯಗಳನ್ನು ಮಾಡುತ್ತಲೇ ಇದ್ದರೆ ಖಂಡಿತವಾಗಿ, ವಿಧೇಯರಾಗದೇ ಹೋದಾಗ punishment ಕೊಡುತ್ತಾರೆ ತಾನೇ! ಹಾಗೆಯೇ ದೇವರು ನಿಮ್ಮನ್ನು ಅಳಿಸಲಿದ್ದಾರೆ ಎಂಬ ಸಂದೇಶವನ್ನು ನಿನೆವೆ ಪಟ್ಟಣದವರಿಗೆ ಹೇಳಲು ಯೋನ ಎಂಬ ಪ್ರವಾದಿಯನ್ನು ಕಳುಹಿಸಿದರು. ಆದರೆ ಯೋನ ನಿನೆವೆಗೆ ಹೋಗದೆ ತಾರ್ಷೀಷಿಗೆ ಹೋದರು. ಈಗಿರುವ ಕಾರ್, ಬೈಕ್, Aeroplane ಎಲ್ಲಾ ಆಗ ಇರಲಿಲ್ಲವಲ್ಲ, ಬೇರೆ ಯಾವುದರಲ್ಲಿ ಹೋಗಿರುತ್ತಾರೆ. ಹಡಗಿನಲ್ಲಿ ಹೋದರು correct ಆಗಿ ಹೇಳಿಬಿಟ್ರಿ! ನಂತರ ಏನಾಯ್ತು ಗೊತ್ತಾ?

ಸಮುದ್ರದ ಅಲೆಗಳು ಭಯಂಕರವಾಗಿ ಎದ್ದೇಳಿ, ಬಿರುಗಾಳಿ ಬೀಸಲು ಪ್ರಾರಂಭಿಸಿತು. ಹಡಗಿನಲ್ಲಿ ಪ್ರಯಾಣ ಮಾಡಿದ ಎಲ್ಲರೂ ಭಯಪಟ್ಟು ಅವರವರ ದೇವರನ್ನು ನೋಡಿ ಬೇಡಿಕೊಂಡರು. ಏನೂ ಪ್ರಯೋಜನವಾಗಲಿಲ್ಲ, ಹಡಗಿನಲ್ಲಿದ್ದ ಸರಕುಗಳನ್ನೆಲ್ಲಾ ಹಡಗಿನಲ್ಲಿ ಎತ್ತಿ ಬಿಸಾಡಿದರು. ಬದುಕಿದರೆ ಸಾಕು ಎಂಬಂತಿದ್ದರು. ಯಾವುದರಿಂದ ನಮಗೆ ಇಷ್ಟು ದೊಡ್ಡ ಆಪತ್ತು ಬಂತು ಎಂದು ಒಬ್ಬರೊಂದಿಗೆ ಒಬ್ಬರು ಮಾತಾಡಿಕೊಂಡರು. ಒಂದು ತೀರ್ಮಾನಕ್ಕೆ ಬಂದು, ನಮ್ಮೆಲ್ಲರ ಹೆಸರಿನಲ್ಲಿ ಚೀಟಿಯನ್ನು ಹಾಕಿ ನೋಡೋಣ ಎಂದು ಚೀಟು ಹಾಕಿದರು. ಯೋನನ ಹೆಸರಿಗೆ ಆ ಚೀಟಿ ಬಿತ್ತು. ಯೋನ ದೇವರಿಗೆ ವಿಧೇಯನಾಗದೆ ಬಂದದ್ದನ್ನು, ತಾನು ಯಾರು ಎಂಬ ವಿವರವನ್ನು ಹೇಳಿದನು. ಅದು ಮಾತ್ರವಾ? ನನ್ನನ್ನು ಸಮುದ್ರದಲ್ಲಿ ಎತ್ತಿ ಹಾಕಿರಿ. ಎಲ್ಲಾ ಸರಿ ಹೋಗುತ್ತದೆ ಎಂದನು. ಹಡಗಿನಲ್ಲಿ ಪ್ರಯಾಣ ಮಾಡಿದ ಎಲ್ಲರಿಗೂ ದುಃಖವಾಗಿತ್ತು. ಹಡಗು ಹೊಡೆದು ಹೋಗುವಷ್ಟು ಸಮುದ್ರದ ಗೊಂದಲವು ಅಧಿಕವಾದುದರಿಂದ, ಬೇರೆ ದಾರಿಯಿಲ್ಲದೆ ಯೋನನನ್ನು ಎತ್ತಿ ಸಮುದ್ರದೊಳಗೆ ಹಾಕಿದರು. ಎಂಥಾ ಆಶ್ಚರ್ಯ. ಸಮುದ್ರ ಪ್ರಶಾಂತವಾಯಿತು. ಎಲ್ಲರೂ ದೇವರಿಗೆ ಭಯಪಟ್ಟು ದೇವರ ಮಹತ್ತಾದ ಕ್ರಿಯೆಗಳನ್ನು ತಿಳಿದುಕೊಂಡರು. ಸಮುದ್ರದಲ್ಲಿ ಹಾಕಿದ ಯೋನ ಏನಾದರು. ಯೋನನನ್ನು ನುಂಗುವಂತೆ ದೊಡ್ಡ ಮೀನಿಗೆ ದೇವರು ಆಜ್ಞಾಪಿಸಿದ್ದರು. ಮೀನು ಹಾಗೆಯೇ ವಿಧೇಯತೆ ತೋರಿತು, ಯೋನನನ್ನು ಕಚ್ಚಿ ತಿನ್ನದೆ ಹಾಗೆಯೇ ನುಂಗಿತು. ಮೂರು ದಿನ ಕಳೆದು, ದೇವರು ಮೀನಿಗೆ ಆಜ್ಞಾಪಿಸಿದರು. ಮೀನು ವಿಧೇಯತೆಯಿಂದ ಯೋನನನ್ನು ದಡದಲ್ಲಿ ಕಕ್ಕಿ ಬಿಟ್ಟಿತು. ದೇವರು ಹೇಳಿದ ಹಾಗೆಲ್ಲಾ ಆ ಮೀನು ಮಾಡಿತು.

ಪ್ರೀತಿಯ ತಮ್ಮ ತಂಗಿ, ಸಾಧಾರಣ ಮೀನು ಕೂಡ ದೇವರ ಮಾತಿಗೆ ಹಾಗೆಯೇ ವಿಧೇಯತೆ ತೋರಿಸಿದ್ದನ್ನು ನೋಡಿದೆಯಾ? ಮೂರು ದಿನ ಏನನ್ನೂ ತಿನ್ನದೆ, ಇಷ್ಟದಂತೆ ಅಲ್ಲಿ ಇಲ್ಲಿ ಹೋಗಲಾಗದೆ ಎಷ್ಟು ಕಷ್ಟ ಪಟ್ಟಿರುತ್ತದೆ ಆ ಮೀನು, ಆದರೆ ದೇವರಿಗೆ ವಿಧೇಯತೆ ತೋರಿ ಅವರ ಚಿತ್ತವನ್ನು ನೆರವೇರಿಸಿದ ಮೀನಿನ ಹಾಗೆ ನೀನು ವಿಧೇಯನಾಗಿ ಜೀವಿಸುವುದಾದರೆ ಯೇಸು ನಿನ್ನನ್ನು ಕರೆಯುತ್ತಿದ್ದಾರೆ-ಸಮರ್ಪಿಸಿ ಕೊಳ್ಳುತ್ತೀಯ? ವಿಧೇಯನಾಗಿ ದೇವರ ಚಿತ್ತವನ್ನು ನೆರವೇರಿಸುತ್ತೀಯ?
-    Mrs. ಜೀವಾ ವಿಜಯ್

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al