Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.05.2024
Share:

By Village Missionary Movement

Tuesday, 07-May-2024

ಧೈನಂದಿನ ಧ್ಯಾನ(Kannada) – 07.05.2024

 

ಒಳ್ಳೆಯ ಕಾರ್ಯಗಳನ್ನು ಮಾಡೋಣ

 

"ಯಾರು ಪ್ರಭಾವ ಮಾನ ನಿರ್ಲಯತ್ವಗಳನ್ನು ಹೊಂದಬೇಕೆಂದು ಒಳ್ಳೇದನ್ನು ಬೇಸರಗೊಳ್ಳದೆ ಮಾಡುತ್ತಾರೋ ಅವರಿಗೆ ನಿತ್ಯಜೀವವನ್ನು ಕೊಡುವನು" - ರೋಮಾ 2:7

 

ಮೆಲೀತೆ ದ್ವೀಪದಲ್ಲಿ ಅಪೊಸ್ತಲನಾದ ಪೌಲನ ಕೈಯನ್ನು ಹಾವೊಂದು ಬಿಗಿಯಾಗಿ ಹಿಡುಕೊಂಡಿತು. ಆ ದ್ವೀಪದ ಜನರು ಪೌಲನನ್ನು ಒಬ್ಬ ಕೊಲೆಪಾತಕ ಎಂದು ಭಾವಿಸಿದರು. ಪಾಲನು ಸಾಯುತ್ತಾನೆಂದು ಎದುರುನೋಡುತ್ತಾ ಕಾಯುತ್ತಿದ್ದರು. ಪೌಲನ ಬಗ್ಗೆ ಒಬ್ಬರೂ ಚಿಂತಿಸಲಿಲ್ಲ. ಅವರನ್ನು ರಕ್ಷಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ. ಆದರೆ ಪೌಲನು ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನೆಂಬವನ ತಂದೆ ಜ್ವರದಿಂದಲೂ ಮತ್ತು ರಕ್ತಭೇದಿಯಿಂದಲೂ ಹಾಸಿಗೆ ಹಿಡಿದಿದ್ದಾಗ ಅವರಿಗಾಗಿ ಪ್ರಾರ್ಥಿಸಿ ಗುಣಪಡಿಸಿದರು. ಮತ್ತು ಇನ್ನೂ ಅನೇಕ ರೋಗಿಗಳನ್ನು ಗುಣಪಡಿಸಿದರು. ಈ ಪೌಲನ ಸಹಾಯಕ್ಕಾಗಿ, ಆ ದ್ವೀಪದವರು ಅವರಿಗೆ ಬೇಕಾದ ಎಲ್ಲವನ್ನೂ ನೀಡಿ ಗೌರವದಿಂದ ಹಡಗಿನಲ್ಲಿ ಕಳುಹಿಸಿಕೊಟ್ಟರು.

 

ನಾವು ಸಹ ಅಂತಹ ಒಳ್ಳೆಯ ಕಾರ್ಯಗಳನ್ನು ಮಾಡುವಾಗ, ಆತ್ಮಗಳು ರಕ್ಷಣೆಹೊಂದಿ ನಮಗೆ ಒಳ್ಳೆಯ ಸಂಬಂಧಗಳಾಗಿ ಮತ್ತು ಸ್ನೇಹಿತರಾಗಿ ಮಾರ್ಪಡುತ್ತಾರೆ. ಇಂಗ್ಲೆಂಡ್‌ನ ಯುದ್ಧ ವಿಜಯದ ಪ್ರಧಾನ ಮಂತ್ರಿ (War victory prime minister) ಎಂದು ಕರೆಯಲ್ಪಟ್ಟ ವಿನ್‌ಸ್ಟನ್ ಚರ್ಚಿಲ್ ರವರು ಬಾಲಕನಾಗಿದ್ದಾಗ ಒಂದು ಜೌಗು ಪ್ರದೇಶದಲ್ಲಿ ಸಿಲುಕಿಕೊಂಡರು. ನನ್ನನ್ನು ಉಳಿಸಿ ಎಂದು ಕೂಗಿದರು. ಪಕ್ಕದಲ್ಲಿದ್ದ ರೈತನೊಬ್ಬ ಓಡಿಹೋಗಿ ಕಾಪಾಡಿದರು. ಇದಕ್ಕಾಗಿ, ವಿನ್‌ಸ್ಟನ್ ಚರ್ಚಿಲ್ ಅವರು ತನ್ನ ಮಗ ಓದುವ ಅದೇ ದೊಡ್ಡ ಶಾಲೆಯಲ್ಲಿ ರೈತನ ಮಗನೂ ಸಹ ಓದಲು ಸಹಾಯ ಮಾಡಿದರು. ನಂತರ, ಪ್ರಭು ರಾಂಡೋಲ್ಫ್ ಚರ್ಚಿಲ್ ರೈತನ ಮಗನನ್ನು ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್‌ನ ಪ್ರಸಿದ್ಧ ಸೇಂಟ್ ಮೇರಿ ವೈದ್ಯಕೀಯ ಕಾಲೇಜಿನಲ್ಲಿ ಓದಲು ಕಳುಹಿಸಿದರು. ಅಲೆಕ್ಸಾಂಡರ್ ಬ್ಲೇಮಿಂಗ್ ಅವರು ಜಗತ್ಪ್ರಸಿದ್ಧ ಔಷಧ "ಪೆನ್ಸಿಲಿನ್" ಅನ್ನು ಕಂಡುಹಿಡಿದರು. ಅಲೆಕ್ಸಾಂಡರ್ ಬ್ಲೇಮಿಂಗ್ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದಾಗ ವಿನ್ಸ್ಟನ್ ಚರ್ಚಿಲ್ ಅವರ ಜೀವವನ್ನು "ಪೆನ್ಸಿಲಿನ್" ಮೂಲಕ ಉಳಿಸಿದರು.

 

ರೈತ ಬ್ಲೇಮಿಂಗ್ ಮತ್ತು ಅವರ ತಂದೆಯ ಒಳ್ಳೆಯ ಕಾರ್ಯಗಳು ವಿನ್‌ಸ್ಟನ್ ಚರ್ಚಿಲ್ ಅವರನ್ನು ಎರಡು ಬಾರಿ ಉಳಿಸಿದವು ಮತ್ತು ಎರಡನೆಯ ಮಹಾಯುದ್ಧವನ್ನು ಗೆದ್ದವು, ಅವರಿಗೆ "ಯುದ್ಧ ವಿಜೇತ ಪ್ರಧಾನ ಮಂತ್ರಿ" ಎಂಬ ಬಿರುದನ್ನು ತಂದುಕೊಟ್ಟಿತು. ಒಬ್ಬ ರೈತನ ಒಳ್ಳೆಯ ಕೆಲಸ, ಹಾಗೆಯೇ ಒಳ್ಳೆಯ ಕಾರ್ಯಕ್ಕೆ ಕೃತಜ್ಞತೆಯಾಗಿ ಉಪಕಾರ ಮಾಡಿದವರ ಕ್ರಿಯೆಯೂ ಇತ್ತು. 

 

ಕ್ರೈಸ್ತರಾದ ನಾವು ಸಹ ಒಳ್ಳೆಯ ಕೆಲಸಗಳನ್ನು ಮಾಡುವುದರಲ್ಲಿ ಬೇಸರಗೊಳ್ಳದೇ ಮಾಡುತ್ತಲೇ ಇರೋಣ. ಇಂದು ನಾವು ಉಪಕಾರಕ್ಕೆ ಯಾವ ಪ್ರತ್ಯುಪಕಾರವನ್ನೂ ಎದುರುನೋಡದೇ ಮಾಡುವ ಆಧ್ಯಾತ್ಮಿಕ ಕಾರ್ಯಗಳಿಗೂ, ಲೌಕಿಕವಾದ ಉಪಕಾರಗಳಿಗೂ ದೇವರು ಈ ಭೂಮಿಯಲ್ಲಿಯೂ, ಪರಲೋಕದಲ್ಲಿಯೂ ಪ್ರತಿಫಲ ನೀಡುವುದು ಅಧಿಕ ನಿಶ್ಚಯವಲ್ಲವೇ!

- Mrs. ಫಾತಿಮಾ ಸೆಲ್ವರಾಜ್

 

ಪ್ರಾರ್ಥನಾ ಅಂಶ:

ಜೂನ್‌ ತಿಂಗಳಿನಲ್ಲಿ ನಮ್ಮ ಮಿಷನರಿ ಮಕ್ಕಳ ಶೈಕ್ಷಣಿಕ ಅಗತ್ಯಗಳು ಪೂರೈಸಲ್ಪಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al