By Village Missionary Movement
Saturday, 06-Apr-2024ಧೈನಂದಿನ ಧ್ಯಾನ(Kannada) – 06.04.2024
ನನ್ನ ವಿಮೋಚಕನು ಜೀವ ಸ್ವರೂಪನು
"ನಾನಂತು ನನ್ನ ವಿಮೋಚಕನು ಜೀವಸ್ವರೂಪನೆಂದು ಬಲ್ಲೆನು;” – ಯೋಬ 19:25
ನಮ್ಮ ಮನೆ ದಿಸೆಯಾನವಿಲೈನಲ್ಲಿ ಶಾಲೆಯ ಆವರಣದಲ್ಲಿದೆ. ರಾತ್ರಿಯಲ್ಲಿ ಸ್ವಚ್ಛವಾಗಿರುತ್ತದೆ. ಹಿಂದೆ ಟ್ಯೂಬ್ ಲೈಟ್ ಬೆಳಕಿನಲ್ಲಿ ಕುರ್ಚಿಯಲ್ಲಿ ಕುಳಿತುಕೊಳ್ಳುವುದು ವಾಡಿಕೆ. ಒಂದು ದಿನ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ಸಂಜೆ ಏಳು ಗಂಟೆಗೆ ನಾನು ಒಬ್ಬನೇ ಕುರ್ಚಿಯ ಮೇಲೆ ಕುಳಿತಿದ್ದೆ. ಇದ್ದಕ್ಕಿದ್ದಂತೆ "ಈಗ ಹಾವು ಬಂದು ಕಚ್ಚಿದರೆ ಏನು ಮಾಡುತ್ತೀಯ?" ಎಂದು ನನ್ನೊಳಗೊಂದು ಧ್ವನಿ ಕೇಳಿಸಿತು. ನಾನು ಆ ಧ್ವನಿಯನ್ನು ಮನಸ್ಸಿನ ಭ್ರಮೆ ಎಂದು ಭಾವಿಸಿದೆ. ಅಷ್ಟರಲ್ಲೇ ಟೆಲಿಫೋನ್ ರಿಂಗಣಿಸಿತು. ನಾನು ಹೋಗಿ ಎತ್ತಿದಾಗ ನನ್ನ ಮಗ ವಿದೇಶದಿಂದ ಮಾತನಾಡಿದನು. ಭಾನುವಾರ ಮಾತ್ರ ಮಾತನಾಡುವ ಅವನು ಇಂದು ಸಮಯವಿದ್ದುದರಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿದನು. ಮಾತಾಡಿ ಮುಗಿಸಿ ಹೊರಗಿದ್ದ ಕುರ್ಚಿಯ ಮೇಲೆ ಕೂರಲು ಬಂದಾಗ ಉದ್ದನೆಯ ಹೊಳೆಯುವ ಹಾವೊಂದು ಕುರ್ಚಿಯ ಕೆಳಗಿನಿಂದ ವೇಗವಾಗಿ ಹೋಯಿತು. ಆತನು ನನ್ನನ್ನು ಕಾಪಾಡಲು ನನ್ನೊಂದಿಗೇ ಇದ್ದಾರೆ ಎಂದು ಕರ್ತನನ್ನು ಸ್ತುತಿಸಿದೆ.
ಹಾಗರಳು "ನನ್ನನ್ನು ನೋಡುವ ದೇವರು" ಎಂದು ಅವರನ್ನು ಕರೆದಳು. ಹೌದು, ನಮ್ಮ ನೋವುಗಳು, ಸಮಸ್ಯೆಗಳು ಮತ್ತು ಹೋರಾಟಗಳನ್ನು ನೋಡುವ ದೇವರು ಎಂದು ಮತ್ತು ಅವೆಲ್ಲವುಗಳಿಂದ ಅವರು ನಮಗೆ ಸಹಾಯ ಮಾಡುತ್ತಾರೆ ಎಂದು ನಾವು ನಂಬುತ್ತೇವೆಯೇ? ನಮ್ಮ ಸತ್ಕ್ರಿಯೆಗಳನ್ನು ನೋಡಿ ಪ್ರತಿಫಲ ಕೊಡುತ್ತಾರೆ ಎಂದು ಅರಿತಿದ್ದೇವೆಯೇ? ಅದೇ ಸಮಯದಲ್ಲಿ, ಅವರು ನಮ್ಮ ಹೃದಯದ ಕೆಟ್ಟ ಆಲೋಚನೆಗಳನ್ನು ಮತ್ತು ಅವುಗಳ ಪರಿಣಾಮವಾಗಿ ಮಾಡುವ ಎಲ್ಲಾ ಕೆಟ್ಟ ಕಾರ್ಯಗಳನ್ನು ನೋಡುತ್ತಾರೆ ಎಂಬ ದೇವರ ಭಯವಿದೆಯೇ?
ಮುಂದೆ ಅವರು ನಾವು ಮಾತನಾಡುವುದನ್ನು ಮೌನವಾಗಿ ಕೇಳುತ್ತಾರೆ. ದೇವರ ಮಕ್ಕಳು ಮಾತನಾಡುವುದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಆದ್ದರಿಂದ ನಾವು ನಮ್ಮ ಸಂಭಾಷಣೆ ಮತ್ತು ಮಾತುಗಳಲ್ಲಿ ಜಾಗರೂಕರಾಗಿರಬೇಕು. ನಾವು ಸಂತೋಷ ಪಡಬೇಕಾದ ಕಾರ್ಯ ಆತನು ನಮ್ಮ ಪ್ರಾರ್ಥನೆಗಳನ್ನು ಕೇಳುವಾತನು ಎಂಬುದು. ನಂತರ ಆತನು ಮಾತನಾಡುವ ದೇವರು, ನಮ್ಮ ಪ್ರಾರ್ಥನೆಗಳಿಗೆ ಉತ್ತರಿಸುವ ದೇವರು. ದೇವರ ವಾಕ್ಯಗಳು, ದೈವೀಕ ಸಂದೇಶಗಳು, ಕನಸುಗಳು, ದರ್ಶನಗಳು, ಅಂತಃಪ್ರಜ್ಞೆಗಳು, ಇಂತಹ ವೈಯಕ್ತಿಕ ಸನ್ನಿವೇಶಗಳ ಮೂಲಕ ಮಾತನಾಡಿ ನಮ್ಮ ಲೌಕಿಕ, ಆಧ್ಯಾತ್ಮಿಕ ಮತ್ತು ಸೇವೆಯ ಕಾರ್ಯಗಳಲ್ಲಿ ನಮಗೆ ಸಲಹೆ ನೀಡುತ್ತಾರೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ದೇವರನ್ನು ಅರಿಯದೇ ಇರುವವರಿಗಾಗಿ ಪ್ರಾರ್ಥಿಸಿದಾಗ, ಅವರೊಂದಿಗೆ ಮಾತನಾಡಿ ಅವರನ್ನು ರಕ್ಷಿಸುತ್ತಾರೆ. "ನನ್ನ ವಿಮೋಚಕನು ಜೀವ ಸ್ವರೂಪನು . . ." (ಯೋಬ 19:25) ಎಂಬ ದೇವರ ವಾಕ್ಯವನ್ನು ಪುನರಾವರ್ತಿಸುವ ಮೂಲಕ ನಾವು ಪ್ರತಿದಿನ ಪ್ರಾರಂಭಿಸಿದರೆ, ನಮ್ಮ ನಂಬಿಕೆಯನ್ನು ಬಲಪಡಿಸಬಹುದು ಮತ್ತು ನಾವು ಕ್ರೈಸ್ತ ಜೀವನದಲ್ಲಿ ಪ್ರಗತಿ ಹೊಂದಬಹುದು.
ಯೇಸು ಜೀವಂತವಾಗಿದ್ದಾರೆ ಎಂಬ ಸುವಾರ್ತೆಯನ್ನು ಶಿಷ್ಯರಿಗೆ ತಿಳಿಸಲು ಮಗ್ದಲದ ಮರಿಯಳು ಮತ್ತು ಬೇರೆ ಮರಿಯಳು ಬೇಗನೆ ಓಡಿದ ಹಾಗೆ ಈ ಸುವಾರ್ತೆಯನ್ನು ಪ್ರಕಟಿಸಲು ನಾವು ಸಹ ತೀವ್ರವಾಗಿರೋಣ!
- Mrs. ಗೀತಾ ರಿಚರ್ಡ್
ಪ್ರಾರ್ಥನಾ ಅಂಶ:
ಸುವಾರ್ತೆ ಶಿಬಿರದ ಮೂಲಕ ಭೇಟಿಯಾದ ಯುವಕರು ಮತ್ತು ಮಕ್ಕಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482