Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.03.2024
Share:

By Village Missionary Movement

Tuesday, 19-Mar-2024

ಧೈನಂದಿನ ಧ್ಯಾನ(Kannada) – 19.03.2024

 

ಬಲಹೀನತೆ ಅಡ್ಡಿಯಲ್ಲ

 

"...ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ…” - 2 ಕೊರಿಂಥ. 12:9

 

ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬರು ಏಳು ಮಕ್ಕಳನ್ನು ಸುಖವಾಗಿ ಹೆತ್ತರು. 8ನೇ ಭ್ರೂಣ ಉಂಟಾದಂದಿನಿಂದ ಅವರು ಬಲಹೀನರಾದರು. ಅನೇಕ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಮಗನಿಗೆ ಜನ್ಮ ನೀಡಿದರು. ಮಗುವೂ ಬಲಹೀನವಾಗಿ ಹುಟ್ಟಿ ಅಸ್ತಮಾದಿಂದ ಬಳಲುತ್ತಿತ್ತು. ಇದಕ್ಕಾಗಿ ಹಲವು ಔಷಧಗಳನ್ನು ಸೇವಿಸಿದರೂ ರೋಗ ವಾಸಿಯಾಗಲಿಲ್ಲ. ಆದರೆ ಹುಡುಗ ಬೆಳೆದು ಕ್ರಿಸ್ತನನ್ನು ಸ್ವೀಕರಿಸಿ, ಕರ್ತನಿಗಾಗಿ ವೈರಾಗ್ಯವಾಗಿ ನಿಂತನು. ಒಂದು ದಿನ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾಗ, ತಮ್ಮ ಡೈರಿಯನ್ನು ತೆರೆದು, "ಅವರ ಹೆಸರನ್ನು ಪ್ರಕಟಿಸಲು ಮತ್ತು ಸಾರಲು ನನ್ನನ್ನು ರಕ್ಷಿಸುತ್ತಾರೆ ಎಂದು ನಂಬುತ್ತೇನೆ" ಎಂದು ಬರೆದರು. ಅಂತೆಯೇ, ದೇವರು ಅವರನ್ನು ಕಾಪಾಡಿದರು. ಇವರೇ ಆರ್ಥರ್ ಮರ್ಕಾಷಿಯಸ್. ಇವರೇ ತಮಿಳುನಾಡಿನಲ್ಲಿ ನಜರೇತ್ ಪ್ರಾಂತ್ಯಕ್ಕೆ ಬಂದು ಸೇವೆ ಸಲ್ಲಿಸಿದವರು.

 

ಸತ್ಯವೇದದಲ್ಲಿಯೂ ಸಹ ಪೌಲನು ಬಲಹೀನನಾಗಿದ್ದಾಗ ಬಲಹೀನತೆಯು ಮಾರ್ಪಡಲು ಪ್ರಾರ್ಥಿಸುತ್ತಾರೆ. ಆದರೆ ದೇವರು ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ ಎಂದರು. ನನ್ನ ಬಲಹೀನತೆಯ ಬಗ್ಗೆ ಹೆಮ್ಮೆಪಡುತ್ತೇನೆ ಎಂದು ಹೇಳುವ ಮಟ್ಟಿಗೆ ಬಲಹೀನತೆಯಲ್ಲೂ ದೇವರು ನನ್ನೊಂದಿಗಿದ್ದು ನಡೆಸುತ್ತಾರೆ. ಇವರು ಅತ್ಯಧಿಕವಾದ ಬಲಹೀನತೆಯೊಂದಿಗೆ ಅನೇಕ ಪಾಡುಗಳನ್ನು ಅನುಭವಿಸಿದವರು. ಆದರೂ ಅವರು ಹೆಚ್ಚು ಸಭೆಗಳನ್ನು ಸ್ಥಾಪಿಸಿದರು. ಅವರು ಅನೇಕ ಸ್ಥಳಗಳಿಗೆ ಹೋಗಿ ಕ್ರಿಸ್ತನ ಸೇವೆಯನ್ನು ಮಾಡಿದರು. ಅನೇಕ ಪತ್ರಿಕೆಗಳನ್ನು ಬರೆದವರು. ಬಲಹೀನತೆ ಎಂದಿಗೂ ಕ್ರಿಸ್ತನ ಸೇವೆಗೆ ಅಡ್ಡಿಯಲ್ಲ. ಅಂತಹ ಅಡಚಣೆಯಿಂದ ನೀವು ಕ್ರಿಸ್ತನಿಂದ ಹಿಂದೆ ಸರಿದಿದ್ದರೆ, ಇಂದೇ ನಿಮ್ಮನ್ನು ಪುನಃ ಸಮರ್ಪಿಸಿಕೊಳ್ಳಿ. ಬಲಹೀನತೆಗಳಿದ್ದರೂ ಸತತವಾಗಿ ಕ್ರಿಸ್ತನಿಗಾಗಿ ಕಾರ್ಯಮಾಡುವಾಗ ಆತನು ತನ್ನ ಕೃಪೆಯಿಂದ ನಮ್ಮನ್ನು ಆವರಿಸಿ ಕಾದು ಕಾಪಾಡುತ್ತಾರೆ. ನಮ್ಮ ಮೂಲಕ ಅದ್ಭುತಗಳನ್ನು ಮಾಡುತ್ತಾರೆ.

 

ಇದನ್ನು ಓದುತ್ತಿರುವ ಪ್ರಿಯರೇ, ನೀವು ನಿಮ್ಮ ಬಲಹೀನತೆಯನ್ನು ನೋಡುವಾಗ ಅದು ತುಂಬಾ ದೊಡ್ಡದಾಗಿ ಕಾಣುತ್ತದೆ. ನಿಮಗೆ ವಾಗ್ದಾನ ಮಾಡಿ ನಿಮ್ಮನ್ನು ಮುನ್ನಡೆಸುತ್ತಿರುವ ದೇವರನ್ನು ನೋಡಿದರೆ, ನಿಮ್ಮ ಬಲಹೀನತೆಗಳು ಶೂನ್ಯವಾಗಿ ಕಾಣುತ್ತವೆ. ನೀವೂ ಮುಂದೆ ಸಾಗಬಹುದು. ಅವರು ಇಲ್ಲದ್ದನ್ನು ಇರುವ ಹಾಗೆ ಕರೆಯುವಾತನು. ಭಯಭೀತನಾದ ಗಿದ್ಯೋನನ ಮೂಲಕ ಭಯಂಕರವಾದ ಕೆಲಸಗಳನ್ನು ಮಾಡಿದವರು, ಯೌವನಸ್ಥನಾದ ಯೆಹೋಶುವನನ್ನು ಧೈರ್ಯ ಪಡಿಸಿ "ಸ್ಥಿರಚಿತ್ತನಾಗಿರು, ಧೈರ್ಯದಿಂದಿರು" ಎಂದು ಲಕ್ಷಾಂತರ ಜನರನ್ನು ಮುನ್ನಡೆಸಲು ಬಲಕೊಟ್ಟವರು, ಬಲಹೀನನಾದ ಪೌಲನನ್ನು ಉಪಯೋಗಿಸಿದವರು ಇಂದು ನಿಮ್ಮನ್ನೂ ಉಪಯೋಗಿಸುತ್ತಾರೆ. ಬಲಹೀನತೆಯನ್ನು ಕಂಡು ಸೋತು ಹೋಗಿ ಸುಮ್ಮನೆ ಕುಳಿತುಕೊಳ್ಳಬೇಡಿರಿ. ಕ್ರಿಸ್ತನನ್ನು ನೋಡಿ ಆತನ ಕೃಪೆಯಲ್ಲಿ ಒರಗಿ ಮುನ್ನಡೆಯಿರಿ. ಕರ್ತನು ನಿಮ್ಮ ಮೂಲಕವೂ ಮಹತ್ಕಾರ್ಯಗಳನ್ನು ಮಾಡುತ್ತಾರೆ. ಆಮೆನ್!!

- Mrs. ಅನ್ಬುಜ್ಯೋತಿ ಸ್ಟಾಲಿನ್

 

ಪ್ರಾರ್ಥನಾ ಅಂಶ:

ಈ ವರ್ಷ ಎಲ್ಲಾ 313 ತಾಲೂಕುಗಳಲ್ಲಿ ಮಕ್ಕಳ ಶಿಬಿರಗಳನ್ನು ನಡೆಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al