Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.03.2024
Share:

By Village Missionary Movement

Thursday, 07-Mar-2024

ಧೈನಂದಿನ ಧ್ಯಾನ(Kannada) – 07.03.2024

 

ಮನಗುಂದಬೇಡಿ

 

 "…ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು." - ಗಲಾತ್ಯ 6:9

 

ಒಂದು ಹಡಗು ಸಾಗುತ್ತಿತ್ತು. ಒಬ್ಬ ವಿಶ್ವಾಸಿಯು ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಒಬ್ಬ ಪ್ರಯಾಣಿಕನಿಗೆ ಸುವಾರ್ತೆಯ ಪ್ರತಿಯನ್ನು ಕೊಟ್ಟನು. ತೆಗೆದುಕೊಂಡವರು ಹೇಳಿದರು, "ನಾನೂ ಒಬ್ಬ ಕ್ರೈಸ್ತನೇ, ನಾನು ಕೂಡ ನನ್ನ ಯೌವನದಲ್ಲಿ ಇಂತಹ ಹಸ್ತಪ್ರತಿಗಳನ್ನು ಇತರರಿಗೆ ನೀಡಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ" ಎಂದರು‌. ಅದಕ್ಕೆ ಪ್ರತಿಯಾಗಿ ಸುವಾರ್ತೆಯ ಪ್ರತಿಯನ್ನು ಕೊಟ್ಟವರು ಹೇಳಿದರು, "ಹೀಗೆ ಒಬ್ಬರು ಕೊಟ್ಟದ್ದನ್ನು ಓದಿಯೇ ನಾನು ದೇವರನ್ನು ಅಂಗೀಕರಿಸಿದೆ, ಇಪ್ಪತ್ತು ವರ್ಷಗಳ ಹಿಂದೆ ಗ್ಲಾಸ್ಗೋದ ವೈಎಂಸಿಎ ಕಟ್ಟಡದ ಮುಂದೆ ಯಾರೋ ಒಬ್ಬರು ಈ ತುಂಡು ಹಸ್ತಪ್ರತಿಯನ್ನು ಕೊಟ್ಟರು. ನಾನು ಅದನ್ನು ಓದಿಯೇ ದೇವರನ್ನು ಅಂಗೀಕರಿಸಿ ಇಂದು ಸೇವೆ ಮಾಡುತ್ತಿದ್ದೇನೆ." "ಇದನ್ನು ಕೇಳುತ್ತಿದ್ದ ಪ್ರಯಾಣಿಕನಿಗೆ ಆಘಾತವಾಯಿತು. "ಆ ಸಮಯದಲ್ಲಿ ಅಲ್ಲಿ ಹಸ್ತಪ್ರತಿಯನ್ನು ಕೊಡುತ್ತಿದ್ದವನು ನಾನೇ. ಇದರಿಂದ ಪ್ರಯೋಜನವಿಲ್ಲ ಎಂದು ಆ ಸೇವೆಯನ್ನೇ ಬಿಟ್ಟುಬಿಟ್ಟೆ. ನಿಮ್ಮಂಥವರನ್ನು ರೂಪಿಸಿದ ಸೇವೆಯನ್ನು ಮುಂದುವರಿಸದೆ ಬಿಟ್ಟುಬಿಟ್ಟೆ!” ಎಂದು ಬಹಳ ದುಃಖದಿಂದ ಹೇಳಿದರು.

 

ಸತ್ಯವೇದದಲ್ಲಿಯು ಸಹ ನಾವು ನೋಡುವಾಗ ಪೌಲನನ್ನು ದೇವರು ಆರಿಸಿಕೊಂಡರು. ಅನೇಕ ಜನರಿಗೂ, ಅನ್ಯಜನರಿಗೂ ಯೇಸುವಿನ ದೃಷ್ಟಾಂತಗಳನ್ನು ವಿವರಿಸಿದರು. ದೇವರು ಪೌಲನ ಮೂಲಕ ಅದ್ಭುತಗಳನ್ನು ಮಾಡಿದರು. ಕ್ರಿಸ್ತನ ಹೆಜ್ಜೆಗಳನ್ನು ಅನುಸರಿಸಲು ಅವರು ಅನೇಕ ಜನರಿಗೆ ಬೋಧಿಸಿದರು. ಇನ್ನೂ ಅನೇಕ ಪತ್ರಗಳನ್ನು ಬರೆಯಲು ಮತ್ತು ಸಭೆಗಳನ್ನು ಸ್ಥಾಪಿಸಲು ದೇವರು ಸಹಾಯ ಮಾಡಿದರು. ಸಭೆಗಳಿಗೆ ಭಕ್ತಿ ವೃದ್ಧಿಯಾಗುವ ವಿಷಯಗಳನ್ನು ಹೇಳಿದರು. ಇದರ ನಿಮಿತ್ತವಾಗಿ ಎಷ್ಟೋ ಪಾಡುಗಳು, ಜೈಲುವಾಸ, ಪೆಟ್ಟುಗಳುಬಿದ್ದರೂ ದಣಿಯದೆ ತನಗೆ ದಯಪಾಲಿಸಿದ ಸೇವೆಯನ್ನು ನೆರವೇರಿಸಿ ಮುಗಿಸುತ್ತಾರೆ.

 

ಇದನ್ನು ಓದುತ್ತಿರುವ ಪ್ರಿಯರೇ! ನಾವು ಸಹ ದೇವರಿಗಾಗಿ ಮಾಡುವ ಸಣ್ಣಪುಟ್ಟ ಕೆಲಸಗಳಲ್ಲಿ ಫಲವಿಲ್ಲ ಎಂದು ಅನಿಸಿದರೂ, ಅನೇಕ ಪ್ರಯತ್ನಗಳು ವಿಫಲವಾದಂತೆ ಕಂಡರೂ ದಣಿಯದೆ ಉತ್ಸಾಹದಿಂದ ದೇವರ ಸೇವೆಯನ್ನು ಮಾಡೋಣ. ನನ್ನಿಂದ ಈ ಸೇವೆಯಲ್ಲಿ ಏನೂ ಪ್ರಯೋಜನವಿಲ್ಲ ದೇವರಿಗೂ ನನ್ನಿಂದ ಪ್ರಯೋಜನವಿಲ್ಲ ಎಂದು ಚಿಂತಿಸಬೇಡಿ, ದಣಿಯಬೇಡಿ, ನಿರುತ್ಸಾಹಗೊಳ್ಳಬೇಡಿ. ದೇವರ ಮಗುವೇ! ಸಮರ್ಪಿತ ಸೇವೆಯು, ನಿಷ್ಠಾವಂತ ಸೇವೆ, ಪ್ರಾರ್ಥನಾ ಸೇವೆ ಎಂದಿಗೂ ವಿಫಲವಾಗುವುದಿಲ್ಲ! ಇದು ಖಂಡಿತವಾಗಿಯೂ ಫಲ ನೀಡುತ್ತದೆ. ನೀರಿನ ಮೇಲೆ ಹಾಕಲ್ಪಟ್ಟ ಆಹಾರವು ಹಲವಾರು ದಿನಗಳ ನಂತರ ಫಲ ನೀಡುತ್ತದೆ. ನಿಮ್ಮ ಬಾಯಿಂದ ಹೊರಡುವ ದೇವರ ವಾಕ್ಯವು ಖಾಲಿಯಾಗಿ ಹಿಂತಿರುಗುವುದಿಲ್ಲ. ಹಲ್ಲೇಲೂಯಾ!

- T. ಕಾಮರಾಜ್

 

ಪ್ರಾರ್ಥನಾ ಅಂಶ:

ನಮ್ಮ ಆಸ್ಪತ್ರೆ ಸೇವೆಗಳಿಗೆ ಸಮರ್ಪಣೆಯುಳ್ಳ ವೈದ್ಯರು ಸಿಗುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al