Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 17.01.2024
Share:

By Village Missionary Movement

Wednesday, 17-Jan-2024

ಧೈನಂದಿನ ಧ್ಯಾನ(Kannada) – 17.01.2024

 

ವಿಶ್ವಾಸಿ ಒಂದು ಬೀಜ

 

"…ಗೋದಿಯ ಕಾಳು ಭೂಮಿಯಲ್ಲಿ ಬಿದ್ದು ಸಾಯದಿದ್ದರೆ ಒಂದೇಯಾಗಿ ಉಳಿಯುವದು; ಸತ್ತರೆ ಬಹಳ ಫಲಕೊಡುವದು" - ಯೋಹಾನ 12:24

 

ಕ್ರೈಸ್ತ ಇತಿಹಾಸದಲ್ಲಿ ವಿಧವಿಧವಾದ ಬೀಜಗಳಿವೆ.

 

1) ಮೊದಲ ಮೂಲಪಿತೃಗಳು ಎಂಬ ಬೀಜಗಳು: ಸತ್ಯವೇದದಲ್ಲಿ ಅಬ್ರಹಾಮನು ವಿಶ್ವಾಸಿಗಳ ತಂದೆ ಎಂದು ಕರೆಯಲ್ಪಟ್ಟರು. ಅಬ್ರಹಾಮನೆಂಬ ಬೀಜದಿಂದ ಕೋಟ್ಯಾನುಕೋಟಿ ಫಲಗಳು ಉಂಟಾಗಿದೆ.

 

2) ಆದಿ ಅಪೊಸ್ತಲರೆಂಬ ಬೀಜಗಳು: ಆದಿ ಅಪೊಸ್ತಲರು ತಮ್ಮನ್ನು ಬೀಜಗಳಾಗಿ ಒಪ್ಪಿಸಿದ ಪರಿಣಾಮವಾಗಿ ಇಂದು ಜಗತ್ತಿನಲ್ಲಿ ಕೋಟ್ಯಂತರ ಜನರು ವಿಶ್ವಾಸಿಗಳಾಗಿದ್ದಾರೆ. 

 

3) ಆದಿ ಮಿಷನರಿಗಳೆಂಬ ಬೀಜಗಳು: ದೇಶಬಿಟ್ಟು ದೇಶ ಬಂದ ಸಾವಿರಾರು ಮಿಷನರಿಗಳು ಬೀಜಗಳಾಗಿ ಕಾರ್ಯನಿರ್ವಹಿಸಿದ್ದರಿಂದಲೇ ಲಕ್ಷಾಂತರ ಅವಿದ್ಯಾವಂತರು, ಅನಾಗರೀಕರು ಮತ್ತು ಆದಿವಾಸಿಗಳು ವಿಶ್ವಾಸ ಬೀಜಗಳಾಗಿ ಲೋಕದೆಲ್ಲೆಡೆ ಇದ್ದಾರೆ. 

 

ಹೀಗೆ ಶತಕೋಟಿ ಬೀಜಗಳು ಸತತವಾಗಿ ಫಲ ನೀಡುತ್ತಿರುವುದನ್ನು ಅರಿತಿದ್ದೇವೆ. ಮತ್ತೊಂದೆಡೆ, ಈ ಬೀಜಗಳು ನಾಶವಾಗುತ್ತಿದೆ. ಕಾರಣವೇನೆಂದರೆ, ನಾವು ಆರಂಭದಲ್ಲಿ ಕಂಡ ಮೂರು ಬೀಜಗಳು ಪಟ್ಟ ಪಾಡುಗಳು, ತ್ಯಾಗಗಳು ಮತ್ತು ಚಟುವಟಿಕೆಗಳು ಇಲ್ಲದ್ದರಿಂದ ಬೀಜಗಳು ನಾಶವಾಗುತ್ತಿವೆ, ನಕಲಿಯಾಗುತ್ತಿವೆ ಮತ್ತು ನಿಷ್ಪ್ರಯೋಜಕವಾಗುತ್ತಿವೆ.

 

ಉತ್ತರ ಅಮೆರಿಕಾದಲ್ಲಿ ಒಂದು ಜಾತಿಯ ಪಕ್ಷಿಗಳು ಅಳಿದುಹೋಗುತ್ತಿದ್ದವು. ಅವುಗಳನ್ನು ಕಾಪಾಡಲು, ಆ ದೇಶದ ಸರ್ಕಾರವು ಪಕ್ಷಿಗಳನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಇರಿಸಿತು. ಆದ್ದರಿಂದ ಪಕ್ಷಿ ಪ್ರಭೇದಗಳು ಅಭಿವೃದ್ಧಿಯಾದವು. ಅದು ಎಣಿಕೆಗೆ ಮೀರಿ ಅಭಿವೃದ್ಧಿಯಾಗಲು ಅವುಗಳನ್ನು ಸ್ವಂತಂತ್ರವಾಗಿ ಹಾರಲು ಬಿಡಲು ನಿರ್ಧರಿಸಿತು. ಅವುಗಳನ್ನು ಸುರಕ್ಷಿತ ಸ್ಥಳದಿಂದ ಹಾರಲು ಬಿಟ್ಟರು. ಕಾಲಾನಂತರದಲ್ಲಿ, ಅವರು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿರುವುದನ್ನು ತಿಳಿದರು ಮತ್ತು ಅದನ್ನು ಉಳಿಸಿಕೊಳ್ಳಲು ಅದನ್ನು ತಮ್ಮ ಸ್ಥಳಕ್ಕೆ ಮರಳಿ ತಂದರು. ಈಗ ಅದಕ್ಕೆ ಪ್ರಚಂಡ ತರಬೇತಿ ನೀಡಲಾಯಿತು. ತಾನಾಗಿ ಆಹಾರವನ್ನು ಹುಡುಕುವುದು ಹೇಗೆ? ಗೂಡುಗಳನ್ನು ಹೇಗೆ ನಿರ್ಮಿಸುವುದು? ಅವುಗಳ ಮರಿಗಳಿಗೆ ಆಹಾರ ನೀಡುವುದು ಹೇಗೆ? ಮರಿಗಳನ್ನು ರಕ್ಷಿಸುವುದು ಹೇಗೆ? ಎಂದು ತರಬೇತಿಗಳನ್ನೂ ನೀಡಲಾಯಿತು. ಪುನಃ ಸ್ವತಂತ್ರವಾಗಿ ಹಾರಲು ಬಿಟ್ಟಾಗ, ಮತ್ತೆ ಪಕ್ಷಿ ಪ್ರಭೇದಗಳು ಅಭಿವೃದ್ಧಿಯಾಗಲು ಪ್ರಾರಂಭಿಸಿದವು ಎಂದು ಉತ್ತರ ಅಮೆರಿಕಾದ ಪಕ್ಷಿಧಾಮದ ಇತಿಹಾಸವು ಹೇಳುತ್ತಿದೆ. 

 

ಅದೇ ರೀತಿ, ಅನೇಕ ಚರ್ಚುಗಳು ತಮ್ಮ ವಿಶ್ವಾಸಿಗಳನ್ನು ಸೆರೆಯಾಳುಗಳಾಗಿ, ನಂಬಿಕೆಯಲ್ಲಿ ಮಕ್ಕಳಾಗಿ ಇಟ್ಟುಕೊಂಡು ಅವರನ್ನು ರಕ್ಷಿಸುವ ಹೆಸರಿನಲ್ಲಿ ನಾಶಪಡಿಸುತ್ತಿವೆ. ಈ ವಿಶಾಲ ಜಗತ್ತಿನಲ್ಲಿ ವಿಶ್ವಾಸಿಗಳೆಂಬ ಗುಂಪನ್ನು ಹೆಚ್ಚಿಸಲು ಅವರು ಪಾಡುಗಳ ನಡುವೆಯೂ ತರಬೇತಿ ನೀಡಬೇಕು. ಪ್ರತಿಯೊಬ್ಬ ವಿಶ್ವಾಸಿಗಳು ನಂಬಿಕೆಯ ಹೋರಾಟದ ಕ್ಷೇತ್ರವನ್ನು ಪ್ರವೇಶಿಸಬೇಕು. ಆಗ ಅದು ವಿಶ್ವಾಸಿಗಳ ದೊಡ್ಡ ಸಭೆಯನ್ನು ಕಟ್ಟಲು ಬೀಜವಾಗಿ ಕಾರ್ಯನಿರ್ವಹಿಸುವುದರಲ್ಲಿ ಸಂಶಯವೇ ಇಲ್ಲ.

- D. ಸೆಲ್ವರಾಜ್

 

ಪ್ರಾರ್ಥನಾ ಅಂಶ:

ನಮ್ಮ ಮಾಧ್ಯಮ ಸೇವೆಗಳಿಗೆ ಅಗತ್ಯವಾಗಿರುವ ಉಪಕರಣಗಳನ್ನು ತೆಗೆದುಕೊಳ್ಳಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al