By Village Missionary Movement
Saturday, 03-Apr-2021ಧೈನಂದಿನ ಧ್ಯಾನ(Kannada) – 03.04.2021
ಮೂರೆ ಮಾತು
"ಸತ್ತವನಾದೆನು, ಮತ್ತು ಇಗೋ ಯುಗಯುಗಾಂತರಗಳಲ್ಲಿಯೂ ಬದುಕುವವನಾಗಿದ್ದೇನೆ;..." - ಪ್ರಕಟಣೆ 1:18
1943-ನೇ ವರ್ಷ, ರಷ್ಯಾ ದೇಶದ ಸರ್ವಾಧಿಕಾರಿಯಾಗಿದ್ದ ಹಿಟ್ಲರ್ ಮುತ್ತಿಗೆ ಹಾಕಿ, ಅದರ ದೊಡ್ಡ ಪ್ರಾಂತ್ಯವನ್ನು ಹಿಡಿದರು. ರಷ್ಯಾ ಸರ್ಕಾರಕ್ಕೆ ಹಿಟ್ಲರ್ ಸೈನ್ಯವನ್ನು ಎದುರಿಸಿ ನಿಲ್ಲಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ ಈಸ್ಟರ್ ಬಂತು. ಕಮ್ಯುನಿಸ್ಟ್ ದೇಶವಾಗಿದ್ದ ರಷ್ಯಾ ಮೊದಲೇ ಎಲ್ಲಾ ಆಲಯಗಳನ್ನು ಮುಚ್ಚಿಸಿ ಬಿಟ್ಟಿದ್ದರೂ ಒಂದೇ ಒಂದು ಆಲಯ ಮಾತ್ರ ತೆರೆದಿತ್ತು. ಅದರಲ್ಲಿ ತುಂಬಿ ಹರಿಯುತ್ತಿದ್ದ ಜನಸಾಗರ ಅಷ್ಟಿಷ್ಟಲ್ಲ. ಅದರ ಬೋಧಕರು ಉತ್ಸಾಹದಿಂದ ಸಂದೇಶ ಕೊಟ್ಟರು. ವಿಶ್ವಾಸಿಗಳಿಗೆ ಆನಂದವು ಉಕ್ಕಿ ಹರಿಯುತ್ತಿತ್ತು. ಆದರೆ ಮುಂಜಾನೆಯೇ ಸೇವಕರನ್ನು ಸೆರೆ ಹಿಡಿಯಲಾಯಿತು. ಅವರನ್ನು ಕರೆದುಕೊಂಡು ಹೋಗುವುದಕ್ಕಿಂತ ಮುಂಚೆ ಮೂರೆ ಮೂರು ಮಾತುಗಳನ್ನು ಮಾತ್ರ ಮಾತಾಡುವಂತೆ ಅನುಮತಿ ಕೇಳಿದರು. "ಸರಿಯಾಗಿ ಮೂರೇ ಮೂರು ಮಾತುಗಳು ಮಾತ್ರವೇ" ಎಂದು ಅಧಿಕಾರಿಗಳು ಕಠಿಣವಾದ ಧ್ವನಿಯೊಂದಿಗೆ ಅನುಮತಿ ಕೊಟ್ಟರು. ಅವರು ಮಾತಾಡಿದ ಮೂರು ಮಾತುಗಳು ಏನು ಗೊತ್ತಾ?"ಯೇಸು ಜೀವಂತವಾಗಿದ್ದಾರೆ, ಹಲ್ಲೇಲೂಯ" ಅವರು ಹಾಗೆ ಹೇಳಿ ಮುಗಿಸಿದ ಕೂಡಲೇ ಸಭೆಯವರು, ಸಾಮಾನ್ಯ ಜನರು ಎಲ್ಲರೂ ಸೇರಿ ಈ ಮಾತುಗಳನ್ನು ಪುನಃ ಶಬ್ಧವಾಗಿ ಹೇಳಿದರು. ಅವರ ನಂಬಿಕೆಯು ಬಲಪಟ್ಟಿತು.
ಯೇಸುಕ್ರಿಸ್ತನು ಈ ಲೋಕದಲ್ಲಿ ಮನುಷ್ಯನಾಗಿ ಬಂದು 33½ ವರ್ಷ ಜೀವಿಸಿದರು. ಅದರಲ್ಲಿ 3½ ವರ್ಷ ಸೇವೆ ಮಾಡಿ, ನಮ್ಮ ಪಾಪಗಳಿಗಾಗಿ ಶಿಲುಬೆಯಲ್ಲಿ ಜಡಿಯಲ್ಟಟ್ಟು ಸತ್ತು ಹೂಣಲ್ಪಟ್ಟರು. ಅವರೊಂದಿಗಿದ್ದ ಶಿಷ್ಯರು ಯೇಸು ಸತ್ತುಹೋದರು ಇನ್ನು ನಾವು ಏನು ಮಾಡುವುದು ಎಂದು ಭಯಪಟ್ಟರು. ಯೇಸುವಿನ ಹಾಗೆ ನಮ್ಮನ್ನು ಕೊಂದು ಹಾಕಿ ಬಿಡುತ್ತಾರೋ ಎಂದು ನೆನೆಸಿ ಒಂದು ಮುಚ್ಚಲ್ಪಟ್ಟ ಕೋಣೆಯೊಳಗೆ ಇದ್ದರು. ಯೇಸು ಸತ್ತು ಮೂರನೇ ದಿನದಲ್ಲಿ ಜೀವಂತವಾಗೆದ್ದು ಭಯಪಡಬೇಡಿರಿ ಎಂದು ಹೇಳಿದರು. ನಂತರ 40 ದಿನಗಳವರೆಗೆ ಜೀವವುಳ್ಳವರಾಗಿ ತನ್ನನ್ನು ಅನೇಕರಿಗೆ ತೋರಿಸಿದರು. ಪರಲೋಕಕ್ಕೆ ಏರಿ ಹೋಗುವುದಕ್ಕಿಂತ ಮುಂಚೆ ಯುಗದ ಸಮಾಪ್ತಿಯವರೆಗೆ ಎಲ್ಲಾ ದಿವಸ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದ ಯೇಸು ಇಂದಿಗೂ ಜೀವಂತವಾಗಿ ನಮ್ಮೊಳಗೆ ಇದ್ದಾರೆ. ನಮ್ಮೊಂದಿಗೆ ವಾಸಮಾಡುತ್ತಿದ್ದಾರೆ.
ಕ್ರಿಸ್ತನಲ್ಲಿ ಪ್ರಿಯರೇ! ನಿಮ್ಮ ಜೀವನದಲ್ಲಿರುವ ಸಮಸ್ಯೆಗಳನ್ನು ನೆನೆಸಿ ಚಿಂತಿಸುತ್ತಾ ಭಯಪಡುತ್ತಿದ್ದೀರ? ಎಲ್ಲರಿಂದಲೂ ಕೈ ಬಿಡಲ್ಪಟ್ಟು ಇನ್ನು ಯಾರು ನನಗೆ ಸಹಾಯ ಮಾಡಲು ಸಾಧ್ಯ ಎಂದು ಯೋಚಿಸುತ್ತಿದ್ದೀರ? ಸೋತು ಹೋಗಬೇಡಿರಿ. ಯೇಸು ಒಂದು ಹೊಸ ಪ್ರಾರಂಭವನ್ನು ನಿಮ್ಮ ಜೀವನದಲ್ಲಿ ಕೊಡಲು ಶಕ್ತನು, ಕಾರಣ ಅವರು ಜೀವಂತವಾಗಿದ್ದಾರೆ. ಜೀವಂತವಾಗಿರುವ ಯೇಸುವಿನ ಬಳಿ ನಿಮ್ಮ ಜೀವನದ ಕಾರ್ಯಗಳನ್ನೆಲ್ಲಾ ಹೇಳಿ ಬಿಡುಗಡೆಯನ್ನು ಹೊಂದಿಕೊಳ್ಳಿರಿ. ಯೇಸುಕ್ರಿಸ್ತನು ನಿಮ್ಮನ್ನು ಆಶೀರ್ವದಿಸಿ ಹೆಚ್ಚಿಸುತ್ತಾರೆ. ಆಮೆನ್.
- P. ಶಿವ
ಪ್ರಾರ್ಥನಾ ಅಂಶ:-
ಪೂರ್ಣ ಸಮಯ ಮಿಷನರಿಗಳ ಶರೀರ ಸೌಖ್ಯ, ಮತ್ತು ದೇವರ ಸಂರಕ್ಷಣೆಗಾಗಿ ಪ್ರಾರ್ಥಿಸಿರಿ.
ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.
ತಮಿಳಿಗಾಗಿ +919444011864
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482