By Village Missionary Movement
Wednesday, 29-Nov-2023ಧೈನಂದಿನ ಧ್ಯಾನ(Kannada) – 29.11.2023
ಕೋಪ ಬೇಡ
"ಮನುಷ್ಯನ ಕೋಪವು ದೇವರ ನೀತಿಯನ್ನು ನಡಿಸುವದಿಲ್ಲ" - ಯಾಕೋಬ 1:20
ಒಬ್ಬ ಯುವಕನಿಗೆ ಅಧಿಕವಾಗಿ ಕೋಪ ಬರುತ್ತಲೇ ಇತ್ತು. ಅವನಿಗೆ ಕೋಪಬಂದಾಗ ಭಯಂಕರವಾಗಿ ಕಿರುಚಾಡಿಬಿಡುತ್ತಿದ್ದನು. ಒಂದು ದಿನ ಅವನ ತಂದೆ ಅವನಿಗೆ ಸುತ್ತಿಗೆ ಮತ್ತು ಅನೇಕ ಮೊಳೆಗಳನ್ನು ಕೊಟ್ಟರು. "ಇನ್ನು ಮುಂದೆ ಕೋಪ ಬಂದಾಗ ಎಲ್ಲಾ ಮನೆಯ ಹಿಂಬದಿಯಲ್ಲಿರುವ ಗೋಡೆಗೆ ಮೊಳೆ ಹೊಡೆಯುವಂತೆ ಹೇಳಿದರು". ಮೊದಲ ದಿನ 10 ಮೊಳೆಗಳು, ಮರುದಿನ 7, ನಂತರ 5, 2 ಮೊಳೆಗಳು ಹೊಡೆಯುತ್ತಾ ಕ್ರಮೇಣವಾಗಿ ಕೋಪ ಕಡಿಮೆಯಾಯಿತು. ಒಂದು ದಿನ ಅವನು ಒಂದೇ ಒಂದು ಮೊಳೆಯನ್ನು ಹೊಡೆದನು. "ಅವನು ತನ್ನ ತಂದೆಯ ಬಳಿ ಒಟ್ಟು 45 ಮೊಳೆಗಳನ್ನು ಹೊಡೆದಿದ್ದೇನೆ, ಇನ್ನು ಮುಂದೆ ನನಗೆ ಕೋಪ ಬರುವುದಿಲ್ಲ" ಎಂದು ಹೇಳಿದನು. ಅಪ್ಪ ಅವನಿಗೆ ಹೇಳಿದರು, ಇನ್ನು ಮುಂದೆ ನಿನಗೆ ಕೋಪಬರದ ದಿನದಂದು ಪ್ರತಿಯೊಂದು ಮೊಳೆಯನ್ನು ಕಿತ್ತುಬಿಡು ಎಂದರು. ಹೆಮ್ಮೆಯಿಂದ ತಂದೆಯನ್ನು ಕರೆದು 45 ದಿನಗಳಲ್ಲಿ ಹೊಡೆದ ಮೊಳೆಗಳನ್ನು ಕಿತ್ತುಬಿಟ್ಟೆನು ಎಂದು ತೋರಿಸಿದನು. ಕೂಡಲೇ ಅಪ್ಪ ಹೇಳಿದರು ಮೊಳೆಗಳನ್ನು ಕಿತ್ತುಬಿಟ್ಟೆ ಗೋಡೆಯಲ್ಲಿರುವ ರಂಧ್ರಗಳನ್ನು ಏನು ಮಾಡುತ್ತೀಯ? ನಿನ್ನ ಕೋಪ ಇದರಂತೆ ಎಷ್ಟೋ ಜನರನ್ನು ನೋಯಿಸಿರುತ್ತದೆ ಅಲ್ವಾ? ಆ ಯುವಕನು ನಾಚಿಕೆಯಿಂದ ತಲೆ ತಗ್ಗಿಸಿದನು. ಇಸ್ರಾಯೇಲ್ ಜನರನ್ನು ಮುನ್ನಡೆಸಲು ದೇವರಿಂದ ಆರಿಸಲ್ಪಟ್ಟು ಮೊದಲೇ ಸೂಚಿಸಲ್ಪಟ್ಟ ಅತ್ಯುತ್ತಮ ನಾಯಕನೇ ಮೋಶೆ. ಮೋಶೆಯು ಕಾನಾನ್ ದೇಶವನ್ನು ಪ್ರವೇಶಿಸಲು ಇಸ್ರಾಯೇಲ್ ಜನರನ್ನು ಮುನ್ನಡೆಸುತ್ತಿರುವಾಗ, ಅನೇಕ ಸಮಸ್ಯೆಗಳು ಮತ್ತು ಅಗತ್ಯಗಳು ಉದ್ಭವಿಸಿದವು. ಮೋಶೆ ದೇವರ ಸನ್ನಿಧಾನದಲ್ಲಿ ಅವರ ಅಗತ್ಯಗಳಿಗಾಗಿ ಕಾಯುತ್ತಾ ದೇವರು ಹೇಳುವ ಆಲೋಚನೆಗಳನ್ನು ಕೇಳಿ ಇವರ ಅಗತ್ಯಗಳನ್ನು ಪೂರೈಸುತ್ತಿದ್ದರು. ಹಾಗೆಯೇ ಒಂದು ಸಾರಿ ಜನರಿಗೆ ನೀರಿನ ಅಗತ್ಯವಿದ್ದಾಗ ಕರ್ತನು ಮೋಶೆಗೆ ಅವರ ಕಣ್ಣೆದುರಿಗೆ ಬಂಡೆಯನ್ನು ನೋಡಿ ಮಾತನಾಡು, ಆಗ ಅದು ತನ್ನಲ್ಲಿರುವ ನೀರನ್ನು ಕೊಡುತ್ತದೆ ಎಂದರು. ಆದರೆ ಮೋಶೆಯು ಕೋಪದಿಂದಾಗಿ ಮಾತನಾಡುವ ಬದಲು ತನ್ನ ಕೈಯನ್ನು ಚಾಚಿ ತನ್ನ ಕೋಲಿನಿಂದ ಬಂಡೆಯನ್ನು ಎರಡು ಬಾರಿ ಹೊಡೆದನು. ಮೋಶೆಯ ಕೋಪದ ಕ್ರಿಯೆಯು ಅವನನ್ನು ಕಾನಾನ್ಗೆ ಪ್ರವೇಶಿಸದಂತೆ ತಡೆಯಿತು.
ಪ್ರಿಯರೇ, ಇತರರನ್ನು ನೋಯಿಸುವುದನ್ನು ನಿಲ್ಲಿಸಿದಾಗ ಜೀವನದಲ್ಲಿ ಹೊಸ ಅಧ್ಯಾಯವು ಹುಟ್ಟುತ್ತದೆ. ಕೋಪವನ್ನು ಬಿಟ್ಟುಬಿಡಬೇಕು. ಕೋಪವು ಇತರರ ಹೃದಯವನ್ನು ಚುಚ್ಚಿ ಹರಿದು ಗಾಯಗೊಳಿಸಿ ಬಹಳ ನೋವನ್ನು ಉಂಟುಮಾಡುತ್ತದೆ ಎಂಬುದನ್ನು ತಿಳಿದುಕೊಂಡರೆ ನಮ್ಮಲ್ಲಿ ಯಾರೂ ಕೋಪಗೊಳ್ಳುವುದಿಲ್ಲ. ಕೋಪದಲ್ಲಿ ನಾವು ಆಡುವ ಮಾತುಗಳು, ಮಾಡುವ ಕಾರ್ಯಗಳೂ ಯಾವುದೂ ಫಲ ನೀಡುವುದಿಲ್ಲ. ಆದ್ದರಿಂದ ನಾವು ಕೋಪವನ್ನು ಬಿಟ್ಟು ಬಿಡಲು ಪವಿತ್ರಾತ್ಮನ ಸಹಾಯವನ್ನು ಪಡೆದು
ಆತನ ಕೈಗಳಿಗೆ ನಮ್ಮನ್ನು ಒಪ್ಪಿಸಿಕೊಡೋಣ.
- Mrs. ಶಕ್ತಿ ಶಂಕರರಾಜ್
ಪ್ರಾರ್ಥನಾ ಅಂಶ:
ಛತ್ತೀಸ್ಗಢ ಮತ್ತು ಗುಜರಾತ್ ಸೇವೆಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482