Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 04.10.2023
Share:

By Village Missionary Movement

Tuesday, 03-Oct-2023

ಧೈನಂದಿನ ಧ್ಯಾನ(Kannada) – 04.10.2023

 

ನೀವು ದೇವರ ದೃಷ್ಟಿಯಲ್ಲಿದ್ದೀರಿ

 

"ನೀವು ಕುರಿಹಟ್ಟಿಗಳಲ್ಲಿ ಮಲಗಿಕೊಂಡಿರುವದೇನು? ಪಾರಿವಾಳದ ರೆಕ್ಕೆಗಳು ಬೆಳ್ಳಿಯಿಂದಲೂ ಅದರ ಗರಿಗಳು ಬಂಗಾರದಿಂದಲೂ ಥಳಥಳಿಸುತ್ತವೆ" - ಕೀರ್ತನೆ 68:13

 

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಚಿತಾನ್‌ಪೂಂಡಿ ಎಂಬ ಪುಟ್ಟ ಹಳ್ಳಿಯ ಹೊರವಲಯದಲ್ಲಿ ಬಹು ಬೆಲೆಬಾಳುವ ಹಲವಾರು ಎಕರೆಗಳ ಬಿಕಾರಿ ಸ್ಥಳವಿತ್ತು. ಈ ನೆಲದ ಮಣ್ಣು ಮತ್ತು ಬಂಡೆಗಳ ಸ್ವರೂಪ ಸಾಮಾನ್ಯ ಮಣ್ಣು ಮತ್ತು ಬಂಡೆಗಿಂತ ಭಿನ್ನವಾಗಿರುವುದರಿಂದ ಯಾರೂ ಅದನ್ನು ಕಂಡುಕೊಳ್ಳಲಿಲ್ಲ. ಆದರೆ ನೋಡಿ, ಕೆಲವು ಮಣ್ಣಿನ ವಿಜ್ಞಾನಿಗಳು ಮತ್ತು ಸಂಶೋಧಕರು ಈ ಮಣ್ಣು ಮತ್ತು ಬಂಡೆಗಳ ಸ್ವರೂಪವನ್ನು ಪರಿಶೋಧನೆ ಮಾಡಿದಾಗ ಒಂದು ದೊಡ್ಡ ವೈಜ್ಞಾನಿಕ ಸತ್ಯ ಹೊರಹೊಮ್ಮಿದೆ. ಅದೇನೆಂದರೆ ಈ ಊರಿನ ಮಣ್ಣು ಮತ್ತು ಬಂಡೆಗಳು ಚಂದ್ರನಲ್ಲಿ ಕಂಡುಬರುವ ಮಣ್ಣು ಮತ್ತು ಬಂಡೆಗಳಿಗೆ 99% ಹೋಲುತ್ತದೆ ಎಂಬುದೇ. ಈ ಮಾಹಿತಿ ನಮ್ಮ ದೇಶದ ಬಾಹ್ಯಾಕಾಶ ಇಲಾಖೆಯಾದ ಇಸ್ರೋಗೆ ತಿಳಿದು ಆ ಊರಿನ ಮಣ್ಣು ಮತ್ತು ಬಂಡೆಗಳ ಅಧ್ಯಯನಕ್ಕೆ ವಿಜ್ಞಾನಿಗಳನ್ನು ಕಳುಹಿಸಿದರು. ಅಲ್ಲಿಂದ ಸುಮಾರು 50 ಟನ್ ಮಣ್ಣನ್ನು ಇಸ್ರೋ ತೆಗೆದುಕೊಂಡಿದೆ. ಅಚ್ಚರಿಯ ವಿಷಯವೆಂದರೆ ಇಸ್ರೋದ ಚಂದ್ರಯಾನ-3 ಅನ್ನು ಚಂದ್ರನತ್ತ ಕಳುಹಿಸುವ ಮುನ್ನ ಈ ಮಣ್ಣಿನಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ಪ್ರಸ್ತುತ ಚಂದ್ರಯಾನ-3 ಕೂಡ ಚಂದ್ರನ ಮೇಲೆ ತನ್ನ ಕೆಲಸವನ್ನು ಮಾಡುತ್ತಿದೆ. ಭಾರತ ಮತ್ತು ತಮಿಳುನಾಡು ವಿಶೇಷವಾಗಿ ಅಲ್ಲಿನ ಜನರು ಈ ವಿಷಯದ ಬಗ್ಗೆ ಹೆಮ್ಮೆಪಡುತ್ತಿದ್ದಾರೆ.

 

ಪ್ರಿಯರೇ, ದೇವರು ನಿಮ್ಮನ್ನು ಎಂದಿಗೂ ಕಡಿಮೆ ಅಂದಾಜು ಮಾಡುವುದಿಲ್ಲ. ಯಾರೂ ನಿಮ್ಮನ್ನು ಕಂಡುಕೊಳ್ಳುತ್ತಿಲ್ಲ ಎಂದು ಬೇಸತ್ತಿದ್ದೀರಾ? ನಿಮ್ಮ ಕೌಶಲ್ಯ ಮತ್ತು ಪ್ರತಿಭೆಯನ್ನು ಬಳಸಲಾಗುತ್ತಿಲ್ಲವೇ, ಫಲಕೊಡುತ್ತಿಲ್ಲವೇ ಎಂದು ನೀವು ಚಿಂತೆ ಮಾಡುತ್ತಿದ್ದೀರಾ? ನಿಮ್ಮಲ್ಲಿ ನೀವೆ ದುಃಖಿಸುತ್ತಾ ಒಂದು ಮೂಲೆಯಲ್ಲಿ ಕುಳಿತುಕೊಂಡಿದ್ದೀರಾ? ದೇವರು ನಿಮ್ಮನ್ನು ನೋಡುವ ವಿಧಾನವೇ ಬೇರೆ. ಯಾವುದಕ್ಕೂ ಪ್ರಯೋಜನವಿಲ್ಲದೆ ಬಿದ್ದಿದ್ದ ಮಣ್ಣನ್ನು ಕೆಲವು ವಿಜ್ಞಾನಿಗಳು ಕಂಡು ಅದನ್ನು ಹೊರ ಜಗತ್ತಿಗೆ ತಂದು ಬಾಹ್ಯಾಕಾಶ ಪರಿಶೋಧನೆಗೆ ಉಪಯೋಗಿಸಲು ಸಾಧ್ಯವಾಯಿತೆಂದರೆ ಸರ್ವಶಕ್ತನಾದ ದೇವರು ಇನ್ನು ಯಾವ ಮಟ್ಟಿಗೆ ನಿಮ್ಮನ್ನು ಎತ್ತಿ ಉಪಯೋಗಿಸುತ್ತಾರೆ ಎಂಬುದನ್ನು ಯೋಚಿಸಿ. ದೇವರು ನಿಮಗಾಗಿ ಒಂದು ದೊಡ್ಡ ಯೋಜನೆಯನ್ನು ಇಟ್ಟಿದ್ದಾರೆ. ಆ ಮಹತ್ತರವಾದ ಯೋಜನೆಯನ್ನು ಪೂರೈಸಲು ನಮ್ಮ ಸೇವೆಯ ಒಂದು ಭಾಗವಾಗಿರುವ ಆಮೆನ್ ವಿಲೇಜ್ ಟಿವಿಗೆ ನಿಮ್ಮನ್ನು ಸ್ವಾಗತಿಸುತ್ತೇವೆ. ನಿಮ್ಮ ಪ್ರತಿಭೆ ಮತ್ತು ಕೌಶಲ್ಯಗಳು ಏನೇ ಇರಲಿ, ದೇವರ ನಾಮ ಮಹಿಮೆಗಾಗಿ ನಾವು ಅವುಗಳನ್ನು ಬಿಡುಗಡೆ ಮಾಡಲು ಸಿದ್ಧರಿದ್ದೇವೆ! ನೀವು ಸಿದ್ಧರಿದ್ದೀರಾ? ಇಂದೇ ನಮ್ಮೊಂದಿಗೆ ಸೇರಿ! ಕಾರ್ಯನಿರ್ವಹಿಸಿರಿ!!

- Bro. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ತಮಿಳುನಾಡಿನಲ್ಲಿ ಆಲಯಗಳಿಲ್ಲದ ಸಾವಿರ ಹಳ್ಳಿಗಳಲ್ಲಿ ಸಾವಿರ ಆಲಯಗಳನ್ನು ಕಟ್ಟಿ ಎಬ್ಬಿಸಲ್ಪಡಲು ದೇವರು ಸಹಾಯ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al