By Village Missionary Movement
Tuesday, 03-Oct-2023ಧೈನಂದಿನ ಧ್ಯಾನ(Kannada) – 03.10.2023
ಮಣ್ಣಾಗಿ ಕೊಡು
"ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ" - ಕೀರ್ತನೆ 103:14
ಪ್ರತಿಯೊಂದು ಕ್ರೈಸ್ತನ ಜೀವನವು ದೇವರಿಗೆ ಸಮರ್ಪಿತವಾದ ಜೀವನವಾಗಿದೆ! ಆದರೆ ಕೆಲವು ಹಂತದಲ್ಲಿ ನಾವು "ಇನ್ನು ನಾನಲ್ಲ ಕ್ರಿಸ್ತನೇ" ಎಂದು ನಮ್ಮನ್ನು ಒಪ್ಪಿಸಿಕೊಟ್ಟು ಏನೋ ಉನ್ನತದಿಂದ ನಮ್ಮನ್ನು ತಗ್ಗಿಸಿದಂತೆ ಭಾವಿಸುತ್ತೇವೆ. ನಿಜ ಹೇಳಬೇಕೆಂದರೆ ನಾವು ನಮ್ಮ ಕಾಲಿನ ಕೆಳಗಿರುವ ಧೂಳಿನಿಂದ ಮಾಡಲ್ಪಟ್ಟಿದ್ದೇವೆ ಮತ್ತು ದೇವರು ನಮಗೆ ಕೊಟ್ಟಿರುವ ಜೀವಶ್ವಾಸದಿಂದ ಮನುಷ್ಯರಾಗಿ ಬದುಕುತ್ತಿದ್ದೇವೆ. ಇದನ್ನು ಗ್ರಹಿಸಿ ಮಣ್ಣಿನಂತೆ ದೇವರ ಬಳಿ ನಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದು ನಿರೀಕ್ಷಿಸುತ್ತಿದ್ದಾರೆ. ಆದ್ದರಿಂದ ಆಶೀರ್ವಾದಗಳು ಮತ್ತು ಉನ್ನತಿ ಉಂಟು.
ಮಣ್ಣು ಯಾವ ಪ್ರಶ್ನೆಗಳನ್ನೂ ಕೇಳುವುದಿಲ್ಲ. ಇದು ತನಗಾಗಿ ಯಾವುದೇ ಇಷ್ಟಗಳು ಅಥವಾ ಇಷ್ಟಪಡದಿರುವಿಕೆಗಳನ್ನು ಉಳಿಸಿಕೊಳ್ಳುವುದಿಲ್ಲ. ಅದು ತನ್ನ ಯಜಮಾನನನ್ನು ಮೀರುವುದಿಲ್ಲ. ತನ್ನನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಕುಂಬಾರನಿಗೆ ಒಪ್ಪಿಸಿದ ಜೇಡಿಮಣ್ಣು ಹಿಸುಕಲ್ಪಟ್ಟು, ತುಳಿದು, ಉರುಳಿಸಿ ರೂಪಿಸಲಾಗುತ್ತದೆ. ಕುಂಬಾರನು ಬಯಸಿದ ಆಕಾರವು ಬರದಿದ್ದರೆ, ಅದು ಮತ್ತೆ ತನ್ನನ್ನು ಹಿಸುಕಲು ತನಗೆ ತಾನೇ ನೀಡುತ್ತದೆ. ಅಂತೆಯೇ, ನಾವು ದೇವರಿಗೆ ನಮ್ಮನ್ನು ಅರ್ಪಿಸಿಕೊಂಡಾಗ, ದೇವರು ನಮ್ಮೊಂದಿಗಿದ್ದು ದೊಡ್ಡ ಕಾರ್ಯಗಳನ್ನು ಮಾಡುತ್ತಾರೆ. ಆತನು ನಮ್ಮ ಜೀವನವನ್ನು ಸುಂದರಗೊಳಿಸುತ್ತಾರೆ. ಹೌದು, ದೇವರು ನಮ್ಮನ್ನು ನಡೆಸಿಸುತ್ತಿರುವ ಮಾರ್ಗದಲ್ಲಿ ಪ್ರಶ್ನೆ ಮತ್ತು ಹೆಮ್ಮೆ ಬಂದಾಗಲೆಲ್ಲಾ ನಾವು ಮಣ್ಣು ಎಂದು ನೆನಪಿಸಿಕೊಳ್ಳಬೇಕು. ನಮ್ಮ ಭವಿಷ್ಯವನ್ನು ತಿಳಿದಿರುವಾತನು ಒಳ್ಳೆಯದನ್ನೇ ಮಾಡುತ್ತಾರೆ. ಜ್ಞಾನ, ವಿವೇಕದ ನಿಧಿ ಅವರೇ. ನಮ್ಮ ಜ್ಞಾನ ಮತ್ತು ವಿವೇಕವು ಕೊರತೆಯುಳ್ಳದ್ದು. ಅವರು ಐಶ್ವರ್ಯ ಸಂಪನ್ನರು, ಅವರ ಮುಂದೆ ನಮಗಿರುವುದು ಕಸವೇ!
ಜ್ಞಾನದಿಂದ, ವಿವೇಕದಿಂದ ಮಾತನಾಡಿದ ಯೋಬನು ದೇವರನ್ನು ನೋಡಿದಾಗ ನೀಚನು ಎಂದು ಒಪ್ಪಿಕೊಳ್ಳುತ್ತಾರೆ. ಯೆಶಾಯನು ಹೊಲಸು ತುಟಿಗಳ ಮನುಷ್ಯನೆಂದು ಹೇಳುತ್ತಾರೆ. ನಾನು ಬಾಲಕನು ಎಂದು ಯೆರೆಮಿಯ ಹೇಳುತ್ತಾರೆ. ನಾನು ಎಷ್ಟುಮಾತ್ರದವನು ಎಂದು ಮೋಶೆ ಹೇಳುತ್ತಾರೆ. ಇವರೆಲ್ಲಾ ಈ ರೀತಿಯಾಗಿ ಶರಣಾದ ಕಾರಣ, ದೇವರು ಅವರನ್ನು ಅನೇಕ ಸಾವಿರ, ಲಕ್ಷ ಮತ್ತು ಕೋಟಿಗಳಿಗೆ ಶಕ್ತಿಯುತವಾಗಿ ಉಪಯೋಗಿಸಿದರು.
ಇದನ್ನು ಓದುತ್ತಿರುವ ಪ್ರಿಯರೇ! ದೇವರು ನಿಮ್ಮನ್ನು ಮುನ್ನಡೆಸುತ್ತಿರುವ ಮಾರ್ಗದಲ್ಲಿ ಪ್ರಶ್ನಿಸದೆ ಮಣ್ಣಾಗಿ ಒಪ್ಪಿಸಿಕೊಡಿರಿ. ಅದರಲ್ಲಿ ಬರುವ ಹೆಚ್ಚು ಕಡಿಮೆಯನ್ನು ಅಂಗೀಕರಿಸಿ ಅವುಗಳಲ್ಲಿ ಆತನ ಕೈಬಿಡದೆ ಹಿಡಿದುಕೊಂಡು ಹೋಗುವಾಗ ನಿಮ್ಮನ್ನು ಧೂಳು ಎಂದು ಭಾವಿಸುವ ಕರ್ತನು ನಿಮ್ಮ ಮೇಲೆ ನಿಮ್ಮನ್ನು ನಂಬಿ ಮಹತ್ತರವಾದ ಯೋಜನೆಯನ್ನು ಇಟ್ಟಿದ್ದಾರೆ. ಗೊಣಗುಟ್ಟಿ, ಪ್ರಶ್ನೆಮಾಡಿ ಅದನ್ನು ಕಳೆದುಕೊಳ್ಳಬೇಡಿರಿ.
- Bro. ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಎಲ್ಲಾ ಕಾರ್ಯಸ್ಥಳಗಳಲ್ಲಿ ದೆಬೋರಾಳ್ ಪ್ರಾರ್ಥನಾ ಗುಂಪುಗಳನ್ನು ತ್ವರಿತವಾಗಿ ಪ್ರಾರಂಭಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482