Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 14.09.2023
Share:

By Village Missionary Movement

Thursday, 14-Sep-2023

ಧೈನಂದಿನ ಧ್ಯಾನ(Kannada) – 14.09.2023

 

ವಿಧೇಯತೆ

 

"ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು" - ಜ್ಞಾನೋಕ್ತಿ. 22:6

 

ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಹುಡುಗಿ ಹೇಗೆ ಪಟ್ಟದ ರಾಣಿಯಾಗುತ್ತಾಳೆ ಎಂದು ನೋಡೋಣ. ಯೆರೂಸಲೇಮಿನಿಂದ ಖೈದಿಗಳಾಗಿ ಹಿಡಿದು ತಂದ ಗುಂಪಿನಲ್ಲಿ ಬಹು ಸುಂದರಿಯಾಗಿದ್ದವರೇ ಎಸ್ತೇರ್. ಈ ಎಸ್ತೇರ್‌ಗೆ ಹೇಳಿಕೊಳ್ಳುವ ಮಟ್ಟಿಗೆ ಯಾವ ಹಿನ್ನೆಲೆಯೂ ಇಲ್ಲದ ಸ್ಥಿತಿ. ಇನ್ನೂ ಹೇಳಬೇಕಾದರೆ, ತಾಯಿ, ತಂದೆ ಇಲ್ಲದ ಅನಾಥ ಸ್ಥಿತಿ. ಈ ಪರಿಸ್ಥಿತಿಯಲ್ಲಿ ಮೊರ್ದೆಕೈ ಎಂಬ ಹತ್ತಿರದ ಸಂಬಂಧಿ ಅವಳನ್ನು ದತ್ತು ತೆಗೆದುಕೊಳ್ಳುತ್ತಾರೆ. ಮಹಾರಾಣಿಯ ಸ್ಥಾನಕ್ಕೆ ಎಸ್ತೇರ್ ಅನ್ನು ಸಿದ್ಧಪಡಿಸುವಲ್ಲಿ ಅವರ ಗಂಭೀರತೆಯು ಅವರ ಜವಾಬ್ದಾರಿಯನ್ನು ಮತ್ತಷ್ಟು ತೋರಿಸುತ್ತಿದೆ. ಅವರು ಅವಳನ್ನು ಅರಸನ ಮಂತ್ರಿಯಾಗಿದ್ದ ಹೇಗೈಯ ವಶಕ್ಕೆ ಒಪ್ಪಿಸುವವರೆಗೂ ಅವರು ಮಾಡಿದ ಪ್ರಯತ್ನಗಳು ಬಹಳ. ಮಹಿಳೆಯರು ಸೌಂದರ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ದೊಡ್ಡ ವಿಷಯ. ಆಂತರಿಕ ಮತ್ತು ಬಹಿರಂಗ ಸೌಂದರ್ಯದಿಂದ ತುಂಬಿದ್ದ ಎಸ್ತೇರ್ ಅನ್ನು ಸರಿಯಾದ ವ್ಯಕ್ತಿಯ ಕೈಗೆ ಹಿಡಿದು ಕೊಡುವವರೆಗೂ ಮೊರ್ದೆಕೈ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು.

 

ಎಸ್ತೇರ್ ಮೊರ್ದೆಕೈನ ಬಳಿ ಬೆಳೆಯುವಾಗ, ಅವರ ಮಾತು ಕೇಳಿ ಅವರಿಗೆ ವಿಧೇಯಳಾಗಿ ನಡೆದಳು. ಹಾಗೆಯೇ ಅರಮನೆಯಲ್ಲಿದ್ದಾಗ ಹೇಗೈಯ ವಶದಲ್ಲಿದ್ದಾಗಲೂ ಅವರ ಮಾತು ಕೇಳಿ ವಿಧೇಯಳಾಗಿ ನಡೆಯುತ್ತಿದ್ದಳು. ಕನ್ಯೆಯರ ಲೇಪನಕಾಲವು ಪೂರೈಸುವದಕ್ಕೆ ಕೇಳುವುದನ್ನೆಲ್ಲಾ ಪಡೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಎಸ್ತೇರಳು ಹೇಗೈ ನೇಮಿಸಿದ್ದನ್ನು ಬಿಟ್ಟು ಬೇರೇನನ್ನೂ ಕೇಳಲಿಲ್ಲ.

 

ಇಂದಿನ ಹದಿಹರೆಯದ ಹುಡುಗಿಯರು ಲಿಪ್ಸ್ಟಿಕ್, ಕಣ್ಣು ಕಪ್ಪು, ನೇಲ್-ಪಾಲಿಷ್, ಮೇಕಪ್ ಮತ್ತು ಆಭರಣ ಹೀಗೆ ಎಲ್ಲವನ್ನು ಹಾಕಿಕೊಂಡು ಅಲೆಯುವುದನ್ನು ನೋಡುತ್ತೇವೆ. ಇಂತಹ ಸ್ವಭಾವವುಳ್ಳ ಯುವತಿಯರ ಮಧ್ಯದಲ್ಲಿ, ತಾನು ಅನುಭವಿಸಲು ಎಲ್ಲಾ ಇದ್ದರೂ ಎಸ್ತೇರ್ ಸಂಪೂರ್ಣವಾಗಿ ವಿಭಿನ್ನ ಜೀವನವನ್ನು ನಡೆಸಿದರು. ಕಾರಣ ಮೊರ್ದೆಕೈ ಆ ರೀತಿ ಸಾಕಿದ್ದರು.

 

ಪ್ರಿಯರೇ, ಸತ್ಯವೇದವು ನಮ್ಮನ್ನು ಹೀಗೆ ಎಚ್ಚರಿಸುತ್ತಿದೆ. "ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ; ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು" ಎಂದು. ಈ ವಾಕ್ಯ ಎಷ್ಟು ಸತ್ಯ. ಪ್ರೀತಿಯ ಯುವ ಸಹೋದರ ಸಹೋದರಿಯರೇ! ನಮ್ಮ ಹೆತ್ತವರಿಗೆ ವಿಧೇಯತೆ ಮತ್ತು ಸಮರ್ಪಣಾಭಾವದಿಂದ ಬದುಕಲು ಕಲಿಯೋಣ. ಪೋಷಕರೇ, ನಿಮ್ಮ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡುವ ಜವಾಬ್ದಾರಿ ನಿಮಗೂ ಇದೆ. ಲೋಕಾನುಸಾರವಾಗಿ ನಡೆಯದೆ ಅದಕ್ಕೆ ವಿರುದ್ಧವಾಗಿ ಈಜುವ ಎಸ್ತೇರ್, ದೆಬೋರಾ, ಯೆಹೋಶುವಾ ಮತ್ತು ದಾನಿಯೇಲ್ ಇವರಂತೆ ದೇವರಿಗಾಗಿ ಬದುಕಲು ನಮ್ಮನ್ನು ಸಹ ಒಪ್ಪಿಸಿಕೊಡೋಣ.

- Mrs. ರೂಬಿ ಅರುಣ್

 

ಪ್ರಾರ್ಥನಾ ಅಂಶ:

ನಮ್ಮ ಬಳಿ ಪ್ರಾರ್ಥನಾ ಅಂಶಗಳನ್ನು ಕೊಟ್ಟು ಪ್ರಾರ್ಥಿಸುತ್ತಿರುವ ಪ್ರತಿಯೊಬ್ಬರಿಗೂ ದೇವರು ಅದ್ಬುತ ಮಾಡುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al