By Village Missionary Movement
Sunday, 13-Aug-2023ಧೈನಂದಿನ ಧ್ಯಾನ(Kannada) – 14.08.2023
ನಿತ್ಯ ಸಂತೋಷ ಪರಿಪೂರ್ಣ ಸ್ವಾತಂತ್ರ್ಯ
"…ಆ ಮಗನಿಗಿರುವ ಜೀವದಿಂದ ರಕ್ಷಣೆಯಾಗುವದು ಮತ್ತೂ ನಿಶ್ಚಯವಲ್ಲವೇ” - ರೋಮಾ 5:10
ಆಗಸ್ಟ್ 15, 1947 ರಂದು ಭಾರತದಲ್ಲಿ ಎಲ್ಲೆಡೆ ಹರ್ಷೋದ್ಗಾರ. ನಮ್ಮ ರಾಷ್ಟ್ರಧ್ವಜವನ್ನು ಹಾರಿಸಿದರು. ಸಿಹಿ ನೀಡಿ ಸಂತಸಪಟ್ಟರು. ನೃತ್ಯ, ಹಾಡುಗಾರಿಕೆಯೂ ಇರುತ್ತಿತ್ತು. ಆದರೆ ಅನೇಕರು ಇದಕ್ಕಾಗಿ ಶ್ರಮಿಸಿದರು ಮತ್ತು ರಕ್ತ ಹರಿಸಿದರು. ಹಲವರು ಪ್ರಾಣ ಕಳೆದುಕೊಂಡರು. ನಾವು ವಾಸಿಸುವ ದೇಶವನ್ನು ನಮದಾಗಿಸಿಕೊಳ್ಳಲು ಪಟ್ಟ ಕಷ್ಟಗಳನ್ನು ಹೇಳಲು ಸಾಧ್ಯವೇ ಇಲ್ಲ. ಮತ್ತು ಹಸಿರಾದ ಸಮೃದ್ಧ ರಾಷ್ಟ್ರ. ಸ್ವಾತಂತ್ರ್ಯ ಬಂದು 76 ವರ್ಷಗಳಾಗಿದೆ.
ನಾವು ಇತರ ದೇಶಗಳಲ್ಲಿನ ಗುಲಾಮಗಿರಿಯಿಂದ ಮುಕ್ತರಾಗಿದ್ದೇವೆ. ಆದರೆ ನಮ್ಮೊಳಗೆ ನಾವು ಗುಲಾಮರಾಗಿದ್ದೇವೆ ಮತ್ತು ಬಂಧಿತರಾಗಿದ್ದೇವೆ. ಹಾಗಾಗಿ ಸಂತೋಷವನ್ನು ಕಳೆದುಕೊಂಡು ಗುಲಾಮರಾಗಿಯೇ ಇದ್ದೇವೆ. ಜಾತಿ, ಭಾಷೆ ಮತ್ತು ಧರ್ಮದ ಆಧಾರದ ಮೇಲೆ ಇನ್ನೂ ಜಗಳಗಳು ಮತ್ತು ಸಂಘರ್ಷಗಳು ಉದ್ಭವಿಸುತ್ತಿವೆ. ದೇಶವು ಶಾಂತಿ ಮತ್ತು ನೆಮ್ಮದಿ ಇಲ್ಲದೆ ಕಾಣುತ್ತಿದೆ.
1947 ರಲ್ಲಿ, ಸ್ವಾತಂತ್ರ್ಯದ ಸಂತೋಷವು ಜನರಲ್ಲಿ ಕಂಡುಬಂದರೂ, ಪ್ರತಿಯೊಬ್ಬ ವ್ಯಕ್ತಿಯ ಜೀವನ ಮತ್ತು ಆತ್ಮದಲ್ಲಿ ಸಂತೋಷವಿದೆ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ವೈಯಕ್ತಿಕ ಜೀವನದಲ್ಲಿ ಚಿಂತೆಗಳು ಮತ್ತು ಕಷ್ಟಗಳು ಅಸ್ತಿತ್ವದಲ್ಲಿವೆ. ಆ ಚಿಂತೆ ಮತ್ತು ಕಷ್ಟಗಳನ್ನು ಯಾವ ಮನುಷ್ಯನೂ ಜಯಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಪಾಪ, ಶಾಪ ಮತ್ತು ರೋಗಗಳಿಂದ ಮುಕ್ತರಾಗಿ ಮನಶ್ಯಾಂತಿಯನ್ನು ಅದರಿಂದುಂಟಾಗುವ ಸಂತೋಷ ಮತ್ತು ಶಾಂತಿಯನ್ನು ಶಾಶ್ವತವಾಗಿ ಹೊಂದಬೇಕೆಂದು ನಮ್ಮನ್ನು ಸೃಷ್ಟಿಸಿದ ದೇವರು ಬಯಸಿ, ತಾನೇ ಸೃಷ್ಟಿಕರ್ತನು ಎಂಬ ಅಧಿಕಾರ ಸ್ಥಾನದಿಂದ ಪ್ರೀತಿಯಿಂದ ಇಳಿದು ಪಾಪದಿಂದ ಉಂಟಾಗುವ ಎಲ್ಲಾ ಶಾಪವನ್ನು ಮತ್ತು ಕಷ್ಟಗಳನ್ನು ಹೊತ್ತುಕೊಂಡು ಏಕಾಂಗಿಯಾಗಿ ತಾನೇ ಎಲ್ಲಾ ಸಂಕಷ್ಟಗಳನ್ನು ಅನುಭವಿಸಿ ಅದರಿಂದಲೂ, ಜಯಕರವಾಗಿ ಮೂರನೇ ದಿನದಲ್ಲಿ ಜೀವಂತವಾಗಿ ಎದ್ದಿದ್ದಾರೆ. ಇಂದಿಗೂ ಈ ಶಾಶ್ವತ ಮುಕ್ತಿಯನ್ನು ಎಲ್ಲರೂ ಪಡೆದು ಸಂತೋಷ ಮತ್ತು ಶಾಂತಿಯನ್ನು ಪಡೆಯಲು ಸಹಾಯ ಮಾಡುತ್ತಿದ್ದಾರೆ. ಇಂದು ಆತನ ರಕ್ತದಿಂದ ತೊಳೆಯಲ್ಪಟ್ಟವರಿಗೆ ಸಂತೋಷ, ಶಾಂತಿ ಮತ್ತು ಶಾಶ್ವತ ಜೀವನವು ಖಚಿತವಾಗಿದೆ.
ಸ್ವಾತಂತ್ರ್ಯ ದಿನದಂದು ನಾವು ಅನೇಕ ನಾಯಕರ ತ್ಯಾಗ ಮತ್ತು ರಕ್ತವನ್ನು ಸ್ಮರಿಸುತ್ತೇವೆ. ನಿಮಗೆ ನಿರಂತರ ಸಂತೋಷ ಮತ್ತು ಶಾಂತಿ ಬೇಕು ಎಂದು ನೀವು ಭಾವಿಸಿದಾಗಲೆಲ್ಲಾ, ಯೇಸುವಿನ ಪ್ರೀತಿ ಮತ್ತು ಆತನ ರಕ್ತ ಮಾತ್ರವೇ ಅದನ್ನು ನಿಮಗೆ ನೀಡಲು ಸಾಧ್ಯ. ನೀವು ಅದನ್ನು ಒಪ್ಪಿಕೊಂಡು ನಿಮ್ಮನ್ನು ತೊಳೆಯುವಂತೆ ಅರಿಕೆ ಮಾಡಿದರೆ ಸಂತೋಷ ಮತ್ತು ಶಾಂತಿ ನಿಮ್ಮ ಆತ್ಮವನ್ನು ತುಂಬುತ್ತದೆ. ನೀವು ಈ ಸ್ವಾತಂತ್ರ್ಯವನ್ನು ಶಾಶ್ವತವಾಗಿ ಆಚರಿಸಬಹುದು. ನೀನು ಅವರನ್ನು ಕರೆದರೆ, ಅವರು ಬಂದು ಸ್ವಾತಂತ್ರ್ಯವನ್ನು ಶಾಶ್ವತವಾಗಿ ಕೊಟ್ಟು ತನ್ನೊಂದಿಗೆ ಬದುಕುವಂತೆ ಮಾಡುತ್ತಾರೆ.
- Mrs. ಗ್ರೇಸ್ ಜೀವಮಣಿ
ಪ್ರಾರ್ಥನಾ ಅಂಶ:
ನಮ್ಮ ಕ್ಯಾಂಪಸ್ನಲ್ಲಿರುವ ಟ್ಯೂಷನ್ ಸೆಂಟರ್ ಮೂಲಕ ಭೇಟಿಯಾಗುವ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482