By Village Missionary Movement
Friday, 04-Aug-2023ಧೈನಂದಿನ ಧ್ಯಾನ(Kannada) – 04.08.2023
ಶಾಂತಿಯುತ ಜೀವನ
"…ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು" - 1 ತಿಮೊಥೆ. 2:2
ಆಗಸ್ಟ್ ತಿಂಗಳು ಎಂದ ಕೂಡಲೇ ಸ್ವಾತಂತ್ರ್ಯ ದಿನ ನಮಗೆ ನೆನಪಾಗುತ್ತದೆ. "ಪ್ರಜಾಪ್ರಭುತ್ವವೆಂಬ ಭಾರತೀಯ ರಾಷ್ಟ್ರದಲ್ಲಿ ಜನರಿಂದ ಜನರಿಗಾಗಿ ನಡೆಸುವ ಸರಕಾರವು ಕಂಬಳಿಯಾಗಿದೆ" ಎಂದು ಅನೇಕ ಬಾರಿ ಪ್ರಲಾಪಿಸುತ್ತೇವೆ. ಅದಕ್ಕೆ ಸತ್ಯವೇದವು ನಮಗೆ ಒಂದು ವಾಗ್ದಾನವನ್ನು ನೀಡುತ್ತಿದೆ, "ನೀವು ಪೂರ್ಣಭಕ್ತಿಯಿಂದಲೂ ಗೌರವದಿಂದಲೂ ಕಾಲಕ್ಷೇಪ ಮಾಡಬಹುದು ಎಂದು. ಅದಕ್ಕೆ ಒಂದು ಆಜ್ಞೆ ನೀವು ಅರಸುಗಳಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ವಿಜ್ಞಾಪನೆಗಳನ್ನು ಮಾಡಬೇಕು"ಎಂಬುದೇ.
ಸತ್ಯವೇದದಲ್ಲಿ ಯಾವಾಗಲೂ ಆಶೀರ್ವಾದ ಮತ್ತು ವಾಗ್ದಾನಗಳನ್ನು ಒಂದು ಆಜ್ಞೆಯೊಂದಿಗೇನೆ ಕೊಟ್ಟಿರುತ್ತಾರೆ. ಪ್ರತಿಯೊಬ್ಬರೂ ಬಯಸುವ ಅಥವಾ ಪ್ರತಿಯೊಬ್ಬರಿಗೂ ಅಗತ್ಯವಿರುವ ಈ ವಾಗ್ದಾನವನ್ನು ಪಡೆಯಲು ಸರಳವಾದ ಮಾರ್ಗವೆಂದರೆ ನಾಯಕರು ಮತ್ತು ಅಧಿಕಾರದಲ್ಲಿರುವವರಿಗಾಗಿ ಪ್ರಾರ್ಥಿಸುವುದೇ. ಇದು ನಮಗೆ ಕಷ್ಟವಲ್ಲ. ನಾಯಕರು ಮತ್ತು ಅಧಿಕಾರದಲ್ಲಿರುವವರು ಮನುಷ್ಯರೇ! ಅವರು ಸಹ ನಮ್ಮಂತೆ ಕೊರತೆಯುಳ್ಳವರೇ. ಅವರ ಕೊರತೆಗಳನ್ನು ಜನರೊಂದಿಗೆ ಮಾತನಾಡದೇ ದೇವರ ಬಳಿ ಹೇಳಿ ಅವರನ್ನು ಪ್ರಾರ್ಥನೆಯಲ್ಲಿ ಹೊರುವಾಗ ನಾವು ಕಳಂಕವಿಲ್ಲದೆ ಶಾಂತಿಯುತವಾಗಿ ಬದುಕಬಹುದು. ತನ್ನ ಒಳಿತಿನಲ್ಲಿ ಒಂದು ಸಾಮಾನ್ಯ ಒಳಿತು. ನಾಯಕರು, ಅಧಿಕಾರಿಗಳು ಬಲವಾಗಿ ಭದ್ರವಾಗಿ ಕೊರತೆಯಿಲ್ಲದೆ ಇದ್ದರೆ ನಾವು ಸುಖಸಮಾಧಾನಗಳೊಂದಿಗೆ ಕಳಂಕವಿಲ್ಲದೆ ಇರಬಹುದು. ಅದಕ್ಕಾಗಿಯೇ ಎಸ್ತೇರ್ ಪುಸ್ತಕವನ್ನು ಕೊಡಲಾಗಿದೆ. ಮೂರು ದಿನಗಳ ಕಾಲ ಉಪವಾಸ ಮಾಡಿ ಏಕಮನಸ್ಸಿನಿಂದ ಪ್ರಾರ್ಥಿಸಿದಾಗ, ದುಃಖ, ಅಳು ಮತ್ತು ಪ್ರಲಾಪವು ಹೋಗಿ ಬೆಳಕು, ಸಂತೋಷ, ಹರ್ಷಾನಂದ ಮತ್ತು ಘನತೆ ಉಂಟಾಯಿತು. ಅಂತರಂಗದಲ್ಲಿ ನಡೆಯುವದನ್ನು ನೋಡುವ ನಿನ್ನ ತಂದೆಯು ನಿನಗೆ ಫಲಕೊಡುವನು. (ಮತ್ತಾಯ 6:4) ಎಂಬ ವಾಕ್ಯದ ಪ್ರಕಾರ ನೀವು ಪ್ರಾರ್ಥಿಸುವ ಪ್ರಾರ್ಥನೆಯು ಶಾಂತಿಯುತ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ.
ಪ್ರಿಯರೇ, ನಾವು ಶಾಂತಿಯುತ ಜೀವನವನ್ನು ಜೀವಿಸಲು ಬಯಸುವವರೇ ತಾನೇ. ಹಾಗಾದರೆ ನಾಯಕರಿಗಾಗಿ ಮತ್ತು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿಗಳಿಗಾಗಿ ಪ್ರಾರ್ಥಿಸುವುದು ನಮ್ಮ ಕರ್ತವ್ಯವೆಂದು ಭಾವಿಸೋಣ. ನಾವು ಚಿಕ್ಕ ಸುಲಭವಾದ ಪ್ರಾರ್ಥನೆಯನ್ನು ಬಿಟ್ಟಿದ್ದರಿಂದಲೇ ಸಮಸ್ಯೆಗಳು ಎಂದು ಗ್ರಹಿಸಿ ಇಂದಿನಿಂದ ಪ್ರಾರ್ಥಿಸೋಣ. ಆಶೀರ್ವಾದದೊಂದಿಗೆ ಇರುವ ಆಜ್ಞೆ ಎಂದು ಹೇಳಿ, “ನಮ್ಮ ಮಕ್ಕಳ ಆಯುಷ್ಯವು ದೀರ್ಘವಾಗಿರಲು ನಿಮ್ಮ ಹೆತ್ತವರನ್ನು ಗೌರವಿಸಿ” ಎಂದು ಹೇಳಿ ಅನುಸರಿಸಲು ನಾವು ಅವರಿಗೆ ಸಹಾಯ ಮಾಡುವಂತೆಯೇ, ಕಳಂಕವಿಲ್ಲದೆ ದೀರ್ಘಕಾಲ ಜೀವಿಸಲು ನಾಯಕರು ಮತ್ತು ಅಧಿಕಾರಿಗಳಿಗಾಗಿ ಪ್ರಾರ್ಥಿಸಲು ಕಲಿಸಿಕೊಡೋಣ. ಕುಟುಂಬ ಪ್ರಾರ್ಥನೆಯಲ್ಲಿ ಪ್ರತಿದಿನ ದೇಶಕ್ಕಾಗಿ ಪ್ರಾರ್ಥಿಸಿರಿ. ಸ್ತ್ರೀಯರ ಐಕ್ಯತೆ ಮತ್ತು ಪುರುಷರ ಐಕ್ಯತೆ ಎಂದು ನಾವು ವಿಶ್ವಾಸಿಗಳೊಂದಿಗೆ ಒಟ್ಟುಗೂಡುವಾಗ ನಾವು ದೇಶಕ್ಕಾಗಿ ಪ್ರಾರ್ಥಿಸೋಣ. ನಾವು ದೇಶದಲ್ಲಿ ಬದಲಾವಣೆಗಳನ್ನು ನೋಡೋಣ.
- Mrs. ಜ್ಯೋತಿ ಸ್ಟಾಲಿನ್
ಪ್ರಾರ್ಥನಾ ಅಂಶ:
ತಿರುನಲ್ವೇಲಿ ಸುತ್ತಮುತ್ತಲಿರುವ ಜಿಲ್ಲೆಗಳಿಂದ ಯೌವನಸ್ಥರ ಉಜ್ಜೀವನ ಕೂಟಕ್ಕೆ ಅನೇಕ ಯೌವನಸ್ಥರು ಭಾಗವಹಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482