By Village Missionary Movement
Monday, 17-Jul-2023ಧೈನಂದಿನ ಧ್ಯಾನ(Kannada) – 17.07.2023
ನಮ್ಮ ಮೇಲೆ ಆರೋಪ ಹೊರಿಸಲಾಗುತ್ತದೆ!
"…ನಾನು ಸುವಾರ್ತೆಯನ್ನು ಸಾರದಿದ್ದರೆ ನನಗೆ ಅಯ್ಯೋ" - 1 ಕೊರಿಂಥ 9:16
ಜರ್ಮನಿ ದೇಶವನ್ನು ಸರ್ವಾಧಿಕಾರಿಯಾಗಿ ಆಳಿದ ಹಿಟ್ಲರ್ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಒಬ್ಬ ಯೆಹೂದ್ಯನೂ ಉಳಿಯದಂತೆ ಯೆಹೂದ್ಯರನ್ನು ಕೊಂದು ನಿರ್ನಾಮ ಮಾಡಲು ಪಟ್ಟುಹಿಡಿದಿದ್ದವನು. ಅವನು ಯೆಹೂದ್ಯರನ್ನು ಹಿಡಿದು ಅತ್ಯಂತ ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದನು, ಅವರನ್ನು "ಸೆಲ್" ಎಂದು ಕರೆಯಲ್ಪಡುವ "ಕಾನ್ಸೆಂಟ್ರೇಶನ್ ಕ್ಯಾಂಪ್" ಗಳಲ್ಲಿ ಇರಿಸಿ, ಪುರುಷರು ಮತ್ತು ಮಹಿಳೆಯರನ್ನು ಹೊಡೆದು, ತಲೆಕೆಳಗಾಗಿ ನೇತುಹಾಕಿ ಅಂತಿಮವಾಗಿ ಅವರನ್ನು ಕೊಲ್ಲುತ್ತಿದ್ದನು. ಹಿಟ್ಲರ್ ಗೆ ಆಂಡ್ರ್ಯೂ ಎಂಬ ಹೆಸರಿನ ಕ್ರೈಸ್ತರೊಬ್ಬರು ಉನ್ನತ ಅಧಿಕಾರಿಯಾಗಿ ಹಿಟ್ಲರ್ ನೊಂದಿಗೆ ಬಹಳ ಹತ್ತಿರದಲ್ಲಿ ಕೆಲಸ ಮಾಡುತ್ತಿದ್ದರು. ಅವರು ಒಮ್ಮೆಯೂ ಹಿಟ್ಲರ್ ಗೆ ಯೇಸುವಿನ ಬಗ್ಗೆ ಹೇಳಿದ್ದೇ ಇಲ್ಲ. ಹೇಳಲು ತುಂಬಾ ಹೆದರುತ್ತಿದ್ದರು.
ಈ ಪರಿಸ್ಥಿತಿಯಲ್ಲಿ, ಅನೇಕ ದೇಶಗಳು ಒಟ್ಟುಗೂಡಿ ಜರ್ಮನಿಯ ವಿರುದ್ಧ ಯುದ್ಧವನ್ನು ಪ್ರಾರಂಭಿಸಿದಾಗ, ಹಿಟ್ಲರ್ ವಿಮಾನದಲ್ಲಿ ದೇಶವನ್ನು ಬಿಟ್ಟು ಓಡಿಹೋಗುವಾಗ ಸತ್ತನು. ಅವರ ಸ್ನೇಹಿತ, ಆಂಡ್ರ್ಯೂ, ಅವರ ಸೇವೆಯ ನಂತರ ನಿವೃತ್ತರಾದರು ಮತ್ತು ಅವರ ಸಮಯವನ್ನು ಕಳೆಯಲು ಅವರ ಸ್ಥಳೀಯ ಹಳ್ಳಿಗೆ ಹೋದರು. ಒಂದು ಸಂಜೆ ಅವರು ವಿಶ್ರಾಂತಿ ಕುರ್ಚಿಯಲ್ಲಿ ಸತ್ಯವೇದವನ್ನು ಓದುತ್ತಿದ್ದರು. ಆಗ ಅವರ ಹಿಂದೆ ಹಿಟ್ಲರ್ ನ ಬೂಟುಗಳ ಸದ್ದು ಕೇಳಿಸಿತು. ಅದನ್ನು ಕೇಳಿದ ಅವರು ಬೆಚ್ಚಿಬಿದ್ದರು. ಆ ಸದ್ದು ಅವರಿಗೆ ತುಂಬಾ ಹತ್ತಿರದಲ್ಲಿ ಬಂದು ನಿಂತಿತು. ನಂತರ ಆ ರೂಪವು "ಆಂಡ್ರ್ಯೂ, ನೀನು ನನಗೆ ಮೋಸ ಮಾಡಿದ್ದೀಯ, ನೀನು ಆರಾಧಿಸುತ್ತಿದ್ದ ಯೇಸುವಿನ ಬಗ್ಗೆ ನನಗೆ ಹೇಳಲೇ ಇಲ್ಲ" ಎಂದು ಅಳುತ್ತಾ ಮಾಯವಾಯಿತು. ಆ ದಿನ, ಆಂಡ್ರ್ಯೂ ತಾನು ಮಾಡಿದ ತಪ್ಪಿನಿಂದ ತುಂಬಾ ನೊಂದುಕೊಂಡರು.
ಪ್ರವಾದಿಯಾದ ಎಲೀಷನ ಕಾಲದಲ್ಲಿ ಇಸ್ರಾಯೇಲ್ ದೇಶದಲ್ಲಿ ಮಹಾ ಕ್ಷಾಮ ಉಂಟಾಯಿತು. ಜನರು ಹೊರಗೆ ಹೋಗದಂತೆ ಸಿರಿಯರ ಸೈನ್ಯವು ಅವರನ್ನು ಸುತ್ತುವರೆದಿತ್ತು. ಕ್ಷಾಮವು ತುಂಬಾ ತೀವ್ರವಾಗಿದ್ದದರಿಂದ ಊರಿನ ಹೊರಗೆ ಇದ್ದ 4 ಕುಷ್ಠರೋಗಿಗಳಿಗೆ ಆಹಾರ ಕೊಡಲು ಯಾರೂ ಮುಂದೆ ಬರದೇ ಹೋದದ್ದರಿಂದ, ಸಿರಿಯಾದವರ ಸೈನ್ಯಕ್ಕೆ ಹೋಗಲು ಒಂದಾದರು. ಆಗ ಅಲ್ಲಿನ ಪರಿಸ್ಥಿತಿ ಅವರನ್ನು ಬೆರಗುಗೊಳಿಸಿತ್ತು. ಅವರಿಗಿಂತ ಮುಂಚೆಯೇ ಸಿರಿಯಾದವರ ಸೈನ್ಯವು ತಮ್ಮ ಪಾಳೆಯವನ್ನು ಬಿಟ್ಟು ಮೊದಲೇ ಓಡಿಹೋಗಿತ್ತು. ನಾಲ್ವರು ಕುಷ್ಠರೋಗಿಗಳು ಹೊಟ್ಟೆತುಂಬ ತಿಂದ ನಂತರ ಅವರು ಒಬ್ಬರನ್ನೊಬ್ಬರು ನೋಡಿ ನಾವು ಮಾಡುವುದು ನ್ಯಾಯವಲ್ಲ. ಇದು ಶುಭವಾರ್ತೆಯ ದಿವಸವಾಗಿದೆ ನಾವು ತಡಮಾಡಿದರೆ ಶಿಕ್ಷೆಗೆ ಪಾತ್ರರಾದೇವು ಅಂದರು. (2 ಅರಸುಗಳು 7:9).
ನೀವು ಮತ್ತು ನಾನು ಯೇಸು ನಮ್ಮನ್ನು ಭೇಟಿಯಾದದ್ದನ್ನು, ರಕ್ಷಿಸಿದ್ದನ್ನು ಮತ್ತು ಕಾಪಾಡಿ ಮುನ್ನಡೆಸುತ್ತಿರುವುದನ್ನು ಅವರು ನಮ್ಮನ್ನು ವಿಮೋಚಿಸಲು ಬಂದ ಜೀವವುಳ್ಳ ರಕ್ಷಕ ಎಂಬುದನ್ನೂ ಇತರರಿಗೆ ಹೇಳಬೇಕು. ನನಗೆ ಅನುಕೂಲಕರವಾದ ಕಾಲ ಬರುವವರೆಗೂ ಕಾದಿದ್ದು ಕಾರ್ಯ ಮಾಡುತ್ತೇನೆ ಎಂದು ಹೇಳಿ ನಾವು ಕಾರ್ಯನಿರ್ವಹಿಸದಿದ್ದರೆ ನಮ್ಮ ಮೇಲೆ ಆರೋಪ ಹೊರಿಸಲಾಗುತ್ತದೆ. ಯೋಚಿಸೋಣ! ತಕ್ಷಣ ಕಾರ್ಯಪ್ರವೃತ್ತರಾಗೋಣ!! ಆಮೆನ್.
- Bro. ಭಾಕ್ಯನಾಥನ್
ಪ್ರಾರ್ಥನಾ ಅಂಶ:
ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ಭೇಟಿಯಾಗುವ ವ್ಯಕ್ತಿಗಳಿಗಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482