By Village Missionary Movement
Friday, 27-Jan-2023ಧೈನಂದಿನ ಧ್ಯಾನ(Kannada) – 27.01.2023
11 ನೇ ಗಂಟೆಯ ಸೇವಕರು
"ಆಗ ತನ್ನ ಶಿಷ್ಯರಿಗೆ - ಬೆಳೆಯು ಬಹಳ, ಕೆಲಸದವರು ಸ್ವಲ್ಪ" - ಮತ್ತಾಯ 9:37
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಈ ರೀತಿಯಾಗಿ ಹಂಚಿಕೊಂಡಿದ್ದಾರೆ. ಹಲವು ಕಂಪನಿಗಳಲ್ಲಿ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಒಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಕೋಪದ ಮುಖದಿಂದ ನನ್ನೊಂದಿಗೆ ಮಾತನಾಡಿ ನನ್ನನ್ನು ನೇಮಿಸಿಕೊಳ್ಳುತ್ತಿದ್ದರು. ಆದರೆ ಹೇಗೋ ಆ ತಿಂಗಳ ಕೊನೆಯಲ್ಲಿ ಸಂಬಳ ಬರುವುದನ್ನು ನೆನೆಸಿ ನಾನು ನನ್ನ ಮನಸ್ಸನ್ನು ಚೇತರಿಸಿಕೊಂಡು ಕೆಲಸ ಮಾಡುತ್ತೇನೆ. ಅದರಲ್ಲೂ ಇನ್ನೂ ತಮಾಷೆಯಾಗಿ ಏನು ಹೇಳುತ್ತಾರೆ ಅಂದರೆ, ಸಂಬಳದ ಶೇಕಡಾ 50 ಕೆಲಸ ಮಾಡಿದ್ದಕ್ಕೆ ಮತ್ತು ಶೇಕಡಾ 50 ಬೈಗುಳಕ್ಕೆ ಎಂದು ಹೇಳುತ್ತಾರೆ. ಇದು ನಮಗೆ ತಮಾಷೆಯಾಗಿದ್ದರೂ ಒಂದು ಕಠಿಣವಾದ ಮನಸ್ಥಿತಿಯೊಂದಿಗೆ ಅವರು ಆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಇಂದಿನ ಸತ್ಯವೇದ ಭಾಗದಲ್ಲಿ ನಮ್ಮ ಪರಲೋಕದ ತಂದೆ ತನ್ನ ತೋಟದಲ್ಲಿ ಕೆಲಸಕ್ಕೆ ಬಂದವರ ಕುರಿತು ಮತ್ತು ಅವರು ಪಡೆದ ಸಂಬಳದ ಕುರಿತು ನಾವು ನೋಡಿದರೆ ದೊಡ್ಡ ಆಶ್ಚರ್ಯವಾಗಿದೆ. ಅಂದರೆ ನಾವು ನಿಗದಿತ ಸಮಯದಲ್ಲಿ ನಿಗದಿತ ಸಂಬಳಕ್ಕಾಗಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತೇವೆ. ಆದರೆ ಯೇಸುವಿನ ದ್ರಾಕ್ಷಿತೋಟದಲ್ಲಿ ಎಲ್ಲರಿಗೂ ಒಂದೇ ಕೂಲಿ. ಆದರೆ ಸಮಯ ಬೇರೆ. ನಾವು ಖಾಸಗಿ ಕಂಪನಿಯಲ್ಲಿ ಕೆಲಸ ಹುಡುಕುತ್ತಿದ್ದೇವೆ. ಆದರೆ ಕರ್ತನ ದ್ರಾಕ್ಷಿತೋಟದಲ್ಲಿ ಅವರು ನಮ್ಮ ಬಳಿಗೆ ಬಂದು ಮನವಿ ಮಾಡುತ್ತಿದ್ದಾರೆ.
ಪ್ರಿಯರೇ! ನಾವು ಈ ಜಗತ್ತಿನಲ್ಲಿ ನಕಾರಾತ್ಮಕವಾಗಿ ಕೆಲಸಮಾಡಿಯೇ ಅಭ್ಯಾಸವಾಗಿಬಿಟ್ಟಿದೆ. ಸೈತಾನನು ಸತ್ಯ ಮತ್ತು ಸುಳ್ಳನ್ನು ಬೆರೆಸುವ ಮೂಲಕ ನಮ್ಮನ್ನು ಬದಲಾಯಿಸಿಬಿಟ್ಟಿದ್ದಾನೆ. ಅದು ಹೇಗೆಂದರೆ ಆಹ್ವಾನವೇ ಇಲ್ಲದ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಅರ್ಜಿ ಹಾಕಿ ತೀವ್ರವಾಗಿ ಓಡುತ್ತೇವೆ. ಇದೊಂದು ಕಡೆ, ಇನ್ನೊಂದೆಡೆ ತನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡಲು ತನ್ನ ಕೈಯೊಡ್ಡಿ ನಿಂತಿರುವ ಯೇಸುವನ್ನು ಕಂಡುಕೊಳ್ಳದೇ ಕಡೆಗಣಿಸುತ್ತೇವೆ. ಅವರು ನನ್ನಿಂದ ದೂರ ಹೋಗಿ ಮಾಯೆಯನ್ನು ಅನುಸರಿಸುತ್ತಾ ವ್ಯರ್ಥವಾಗಿ ಹೋಗುವುದಕ್ಕೆ ಅವರು ನನ್ನಲ್ಲಿ ಯಾವ ದೋಷವನ್ನು ಕಂಡಿದ್ದಾರೆ ಎಂದು ಯೇಸು ಬೇಡಿಕೊಳ್ಳುತ್ತಿದ್ದಾರೆ. ಇಂದು ಅವರ ಧ್ವನಿಯನ್ನು ಕೇಳುವುದಾದರೆ, ನಿಮ್ಮ ಹೃದಯಗಳನ್ನು ಕಠಿಣಗೊಳಿಸಬೇಡಿರಿ. ಯೇಸುವಿನ ದ್ರಾಕ್ಷಿ ತೋಟದಲ್ಲಿ
ಕೊನೆಯ ಒಂದು ಗಂಟೆಯಲ್ಲಿಯೂ ಸಹ ಜನರನ್ನು ಕರೆಯುತ್ತಿದ್ದಾರೆ. ನಮ್ಮ ಚಳುವಳಿಯ ಮೂಲಕ ಕನಿಷ್ಠ ಒಂದು ಗಂಟೆಯಾದರೂ ಸೇವೆ ಸಲ್ಲಿಸಲು ಬದ್ಧರಾಗಿರುವವರಿಗೆ, 11 ನೇ ಗಂಟೆಯ ಸೇವಕರು ಎಂಬ ಯೋಜನೆಯಡಿ ಅರೆಕಾಲಿಕ ಸೇವೆ ಮಾಡಲು ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ. ಅವರಿಗೆ ಬೇಕಾದ ಹೊಸ ಒಡಂಬಡಿಕೆಯ ಪ್ರತಿಗಳನ್ನು ಉಚಿತವಾಗಿ ನೀಡುತ್ತೇವೆ. ನೀವು ಒಟ್ಟಿಗೆ ಸೇರಿ ಕೆಲಸ ಮಾಡಲು ಮುಂದೆ ಬರುತ್ತೀರಾ?
- Mrs. ಸರೋಜಾ ಮೋಹನ್ ದಾಸ್
ಪ್ರಾರ್ಥನಾ ಅಂಶ:
ಹಸಿದವರಿಗೆ ಆಹಾರ ನೀಡುವ ಯೋಜನೆಯ ಮೂಲಕ ನೀವು ಭೇಟಿಯಾಗುವ ಜನರು ಯೇಸುವಿನ ಪ್ರೀತಿಯನ್ನು ಸವಿಯುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482