By Village Missionary Movement
Tuesday, 11-Oct-2022ಧೈನಂದಿನ ಧ್ಯಾನ(Kannada) – 11.10.2022
ನಿರ್ಧಾರ ಶಾಶ್ವತವಲ್ಲ
"...ನೀನೇನೂ ಕೇಡು ಮಾಡಿಕೊಳ್ಳಬೇಡ..." - ಅಪೊಸ್ತಲ 16.28
ಬೋಧಕರಾದ ಪಾಲ್ ಯಾಂಗಿ ಚೋ ಅವರನ್ನು ದಕ್ಷಿಣ ಕೊರಿಯಾ ದೇಶದಲ್ಲಿ ಉಜ್ಜೀವನಕ್ಕಾಗಿ ದೇವರು ಉಪಯೋಗಿಸಿದರು. ತನ್ನ ಸಭೆಯಲ್ಲಿ ಹಲವಾರು ಲಕ್ಷ ವಿಶ್ವಾಸಿಗಳು ಇದ್ದಂತಹ ಸಮಯದಲ್ಲೂ, ಅವರು ತಮ್ಮ ಸಮಸ್ಯೆಗಳನ್ನು ಸಹಿಸಲಾರದೆ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದರು. ದೇವರು ಅವರಿಗೆ ಪ್ರಕಟವಾಗಿ, "ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ನಿನ್ನೊಳಗಿರುವ ಧೈರ್ಯವನ್ನು ಸೇವೆಯಲ್ಲಿ ಉಪಯೋಗಿಸು" ಎಂದು ಹೇಳಿದರು. ಆಗ ಅವರು ಆತ್ಮಹತ್ಯೆಯ ಆಲೋಚನೆಯನ್ನು ಕೈಬಿಟ್ಟರು. ಇನ್ನೊಂದು ಬಾರಿ ತನ್ನ ಚರ್ಚ್ ಕಟ್ಟಲು ಹಲವಾರು ಲಕ್ಷಗಳನ್ನು ಸಾಲ ಮಾಡಿ ಚರ್ಚ್ ನಿರ್ಮಾಣವನ್ನು ಪೂರ್ಣಗೊಳಿಸಿದ್ದರು. ಅವರಿಗೆ ಸಾಲ ಕೊಟ್ಟವರು ಸಾಲವನ್ನು ಹಿಂತಿರುಗಿಸಲು ತುಂಬಾ ಒತ್ತಾಯ ಮಾಡಿದಾಗ, ತಾನು ಲೈಸೆನ್ಸ್ ಪಡೆದು ತೆಗೆದುಕೊಂಡಿದ್ದ ಬಂದೂಕಿನಿಂದ ತನ್ನನ್ನು ಸಾಯಿಸಿಕೊಳ್ಳಲು ಯತ್ನಿಸಿದರು ಆ ಸಂದರ್ಭದಲ್ಲಿ, ಒಂದು ದೂರವಾಣಿ ಕರೆ ಅವರಿಗೆ ಬಂತು, ಅದರಲ್ಲೊಬ್ಬರು ಹೇಳಿದರು, “ನಾನು ಕಾರು ಡ್ರೈವಿಂಗ್ ಮಾಡುವಾಗ ನಿಮ್ಮ ಸಂದೇಶವನ್ನು ಕೇಳಿದೆ, ನೀವು ಚರ್ಚ್ಗೆ ತುಂಬಾ ಹಣದ ಅಗತ್ಯವಿದೆ ಎಂದು ಅದರಲ್ಲಿ ಹೇಳಿದ್ದೀರಿ. ನಿಮಗೆ ಬೇಕಾದ ಪೂರ್ಣ ಹಣವನ್ನು ತೆಗೆದುಕೊಂಡು ನಾಳೆ ನಿಮ್ಮನ್ನು ಭೇಟಿಯಾಗುತ್ತೇನೆ" ಎಂದು ಹೇಳಿದರು. ತಕ್ಷಣವೇ ಪಾಲ್ ಯಾಂಗಿ ಚೋ ಬಂದೂಕನ್ನು ಕೆಳಗಿಳಿಸಿ, "ದೇವರೇ, ಇಂತಹ ಹೇಡಿತನದ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ನನ್ನನ್ನು ಕ್ಷಮಿಸು" ಎಂದು ಪ್ರಾರ್ಥಿಸಿದರು.
ಅಪೊಸ್ತಲರ ಕೃತ್ಯಗಳು 16 ನೇ ಅಧ್ಯಾಯದಲ್ಲಿ, ಸೆರೆಮನೆಯಲ್ಲಿದ್ದ ಪೌಲ ಮತ್ತು ಸೀಲರು ದೇವರನ್ನು ಸ್ತುತಿಸಿದಾಗ ಸೆರೆಮನೆಯ ಬಾಗಿಲುಗಳು ತೆರೆಯಲ್ಪಟ್ಟವು. ಇದನ್ನು ಕಂಡ ಜೈಲಾಧಿಕಾರಿಯು, ಸೆರೆಮನೆಯಲ್ಲಿದ್ದವರು ತಪ್ಪಿಸಿಕೊಂಡು ಓಡಿ ಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು. ಕೂಡಲೆ ಪೌಲನು ಮಹಾಶಬ್ದದಿಂದ ಕೂಗಿ "ನೀನೇನೂ ಕೇಡು ಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ" ಎಂದನು. ಕೂಡಲೆ ಸೆರೆಯ ಯಜಮಾನನಿಗೆ ಶುಭವಾರ್ತೆಯನ್ನು ತಿಳಿಸಿ,
ಅವನನ್ನು ನೇರವಾಗಿ ರಕ್ಷಣೆಯಲ್ಲಿ ನಡೆಸಿದರು.
ಇದನ್ನು ಓದುತ್ತಿರುವ ಪ್ರಿಯರೇ! ಪ್ರತಿದಿನವೂ ನಾವು ಕೇಳುತ್ತಿರುವ ಒಂದು ಸುದ್ದಿ, ಯೌವನಸ್ಥರ ಆತ್ಮಹತ್ಯೆಗಳು, ಆತ್ಮಹತ್ಯೆ ಆಲೋಚನೆಗಳು ಹೆಚ್ಚಾಗುತ್ತಲೇ ಇವೆ. ಯಾವುದೊಂದು ಸಹಿಸಲಾಗದ ಸಮಸ್ಯೆಗಳಿಗೂ, ಪರಿಸ್ಥಿತಿಗಳಿಗೂ ಆತ್ಮಹತ್ಯೆಯೇ ಅಂತ್ಯವಲ್ಲ! ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಏಕೈಕ ಸ್ಥಳವೆಂದರೆ ಅದು ಕರ್ತನಾದ ಯೇಸುವಿನ ಪಾದಗಳು ಮಾತ್ರವೇ! ನಾವು ಕೋಪ ಮತ್ತು ವ್ಯರ್ಥ ಉತ್ಸಾಹದಲ್ಲಿ ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ನೋವನ್ನಂಟುಮಾಡುತ್ತವೆ. ಇದು ಶಾಶ್ವತವಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ನಿಮಗಿರುವ ಧೈರ್ಯವನ್ನು ಜೀವನವನ್ನು ನಡೆಸಲು ಉಪಯೋಗಿಸಿರಿ. ಕರ್ತನಾದ ಯೇಸು ಕ್ರಿಸ್ತನು ನಿಮಗೆ ಸಹಾಯ ಮಾಡಲು ಸಿದ್ಧರಾಗಿದ್ದಾರೆ. ಹಲ್ಲೇಲೂಯಾ!
- Mrs. ಶಕ್ತಿ ಶಂಕರರಾಜ್
ಪ್ರಾರ್ಥನಾ ಅಂಶ:
ಆಂಧ್ರಪ್ರದೇಶದ 6 ಸ್ಥಳಗಳಲ್ಲಿ ಸಭೆಗಳನ್ನು ನಿರ್ಮಿಸಿ ಆರಾಧನೆ ನಡೆಸಲಾಗುತ್ತಿದೆ. ಅದರಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳು ದೇವರಿಗಾಗಿ ಕಾರ್ಯ ನಿರ್ವಹಿಸುವ ಸಕ್ರಿಯ ವೀರರಾಗಿ ಮಾರ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482