Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 13.02.2021
Share:

By Village Missionary Movement

Saturday, 13-Feb-2021

ಧೈನಂದಿನ ಧ್ಯಾನ(Kannada) – 13.02.2021

ಪೌಲನೆಂಬ ಸೌಲನು

"...ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ ಅಂದನು." - ಅಪೊಸ್ತಲ 26:18

ತನ್ನ ಶಾಲೆಯ ವಿದ್ಯಾಭ್ಯಾಸದಲ್ಲಿ ಎಲ್ಲರಿಗಿಂತ ಕೊನೆಯವನು. ಈತನು ಜೀವನದಲ್ಲಿ ಮೇಲೆ ಬರುವುದಿಲ್ಲ, ಈತನು ಯಾವುದಕ್ಕೂ ಉಪಯೋಗವಿಲ್ಲ ಎಂದು ಉಪಾಧ್ಯಾಯರೆಲ್ಲರೂ ಆ ವಿದ್ಯಾರ್ಥಿಯನ್ನು ಬೈಯುತ್ತಿದ್ದರು. ಗಣಿತದಲ್ಲಿ ಬಹಳ ಕಡಿಮೆ ಅಂಕಗಳನ್ನು ತೆಗೆಯುತ್ತಿದ್ದರು ಆ ವಿದ್ಯಾರ್ಥಿ. ಸರಿ ವಿದ್ಯಾಭ್ಯಾಸದಲ್ಲಿ ಮುಂದುವರಿಯಲಿಲ್ಲ ಮನೆಯಲ್ಲಿರುವ ತೋಟವನ್ನಾದರು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದುಕೊಂಡರೆ ಅದಕ್ಕೂ ಕೂಡ ಉಪಯೋಗವಾಗಲಿಲ್ಲ. ಉಪಾಧ್ಯಾಯರಿಂದ, ಸ್ನೇಹಿತರಿಂದ, ಅಕ್ಕಪಕ್ಕದ ಮನೆಯವರಿಂದ ಹೀಗೆ ಎಲ್ಲರಿಂದಲೂ ತಿರಸ್ಕಾರ ಹೊಂದಿದನು ಆ ವಿದ್ಯಾರ್ಥಿ. ಆದರೆ ಭವಿಷ್ಯತ್ತಿನಲ್ಲಿ ಲೋಕವೆಲ್ಲ ತನ್ನ ಕಡೆಗೆ ತಿರುಗಿ ನೋಡುವಂತೆ ಮಾಡಿದನು. ಹೌದು ಆತನೇ ದೊಡ್ಡ ಗಣಿತ ಶಾಸ್ತ್ರಜ್ಞರಾದ ಸರ್. ಐಸಾಕ್ ನ್ಯೂಟನ್.

ಹೀಗೆ ಅಪೊಸ್ತಲರ ಕೃತ್ಯಗಳಲ್ಲಿ ಪೌಲನೆಂಬ ವ್ಯಕ್ತಿ ಆತನ ನಡವಳಿಕೆಯಿಂದ ತಿರಸ್ಕರಿಸಲ್ಪಟ್ಟನು. ಕಾರಣ ಯೇಸುವನ್ನು ಅಂಗೀಕರಿಸಿದ ಕುಟುಂಬಗಳನ್ನು ಚಿತ್ರಹಿಂಸೆ ಮಾಡುತ್ತಿದ್ದನು. ಅವರನ್ನು ಬೆದರಿಸಿ ಸಾಯಿಸುವುದಕ್ಕೆ ಸಿದ್ಧನಾದನು. ಇಂತಹ ಮೋಸ ಕರವಾದ ಪರಿಸ್ಥಿತಿಯಲ್ಲಿ ಇದ್ದವನೇ ಸೌಲನು. ಬೈಬಲ್ ನಲ್ಲಿ 1 ಕೊರಿಂಥ  1:28 ರಲ್ಲಿ  ದೇವರು ಜ್ಞಾನಿಗಳನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬುದ್ಧಿಹೀನರನ್ನು ಆರಿಸಿಕೊಂಡಿದ್ದಾನೆ; ದೇವರು ಬಲಿಷ್ಟರನ್ನು ನಾಚಿಕೆಪಡಿಸುವದಕ್ಕಾಗಿ ಈ ಲೋಕದ ಬಲಹೀನರನ್ನು ಆರಿಸಿಕೊಂಡಿದ್ದಾನೆ; ಎಂಬ ವಾಕ್ಯವನ್ನು ನೋಡುತ್ತೇವೆ. ಸೌಲನನ್ನು ದೇವರು ದೃಷ್ಟಿಸಿ ಆತನ ಜೀವನವನ್ನು ಮಾರ್ಪಡಿಸಿ ಪೌಲನಾಗಿ ಮಾರ್ಪಡಿಸಿದರು. ಪೌಲನು ರಕ್ಷಣೆ ಹೊಂದಿದ ನಂತರ ಕ್ರಿಸ್ತನಿಗಾಗಿ ತನ್ನ ಜೀವನವನ್ನು ಕೊಡುವುದಕ್ಕಾಗಿ ಹತಾಶವಾಗಿ ಅನೇಕ ಪತ್ರಿಕೆಗಳನ್ನು ಬರೆದರು. ಅನೇಕ ಯೌವ್ವನ ಸೇವಕರನ್ನು ರೂಪಿಸಿ ಅಪೊಸ್ತಲರ ಕೃತ್ಯಗಳಲ್ಲಿ ಕೇಂದ್ರಬಿಂದುವಾಗಿ ಕಾಣುತ್ತಿದ್ದಾರೆ.

ಇದನ್ನು ಓದುತ್ತಿರುವ ಪ್ರಿಯರೇ! ಮನುಷ್ಯರ ಮುಖವನ್ನು ನೋಡಿ ಇವರು ಏನು ಮಾಡಲಿದ್ದಾರೆ ಎಂದು ಹೀನವಾಗಿ ಆಲೋಚಿಸುವವರು ಅನೇಕರು ಉಂಟು. ಆದರೆ ದೇವರು ಘನ ಹೀನರಾಗಿ ಎಣಿಸಲ್ಪಟ್ಟವರನ್ನು ತನ್ನ ಮಹಿಮೆಗಾಗಿ ಬಲವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಸರ್ ಐಸಾಕ್ ನ್ಯೂಟನ್ ನ ಹಾಗೆ, ಅಪೊಸ್ತಲನಾದ ಪೌಲನ ಹಾಗೆ ನಿಮ್ಮ ಜೀವನದಲ್ಲಿಯೂ ತಿರಸ್ಕರಿಸಲ್ಪಟ್ಟ ಭಾಗವನ್ನು ದೇವರು ಮಾರ್ಪಡಿಸಿ ನಿಮ್ಮನ್ನು ನೆಲೆಗೊಳಿಸಿ ದೇವರು ಉಪಯೋಗಿಸಲು ಸಾಧ್ಯ. ಆತನ ಕೈಗೆ ನಿಮ್ಮನ್ನು ಸಮರ್ಪಿಸಿಕೊಳ್ಳಿರಿ, ಆತನಿಗಾಗಿ ಏನಾದರೂ ಮಾಡುವುದಕ್ಕೆ ಮುಂದೆ ಬನ್ನಿರಿ.
-    Mrs. ಜ್ಯೋತಿ ಆನಂದ್

ಪ್ರಾರ್ಥನಾ ಅಂಶ:-
ಚಿಕ್ಕಮಕ್ಕಳ ಪಾರ್ಟ್ನರ್ ಶಿಪ್ ಯೋಜನೆಯಲ್ಲಿ ಸೇರಿರುವ ಮಕ್ಕಳ ರಕ್ಷಣೆಗಾಗಿ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al