Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 07.10.2022
Share:

By Village Missionary Movement

Friday, 07-Oct-2022

ಧೈನಂದಿನ ಧ್ಯಾನ(Kannada) – 07.10.2022

 

ವಿಮೋಚನೆಯ ಧ್ವನಿ ಮೊಳಗಲಿ

 

"...ಕೇಡಿನ ಬಂಧಗಳನ್ನು ಬಿಚ್ಚುವದು,... ಜಜ್ಜಿಹೋದವರನ್ನು ಬಿಡುಗಡೆಮಾಡುವದು,...ಇವುಗಳೇ ನನಗೆ ಇಷ್ಟವಾದ ಉಪವಾಸವ್ರತವಲ್ಲವೇ” - ಯೆಶಾಯ 58:6, 7

 

1963 ರಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ನೇತೃತ್ವದಲ್ಲಿ USA, ವಾಷಿಂಗ್ಟನ್‌ನಲ್ಲಿ "ಶಾಂತಿಗಾಗಿ ಧರಣಿ" ನಡೆಯಿತು. "ನನಗೊಂದು ಕನಸಿದೆ" ಎಂಬ ವಿಷಯದ ಕುರಿತು ಅವರು ಮಾಡಿದ ಭಾಷಣ ದೇಶದ ಮೂಲೆ ಮೂಲೆಯ ಜನರನ್ನು ವಿಮೋಚನೆಯ ದಾಹದಿಂದ ಜಾಗೃತಗೊಳಿಸಿತು. ಈ ಕಾರಣದಿಂದಾಗಿ, ನಿಜವಾದ ಬದಲಾವಣೆಯು ಶೀಘ್ರದಲ್ಲೇ ಅನೇಕರಿಗೆ ಮತ್ತು ಅವರ ಶಾಂತಿ ಚಳುವಳಿಗೆ ಸೇರಿದವರಿಗೆ ಬರಲು ಪ್ರಾರಂಭಿಸಿತು. ತಮ್ಮನ್ನು ಹಿಂಸಿಸುವವರ ಕೈಯಿಂದ ಮತ್ತು ದಬ್ಬಾಳಿಕೆಗಾರರಿಂದ ಬಿಡುಗಡೆ ಹೊಂದಲು ಹೋರಾಡಬೇಕು ಎಂದು ಅಮೆರಿಕದ ಜನರ ಆಂತರಿಕ ಭಾವನೆಯನ್ನು ಸ್ಪರ್ಶಿಸುವ ಉದ್ದೇಶವನ್ನು ಈ ಭಾಷಣವು ಹೊಂದಿತ್ತು.

 

ಪ್ರವಾದಿಯಾದ ಯೆಶಾಯನ ಕಾಲದಲ್ಲಿ, ವೈಯಕ್ತಿಕ ಜನರ ಬಳಿಯೂ ಮತ್ತು ದೇಶದಲ್ಲಿಯೂ ನೀತಿ, ನ್ಯಾಯ ಇಲ್ಲದಿರುವಾಗ, ಯೆಶಾಯನ ಪ್ರವಾದಿಯ ಮೂಲಕ ಜನರ ಆತ್ಮಸಾಕ್ಷಿಯನ್ನು ಕರ್ತನು ತಟ್ಟಿ ಎಬ್ಬಿಸಿದರು. ಅವರ ದೈವಭಕ್ತಿ ಎಷ್ಟಿತ್ತೆಂದರೆ, ತಮ್ಮೊಂದಿಗಿರುವ ಜನರನ್ನು ಹಿಂಸಿಸುತ್ತಿದ್ದೇವೆ ಎಂಬ ಭಾವನೆಯೂ ಇರಲಿಲ್ಲ. ದೇವ ಜನರು ಬಡವರನ್ನು ದಬ್ಬಾಳಿಕೆ ಮಾಡಿದರು. ಅದಕ್ಕೆ ಬದಲಾಗಿ, ಅವರು ನೀತಿವಂತ ಜೀವನವನ್ನು ಜೀವಿಸಲು, ದೇವರ ಭಕ್ತಿಯ ನಂತರದ ಕಾರ್ಯಗಳಲ್ಲೂ ಉಪವಾಸದಂತಹ ಕಾರ್ಯಗಳಲ್ಲೂ ತರಬೇತಿ ಹೊಂದಿದರು. (ಯೆಶಾಯ 58:1-5)

 

ಆದರೆ ನನ್ನ ದೈನಂದಿನ ಜೀವನದಲ್ಲಿ ನನ್ನ ಸುತ್ತಮುತ್ತಲಿನ ಜನರಿಗೆ ಪ್ರೀತಿ ಮತ್ತು ಸಹಾನುಭೂತಿ ತೋರಿಸುವುದು ನನಗೆ ಉತ್ತಮ ಎಂದು ಕರ್ತನು ಹೇಳುತ್ತಿದ್ದಾರೆ. ಹಸಿದವರಿಗೆ ಅನ್ನವನ್ನು ಹಂಚುವದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವದೇ ನನಗೆ ಇಷ್ಟವಾದ ಉಪವಾಸ ಎಂದು ಹೇಳುತ್ತಿದ್ದಾರೆ. ಹೌದು, ನಮ್ಮಿಂದ ಸಾಧ್ಯವಾದಷ್ಟು, ದುಃಖದಲ್ಲಿರುವವರನ್ನು ಮತ್ತು ಬಂಧಿತ ಜನರನ್ನು ಮುಕ್ತಗೊಳಿಸಲು ಸಹಾಯ ಮಾಡಬೇಕು. ಕರ್ತನಾದ ಯೇಸುವಿನ ರಕ್ತದ ಮೂಲಕ ನಾವು ಪಡೆದ ರಕ್ಷಣೆಯ ಸಂತೋಷವನ್ನು, ನಮ್ಮಂತೆ ಅದನ್ನು ತಿಳಿಯದೆ ನರಕಕ್ಕೆ ನೇರವಾಗಿ ಹೋಗುತ್ತಿರುವ ಜನರಿಗೆ ಹೇಳಬೇಕು. ನಂಬುವವರ ಮೂಲಕ ಸಂಭವಿಸುವ ಗುರುತುಗಳಾಗಿ ಹೇಳಲ್ಪಟ್ಟವುಗಳೆಲ್ಲಾ ನಮ್ಮ ಮೂಲಕ ನಡೆಯಬೇಕು. ಸೈತಾನನ ವಶದಲ್ಲಿದ್ದವರನ್ನು ಗುಣಪಡಿಸಿದ ಕರ್ತನಾದ ಯೇಸು ಕ್ರಿಸ್ತನಂತೆ ಪವಿತ್ರಾತ್ಮದಿಂದ ತುಂಬಿ, ನಾವು ವಿಮೋಚನೆಯ ಸಂದೇಶವನ್ನು ಬೋಧಿಸುವಾಗ, ಸೈತಾನನ ಸೆರೆಯಲ್ಲಿರುವ ಪ್ರತಿಯೊಬ್ಬರನ್ನು ಬಿಡುಗಡೆ ಮಾಡುವವರಾಗಿ ಇರೋಣ. ಹಲ್ಲೇಲೂಯಾ!

- A. ಬ್ಯೂಲಾ

 

ಪ್ರಾರ್ಥನಾ ಅಂಶ:

“ಮೋಕ್ಷ ಪ್ರಯಾಣ” ಪತ್ರಿಕೆಗೆ ಸಂದೇಶಗಳನ್ನು ಬರೆಯುವ ವ್ಯಕ್ತಿಗಳು ಮತ್ತು ಜೊತೆ ಸೇರಿ ಸೇವೆ ಮಾಡುತ್ತಿರುವ ಎಲ್ಲಾ ವ್ಯಕ್ತಿಗಳ

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al