Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 06.10.2022
Share:

By Village Missionary Movement

Thursday, 06-Oct-2022

ಧೈನಂದಿನ ಧ್ಯಾನ(Kannada) – 06.10.2022

 

ಹೀನವಾಗಿ ನೆನೆಸಬೇಡ 

 

“...ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ..." - 1 ಸಮು.16:7

 

ಗ್ವಾಟನ್ ಇಂಗ್ಲೆಂಡ್ ದೇಶದಲ್ಲಿರುವ ಒಬ್ಬ ಚಿಕ್ಕಹುಡುಗ. ಅವನು ಇತರ ಹುಡುಗರಿಗಿಂತ ಭಿನ್ನವಾಗಿ ಕುಂಠಿತನಾಗಿದ್ದನು. ಇವನೊಂದಿಗೆ ಓದುತ್ತಿದ್ದ ವಿದ್ಯಾರ್ಥಿಗಳು ಮತ್ತು ಆತ್ಮೀಯರು ಕೆಲವರು ಕೆಲವೊಮ್ಮೆ ಅವನನ್ನು ಗೇಲಿ ಮಾಡಿ, ಹೀನವಾದ ಮಾತುಗಳನ್ನು ಆಡುತ್ತಿದ್ದರು. ಅವನು 5ನೇ ತರಗತಿಯಲ್ಲಿ ಓದುತ್ತಿದ್ದಾಗ ಒಂದು ದಿನ ಶಾಲೆಯಲ್ಲಿದ್ದವರು ಅವನ ಬಗ್ಗೆ ಕೀಳಾಗಿ ಮಾತಾಡಿದರು. ಅವರು ಹೇಳಿದ್ದನ್ನು ಕೇಳಿ ಗ್ವಾಟನ್‌ ಎದೆಗುಂದಿದನು. ಗ್ವಾಟನ್ ಶಾಲೆಯಿಂದ ಮನೆಗೆ ಬಂದು ತನ್ನ ತಾಯಿಗೆ ಅಳುತ್ತಾ, "ನಾನು ಸಾಯಲು ಬಯಸುತ್ತೇನೆ" ಎಂದು ಕೂಗಾಡಿದನು. ಅಳುತ್ತಾ ಏನು ಮಾಡಬೇಕೆಂದು ತಿಳಿಯದೆ ಅವನ ತಾಯಿ ತನ್ನ ಸೆಲ್‌ಫೋನ್‌ನಲ್ಲಿ ಅವನ ವಿಡಿಯೋ ತೆಗೆದರು. ವೀಡಿಯೋ ತೆಗೆದ ಅದೇ ದಿನದಲ್ಲಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ಶೇರ್ ಮಾಡಿದ್ದಾರೆ. ಆ ವೀಡಿಯೊ ನೋಡಿದ ನಂತರ, ಅಧ್ಯಕ್ಷರು ತಕ್ಷಣವೇ ಹುಡುಗನನ್ನು ಗೌರವಿಸಲು ಬಯಸಿದ್ದರು. ಅಂದು ನಡೆಯಲಿರುವ ರಗ್ಬಿ (Rugby) ವಿಶ್ವಕಪ್‌ನಲ್ಲಿ, "ಫೈನಲ್ಸ್‌ನಲ್ಲಿ ಇಂಗ್ಲೆಂಡ್ ತಂಡದ ಮುಂದೆ ನಿಲ್ಲಲು ಯೋಗ್ಯವಾದ ಏಕೈಕ ವ್ಯಕ್ತಿ ಗ್ವಾಟನ್" ಎಂದು ಅಧ್ಯಕ್ಷರು ಆದೇಶಿಸಿದರು. ಗ್ವಾಟನ್ ಮುಂದೆ ನಿಂತಿದ್ದು, ಅವನ ಸಹ ಆಟಗಾರರು ಅವನ ಹಿಂದೆ ಸಾಲಾಗಿ ನಿಂತಿರುವುದು ನೋಡುಗರಿಗೆ ಒಂದು ದೃಶ್ಯವಾಗಿತ್ತು.

 

ನಾವು ಸತ್ಯವೇದದಲ್ಲಿ ದಾವೀದನ ಒಂದು ಕಾಲಘಟ್ಟದಲ್ಲಿ ನೋಡಿದರೆ, ಅವನನ್ನು ಎಲ್ಲರೂ ನಿರ್ಲಕ್ಷಿಸಿದರು ಮತ್ತು ಕೀಳಾಗಿ ಕಾಣುತ್ತಿದ್ದರು. ದೇಶ, ವಿದೇಶ ಮತ್ತು ಯುದ್ಧಭೂಮಿಯಲ್ಲಿ ಎಲ್ಲೆಲ್ಲೂ ಅವನನ್ನು ಕೀಳಾಗಿ ಕಾಣುತ್ತಿದ್ದರು. ಆದರೆ ದೇವರು ಅವನನ್ನು ಗೌರವಿಸಿದರು. ಆ ಘನತೆಯು ಸಾಮಾನ್ಯವಾದದ್ದಲ್ಲ. ಅವನು ತನ್ನ ಕಲ್ಪನೆಗೂ ಮೀರಿದ ಉನ್ನತಿ ಹೊಂದಿದನು. ಅವನು ಸಕಲ ಇಸ್ರಾಯೇಲ್ ಜನಾಂಗದ ಮೇಲೆ ರಾಜನಾಗಿಯೂ ಅಭಿಷೇಕಿಸಲ್ಪಟ್ಟನು.

 

ಸ್ನೇಹಿತರೇ! ನಾವು ಯಾರನ್ನೂ ಕಡಿಮೆ ಅಂದಾಜು ಮಾಡಬಾರದು. ಏಕೆಂದರೆ ನಾವು ಮನುಷ್ಯರು ಇತರರ ಮುಖಗಳನ್ನು ಮಾತ್ರ ನೋಡಬಹುದು. ಆದರೆ ದೇವರು ಹೃದಯವನ್ನು ನೋಡುತ್ತಾರೆ. ದೀನರನ್ನು ಉನ್ನತೀಕರಿಸಲೂ ಮತ್ತು ಉನ್ನತರನ್ನು ತಗ್ಗಿಸಲೂ ಆತನೊಬ್ಬನಿಗೆ ಮಾತ್ರ ಸಾಧ್ಯ. ಆದ್ದರಿಂದ ನಾವು ಯಾರ ಬಗ್ಗೆಯೂ ಲಘುವಾಗಿ ಯೋಚಿಸದೆ, ದೇವರ ಪ್ರತಿರೂಪದಲ್ಲಿ ರಚಿಸಲ್ಪಟ್ಟಿರುವ ಪ್ರತಿಯೊಬ್ಬರನ್ನು ಎಚ್ಚರಿಕೆಯಿಂದ ನೋಡೋಣ! ಆಗ ದೇವರ ಚಿತ್ತವು ನಮ್ಮ ಮೂಲಕ ಈ ಭೂಮಿಯ ಮೇಲೆ ನೆರವೇರುವುದರಲ್ಲಿ ಸಂದೇಹವೇ ಇಲ್ಲ.

- T.ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಸಾಮಾಜಿಕ ಮಾಧ್ಯಮಗಳ ಮೂಲಕ "ಮೋಕ್ಷ ಪ್ರಯಾಣ" ಎಂಬ ಪತ್ರಿಕೆಯನ್ನು ಓದುವ ಪ್ರತಿಯೊಬ್ಬರ ಹೃದಯವು ಜ್ಞಾನ ಉಜ್ಜೀವನವಾಗಲಿ ಎಂದು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al