By Village Missionary Movement
Sunday, 04-Sep-2022ಧೈನಂದಿನ ಧ್ಯಾನ(Kannada) – 05.09.2022 (Youth Special)
ಕ್ರಿಸ್ತನಲ್ಲಿ ಉತ್ತಮ ಶಿಕ್ಷಕ
"ನಾನೇ ನನ್ನ ಕುರಿಗಳನ್ನು ಮೇಯಿಸಿ ಹಾಯಾಗಿ ಮಲಗುವಂತೆ ಮಾಡುವೆನು; ಇದು ಕರ್ತನಾದ ಯೆಹೋವನ ನುಡಿ" - ಯೆಹೆಜ್ಕೇಲ 34:15
ಇಂದಿನ ಯುಗದಲ್ಲಿ, ಜಗತ್ತಿನಲ್ಲಿ ಉತ್ತಮ ಶಿಕ್ಷಕನ ಖ್ಯಾತಿಯನ್ನು ಗಳಿಸುವುದು ಸವಾಲುಗಳಿಂದ ತುಂಬಿದೆ. ವಿಶೇಷವಾಗಿ ಕ್ರಿಸ್ತನಲ್ಲಿ ಉತ್ತಮ ಖ್ಯಾತಿಯನ್ನು ಹೊಂದಿರುವ ಉತ್ತಮ ಶಿಕ್ಷಕ ನಾಗಿ, ಭವಿಷ್ಯದ ತಲೆಮಾರುಗಳಾದ ವಿದ್ಯಾರ್ಥಿ ಸಮೂಹವನ್ನು ಕ್ರಿಸ್ತನ ಪ್ರೀತಿಯಿಂದ ಸಂಪಾದಿಸುವ ಕೆಲಸ ತುಂಬಾ ಸವಾಲಿನದು! ಕಳೆದ 12 ವರ್ಷಗಳಲ್ಲಿ ವಿದ್ಯಾರ್ಥಿಗಳೊಂದಿಗಿನ ನನ್ನ ಪ್ರಯಾಣವು ಶಿಕ್ಷಕ, ಪ್ರಾಂಶುಪಾಲರು ಮತ್ತು ನಿರ್ವಾಹಕರಾಗಿ ನನಗೆ ಅನೇಕ ಪಾಠಗಳನ್ನು ಕಲಿಸಿದೆ. ಕರ್ತನು ನಿತ್ಯವೂ ನನ್ನನ್ನು ನಡೆಸಿಕೊಂಡ ರೀತಿಯನ್ನು ಹಿಂತಿರುಗಿ ನೋಡಿದಾಗ ಅದು ಆಶ್ಚರ್ಯವಾಗಿದೆ. ಇನ್ನೂ ಆತನಿಗಾಗಿ ಹೆಚ್ಚಿನದನ್ನು ಸಾಧಿಸಲು ಪ್ರೇರೇಪಿಸುತ್ತಿದೆ. ದೇವರು ನನಗೆ ಕೊಟ್ಟ ಕರೆಯುವಿಕೆಗೆ ಅನುಗುಣವಾಗಿ ಈ ಸೇವೆಯಲ್ಲಿ ಕಲಿತದ್ದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
ನಮ್ಮ ಬಳಿ ಇರುವುದು ದೇವರ ಹಿಂಡು:-
1 ಪೇತ್ರ 5:2 ರ ಪ್ರಕಾರ, ನಾವು ಯಾವ ರೀತಿಯ ಸಂಸ್ಥೆಯಲ್ಲಿ ಕೆಲಸ ಮಾಡಿದರೂ, ನಮಗೆ ನೀಡಿದ ವಿದ್ಯಾರ್ಥಿಗಳು (ಅಥವಾ) ನೌಕರರನ್ನು ದೇವರ ಹಿಂಡುಗಳಾಗಿ ಪರಿಗಣಿಸಲು ತಿಳಿದಿರಬೇಕು. ಆಗ ಮಾತ್ರವೇ ನಮಗೆ ಅವರ ಮೇಲಿನ ಆತ್ಮಭಾರ, ಅವರ ಅಗತ್ಯಗಳನ್ನು ತಿಳಿದುಕೊಂಡು ಸ್ಪಂದಿಸುವುದು ಅವರ ಭಾವನೆಗಳು ಮತ್ತು ಮಾನಸಿಕ ಒತ್ತಡಗಳನ್ನು ಅರ್ಥಮಾಡಿಕೊಂಡು ನಡೆದುಕೊಳ್ಳುವ ಗುಣ ಪ್ರಕಟವಾಗುತ್ತದೆ.
ಒಳ್ಳೆಯ ಕುರುಬನ ಒಳ್ಳೆಯ ಸ್ವಭಾವವು ಪ್ರಕಟವಾಗಬೇಕು;-
1 ಪೇತ್ರ 5: 2-4 ವರೆಗೆ ಹೇಳಲ್ಪಟ್ಟ ಪ್ರಕಾರ, ನಾವು ನಮ್ಮ ಅಧಿಕಾರಿಗಳ ಒತ್ತಾಯದ ಮೇರೆಗೋ, ನಿರ್ಬಂಧದ ಮೇರೆಗೋ ಕೆಟ್ಟ ಪ್ರಾಪಂಚಿಕ ಲಾಭಕ್ಕಾಗಿ ಅಧಿಕಾರ ನಡೆಸುವ ಉದ್ದೇಶದಿಂದಲೋ ಮತ್ತು ಅವಲಕ್ಷಣವಾದ ಲೋಕಪ್ರಕಾರವಾದ ಸಂಪಾದನೆಗಾಗಿಯೋ (ಹಣ, ಕಾಮ ಮತ್ತು ಸ್ವಹಿತಾಸಕ್ತಿಗೆ) ವಿದ್ಯಾರ್ಥಿಗಳನ್ನು ಖಂಡಿತವಾಗಿಯೂ ಬಳಸಲೇ ಬಾರದು. ಒಳ್ಳೆಯ ಕುರುಬನಾದ ಯೇಸು ಕ್ರಿಸ್ತನಂತೆ, ಮನಃಪೂರ್ವಕವಾಗಿ ಹಿಂಡಿಗೆ ಉತ್ತಮ ಮಾದರಿಯಾಗಿ ಎಲ್ಲಾ ಕ್ರಿಯೆಗಳಲ್ಲೂ ಮೂಲಮಾದರಿಯನ್ನು ತೋರುತ್ತಾ ಗಮನಹರಿಸಬೇಕು. ಎಷ್ಟು ಮಾತ್ರವೂ ಅಧಿಕಾರ ಮಾಡಬಾರದು. ಅದರ ಸೂಕ್ತವಾದ ಮುಖ್ಯ ಕುರುಬನು ಬರುವಾಗ ಮಹಿಮೆಯುಳ್ಳ ಬಾಡದ ಕಿರೀಟವನ್ನು ಪಡೆಯುತ್ತೇವೆ ಎಂದು ನಂಬಿ ವೀರನಡೆ ಹಾಕಬೇಕು. ಕೊನೆಗೆ ರೋಗಿಗಳ ಮೇಲೆ ಪ್ರತ್ಯೇಕವಾದ ಆಸಕ್ತಿ ತೋರಿಸಲು ಪರಿಶುದ್ಧಾತ್ಮನ ಅಭಿಷೇಕ ಮತ್ತು ಪರಿಶುದ್ಧಾತ್ಮನ ಜ್ಞಾನ ಬಹಳ ಅಗತ್ಯ.
ಯೆಹೆಜ್ಕೇಲ 34:4 ರ ಪ್ರಕಾರ ದುರ್ಬಲರನ್ನು ಬಲಪಡಿಸಬೇಕು. ರೋಗಿಗಳನ್ನು ಗುಣಪಡಿಸಬೇಕು ಮತ್ತು ಗಾಯಗೊಂಡವರ ಗಾಯಕಟ್ಟಬೇಕು, ಹೊರಬಿಟ್ಟಿದ್ದನ್ನು ಮತ್ತೆ ಕರೆತರಬೇಕು, ಕಾಣೆಯಾದವುಗಳನ್ನು ಹುಡುಕಬೇಕು ಮತ್ತು ಆಶ್ರಯ ನೀಡಬೇಕು. ಹೀಗೆ ನ್ಯಾಯವಾಗಿ ಮೇಯಿಸುವ ಕುರುಬನಂತೆ ಧರ್ಮಗ್ರಂಥಗಳ ಆಧಾರದ ಮೇಲೆ ಯಾವುದೇ ಭೇದಭಾವವಿಲ್ಲದೆ ಕಾಳಜಿಯುಳ್ಳ ಶಿಕ್ಷಕರಾಗಿ ವರ್ತಿಸಿದಾಗ ಕ್ರಿಸ್ತನಲ್ಲಿ ಉತ್ತಮ ಶಿಕ್ಷಕರಾಗಲು ಸಾಧ್ಯ! ಸತ್ಯವೇದವನ್ನು ಓದುವುದು ಮತ್ತು ಪ್ರಾರ್ಥಿಸುವುದು ಇವುಗಳೇ ಇದಕ್ಕೆ ಅಡಿಪಾಯವಾಗಿದೆ!
- Mrs. ಮೆರ್ಸಿ ಜೆಸಿಂತಾ
ಪ್ರಾರ್ಥನಾ ಅಂಶ:
ಮಿಷನರಿಗಳ ಕುಟುಂಬ, ಮಕ್ಕಳ ದೈಹಿಕ ಸ್ವಸ್ಥತೆ ಮತ್ತು ಶಿಕ್ಷಣಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482