By Village Missionary Movement
Saturday, 09-Jul-2022ಧೈನಂದಿನ ಧ್ಯಾನ(Kannada) – 09.07.2022
ನನ್ನನ್ನು ಕರಗಿಸಿದರೆ...
“ನೀವು ಲೋಕಕ್ಕೆ ಬೆಳಕಾಗಿದ್ದೀರಿ" - ಮತ್ತಾಯ 5:14
ಒಬ್ಬ ಯಜಮಾನನ ಮನೆಯಲ್ಲಿ ಅನೇಕ ಮೇಣದಬತ್ತಿಗಳನ್ನು ಇಡಲಾಗಿತ್ತು. ಅವುಗಳಲ್ಲಿ ಪ್ರತಿಯೊಂದೂ ಸುಂದರವಾದ ಬಣ್ಣಗಳಲ್ಲಿ, ವಿಭಿನ್ನ ಆಕಾರಗಳಲ್ಲಿ ಮತ್ತು ವಿಭಿನ್ನ ಗಾತ್ರಗಳಲ್ಲಿದ್ದವು. ಇವುಗಳಲ್ಲಿ ಒಂದೇ ಒಂದು ಮೇಣದಬತ್ತಿಯು ಮಾತ್ರ ತುಂಬಾ ಚಿಕ್ಕದಾಗಿಯೂ, ಅಲಂಕಾರವಿಲ್ಲದೇ, ಬಣ್ಣರಹಿತವಾಗಿಯೂ ಸಾಧಾರಣವಾಗಿಯೂ ಇತ್ತು. ಇದು ಇತರ ಮೇಣದಬತ್ತಿಗಳನ್ನು ನೋಡಿ, “ನಾನು ಅವುಗಳ ಹಾಗೆ ಸುಂದರವಾಗಿಯೋ ಅಥವಾ ದೊಡ್ಡ ಮಟ್ಟದಲ್ಲೋ ಇಲ್ಲ, ಆದರೆ ಅಂದವಿಲ್ಲದ ರೂಪದಲ್ಲಿದ್ದೇನೆ. ನನ್ನನ್ನು ಮಾತ್ರ ಯಾಕೆ ಹೀಗೆ ಉಂಟು ಮಾಡಿದರು? "ಯಾರು ನನ್ನನ್ನು ಇಷ್ಟಪಡುತ್ತಾರೆ?" ಎಂದು ಯೋಚಿಸುತ್ತಾ, ಚಿಂತಿಸುತ್ತಾ ದುಃಖದಲ್ಲಿತ್ತು.
ಒಂದು ರಾತ್ರಿ ಇದ್ದಕ್ಕಿದ್ದಂತೆ ಎಲ್ಲಾ ದೀಪಗಳು ಆರಿಹೋದಾಗ, ಮನೆಯ ಯಜಮಾನನು ಕೈಯಲ್ಲಿ ಬೆಂಕಿಕಡ್ಡಿಯೊಂದಿಗೆ ಮೇಣದಬತ್ತಿಯ ಕೋಣೆಗೆ ಬಂದನು. ಕೋಣೆಯಲ್ಲಿನ ಎಲ್ಲಾ ಮೇಣದಬತ್ತಿಗಳು "ಇಂದು ಯಜಮಾನನು ಯಾರನ್ನು ಉಪಯೋಗಿಸಲಿದ್ದಾರೆ" ಎಂದು ಕಾಯುತ್ತಿದ್ದರು. ಯಜಮಾನನು ತುಂಬಾ ಸಾಮಾನ್ಯವಾದ ಮೇಣದಬತ್ತಿಯನ್ನು ತೆಗೆದುಕೊಂಡು ಅದನ್ನು ಬೆಳಗಿಸಿ ಕೋಣೆಯ ಮಧ್ಯದಲ್ಲಿ ಇಟ್ಟರು. ಕತ್ತಲು ತುಂಬಿದ ಆ ಕೋಣೆ, ತನ್ನಿಂದ ತುಂಬಾ ಪ್ರಕಾಶಮಾನವಾಗಿರುವುದನ್ನು ನೋಡಿ ಮೇಣದಬತ್ತಿಗೆ ತುಂಬಾ ಸಂತೋಷವಾಯಿತು. ಆಗ ಆ ಮಾಮೂಲಿ ಮೇಣದ ಬತ್ತಿಯಲ್ಲಿ ಒಂದು ಸತ್ಯ ತಿಳಿಯಿತು. “ನಾನು ಉರಿಯುವ, ಕರಗುವ, ಬೆಳಕನ್ನು ನೀಡುವ ಮತ್ತು ಕತ್ತಲೆಯನ್ನು ಹೋಗಲಾಡಿಸುವ ಉದ್ದೇಶಕ್ಕಾಗಿ ರಚಿಸಲ್ಪಟ್ಟಿದ್ದೇನೆ. ಇದೆಲ್ಲದಕ್ಕೂ ಸುಂದರವಾದ ಬಣ್ಣ ಮತ್ತು ದೊಡ್ಡ ಆಕೃತಿ ಏಕೆ ಬೇಕು? ಇವೆಲ್ಲವೂ ಉರಿದು ಪ್ರಕಾಶಿಸುವಾಗ ಕರಗಿ ನಾಶವಾಗುವಂತದ್ದೇ ತಾನೇ. ನಾನು ಉರಿದು ಬೆಳಗುತ್ತೇನೆ ಮತ್ತು ಕತ್ತಲೆಯನ್ನು ಹೋಗಲಾಡಿಸುತ್ತೇನೆ ಎಂಬುದು ನನ್ನ ಒಡೆಯನ ನಿರೀಕ್ಷೆಯಾಗಿತ್ತು ಮತ್ತು ಇಂದು ನಾನು ಅವನ ಉದ್ದೇಶವನ್ನು ಪೂರೈಸಿದ್ದೇನೆ ಮತ್ತು ಕತ್ತಲೆಯನ್ನು ಹೋಗಲಾಡಿಸಲು ಉಪಯುಕ್ತನಾಗಿದ್ದೇನೆ.
ಮತ್ತಾಯ 7:21 ನೇ ವಚನ ಹೇಳುತ್ತದೆ, "ಸ್ವಾಮೀ, ಸ್ವಾಮೀ ಅನ್ನುವವರೆಲ್ಲರು ಪರಲೋಕರಾಜ್ಯದಲ್ಲಿ ಸೇರುವರೆಂದು ನೆನಸಬೇಡಿರಿ; ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತದಂತೆ ನಡೆಯುವವನೇ ಹೊರತು, ಪರಲೋಕರಾಜ್ಯಕ್ಕೆ ಸೇರುವವನು ಯಾರು?" ಎಂದು.
ನಮ್ಮಲ್ಲಿ ಪ್ರತಿಯೊಬ್ಬರಿಗೂ ಪ್ರಾಪಂಚಿಕ ಐಶ್ವರ್ಯವಿದ್ದರೂ, ಸೌಂದರ್ಯವಿದ್ದರೂ, ಇಲ್ಲದಿದ್ದರೂ, ವಿದ್ಯಾವಂತರಿರಲಿ, ಇಲ್ಲದಿರಲಿ, ಈ ಎಲ್ಲ ವಿಷಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ. ಎಲ್ಲಾ ಇದ್ದು ಬೆಳಗಲು ಸಾಧ್ಯವಾಗದ ಮೇಣದಬತ್ತಿಗಳಂತೆ ಇಲ್ಲದೇ ಸಾಮಾನ್ಯವಾಗಿದ್ದರೂ ಉರಿದು ಪ್ರಕಾಶಿಸುವ ಮೇಣದಬತ್ತಿಗಳಂತೆ, ನಮ್ಮನ್ನು ಸೃಷ್ಟಿಸಿದ ದೇವರ ಉದ್ದೇಶವನ್ನು ನೆರವೇರಿಸುವವರಾಗಿ ಬದುಕೋಣ!
- Mrs. ಜೆಬಕನಿ ಶೇಖರ್
ಪ್ರಾರ್ಥನಾ ಅಂಶ:
ಕೋವಿಲ್ ಪಟ್ಟಿಯಲ್ಲಿ ಇಂದು ನಡೆಯಲಿರುವ ಉಜ್ಜೀವನವನ್ನು ಬಯಸುವವರ ಕೂಟದಲ್ಲಿ ಉಜ್ಜೀವನವನ್ನು ಬಯಸುವವರು ಭಾಗವಹಿಸುವಂತೆ: ದೇವರ ನಾಮ ಮಹಿಮೆ ಹೊಂದುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482