By Village Missionary Movement
Thursday, 07-Apr-2022ಧೈನಂದಿನ ಧ್ಯಾನ(Kannada) – 07.04.2022
ನಾವು ಜಾಗೃತರಾಗಿದ್ದೇವೆಯೇ?
"ಆಗ ಯೇಸು - ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು ಅಂದನು" - ಲೂಕ 23:34
ಯೇಸು ಶಿಲುಬೆಯ ಮೇಲೆ ನುಡಿದ ಮೊದಲ ಮಾತು.
ಯೇಸುಕ್ರಿಸ್ತನ ಶಿಲುಬೆಗೇರಿಸಲು ಯಾರು ಕಾರಣ? ಅಥವಾ ಏನು? ಎಂದು ಯೋಚಿಸಿದರೆ, ಅದಕ್ಕೆ ಉತ್ತರವನ್ನು ಯೆಶಾಯ 53: 5 ರಲ್ಲಿ ಕಾಣಬಹುದು. "ನಮ್ಮ ಅಪರಾಧಗಳಿಗಾಗಿ ಗಾಯಗೊಂಡು, ನಮ್ಮ ಅಕ್ರಮಗಳಿಗಾಗಿ ಅವರು ಜಜ್ಜಲ್ಪಟ್ಟರು." ಆದ್ದರಿಂದ ಯೇಸುಕ್ರಿಸ್ತನ ಶಿಲುಬೆಗೇರಿಸುವಿಕೆಗೆ ನೀವು ಮತ್ತು ನಾನು ಸೇರಿದಂತೆ ಈ ಪ್ರಪಂಚದ ಪ್ರತಿಯೊಬ್ಬರೂ ಜವಾಬ್ದಾರರು. ಅದೇ ಸಮಯದಲ್ಲಿ, ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದಾಗ, "
"ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು" ಎಂದು ಯಾರಿಗಾಗಿ ಮಧ್ಯಸ್ಥಿಕೆ ವಹಿಸಿ ಮಾತನಾಡುತ್ತಿದ್ದಾರೆ?
ಆ ದಿನಗಳಲ್ಲಿ ಜೀವಿಸಿದ ಯೆಹೂದ್ಯರು, ವಿಶೇಷವಾಗಿ ಫರಿಸಾಯರು ಮತ್ತು ಸದ್ದುಕಾಯರು, ಉದ್ದೇಶಪೂರ್ವಕವಾಗಿ ಮತ್ತು ತಂತ್ರವಾಗಿ ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದರು. ಇಸ್ಕರಿಯೋತ ಯೂದನಿಗೆ ಹಣವನ್ನು ನೀಡುವುದರಿಂದ ಹಿಡಿದು ಪಿಲಾತನ ಮನವೊಲಿಸುವವರೆಗೆ ಇವರೇ ಕಾರಣ ಎಂಬುದು ನಮಗೆ ತಿಳಿದಿದೆ. ದೇವರನ್ನು ಹುಡುಕಿ, ದೇವರ ವಾಕ್ಯಗಳನ್ನು ಅನ್ವೇಷಣೆ ಮಾಡುತ್ತಿರುವ ಈ ಫರಿಸಾಯರು ಮತ್ತು ಸದ್ದುಕಾಯರು ಯೇಸುಕ್ರಿಸ್ತನ ವಿಷಯದಲ್ಲಿ ತಾವು ಮಾಡಿದ್ದು ನೂರಕ್ಕೆ ನೂರು ಸರಿಯೇ ಎಂದು ಭಾವಿಸಿದರು. ಅದಕ್ಕಾಗಿಯೇ, "ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು" ಎಂದು
ನಮ್ಮ ಕರ್ತನಾದ ಯೇಸು ಕ್ರಿಸ್ತನು ತಂದೆಯ ಬಳಿ ಇವರನ್ನು ಕ್ಷಮಿಸುವಂತೆ ಪ್ರಾರ್ಥಿಸುತ್ತಾರೆ.
ಶಿಲುಬೆಯಲ್ಲಿ ನಮ್ಮ ದೇವರು ಹೇಳಿದ ಮೇಲಿನ ಮಾತುಗಳ ಅರ್ಥವೇನೆಂದರೆ, ನಾವು ನಮ್ಮ ದೃಷ್ಟಿಯಲ್ಲಿ ನೂರಕ್ಕೆ ನೂರು ಸರಿ ಇದ್ದೇವೆ ಎಂದು ನೆನೆಸಿ ಮಾಡುವ ಕೆಲವು ವಿಷಯವೂ ಸಹ ದೇವರ ದೃಷ್ಟಿಯಲ್ಲಿ ನೂರಕ್ಕೆ ನೂರು ತಪ್ಪಾಗಿರಬಹುದು. ಇಂತಹ ವಿಷಯಗಳಲ್ಲಿ ದೇವರು ನಮ್ಮನ್ನು ದಯೆಯಿಂದ ಕ್ಷಮಿಸುತ್ತಾರೆ. ಆದಾಗ್ಯೂ, ನಾವು ಪ್ರಜ್ಞಾಹೀನರಾಗಿದ್ದೇವೆಯೇ ಅಥವಾ ಇವುಗಳಲ್ಲಿ ಯಾವುದಾದರೂ ಅಜ್ಞಾನವನ್ನು ಹೊಂದಿದ್ದೇವೆಯೇ ಎಂದು ನೋಡಲು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳಬೇಕು. ಕೀರ್ತನೆ 139: 24 ರಲ್ಲಿ ಹೇಳುವಂತೆ "ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು" ಎಂದು ಪ್ರಾರ್ಥಿಸಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ನಾವು ಏನು ಮಾಡಿದರೂ ನಮ್ಮ ಸ್ವಂತ ಜ್ಞಾನದ ಪ್ರಕಾರವಲ್ಲ, ದೇವರ ದೃಷ್ಟಿಯಲ್ಲಿ ಯಾವುದು ಸರಿಯೋ ಅದರ ಪ್ರಕಾರ ಯೋಚಿಸಬೇಕು ಮತ್ತು ವರ್ತಿಸಬೇಕು. ಇದನ್ನು ತಿಳಿಯಲು ನಾವು ಜಾಗೃತ ಹೃದಯವನ್ನು ಹುಡುಕಬೇಕು. ಮತ್ತು ನಾವು ಸತ್ಯವೇದದ ಮೂಲಕ ನಮ್ಮ ಕೊರತೆಗಳನ್ನು ಕಂಡುಕೊಂಡು ಸರಿಪಡಿಸಲು ಪ್ರಯತ್ನಿಸಬೇಕು.
- J. ಸಂತೋಷ್
ಪ್ರಾರ್ಥನಾ ಅಂಶ:
YouTube ನಲ್ಲಿ ಪ್ರತಿದಿನ ಮುಂಜಾನೆ 5 ಗಂಟೆಗೆ ನೇರ ಪ್ರಸಾರವಾಗುವ ಸ್ವಸ್ಥತಾ ಕೂಟದಲ್ಲಿ ಭಾಗವಹಿಸುವ ವ್ಯಕ್ತಿಗಳು ಸ್ವಸ್ಥತೆಯನ್ನು ಹೊಂದಿಕೊಳ್ಳಲು ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482