By Village Missionary Movement
Saturday, 19-Mar-2022ಧೈನಂದಿನ ಧ್ಯಾನ(Kannada) – 19.03.2022
ಬಡ ಆತ್ಮ
“ಆತ್ಮದಲ್ಲಿ ಬಡವರಾಗಿರುವವರು ಧನ್ಯರು; ಪರಲೋಕರಾಜ್ಯವು ಅವರದು" - ಮತ್ತಾಯ 5:3
ಮಾಜಿ ಅಮೆರಿಕ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ರವರ ತಂದೆ, ಚಪ್ಪಲಿ ಹೊಲಿಯುವ ಕಾರ್ಮಿಕನಾಗಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು, ಅವರ ಅಧಿಕಾರಾವಧಿಯಲ್ಲಿ, ವಿರೋಧ ಪಕ್ಷದ ನಾಯಕರಾಗಿದ್ದವರು ಲಿಂಕನ್ ಅವರನ್ನು ಅವಮಾನಿಸುವ ಉದ್ದೇಶವನ್ನು ಹೊಂದಿದ್ದರು. ಒಂದು ದಿನ ಅಸೆಂಬ್ಲಿ ಸಭೆಯೊಂದರಲ್ಲಿ, "ನಿಮ್ಮ ತಂದೆ ಹೊಲಿದ ಚಪ್ಪಲಿಯನ್ನು ನಾನು ಈಗಲೂ ಧರಿಸುತ್ತಿದ್ದೇನೆ" ಎಂದರು. ಲಿಂಕನ್ ತಕ್ಷಣ ಹೇಳಿದರು, “ಹೌದಾ ನನ್ನ ತಂದೆ ಹೊಲಿದ ಚಪ್ಪಲಿಗಳು ಎಷ್ಟು ದಿನ ಬಾಳಿಕೆ ಬರುತ್ತಿದೆ ನೋಡಿ. ಯಾವತ್ತಾದರೂ ಒಂದು ದಿನ ಕಿತ್ತು ಹೋದರೆ ಅದು ನನಗೆ ಕೊಡಿ ಹೊಲಿದು ಕೊಡುತ್ತೇನೆ. ಅಧ್ಯಕ್ಷನಾಗಿದ್ದರೂ ನನಗೆ, ಚಪ್ಪಲಿ ಹೊಲಿಯುವುದು ತಿಳಿದಿದೆ” ಎಂದು ವಿನಯದಿಂದ ಹೇಳಿದರು. ಅವರ ಆತ್ಮದಲ್ಲಿ ಕಂಡುಬರುವ ಸರಳ ಆಲೋಚನೆಯನ್ನು ನೋಡಿ.
ನಾವು ಇಂದಿನ ಸತ್ಯವೇದ ಭಾಗದಲ್ಲಿ ಓದಿದಂತೆ, ಓಬೇದೋಮನ ಮನೆಯಿಂದ ದಾವೀದನಗರಕ್ಕೆ ಕರ್ತನ ಮಂಜೂಷವನ್ನು ತರುವಾಗ ಅರಸನಾದ ದಾವೀದನು ಪೂರ್ಣಾಸಕ್ತಿಯಿಂದ ಕರ್ತನ ಮುಂದೆ ಕುಣಿದಾಡಿದರು. ಸೌಲನ ಮಗಳು ಮತ್ತು ದಾವೀದನ ಹೆಂಡತಿಯಾಗಿದ್ದ ಮೀಕಲಳು ಇದನ್ನು ಕಿಟಕಿಯ ಮೂಲಕ ಹಣಿಕಿ ನೋಡಿ ತನ್ನ ಮನಸ್ಸಿನಲ್ಲಿ ದಾವೀದನನ್ನು ತಿರಸ್ಕರಿಸಿದಳು. "ನೀವು ಈ ಹೊತ್ತು ಇಸ್ರಾಯೇಲ್ಯರ ಅರಸನಂತೆಯಾ ನಡೆದುಕೊಂಡಿರಿ, ನೀಚರಲ್ಲೊಬ್ಬನಂತೆ ಅಲ್ಲವೇ ಕುಣಿದಾಡಿದಿರಿ" ಎಂದು ಹೀನವಾಗಿ ಮಾತನಾಡಿದಳು. ಆದರೆ ದಾವೀದನು ಈ ಕೃತ್ಯಕ್ಕಾಗಿ ತನ್ನ ಹೆಂಡತಿಗೆ ಕಠಿಣ ಮಾತುಗಳನ್ನು ಅಥವಾ ಶಿಕ್ಷೆಯನ್ನು ನೀಡಿರಬಹುದು. ಆದರೆ ಅವರೋ ಒಬ್ಬ ಗಂಡನೆಂದು, ರಾಜನೆಂದು ತನ್ನ ಸ್ಥಾನಕ್ಕೆ ತಕ್ಕ ಹಾಗೆಯೂ ತೀರ್ಪು ಕೊಡದೆ ತನ್ನನ್ನು ನೆಲದ ಮಟ್ಟಿಗೆ ತಗ್ಗಿಸಿಕೊಂಡರು. "ನೀನು ನನ್ನ ಬಗ್ಗೆ ಯೋಚಿಸುವುದಕ್ಕಿಂತಲೂ ನಾನು ನನ್ನ ದೃಷ್ಟಿಯಲ್ಲಿ ಇನ್ನೂ ಹೆಚ್ಚು ನೀಚನಾಗಿದ್ದೇನೆ" ಎಂದರು. ಇದು ಸಾಮಾನ್ಯ ಪದವಲ್ಲ ಅವರ ಆತ್ಮದಲ್ಲಿದ್ದ ಸರಳ ಚಿಂತನೆಯನ್ನು ತೋರಿಸುತ್ತದೆ, "ನಾನು ರಾಜ" ಎಂದು ನಿಮಿಷ ನಿಮಿಷಕ್ಕೆ ಯೋಚಿಸದೆ ದೇವರ ಮುಂದೆ ತಾನು ಯಾರೆಂದು ಅವರು ತನ್ನ ಆತ್ಮದಲ್ಲಿ ತಿಳಿದಿದ್ದರು. ಹೌದು, ಆತ್ಮದಲ್ಲಿ ಬಡವರಾಗಿರುವವರು ಧನ್ಯರು.
ಪ್ರಿಯರೇ! ನಿಮ್ಮ ಬಗ್ಗೆ ಏನು? ನೀವು ಇತರರ ಮುಂದೆ ತಗ್ಗಿಸಲ್ಪಡುವಾಗ ನಿಮಗೆ ಹೇಗೆ ಅನಿಸುತ್ತಿದೆ? ಇತರರ ಮುಂದೆ ಅವಮಾನ ಮತ್ತು ಅಪಮಾನಕ್ಕೆ ಒಳಗಾಗುವುದು ಒಂದು ಕಷ್ಟದ ವಿಷಯವೇ. ಆದರೂ ಆ ಅವಮಾನವನ್ನು ಸ್ವೀಕರಿಸಿ ಅಲ್ಲಿ ಸರಳ ಮನೋಭಾವದಿಂದ ಕಾಣುವುದು ಕೂಡ ಪ್ರಬುದ್ಧ ಅನುಭವವೇ! ಹೌದು, ನಮ್ಮ ಆತ್ಮ, ಮನಸ್ಸು ಮತ್ತು ಆಲೋಚನೆ ಯಾವಾಗಲೂ ಸರಳ ಮತ್ತು ತಾಳ್ಮೆಯಿಂದಿರಲಿ. ಖಂಡಿತವಾಗಿಯೂ ನಾವು ಕರ್ತನ ದೃಷ್ಟಿಯಲ್ಲಿ ಧನ್ಯರೇ, ಪರಲೋಕ ರಾಜ್ಯವು ನಮ್ಮದೇ!
- Mrs. ರೂತ್ ಅನೀಸ್
ಪ್ರಾರ್ಥನಾ ಅಂಶ:
7000 ಸೇವಕರ ಮೂಲಕ 1 ಲಕ್ಷ ಹಳ್ಳಿಗಳನ್ನು ತಲುಪುವ ಯೋಜನೆಯಲ್ಲಿ ಸಮರ್ಪಣೆಯುಳ್ಳ ಸೇವಕರು ಸಿಗುವಂತೆ ಪ್ರಾರ್ಥಿಸಿರಿ.
Whatsapp
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು +91 94440 11864 ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482