Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 22.01.2021
Share:

By Village Missionary Movement

Friday, 22-Jan-2021

ಧೈನಂದಿನ ಧ್ಯಾನ(Kannada) – 22.01.2021

ಮನಸ್ಸಿದ್ದರೆ ಸ್ಥಳವಿರುತ್ತದೆ

“ದೇವಜನರಿಗೆ ಕೊರತೆಬಂದಾಗ ಸಹಾಯಮಾಡಿರಿ. ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ” - ರೋಮಾ 12:13

ಒಂದು ಗ್ರಾಮದಲ್ಲಿ ಇಬ್ಬರು ಬಡವರು ಪಕ್ಕ ಪಕ್ಕದ ಮನೆಯಲ್ಲಿ ಜೀವಿಸುತ್ತಿದ್ದರು. ಒಂದು ದಿನ ರಾತ್ರಿ ಒಂದು ವೃದ್ಧ ಹರಿದ ಬಟ್ಟೆಯೊಂದಿಗೆ ಬಾಗಿಲನ್ನು ತಟ್ಟಿ ಹಸಿವಾಗುತ್ತಿದೆ, ಸ್ವಲ್ಪ ಆಹಾರ, ಮೂಲೆಯಲ್ಲೆಲ್ಲಾದರೂ ಮಲಗಲು ಸ್ವಲ್ಪ ಸ್ಥಳ ಕೇಳಿದರು. ಒಬ್ಬನು ತನ್ನ ಬಳಿ ಸ್ಥಳವಿಲ್ಲ ಎಂದು ಹೇಳಿ ಕಳುಹಿಸಿಬಿಟ್ಟನು. ನಂತರ ಪಕ್ಕದ ಮನೆಯಲ್ಲಿರುವ ಬಡ ಮನುಷ್ಯನು ಅವರಿಗೆ ತನ್ನ ಚಿಕ್ಕ ಮನೆಯಲ್ಲಿ ಮಲಗಲು ಸ್ವಲ್ಪ ಸ್ಥಳ ಆಹಾರ ಕೊಟ್ಟನು. ಮರುದಿನ ಬೆಳಿಗ್ಗೆ ವಿಶ್ರಾಂತಿ ತೆಗೆದುಕೊಂಡ ಸಂತೋಷದೊಂದಿಗೆ ಎದ್ದು, ಮನೆಯವರ ಬಳಿ ಒಂದು ಹಳೆಯ ಬ್ಯಾಗನ್ನು ಕೊಟ್ಟು ಹೋದರು. ಅದರಲ್ಲಿ ಎರಡು ಚಿನ್ನದ ನಾಣ್ಯಗಳು ಇದ್ದವು. ಅದನ್ನು ಮಾರಿ ಚಿಕ್ಕ ವ್ಯಾಪಾರವನ್ನು ಮಾಡಿ ಅಭಿವೃದ್ಧಿಯಾಗಿ ಸಮೃದ್ಧಿಯಾದ ಜೀವನವನ್ನು ಸಂತೋಷದಿಂದ ಜೀವಿಸಿದನು.

ಸತ್ಯವೇದದಲ್ಲಿ ನಾವು ನೋಡುವುದಾದರೆ, ಅಬ್ರಹಾಮನು ಅತಿಥಿ ಸತ್ಕಾರವನ್ನು ಮಾಡುವಂತಹ ವ್ಯಕ್ತಿಯಾಗಿದ್ದರೆಂದು ಆದಿಕಾಂಡ.18:2,3 ರಲ್ಲಿ ಹೇಳಲ್ಪಟ್ಟಿದೆ. ಅವರ ಎದುರಿನಲ್ಲಿ ಬರುತ್ತಿದ್ದ  ಮೂವರು ಪುರುಷರ ಮುಂದೆ ಓಡಿಹೋಗಿ ಅವರನ್ನು ಎದುರುಗೊಂಡು ನೆಲದ ಮಟ್ಟಿಗೆ ಬೊಗ್ಗಿ ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಲು ನೀರನ್ನು ತೆಗೆದುಕೊಂಡು ಬರುತ್ತೇನೆ ಮರದ ಕೆಳಗೆ ಹಾಗೆ ಒರಗಿಕೊಂಡರಿ. ನಿಮ್ಮ ಹೃದಯವು ಸ್ಥಿರಪಡಲು ಸ್ವಲ್ಪ ರೊಟ್ಟಿ ತೆಗೆದುಕೊಂಡು ಬರುತ್ತೇನೆ. ಅದರ ನಂತರ ಹೋಗಬಹುದು ಎಂದು ಹೇಳಿ ಮೂರು ಸೇರು ಹಿಟ್ಟಿನಲ್ಲಿ ರೊಟ್ಟಿ ಮಾಡಿ ಎಳೆಯ ಕರುವನ್ನು ಕಡಿದು ಅವರಿಗೆ ಆಹಾರವನ್ನು ಸಿದ್ಧಮಾಡಿ ಕೊಟ್ಟರು. ಅವರು ಊಟ ಮಾಡಿ, ನಂತರ ಅಬ್ರಹಾಮನನ್ನು ಆಶೀರ್ವದಿಸಿದರು. ಅವರ ಜೀವನದಲ್ಲಿ ಎದುರುನೋಡುತ್ತಿದ್ದ ಸಂತಾನ ಭಾಗ್ಯದ ಆಶೀರ್ವಾದವನ್ನು ಹೊಂದಿಕೊಂಡರು. ಮಕ್ಕಳಿಲ್ಲದ್ದರಿಂದ ಅವರ ಜೀವನದಲ್ಲಿ ಸಂತೋಷವಿಲ್ಲದೆ ಇದ್ದಿರಬಹುದು. ದೇವರು ಇಸಾಕ ನೆಂಬ ಸಂತೋಷವನ್ನು ಕೊಟ್ಟರು.

ಇನ್ನೂ ಇತರರಿಗೆ ವರ್ಗಾವಣೆ ಮಾಡುವುದನ್ನು ಪರಿಗಣಿಸದೆ ಸಹಾಯ ಮಾಡುವ ಗುಣ ನಮ್ಮೊಬ್ಬೊಬ್ಬರಿಗೂ  ಬೇಕು. ಇವರಿಗೆ ಸಹಾಯ ಮಾಡಿ ನನಗೇನು ನಡೆಯುತ್ತದೆ. ನನ್ನ ಮನೆಯ ಅವಶ್ಯಕತೆಗಾಗಿ ತೆಗೆದಿಟ್ಟುಕೊಂಡಿರುವುದನ್ನು ಇವರಿಗಾಗಿ ಖರ್ಚು ಮಾಡಬೇಕೆ ಎಂಬ ಆಲೋಚನೆ ಇದ್ದರೆ ನಾವು ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಆದರೆ ಮತ್ತೊಬ್ಬರಿಗೆ ಸಹಾಯ ಮಾಡಬೇಕು, ಉಪಚಾರ ಮಾಡಬೇಕೆಂಬ ಮನಸ್ಸು ಇದ್ದರೆ ಯಾವುದನ್ನೂ ಕಂಡುಕೊಳ್ಳುವುದಿಲ್ಲ. ಅದನ್ನು ನೋಡುವ ದೇವರು ಖಂಡಿತವಾಗಿ ನಮ್ಮನ್ನು ಆಶೀರ್ವದಿಸುತ್ತಾರೆ. ಬಡತನದ ಮಧ್ಯದಲ್ಲಿಯೂ ಪ್ರವಾದಿಯನ್ನು ಪೋಷಿಸಿ ಚಾರೆಪ್ತಾ ವಿಧವೆಯ ಮನೆಯಲ್ಲಿ ಹಿಟ್ಟು, ಎಣ್ಣೆ ಕಡಿಮೆಯಾಗದಂತೆ ಆಶೀರ್ವದಿಸಿದವರು ನಿಮ್ಮ ಜೀವನದಲ್ಲಿಯೂ ಸಮೃದ್ಧಿಯನ್ನು ದಯಪಾಲಿಸುತ್ತಾರೆ.
-    Bro.ಆಲ್ವಿನ್ ಜೇಕಬ್

ಪ್ರಾರ್ಥನಾ ಅಂಶ:-
ಒರಿಸ್ಸಾ ಫೀಲ್ಡ್ ನಲ್ಲಿ ಕುಮ್ಮಾ ಎಂಬ ಭಾಗದಲ್ಲಿ ಹೊಸದಾಗಿ ಸೇವೆಯು ಪ್ರಾರಂಭಿಸಲ್ಪಡುವಂತೆ ಪ್ರಾರ್ಥಿಸೋಣ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al