Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.01.2021
Share:

By Village Missionary Movement

Tuesday, 19-Jan-2021

ಧೈನಂದಿನ ಧ್ಯಾನ(Kannada) – 19.01.2021

ತಿಳಿದುಕೊಳ್ಳುವುದು

“ನಾನು ನಿನಗೆ ಯಾವನ ಹೆಸರನ್ನು ಹೇಳು ತ್ತೇನೋ ಅವನನ್ನು ನೀನು ನನಗೋಸ್ಕರ ಅಭಿಷೇಕಿಸ ಬೇಕು ಅಂದನು” - 1ಸಮುವೇಲ 16:3

ತಿಳಿದುಕೊಳ್ಳುವುದು ಎಂಬುದು ಮನುಷ್ಯನಿಗೆ ಮನುಷ್ಯನು ಬೇರ್ಪಡುವುದು. ಅದರಲ್ಲೂ ನಿರ್ದಿಷ್ಟವಾಗಿ ದೇವರು ತಿಳಿದುಕೊಳ್ಳುವ ವಿಧಾನ ಬೇರೆ, ಮನುಷ್ಯನ ವಿಧಾನ ಬೇರೆ! ಪೊಲೀಸ್ ಮತ್ತು ಸೈನಿಕರ ಕೆಲಸಕ್ಕೆ ಜನರನ್ನು ಸೇರಿಸಿಕೊಳ್ಳುವಾಗ ಅವರ ಶರೀರದ ಬೆಳವಣಿಗೆ ಮತ್ತು ವಿದ್ಯಾರ್ಹತೆಯ ಆಧಾರದ ಮೇಲೆ ಆರಿಸಿಕೊಳ್ಳಲ್ಪಡುತ್ತಾರೆ. ಇದು ಲೋಕದ ದೃಷ್ಟಿ! ಆದರೆ, ನಮ್ಮ ದೇವರ ಆರಿಸಿಕೊಳ್ಳುವಿಕೆಯೋ ಅದ್ಭುತವಾದದ್ದು, ಮನುಷ್ಯನ ಮೂಳೆಗೂ ಅಪಾರವಾದದ್ದು. ಮನುಷ್ಯನ ಆಲೋಚನೆಗಳಿಗೂ ಮೇಲಾದದ್ದು.

ಕರ್ತನು ಸಮುವೇಲನ ಬಳಿ ಇಷಯನ ಮನೆಗೆ ಹೋಗು. ಅವನ ಕುಮಾರರಲ್ಲಿ ಒಬ್ಬರನ್ನು ಇಸ್ರಾಯೇಲ್ಯರ ಅರಸನನ್ನಾಗಿ ತಿಳಿದುಕೊಳ್ಳಲಿದ್ದೇನೆ ಎಂದರು. ಸಮುವೇಲನು ಕರ್ತನು ಹೇಳಿದಂತೆ ಬೇತ್ಲೆಹೇಮಿಗೆ ಹೋದನು. ಆಗ ಸಮುವೇಲನು ಯುದ್ಧವೀರನೂ ಬಹಳ ಎತ್ತರವಾಗಿಯೂ ಇದ್ದ  ಎಲೀಯಾಬನೆಂಬ ಹಿರಿಯ ಮಗನನ್ನು ಅಭಿಷೇಕ ಮಾಡಲು ಹೋಗುತ್ತಿದ್ದಾರೆ. ಆದರೆ, ಕರ್ತನು ಸಮುವೇಲನ ಬಳಿ,  "ಇವನು ಮುಖವನ್ನು, ಇವನ ಶರೀರದ ಬೆಳವಣಿಗೆಯನ್ನು ನೋಡಬೇಡ, ನಾನು ಇವನನ್ನು ತಿರಸ್ಕರಿಸಿದ್ದೇನೆ. ಮನುಷ್ಯನು ನೋಡುವ ಹಾಗೆ ನಾನು ನೋಡುವುದಿಲ್ಲ; ಮನುಷ್ಯನು ಮುಖವನ್ನು ನೋಡುತ್ತಾನೆ; ಕರ್ತನೋ ಹೃದಯವನ್ನು ನೋಡುತ್ತಾರೆ"  ಎಂದರು. ಹೀಗೆ ಇಷಯನ ಏಳು ಮಕ್ಕಳನ್ನು ಸಮುವೇಲನು ದಾಟಿ ಹೋಗುವಂತೆ ಮಾಡಿದರು. ಆದರೆ ಇವರಲ್ಲಿ ಒಬ್ಬನನ್ನೂ ಕರ್ತನ ತಿಳಿದುಕೊಳ್ಳಲಿಲ್ಲ. ನಂತರ ಸಮುವೇಲನು ನಿನ್ನ ಮಕ್ಕಳು ಇಷ್ಟೇನಾ ಎಂದು ಕೇಳಿದನು. ಆಗ ಕುರಿಗಳನ್ನು ಮೇಯಿಸುತ್ತಿರುವ ದಾವೀದನು ಕರೆಸಲ್ಪಡುತ್ತಾನೆ.ಕರ್ತನು ಸಮುವೇಲನ ಬಳಿ ನೀನೆದ್ದು ಇವನನ್ನು ಅಭಿಷೇಕಿಸು ಎಂದರು. ನೋಡಿರಿ. ದೇವರ ತಿಳಿದುಕೊಳ್ಳುವಿಕೆ ಎಷ್ಟೊಂದು ವ್ಯತ್ಯಾಸವಾದದ್ದು! ಮನೆಯವರಿಂದಲೂ, ತನ್ನ ಎಲ್ಲಾ ಸಹೋದರರಿಂದಲೂ ಮರೆಮಾಡಲ್ಪಟ್ಟಿದ್ದ ದಾವೀದನನ್ನು ಕರ್ತನು ಅರಸನನ್ನಾಗಿ ತಿಳಿದುಕೊಂಡರು.

ಪ್ರೀತಿಯ ಸೇವಕರೇ!  ದಾವೀದ ನಂತೆಯೇ ಲೋಕದಿಂದ ತಿರಸ್ಕರಿಸಲ್ಪಟ್ಟ ನಮ್ಮನ್ನು ದೇವರು ಆರಿಸಿಕೊಂಡು ಅವರ ಪುಣ್ಯ ಕಾರ್ಯಗಳನ್ನು ಪ್ರಕಟಿಸುವ ಉನ್ನತವಾದ ಕೆಲಸಕ್ಕಾಗಿ ನಮ್ಮನ್ನು ಅಭಿಷೇಕಿಸಿದ್ದಾರೆ. ಲೋಕವೋ ಒಬ್ಬನ ಬಳಿ ಜವಾಬ್ದಾರಿಯನ್ನು ಕೊಡಬೇಕಾದರೂ, ಅವನ ಹೊರ ರೂಪ, ಮಾತು, ಅಲಂಕಾರ, ನಡತೆ-ವಸ್ತ್ರ, ಭಾವನೆ ಎಲ್ಲವನ್ನು ನೋಡುತ್ತದೆ. ಆದರೆ ಕರ್ತನೋ ಅವನ ಹೃದಯವನ್ನು ನೋಡುತ್ತಾರೆ. ಇದು ಅವರಿಗೆ ಮೆಚ್ಚಿಕೆಯಾಗಿರಬೇಕು. ದಾವೀದನಂತೆ ನಮ್ಮ ಹೃದಯವು ಅವರಿಗೆ ಮೆಚ್ಚುಗೆಯಾಗಿ ಮಾರ್ಪಡಲಿ. ಅವರು ನಮ್ಮ ಮೇಲೆ ಇಟ್ಟಿರುವ ಕೃಪೆಯನ್ನು ಗ್ರಹಿಸಿ ಸಾಕ್ಷಿಯಾಗಿ ಜೀವಿಸಿ, ಫಲ ಕೊಟ್ಟು, ಉತ್ತಮವಾಗಿ ಸೇವೆಯನ್ನು ನೆರವೇರಿಸೋಣ.
-    Mrs.ಶಕ್ತಿ ಶಂಕರ್ ರಾಜನ್

ಪ್ರಾರ್ಥನಾ ಅಂಶ:
7000 ಮಿಷನರಿಗಳನ್ನು ರೂಪಿಸಿ 1 ಲಕ್ಷ ಗ್ರಾಮಗಳನ್ನು ಸಂಧಿಸಲು ಮಾಡುತ್ತಿರುವ ಎಲ್ಲಾ ಪ್ರಯತ್ನಗಳಲ್ಲಿ ದೇವರ ಹಸ್ತವು ಜೊತೆ ಇರುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al