By Village Missionary Movement
Thursday, 16-Dec-2021ಧೈನಂದಿನ ಧ್ಯಾನ(Kannada) – 16.12.2021
ವಾಗ್ದಾನವಾ- ಶರೀರವಾ?
"...ಆ ವಾಕ್ಯವಾಗಿರುವಾತನು ಶರೀರಧಾರಿ ಯಾಗಿ ಕೃಪೆಯಿಂದಲೂ ಸತ್ಯದಿಂದಲೂ ತುಂಬಿ ನಮ್ಮ ಮಧ್ಯದಲ್ಲಿ ವಾಸಮಾಡಿದನು..." - ಯೋಹಾನ 1:14
ಧನುರ್ಮಾಸದ ಚಳಿಯ ನಡುಕದಲ್ಲಿ ಗಾಢ ನಿದ್ರೆಯಲ್ಲಿದ್ದ ಬೆಳ್ಳಂಬೆಳಗ್ಗೆಯ ಸಮಯದಲ್ಲಿ, ದಿಢೀರನೆ ತಮ್ಮ ಎಳೆಮಕ್ಕಳ ಅಳುವ ಸದ್ದಿಗೆ ಪೋಷಕರು ಎಚ್ಚರಗೊಂಡರು. ಹತ್ತು ವರ್ಷಗಳಿಂದ ಕಣ್ಣೀರಿನ ಕಣಿವೆಯಲ್ಲಿ ನಡೆಯುತ್ತಿದ್ದ ತಮ್ಮ ಅರಣ್ಯ ಜೀವನದಲ್ಲಿ "ಎರಡರಷ್ಟು ಸುಖವನ್ನು ದಯಪಾಲಿಸುವೆನು" ಎಂಬ ಕರ್ತನ ವಾಗ್ದಾನದಂತೆ ಅವಳಿ ಮಕ್ಕಳನ್ನು ಒಂದು ತಿಂಗಳ ಮುಂಚೆಯೇ ಪಡೆದಿದ್ದರು. ಮಕ್ಕಳ ಕಿರುಚಾಟ ಕೇಳಿ ಎದ್ದು ಅವರ ಹಸಿವು ನೀಗಿಸಲು ಯತ್ನಿಸಿದರು. ತನ್ನ ಅಜ್ಜಿ ಕೊಟ್ಟ ಬಾಟಲ್ ಹಾಲಿನಿಂದ ಹಸಿವು ನೀಗಿ ಮತ್ತೆ ಮಲಗಲು ಯತ್ನಿಸಿದನು ಹಿರಿಯವನು. ಆದರೆ ಕಿರಿಯವನ ಅಬ್ಬರ ಕಡಿಮೆಯಾಗಲಿಲ್ಲ. ಅಜ್ಜಿ ಕೊಟ್ಟ ಬಾಟಲ್ ಹಾಲು ಕುಡಿಯಲು ಮನಸ್ಸಿಲ್ಲದೆ ಅಳುತ್ತಿದ್ದ ಕಿರಿಯವನನ್ನು ತಬ್ಬಿಕೊಂಡ ಅವನ ತಾಯಿ, ಮಕ್ಕಳು ಗರ್ಭದಲ್ಲಿದ್ದಾಗ ಯಾವಾಗಲೂ ತಾನು ಹಾಡುತ್ತಿದ ಹಾಡನ್ನು ಹಾಡಲು ಪ್ರಾರಂಭಿಸಿದಳು. ಜನಿಸಿ ಒಂದು ತಿಂಗಳೇ ಆದರೂ ಮಗು ತನ್ನ ತಾಯಿಯ ಧ್ವನಿಯನ್ನು ಗುರುತಿಸಿತು, ಅಳಲು ಮರೆತು ತನ್ನ ತಾಯಿಯ ತೋಳುಗಳಲ್ಲಿ ಶಾಂತವಾಗಿ ಮಲಗಲು ಪ್ರಾರಂಭಿಸಿತು. ಹಿರಿಯವನು ಮಾತ್ರ ತನ್ನ ಹಸಿವು ನೀಗಿದರೆ ಸಾಕು ಎಂದು ತೃಪ್ತಿ ಹೊಂದಿದನು. ಆದರೆ ಕಿರಿಯವನು ತನ್ನ ತಾಯಿಯ ಪ್ರೀತಿಯ ಮಾತುಗಳು ಮತ್ತು ಆದರಣೆಯಿಂದ ಮಾತ್ರ ತೃಪ್ತನಾಗಿದ್ದನು.
ಸತ್ಯವೇದದಲ್ಲಿ, ಏಸಾವ, ಯಾಕೋಬ ಎಂಬ ಅವಳಿ ಸಹೋದರರು ತನ್ನ ತಂದೆಯ ಆಶೀರ್ವಾದವನ್ನು ಪಡೆಯಲು ಬಯಸಿದರು. ಕಿರಿಯವನಾದ ಯಾಕೋಬನು ತನ್ನ ಅಣ್ಣನ ಹಾಗೆ ನಟಿಸಿ, ಮೋಸಮಾಡಿ ತಂದೆಯ ಆಶೀರ್ವಾದವನ್ನು "ವಾಗ್ದಾನವಾಗಿ" ಪಡೆದುಕೊಂಡನು. ಏಸಾವನು ತನ್ನ ತಂದೆಯ ವಿಸ್ತಾರವಾದ ಆಸ್ತಿಗಳಿಗೆ ಹಕ್ಕುದಾರನಾಗಿ ತನ್ನ ಜೀವನದುದ್ದಕ್ಕೂ ಅವುಗಳನ್ನು ಅನುಭವಿಸಿದನು. ತಂದೆಯ ಬಳಿಯಿಂದ ವಾಗ್ದಾನವಾಗಿ ಆಶೀರ್ವಾದವನ್ನು ಪಡೆದುಕೊಂಡ ಯಾಕೋಬನು, ಏನೂ ಇಲ್ಲದ ಪರಿಸ್ಥಿತಿಯಲ್ಲಿ ಕೈಯಲ್ಲಿ ಬರೀ ಕೋಲು ಹಿಡಿದು ಹೋದಾಗಲೂ, ಅವನು ತಂದೆಯ ಬಳಿ ಪಡೆದ ವಾಗ್ದಾನದ ಆಶೀರ್ವಾದವು ಅವನನ್ನು ಇಸ್ರಾಯೇಲ್ ಜನರಿಗೆಲ್ಲಾ ತಂದೆಯನ್ನಾಗಿ ಮಾರ್ಪಡಿಸಿತು. ಈ ಆಶೀರ್ವಾದವು ತಲೆಮಾರುಗಳವರೆಗೆ ಮುಂದುವರೆಯಿತು.
ಅದರಂತೆಯೇ ನಮ್ಮ ಜೀವನದಲ್ಲಿ ನಾವು ಅನೇಕ ವಾಗ್ದಾನಗಳನ್ನು ಹೊಂದಿದ್ದರೂ ಅವುಗಳಲ್ಲಿ ಆನಂದಿಸಬೇಕು, ಅವುಗಳನ್ನು ಅಂಟಿಕೊಳ್ಳಬೇಕು, ನಂಬಬೇಕು ಮತ್ತು ಆಶೀರ್ವಾದವನ್ನು ಸ್ವತಂತ್ರಿಸಿಕೊಳ್ಳಬೇಕು. ವಾಗ್ದಾನಗಳು ಎಂದಿಗೂ ಸುಳ್ಳಾಗುವುದಿಲ್ಲ. ವಾಕ್ಯ ವಾಗಿರುವ ಯೇಸುಕ್ರಿಸ್ತನು ಮಾತು ತಪ್ಪದವರು. ಯಾಕೋಬನು ತನ್ನ ಹಿರಿಯ ಸಹೋದರನಾದ ಏಸಾವನ ಹೆಸರು ಹೇಳಿ ತನ್ನ ತಂದೆಯ ಮುಂದೆ ಕಾಣಿಸಿಕೊಂಡು ಆಶೀರ್ವಾದವನ್ನು ಪಡೆದುಕೊಂಡಂತೆ, ನಾವು ಸಹ ನಮ್ಮ ಹಿರಿಯ ಸಹೋದರನಾದ ಯೇಸುಕ್ರಿಸ್ತನ ಹೆಸರಿನಲ್ಲಿ ತಂದೆಯ ಆಶೀರ್ವಾದವನ್ನು ಸ್ವತಂತ್ರಿಸಿಕೊಳ್ಳುವುದು ಖಚಿತ.
- Mrs. ವಸಂತಿ ರಾಜಮೋಹನ್
ಪ್ರಾರ್ಥನಾ ಅಂಶ:
ಆಂಧ್ರ ಕಾರ್ಯಸ್ಥಳ ರೇಗಾ ಪುಣ್ಯಗಿರಿ ಬೆಟ್ಟದ ಗ್ರಾಮ ಆಲಯ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482