Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.01.2021
Share:

By Village Missionary Movement

Monday, 11-Jan-2021

ಧೈನಂದಿನ ಧ್ಯಾನ(Kannada) – 11.01.2021

ಎದ್ದೇಳು, ಎದ್ದೇಳು

"ನಮಗೆ ನೇಮಕವಾದ ಓಟವನ್ನು ಸ್ಥಿರಚಿತ್ತದಿಂದ ಓಡೋಣ." - ಇಬ್ರಿಯರಿಗೆ 12:2

ತನ್ನ ಜೀವನದಲ್ಲಿ ಸಂಭವಿಸಿದ ಸತತ ಸೋಲುಗಳು, ಕುಗ್ಗಿಹೋದ ಪರಿಸ್ಥಿತಿಗಳ ಬಗ್ಗೆ ಯೋಚಿಸುತ್ತಾ ಸೋತುಹೋಗಿದ್ದರು ಅರುಳ್. ದೇವರಿಗಾಗಿ ವೈರಾಗ್ಯದಿಂದ ಜೀವಿಸಬೇಕೆಂಬ ಆಲೋಚನೆ ಒಂದು ಕಡೆ ಇದ್ದರೂಏನೂ ಮಾಡಲಾರದ ಪರಿಸ್ಥಿತಿ ಅವರನ್ನು ನಿರುತ್ಸಾಹಪಡಿಸಿತು. ಒಂದು ಮೂಲೆಯಲ್ಲಿದ್ದ ಜೇಡದ ಹುಳದ  ಮೇಲೆ ಅವರ ಗಮನ ಹೋಯಿತು. ಅದು ತನ್ನ ಬಲೆಯನ್ನು ಹೆಣೆಯುವುದಕ್ಕೋಸ್ಕರ ಕೆಳಗೆ ಬಿದ್ದು ಎದ್ದು ಮತ್ತೆ ಮತ್ತೆ ಅದನ್ನು ಹೆಣೆಯುತ್ತಿತ್ತು ಎಷ್ಟು ಬಾರಿ ಬಿದ್ದರೂ ಅದು ಸೋತು ಹೋಗದೆ ತನ್ನ ಕೆಲಸವನ್ನು ಮಾಡುತ್ತಿದ್ದ ಆಸಕ್ತಿಯು ಅವರನ್ನು ಉತ್ಸಾಹ ಪಡಿಸಿತು.

ನಮ್ಮ ಆತ್ಮೀಕ ಜೀವನವು ಕೆಳಗೆ ಬಿದ್ದರೂ ಮತ್ತೆ ಮತ್ತೆ ಎದ್ದು  ನಿಲ್ಲುವಂತಿರಬೇಕು. ಇದರ ನಿಮಿತ್ತವಾಗಿ ಕ್ರೈಸ್ತ ಜೀವನದಲ್ಲಿ ಅಂತ್ಯದವರೆಗೂ ನೆಲೆಗೊಳ್ಳಲು ಆಗುವುದಿಲ್ಲವೋ ಎಂದು ಹೆದರುತ್ತಿರಬಹುದು, ಆದರೆ ಕಳವಳಗೊಳ್ಳ ಬೇಕಾದ ಅವಶ್ಯಕತೆ ಇಲ್ಲ. ಸತ್ಯವೇದದಲ್ಲಿ ಮೋಶೆಯ ಜೀವನವನ್ನು ನೋಡುವುದಾದರೆ, ಆರಂಭದಲ್ಲಿ ಕೋಪದಿಂದ ಒಬ್ಬ  ಐಗುಪ್ತದವನನ್ನು ಕೊಂದು ಹೂತು ಹಾಕಿದನು. ಕೊಲೆ ಮಾಡುವಷ್ಟು ಕೋಪವುಳ್ಳವನಾಗಿದ್ದ  ಮೋಶೆಗೆ ದೇವರು ಅರಣ್ಯದಲ್ಲಿ 40 ವರ್ಷಗಳು ತರಬೇತಿ ಕೊಟ್ಟು, ನಂತರ ಲಕ್ಷಾಂತರ ಇಸ್ರಾಯೇಲ್ ಜನರನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿಯನ್ನು ಮೋಶೆಯ ಬಳಿ ಕೊಟ್ಟರು. ಅವರು 40 ವರ್ಷಗಳೂ ಮೋಶೆಗೆ ದಿನ ದಿನವೂ ಕೋಪ ಹುಟ್ಟಿಸುವಂತೆ ನಡೆಯುತ್ತಾ, ಮಾತಾಡುತ್ತಿದ್ದರು. ಆದರೆ ಮೋಶೆಯೋ ಶಾಂತ ಗುಣವುಳ್ಳವನಾಗಿ ನಡೆದುಕೊಂಡರು. ಯಾವ ಕೋಪ ಅವರಿಗೆ ಬಲಹೀನವಾಗಿತ್ತೋ, ಅದರಲ್ಲಿ ಜಯ ಹೊಂದಿ ದೇವರ ಮೆಚ್ಚುಗೆಯನ್ನು ಪಡೆದರು. ಭೂಮಿಯಲ್ಲಿರುವ ಎಲ್ಲರಲ್ಲಿಯೂ ಶಾಂತ ಗುಣವುಳ್ಳವನು ಎಂದು ದೇವರು ಹೊಗಳಿದರೇ!

ಹೌದು, ಪ್ರಿಯರೇ! ನೀವು ಕೂಡಾ ಆಗಾಗ  ಆತ್ಮೀಕ ಜೀವನದಲ್ಲಿ ಕುಗ್ಗಿ ಹೋಗುತ್ತಿದ್ದೀರಾ ಇದಕ್ಕೆ ಕಾರಣ ಕೋಪವಾ? ಸಾಮಾನ್ಯವಾಗಿ ನಮಗೆ ಯಾವುದರಿಂದ ಕೋಪ ಬರುತ್ತದೆ? ನಾನು ಮಾಡುವುದು, ಹೇಳುವುದೇ ಸರಿ, ಇದನ್ನು ಎಲ್ಲರೂ ಅಂಗೀಕರಿಸಬೇಕು ಎಂಬ ಹೆಮ್ಮೆ ನಮ್ಮೊಳಗೆ ಅಡಗಿರುವುದರಿಂದಲೇ. ನಮ್ಮಲ್ಲಿ ಅನೇಕರು ಬೇಗನೆ ಬಿದ್ದು ಮುಗ್ಗರಿಸುತ್ತಿರುವುದು ಕೋಪ ಎಂಬ ಬಲಹೀನತೆಯಿಂದಲೇ. ನನ್ನಿಂದ ಮಾರ್ಪಡಲು ಸಾಧ್ಯವಾಗುತ್ತಿಲ್ಲವೆ ಎಂದು ಪಶ್ಚಾತ್ತಾಪ ಪಡುತ್ತಿದ್ದೀರಾ? ಭಯಪಡಬೇಡಿರಿ. ಸತ್ಯವೇದವು ಹೇಳುವ ಆಲೋಚನೆಯಂತೆ ತಾಳ್ಮೆಯನ್ನು ಧರಿಸಿಕೊಳ್ಳಿರಿ. ಪ್ರಾರ್ಥನೆಯೊಂದಿಗೆ ತಾಳ್ಮೆಯಿಂದಿರಲು ಪ್ರಯತ್ನಿಸಿರಿ. ಮೋಶೆಯನ್ನು ಮಾರ್ಪಡಿಸಿದ ದೇವರು ನಿಮ್ಮನ್ನು ಮಾರ್ಪಡಿಸುತ್ತಾರೆ. ನಿಮ್ಮನ್ನು ಮುಗ್ಗರಿಸುವಂತೆ ಮಾಡುವ ಬಲಹೀನತೆ ಯಾವುದೋ ಅದರಲ್ಲಿ ನೀವು ಜಯ ಹೊಂದುತ್ತೀರ.
-    Bro.ಅರುಳ್ ಅಯ್ಯಪ್ಪನ್

ಪ್ರಾರ್ಥನಾ ಅಂಶ:-
"ಪ್ರಾರ್ಥನಾ ಗುಡಾರ"  ಕಟ್ಟಡದ ಕೆಲಸಗಳು ಆದಷ್ಟು ಬೇಗನೆ  ಪೂರ್ಣಗೊಳ್ಳುವಂತೆ ಪ್ರಾರ್ಥಿಸಿರಿ.

ಈ ದಿನದ ಧ್ಯಾನ ವಾಕ್ಯಕ್ಕಾಗಿ ಇಲ್ಲಿ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.
ವಾಟ್ಸಾಪ್.  
ತಮಿಳಿಗಾಗಿ +919444011864  
ಇಂಗ್ಲಿಷ್ ಗಾಗಿ +919444011769
ಹಿಂದಿಗಾಗಿ +91 93858 10496
ತೆಲುಗುಗಾಗಿ +919442493250

www.vmm.org.in
ಈಮೈಲ್:- reachvmm@gmail.com
Androidapp: https://play.google.com/store/apps/details?id=com.vmmorg.template.msmapp&showAllReviews=true
        
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al