By Village Missionary Movement
Friday, 05-Nov-2021ಧೈನಂದಿನ ಧ್ಯಾನ(Kannada) – 05.11.2021
ಆಲೋಚನೆಯೇ ಬದುಕನ್ನು ಹಾಳು ಮಾಡುತ್ತದೆ
“ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ..." - ಗಲಾತ್ಯ. 6:9
ಏಕಾಂತವಾಗಿ, ಜನರ ಓಡಾಟವಿಲ್ಲದ ಸ್ಥಳದ ಒಂದು ಕಾಲುವೆಯ ಬಳಿ ಕಾರೊಂದು ಸಿಲುಕಿಕೊಂಡಿತು. ಅದೃಷ್ಟವಶಾತ್, ಆ ಮಾರ್ಗವಾಗಿ ಹಾದುಹೋದ ಕುದುರೆ ಸವಾರ ಒಬ್ಬರು ತಮ್ಮ "ದಾನಿ" ಎಂಬ ಕುದುರೆಯನ್ನು ಕರತಂದು, ಸಹಾಯ ಮಾಡಲು ಮುಂದಾದರು. ಕುದುರೆಯನ್ನು ಕಾರಿಗೆ ಕಟ್ಟಿಹಾಕಿ “ಚೆನ್ನಾಗಿ ಕಾರನ್ನು ಎಳಿ” ಎಂದು ಕೂಗಿದರು. ದಾನಿ ಕದಲಲಿಲ್ಲ. ನಂತರ ಅವರು "ಲಾನಿ ಕಾರನ್ನು ಎಳಿ" ಎಂದು ಕೂಗಿದರು. ದಾನಿ ಆಗಲೂ ಕದಲಲಿಲ್ಲ. ಅದರ ನಂತರ ಅವನು "ಸಾನೋ ಕಾರು ಎಳಿ" ಎಂದು ಕೂಗಿದರು. ಆಗಲೂ ಏನೂ ನಡೆಯಲಿಲ್ಲ. ಕೊನೆಗೆ "ದಾನಿ ಕಾರ್ ಅನ್ನು ಎಳಿ" ಎಂದು ಹೇಳಿದ ನಂತರ "ದಾನಿ" ಕಾರ್ ಹಿಡಿದು ಎಳೆಯಲು ಕಾರು ಹೊರಬಂದಿತು.
ಅದನ್ನು ನೋಡಿದ ಕಾರು ಚಾಲಕ, "ನೀವು ಏನೇನೋ ಹೆಸರುಗಳಿಂದ ಕರೆದರೂ ಕುದುರೆ ಚಲಿಸಲಿಲ್ಲವೇ" ಎಂದು ಕೇಳಿದರು. ಆಗ ಕುದುರೆಯ ಯಜಮಾನ "ಅಯ್ಯಾ, ಈ ಕುದುರೆಗೆ ಕಣ್ಣು ಕಾಣಲ್ಲ. ನಾನು ಬೇರೆ ಕುದುರೆಗಳ ಹೆಸರನ್ನು ಹೇಳಿ ಕರೆಯುವಾಗ, ಈ ಕುದುರೆ ನಾನು ಮಾತ್ರ ಎಳೆಯುತ್ತಿಲ್ಲ. ಇನ್ನೂ ನಾಲ್ವರು ನನ್ನ ಜೊತೆ ಇದ್ದಾರೆ ಎಂಬ ಧೈರ್ಯದಲ್ಲಿ ಕಾರನ್ನು ಎಳೆಯಿತು. ಆದರೆ ನಾನು ಮಾತ್ರ ಎಳೆಯುತ್ತಿದ್ದೇನೆ ಎಂದು ತಿಳಿದಿದ್ದರೆ ಇದು ಕಾರನ್ನು ಎಳೆಯುತ್ತಿರಲಿಲ್ಲ” ಎಂದು ಹೇಳಿದರು. ಇಂದು ನಮ್ಮಲ್ಲಿ ಅನೇಕರು ಈ ದಾನಿ ಎಂಬ ಕುದುರೆಯ ಹಾಗೆಯೇ ಇದ್ದೇವೆ. ನಾವು ಮಾತ್ರ ಆ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿದರೆ ನಾವು ಅದರಲ್ಲಿ ಎಂದಿಗೂ ತೊಡಗಿಸಿಕೊಳ್ಳುವುದಿಲ್ಲ. ಉದಾಹರಣೆಗೆ, “ಆಲಯದಲ್ಲಿ ಬೇರೆ ಯಾರೂ ಯಾವ ಕೆಲಸವನ್ನೂ ಮಾಡುವುದಿಲ್ಲ. ನಾನು ಮಾತ್ರ ಏಕೆ ನನ್ನ ಸಮಯ ಮತ್ತು ಶ್ರಮವನ್ನು ಖರ್ಚು ಮಾಡಿ ಆ ಕೆಲಸವನ್ನು ಮಾಡಬೇಕು” ಎಂದು ನಮ್ಮಲ್ಲಿ ಅನೇಕರು ಯಾವ ಕಾರ್ಯವನ್ನೂ ಆಲಯಕ್ಕಾಗಿ ಮಾಡುವುದಿಲ್ಲ.
ಎಲೀಯ ಪ್ರವಾದಿಯು ಈಜೆಬೆಲಳಿಗೆ ಭಯಪಟ್ಟು ಹೋರೇಬ್ ಪರ್ವತದಲ್ಲಿ ಅಡಗಿಕೊಂಡಿದ್ದಾಗ, ದೇವರ ಬಳಿ "ನಾನೊಬ್ಬನೇ ಉಳಿದಿದ್ದೇನೆ" ಎಂದರು. ದೇವರು, “ಇನ್ನೂ ಏಳು ಸಾವಿರ ಜನರು ಇದ್ದಾರೆ” ಎಂದು ಹೇಳಿದರು.
ನಾವು ಮಾಡಬೇಕಾದ ಕೆಲಸಗಳನ್ನು ಮಾಡದೇ, "ನಾನು ಮಾತ್ರವೇ ಒಬ್ಬಂಟಿಯಾಗಿದ್ದೇನೆ, ನನ್ನೊಂದಿಗೆ ಬೇರೆ ಯಾರೂ ಇಲ್ಲ, ಎಷ್ಟು ದಿನ ನಾನೊಬ್ಬನೇ ಮಾಡುವುದು" ಎಂದು ದೇವರಲ್ಲಿ ಮನವಿ ಮಾಡುತ್ತಿದ್ದೇವೆ. ಎಲೀಯ ಪ್ರವಾದಿಯಂತೆ, ಮತ್ತೊಬ್ಬರು ಮಾಡುತ್ತಿರುವ ಕಾರ್ಯಗಳು ನಮ್ಮ ಕಣ್ಣುಗಳಿಗೆ ಕಾಣದೇ ಇರಬಹುದು. ಒಂದು ವೇಳೆ ನಾವು ಮಾತ್ರ ಕರ್ತನಿಗಾಗಿ ಕಾರ್ಯ ಮಾಡುತ್ತಿದ್ದೇವೆ ಎಂದು ನೆನೆಸಿದರೂ, ಯಾವುದು ಒಳ್ಳೆಯದೋ ಅದನ್ನು ಸತತವಾಗಿ ಮಾಡಬೇಕು. ಬಳಲಿ ಹೋಗಬಾರದು. ನಾವು ತಳಮಳಗೊಳ್ಳದಿದ್ದರೆ ತಕ್ಕ ಸಮಯದಲ್ಲಿ ಕೊಯ್ಯುತ್ತೇವೆ. ಒಂದು ವೇಳೆ ನೀವು ದೇವರಿಗಾಗಿ ಮಾಡುವುದನ್ನು ಯಾರೂ ನೋಡಲಿಲ್ಲ ಎಂದು ಭಾವಿಸುತ್ತಿದ್ದೀರ? ಮನುಷ್ಯನು ನೋಡದಿದ್ದರೂ ಎಲ್ಲವನ್ನು ಕಾಣುವ ಎಲ್ರೋಯಿ ನಮ್ಮನ್ನು ನೋಡುವ ದೇವರು, ಅವರಿಗಾಗಿ ನೀವು ಪಡುವ ಪರದಾಟ ಮತ್ತು ಪ್ರಯತ್ನಗಳನ್ನು ಅರಿತವರಾಗಿದ್ದಾರೆ. ಅವರು ಎಂದಿಗೂ ನಮ್ಮನ್ನು ಬಿಟ್ಟುಕೊಡುವವನಲ್ಲ. ನೀವು ಕರ್ತನಿಗಾಗಿ ಮಾಡುವ ಕಾರ್ಯಗಳಿಗೆ ಖಂಡಿತವಾಗಿಯು ದೇವರು ತಕ್ಕ ಸಮಯದಲ್ಲಿ ಪ್ರತಿಫಲ ನೀಡುತ್ತಾರೆ. ಆಮೆನ್!
- Bro. ಹನೀಶ್ ಸಾಮುವೇಲ್
ಪ್ರಾರ್ಥನಾ ಅಂಶ:
ನಮ್ಮ ಅನಾಥಾಶ್ರಮದ ಮಕ್ಕಳ ಭವಿಷ್ಯಕ್ಕಾಗಿ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482