By Village Missionary Movement
Thursday, 21-Oct-2021ಧೈನಂದಿನ ಧ್ಯಾನ(Kannada) – 21.10.2021
ನೀತಿ ಎಂಬ "ಗದರಿಕೆ"
"ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು." - ಜ್ಞಾನೋಕ್ತಿ 29: 1
ಪ್ರಿಯರೇ! ಇಂದಿನ ನಮ್ಮ ಧ್ಯಾನದಲ್ಲಿ ಗದರಿಕೆಯ ಬಗ್ಗೆ ಜ್ಞಾನೋಕ್ತಿಗಳಲ್ಲಿ ಹೇಳಲ್ಪಟ್ಟಿರುವ ಕೆಲವು ವಾಕ್ಯಗಳನ್ನು ನೋಡೋಣ.
ಪರಿಹಾಸ್ಯಮಾಡುವವನನ್ನು- ಗದರಿಸಬೇಡ: (ಜ್ಞಾನೋ. 9: 8)
ಪರಿಹಾಸ್ಯಗಾರರು ತಾವು ಮಾಡುವ ಕಾರ್ಯಗಳೆಲ್ಲ ಸಂಪೂರ್ಣವಾಗಿ ಸರಿ ಎಂದು ವಾದಿಸುತ್ತಾ ಮತ್ತೊಬ್ಬರ ಗದರಿಕೆಯನ್ನು ಆಲೋಚನೆಯನ್ನು ಅಸಡ್ಡೆ ಮಾಡುತ್ತಾರೆ. ಇಂತಹ ಜನರನ್ನು ಗದರಿಸುವ ನಮಗೆ ಮಾತ್ರ ದ್ವೇಷ ಮತ್ತು ಅವಮಾನವಾಗುತ್ತದೆ. ಹಾಗಾಗಿ ಅಂತಹವರನ್ನು ಬಿಟ್ಟು ದೂರವಾಗಿರೋಣ.
ಜ್ಞಾನವಂತನನ್ನು - ಗದರಿಸು: (ಜ್ಞಾನೋ. 9: 8)
ಜ್ಞಾನವಂತರು ಇತರರಿಂದ ಬರುವ ಗದರಿಕೆ ಮತ್ತು ಸಲಹೆಯನ್ನು ವಿಧೇಯತೆಯಿಂದ ಸ್ವೀಕರಿಸಿ ತಪ್ಪು ಕಾರ್ಯಗಳಿಗೂ ಅದರ ಪರಿಣಾಮಗಳಿಗೂ ಪಾರಾಗುತ್ತಾರೆ.
ದಾವೀದನು ಅಬೀಗೈಲಳ ಜ್ಞಾನವಾದ ಗದರಿಕೆಯನ್ನು ಸ್ವೀಕರಿಸಿ ರಕ್ತ ಸುರಿಸದೆ ಹಿಂದಿರುಗಿದನಲ್ಲವೇ?
ಹೃದಯ ಕಠಿಣಮಾಡಿಕೊಳ್ಳುವವರ ಸ್ಥಿತಿ:
"ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು." (ಜ್ಞಾನೋ.29: 1) ಎಂದು ಬರೆಯಲ್ಪಟ್ಟಿರುವ ಪ್ರಕಾರ, ನಮ್ಮಲ್ಲಿ ಕೆಲವರು ಪ್ರತಿದಿನ ದೇವರು ನಮ್ಮೊಂದಿಗೆ ಮಾತನಾಡುತ್ತಿದ್ದರೂ ಹೃದಯವನ್ನು ಕಠಿಣಮಾಡಿಕೊಳ್ಳುತ್ತೇವಲ್ಲಾ! ಏಲಿಯ ಪುತ್ರರಂತೆ ಮತ್ತು ಸೌಲನಂತೆ, ನಾವು ನಾಶವಾಗದೆ ಬದುಕಬೇಕಾದರೆ ನಮ್ಮ ಹೃದಯವನ್ನು ದೇವರ ಮುಂದೆ ತಗ್ಗಿಸಿಕೊಳ್ಳೋಣವಾ? ದೇವರ ಆತ್ಮವನ್ನು ಪಡೆದುಕೊಂಡು ಅವರ ಗದರಿಕೆಗೆ ತಿರಿಗಿ ಕೊಳ್ಳಿರಿ. (ಜ್ಞಾನೋಕ್ತಿ 1:22, 23)
ನಮ್ಮಲ್ಲಿ ಯಾರಾದರೂ ಅಜ್ಞಾನಿಗಳ ಹಾಗೆ, ಮೂರ್ಖರ ಹಾಗೆ, ಅವಿವೇಕಿಗಳ ಹಾಗೆ ಇರುವುದಾದರೆ ಜ್ಞಾನೋಕ್ತಿಗಳು 1 ನೇ ಅಧ್ಯಾಯದಲ್ಲಿ ದೇವರು ನಮಗೆ ಕೊಡುವ ಕರೆಯನ್ನು ಸ್ವೀಕರಿಸಿ ಆತನ ಗದರಿಕೆಗೆ ತಿರುಗಿಕೊಳ್ಳೋಣ, ಆಗ ಆತನು ತನ್ನ ಆತ್ಮವನ್ನು ನಮಗೆ ದಯಪಾಲಿಸುತ್ತಾರೆ. ನಮ್ಮ ಮಾರ್ಗವೂ, ಜೀವನವೂ ಶಾಂತಿಯುತವಾಗಿರುತ್ತದೆ.
-K. ಬೆಂಜಮೀನ್
ಪ್ರಾರ್ಥನಾ ಅಂಶ:
ರಾಕ್ಲ್ಯಾಂಡ್ ಬೈಬಲ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅಂತ್ಯಕಾಲದ ಉಜ್ಜೀವನದ ಆಯುಧಗಳಾಗಿ ಮಾರ್ಪಡುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482