By Village Missionary Movement
Thursday, 09-Sep-2021ಧೈನಂದಿನ ಧ್ಯಾನ(Kannada) – 09.09.2021
ಐಕ್ಯತೆ
"ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!" - ಕೀರ್ತನೆ 133:1
ಒಬ್ಬ ರೈತನ ಮನೆಯಲ್ಲಿ ಇಲಿ, ಕೋಳಿ, ಬೆಕ್ಕು, ಮೇಕೆ ಇದ್ದವು. ರೈತ ಇಲಿಗಳು ಹೆಚ್ಚಾಗುತ್ತಿದೆ ಅವುಗಳನ್ನು ನಿರ್ಮೂಲನೆ ಮಾಡಬೇಕು. ಅದಕ್ಕಾಗಿ ನಾನು ಇಲಿಗಳನ್ನು ಹಿಡಿಯಲು ಇಲಿ ಬೋನು ಒಂದನ್ನು ತರುತ್ತೇನೆ ಎಂದು ಹೇಳಿದನು. ಇಲಿ ತಕ್ಷಣವೇ ಕೋಳಿಯ ಬಳಿ ಹೋಗಿ ಇದನ್ನು ಹೇಳಿ ಸಹಾಯ ಕೇಳಿತು. ಕೋಳಿ ಹೇಳಿತು, "ನಾನು ನಿನಗೆ ಸಹಾಯ ಮಾಡಲು ಸಾಧ್ಯವಿಲ್ಲ." ಎಂದು ಹೇಳಿತು. ಮೇಕೆಯ ಬಳಿ ಹೊರಟಿತು. ಮೇಕೆ, " ಬಹಳ ಮುದ್ದಾಗಿ ಬೆಳೆಯುತ್ತಿರುವ ನನ್ನನ್ನೇ ಮನೆಯೊಳಗೆ ಯಾವತ್ತಾದರು ಒಂದು ದಿನ ಮಾತ್ರವೇ ಅನುಮತಿಸಲಾಗುತ್ತದೆ. ನೀನು ಯಾವಾಗಲೂ ಒಳಗೇ ಇದ್ದು ಆಡುತ್ತಿದ್ದೆ ನಿನಗೆ ಚೆನ್ನಾಗಿ ಆಗಬೇಕು” ಎಂದಿತು. ಇಲಿ ಬೆಕ್ಕಿನ ಸಹಾಯವನ್ನು ಕೇಳಿತು. ಬೆಕ್ಕು, "ನನ್ನಿಂದಾದರೂ ಸಾಧ್ಯವಾಗಲಿಲ್ಲ. ಅವರಾದರೂ ಆ ಒಳ್ಳೆಯ ಕೆಲಸವನ್ನು ಮಾಡಲಿ" ಎಂದಿತು. ರೈತ ಇಲಿ ಹಿಡಿಯುವ ಬೋನನ್ನು ತಂದಿಟ್ಟನು. ಇಲಿಯನ್ನು ಹಿಡಿಯಲಾಗದ ಬೆಕ್ಕನ್ನು ಎತ್ತಿಕೊಂಡು ಹೋಗಿ ಕಾಡಿನಲ್ಲಿ ಬಿಟ್ಟನು. ರೈತನ ಮಗಳು ತಿಳಿಯದೆ ಆ ಬೋನಿನೊಳಗೆ ಕೈ ಹಾಕಲು ಟಬ್ ಎಂಬ ಶಬ್ದಕ್ಕೆ ಕೂಗಾಡಿದಳು. ಅಪ್ಪ ಓಡಿ ಬಂದರು. ರೈತನ ಮಗಳ ಕೈ ಸಿಲುಕಿಕೊಂಡಿತು ಮತ್ತು ಬಹಳ ರಕ್ತ ಬಂತು. ಅವಳನ್ನು ವೈದ್ಯರ ಬಳಿಗೆ ಕರೆದೊಯ್ದರು. ಅವರು ನಾಟಿ ಕೋಳಿಮಾಂಸದ ಸಾರು ಮಾಡಿ ಕೊಡಲು ಹೇಳಿದರು. ಕೋಳಿ ಖಾಲಿಯಾಯಿತು. ಮಗಳು ಗುಣವಾದ ನಂತರ ಅವರು ಒಂದು ಕೃತಜ್ಞತಾ ಕೂಟವನ್ನು ಇಟ್ಟಿದ್ದರು. ಅದಕ್ಕಾಗಿ ಆ ರೈತ ಮೇಕೆಯನ್ನು ಹೊಡೆದು ಅಡುಗೆ ಮಾಡಿಸಿದರು. ಆಗ ಇಲಿ ಅವರು ನನಗೆ ಸಹಾಯ ಮಾಡಿದ್ದರೆ ಎಲ್ಲರೂ ಬದುಕಬಹುದಿತ್ತು. ಈಗ ನಾನು ಮಾತ್ರ ಇದ್ದೇನೆ ಎಂದು ಭಾವಿಸಿತು.
ಸತ್ಯವೇದದಲ್ಲಿ ಪಾರ್ಶ್ವವಾಯು ಎಂಬ ವ್ಯಾಧಿ ಬಂದು ಯಾವ ಕ್ರಿಯೆಯೂ ಇಲ್ಲದೇ ಹಾಸಿಗೆಯಲ್ಲೇ ಬಿದ್ದಿದ್ದ ತಮ್ಮ ಸ್ನೇಹಿತನನ್ನು 4 ಜನ ಸ್ನೇಹಿತರು ಯೇಸುವಿನ ಬಳಿಗೆ ಕರೆದೊಯ್ಯಲು ಯೋಚಿಸುತ್ತಿದ್ದರು, ಆದ್ದರಿಂದ ದೀರ್ಘವಾಗಿ ಆಲೋಚನೆ ಮಾಡಿ ಹಾಸಿಗೆಯೊಂದಿಗೆ ಎತ್ತಿಕೊಂಡು ಹೋಗಲು ನಿರ್ಧರಿಸಿ ಎತ್ತಿಕೊಂಡು ಹೋದರು. ಆದರೆ ಅವರು ಯೇಸುವಿನ ಹತ್ತಿರ ಹೋಗಲು ಸಾಧ್ಯವಾಗಲಿಲ್ಲ. ಆದರೂ ಕೂಡ ಪ್ರಯತ್ನವನ್ನು ಬಿಡದೇ ಅವರು ಛಾವಣಿಯ ಮೇಲೆ ಹತ್ತಿ, ಛಾವಣಿಯನ್ನು ಬಿಚ್ಚಿ ತನ್ನ ಸ್ನೇಹಿತನನ್ನು ಯೇಸುವಿನ ಮುಂದೆ ಇಳಿಸಲು ನಿರ್ಧರಿಸಿದರು. ಯೇಸು ಈ ನಾಲ್ಕು ಸ್ನೇಹಿತರ ಪ್ರಾಮಾಣಿಕ ನಂಬಿಕೆಯನ್ನು ನೋಡಿದರು, ಅವನಿಗೆ ಸ್ವಸ್ಥತೆಯನ್ನು ನೀಡಿದರು.
ಇದನ್ನು ಓದುತ್ತಿರುವ ಪ್ರಿಯರೇ! ನೀವು ವಾಸಿಸುತ್ತಿರುವ ಸ್ಥಳದಲ್ಲಿ ಅಕ್ಕಪಕ್ಕದವರೊಂದಿಗೆ, ಕೆಲಸದ ಸ್ಥಳದಲ್ಲಿ ನಿಮ್ಮ ಜೊತೆ ಕೆಲಸ ಮಾಡುವವರೊಂದಿಗೆ ನೀವು ಹೇಗಿದ್ದೀರ? ನೀವು ಒಗ್ಗಟ್ಟಿನಲ್ಲಿದ್ದೀರಾ? ಕಹಿ ಮತ್ತು ದ್ವೇಷವಿಲ್ಲದೆ ನೀವು ಕ್ಷಮಿಸುವ ಮತ್ತು ಸಹಿಸಿಕೊಳ್ಳುವ ಗುಣವುಳ್ಳವರಾಗಿದ್ದೀರ? ಹಾಗಿದ್ದಲ್ಲಿ, ನಿಮಗೆ ಸಹಾಯ ಮಾಡಲು ಸಹೋದ್ಯೋಗಿಗಳು, ಹತ್ತಿರದ ಸಂಬಂಧಿಗಳು ಓಡಿ ಬರುತ್ತಾರೆ. ನೀವೂ ಕೂಡ ಸಮಾಧಾನದಿಂದ ಇರಬಹುದು. "ಒಟ್ಟಾಗಿದ್ದರೆ ಜೀವನವಿದೆ" ಎಂಬುದು ಈ ಲೋಕದ ಮಾತು! ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು ಎಂಬುದು ದೇವರ ವಾಗ್ದಾನ! ನಾವು ಎಲ್ಲರೊಂದಿಗೆ ಒಟ್ಟಾಗಿ ಬದುಕೋಣ, ಒಳ್ಳೆಯತನ ಮತ್ತು ಆನಂದವನ್ನು ಪಡೆಯೋಣ.
- Bro. ಅರುಣ್ ಐಯಪ್ಪನ್
ಪ್ರಾರ್ಥನಾ ಅಂಶ:
ನಮ್ಮ ಸೇವೆಯಲ್ಲಿರುವ ದ್ವಿಚಕ್ರ ವಾಹನಗಳು ಮತ್ತು ನಾಲ್ಕುಚಕ್ರ ವಾಹನಗಳು ಸುಗಮವಾಗಿ ಕಾರ್ಯನಿರ್ವಹಿಸಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482