Village Missionary Movement         கிராம மிஷனரி இயக்கம்

ದೈನಂದಿನ ಧ್ಯಾನ 09.08.2021
Share:

By Village Missionary Movement

Monday, 09-Aug-2021

ದೈನಂದಿನ ಧ್ಯಾನ 09.08.2021

 ಬದಲಾಗದ ಕರೆ

 “ದೇವರು ವರಗಳನ್ನು ಅನುಗ್ರಹಿಸಿದ್ದಕ್ಕೂ ಜನರನ್ನು ಕರೆದದ್ದಕ್ಕೂ ಪಶ್ಚಾತ್ತಾಪಪಡುವವನಲ್ಲ.” - ರೋಮಾ 11:29

 ಅಮೆರಿಕಾದ ನ್ಯೂಜೆರ್ಸಿಯಲ್ಲಿ 1270-ನೇ ವರ್ಷ ನೌಕಾಯಾನ ಹಡಗೊಂದು ಸಮುದ್ರದ ಬಂಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಯಿತು. ಇದರಲ್ಲಿ ಅನೇಕರು ಸತ್ತುಹೋದರು. ಬದುಕುಳಿದ ಕೆಲವರಲ್ಲಿ ಮರೆ ಎಂಬವರು ಒಬ್ಬ ಗುರು. ಇದರಲ್ಲಿ ಅವರ ಪತ್ನಿ ಮತ್ತು ಮಕ್ಕಳು ಎಲ್ಲರೂ ಮೃತಪಟ್ಟರು. ಒಂದು ಹೊಸ ದ್ವೀಪದ ಬಳಿ ದಡ ಸೇರಿದ ಅವರಿಗೆ ಆ ದುರಂತವನ್ನು ಸಹಿಸಲಾಗಲಿಲ್ಲ. ನಾನು ಅನಾಥನಾಗಲು ದೇವರೇ ಕಾರಣ ಎಂದು ಹೇಳುತ್ತಾ ದೇವರನ್ನು ನಿರಾಕರಿಸಿ,ಆ ಹೊಸ ದ್ವೀಪದಲ್ಲಿ ತನ್ನ ಜೀವನ ಕಳೆಯಲು, ತನ್ನ ಮನಸ್ಸಿಗೆ ಬಂದಂತೆ ಬದುಕಲು ನಿರ್ಧರಿಸಿದರು.

 ಮರುದಿನ ತುಂಬಾ ದುಃಖವಾದ ಮನಸ್ಥಿತಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಂದು ವ್ಯಕ್ತಿಯನ್ನು ನೋಡಿದರು. ಅವನು ಅವರನ್ನು ನೋಡಿ, “ನಾನು ನಿಮಗಾಗಿಯೇ ಕಾಯುತ್ತಿದ್ದೇನೆ” ಎಂದು ಹೇಳಿದನು. “ನಾನು ನಿನಗೆ ಗೊತ್ತಾ?” ಎಂದು ಕೇಳಿದರು. “ಸರ್, ನಾನು ಯೇಸುವಿನ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ನನ್ನ ಪತ್ನಿ ಸತ್ಯವೇದವನ್ನು ಓದಿ ನನಗೆ ಹೇಳುತ್ತಿದ್ದಳು. ನನ್ನ ಮನೆಯಲ್ಲೇ ನಾವು ಸಭೆಯಾಗಿ ಕೂಡಿ ದೇವರನ್ನು ಆರಾಧಿಸುತ್ತೇವೆ. ಆದರೆ ಸತ್ಯವೇದದ ಬಗ್ಗೆ ಕಲಿಸಲು, ಬೋಧಿಸಲು ಯಾರೂ ಇಲ್ಲ. ಹಾಗಾಗಿ ನಮ್ಮೊಂದಿಗೆ ಇದ್ದು ಸೇವೆ ಮಾಡುವ ಸೇವಕರನ್ನು ಕೊಡಿ ಎಂದು ಬಹುದಿನಗಳಿಂದ ಪ್ರಾರ್ಥಿಸುತ್ತಿದ್ದೆವು. ಎರಡು ದಿನಗಳ ಹಿಂದೆ, ನಮ್ಮ ಸಭೆಯಲ್ಲಿ ಒಬ್ಬರ ದರ್ಶನದಲ್ಲಿ, ಹಡಗಿನ ದುರಂತದಲ್ಲಿ ಬದುಕುಳಿದ ಒಂದು ಗುರುವನ್ನು ನಿಮಗೆ ಸೇವಕನಾಗಿ ಕಳುಹಿಸಿದ್ದೇನೆ ಎಂದು ಪ್ರಕಟಿಸಿದರು. ಅದರಂತೆ ನೀವು ಕೂಡ ಬಂದಿದ್ದೀರಿ.” ಎಂದನು. ಮರೆ ದೇವರ ಮಾರ್ಗದರ್ಶನವನ್ನು ತಿಳಿದು ಅಲ್ಲಿಯೇ ಉಳಿದು ಸೇವೆ ಮಾಡಿದರು. ತನಗೆ ಬಂದ ಪಾಡುಗಳು, ಸಮಸ್ಯೆಗಳ ಕಾರಣವನ್ನು ಆ ದೇವ ಮನುಷ್ಯನಿಂದ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೂ ಅವುಗಳ ಮಧ್ಯದಲ್ಲೂ ದೇವರು ಅವರನ್ನು ಕರೆದ ಕರೆಯುವಿಕೆಯಲ್ಲಿ ದೃಢವಾಗಿದ್ದು ದೇವರ ಸೇವೆಯನ್ನು ನೆರವೇರಿಸಿದರು.

 ಇದನ್ನು ಓದುತ್ತಿರುವ ಪ್ರಿಯರೇ! ನಮ್ಮ ಜೀವನದಲ್ಲಿಯೂ ಯೇಸುವನ್ನು ಸ್ವೀಕರಿಸಿದ ನಂತರ, ಕೆಲವು ಪಾಡುಗಳು, ಹಾನಿಕಾರಕ ವಿಷಯಗಳು, ನಷ್ಟಗಳು, ಹಾನಿಗಳು ಸಂಭವಿಸಬಹುದು. ಆದರೆ ಇವೆಲ್ಲವೂ ದೇವರಿಗೆ ತಿಳಿಯದೆ ಬರುವುದಿಲ್ಲ. ಕೃಪೆಯಿಂದಲೇ ದೇವರು ನಮ್ಮಲ್ಲಿ ಪ್ರತಿಯೊಬ್ಬರನ್ನು ಆರಿಸಿಕೊಂಡು ಕರೆದಿದ್ದಾರೆ. ಆದಾಗ್ಯೂ ನಾವು ನಮ್ಮ ಜೀವನದಲ್ಲಿರುವ ಸಮಸ್ಯೆಗಳನ್ನು ನೋಡಿ ಹಿಂಜಾರಿ ಹೋಗಬಹುದು, ಆದರೆ ನಮ್ಮನ್ನು ಕರೆದ ದೇವರು ನಂಬಿಗಸ್ತನಾಗಿದ್ದಾನೆ. ಆತನ ಪ್ರೀತಿ ಮಾತ್ರವೇ ಎಂದಿಗೂ ಬದಲಾಗುವುದಿಲ್ಲ. ನಾವು ಅವರ ಕರೆಯುವಿಕೆಯಲ್ಲಿ ನೆಲೆಗೊಂಡಿರೋಣ. ಅವರು ಎಲ್ಲವನ್ನೂ ಒಳ್ಳೆಯದಕ್ಕಾಗಿಯೇ ಮಾಡುತ್ತಾರೆ.

 -Mrs. ಶಕ್ತಿ ಶಂಕರರಾಜ್

 ಪ್ರಾರ್ಥನಾ ಅಂಶ:

 Lockdown ನಿಂದಾಗಿ ಶಾಲೆಗೆ ಹೋಗದೆ ಮನೆಯಲ್ಲೇ ಇರುವ ಮಕ್ಕಳ ಸುರಕ್ಷತೆ ಮತ್ತು ಭವಿಷ್ಯಕ್ಕಾಗಿ ಪ್ರಾರ್ಥಿಸಿರಿ.

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482

 

 

 

 

 

 

 

 

 



hacklink satın al