By Village Missionary Movement
Saturday, 31-Jul-2021ಧೈನಂದಿನ ಧ್ಯಾನ(Kannada) – 31.07.2021 (Bible Characters Special)
ನೆಹೆಮಿಯ
"ಈ ಮಾತುಗಳನ್ನು ಕೇಳಿದಾಗ ನಾನು ಕುಳಿತುಕೊಂಡು ಅತ್ತು... ಪರಲೋಕದ ದೇವರ ಮುಂದೆ ಪ್ರಾರ್ಥನೆ ಮಾಡಿ” - ನೆಹೆಮಿಯ 1:4
ಇಸ್ರಾಯೇಲ್ಯರು ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಪದೇ ಪದೇ ಮಾಡುತ್ತಿದ್ದ ಕಾರಣ, ದೇವರು ಅವರನ್ನು ಅನ್ಯಜನರ ಕೈಗೆ ಒಪ್ಪಿಸಿದರು. ಅವರನ್ನು ಸೆರೆಹಿಡಿಯಲಾಯಿತು. ಜೈಲಿನಿಂದ ಬದುಕುಳಿದವರು ದೊಡ್ಡ ಹಾನಿಯನ್ನನುಭವಿಸಿದರು. ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿತ್ತು. ಆ ದಿನಗಳಲ್ಲಿ ಯೆಹೂದ್ಯನಾದ ನೆಹೆಮಿಯ ಎಂಬ ಯುವಕನನ್ನು ಸೆರೆಹಿಡಿದು ಅರಸನಾದ ಅರ್ತಷಸ್ತನು ಶೂಷನ್ ಪಟ್ಟಣದ ಅರಮನೆಯಲ್ಲಿ ಅರಸನ ಪಾನಸೇವಕನಾಗಿದ್ದನು. ಆಗ ಯೆಹೂದ್ಯದಿಂದ ಬಂದ ಮನುಷ್ಯರ ಬಳಿ ನೆಹೆಮಿಯ ಯೆಹೂದ್ಯರ ಸ್ಥಿತಿಯ ಬಗ್ಗೆ ಮತ್ತು ಯೆರೂಸಲೇಮಿನ ಸಮಾಚಾರವನ್ನು ವಿಚಾರಿಸಿದನು. ಅವರು ನನಗೆ ಸೆರೆಯವರೊಳಗೆ ತಪ್ಪಿಸಿಕೊಂಡು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇವಿುನ ಪೌಳಿಗೋಡೆಯು ಕೆಡವಲ್ಪಟ್ಟಿರುತ್ತದೆ; ಅದರ ಬಾಗಲುಗಳು ಬೆಂಕಿಯಿಂದ ಸುಡಲ್ಪಟ್ಟಿರುತ್ತವೆ ಎಂದು ಹೇಳಿದರು. ಇದನ್ನು ಕೇಳಿದ ನೆಹೆಮಿಯ ನೆಲದ ಮೇಲೆ ಕೂತುಕೊಂಡು ಅತ್ತರು; ಕೆಲವು ದಿವಸಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕ ದೇವರ ಮುಂದೆ ವಿಜ್ಞಾಪನೆ ಮಾಡುತ್ತಿದ್ದರು. ರಾಜನ ಬಳಿ ತನ್ನ ಬಿನ್ನಹವನ್ನು ತಿಳಿಸಿ ಅವರ ಬಳಿ ಅನುಮತಿ ಪಡೆದು ಯೆರೂಸಲೇಮಿನ ಗೋಡೆಗಳನ್ನು ಅನೇಕ ತಡೆಗಳನ್ನು ದಾಟಿ 52 ದಿನಗಳಲ್ಲಿ ಕಟ್ಟಿ ಎಬ್ಬಿಸಿದರು.
ಇತ್ತೀಚಿನ ದಿನಗಳಲ್ಲಿ ನಮ್ಮ ತಮಿಳುನಾಡಿನ ಸ್ಥಿತಿಯು ಪ್ರಶ್ನಾರ್ಥಕವಾಗಿತ್ತು. ನ್ಯಾಯಕ್ಕೆ ಬೆಂಕಿ ಹಚ್ಚಿದಂತೆ ಕಂಡಿತು. ರಹಸ್ಯಗಳು ಮುಂದುವರಿದವು. ಸತ್ಯಕ್ಕೆ ವಿರೋಧಾತ್ಮಕ ಸುದ್ದಿಗಳನ್ನು ಕೇಳಿದೆವೆಂದು ನಿಜವನ್ನು ತಿಳಿಯಲು ಸಾಧ್ಯವಾಗಲಿಲ್ಲ. ಆದರೆ ನಾವು ಪರಿಸ್ಥಿತಿಯನ್ನು ವಿಚಾರಿಸುತ್ತಲೇ ಇದ್ದೆವು. ಕಾಲಕಾಲಕ್ಕೆ ನಾವು ಜನರ ಭಾವನೆಗಳನ್ನು ಮತ್ತು ಅಧಿಕಾರದಲ್ಲಿರುವವರ ಪ್ರಾಬಲ್ಯವನ್ನು ಪತ್ರಿಕೆಗಳು, ದೂರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ನೋಡುತ್ತಿದ್ದೆವು. ಈ ರೀತಿಯ ಎಲ್ಲಾ ಸುದ್ದಿಗಳನ್ನು ತಿಳಿದುಕೊಂಡು, ನಮ್ಮಲ್ಲಿ ಎಷ್ಟು ಮಂದಿ ನೆಹೆಮಿಯನ ಹೃದಯದಿಂದ ಪ್ರಾರ್ಥಿಸಿದ್ದೇವೆ? ದೇವರು ನಮ್ಮ ಜನರಿಗೆ ಕ್ಷೇಮವನ್ನು ದಯಪಾಲಿಸುವಂತೆ ನಮ್ಮ ಎಲ್ಲಾ ಪಾಪಗಳನ್ನು ಒಪ್ಪಿಕೊಂಡು ದೇವರ ಬಳಿ ಬೇಡಿಕೊಂಡಿದ್ದೇವಾ?
ಪ್ರಿಯರೇ! ಆಶೀರ್ವಾದಕರವಾದ ತಮಿಳುನಾಡು ರಚನೆಗೆ ದೇವರ ಮಕ್ಕಳ ಪಾತ್ರ ಅತ್ಯಗತ್ಯ. ಭದ್ರತೆ ಎಂಬ ಗೋಡೆಯನ್ನು ನಿರ್ಮಿಸಬೇಕಾದರೆ ನಾವು ಶೀಘ್ರವಾಗಿ ಕಾರ್ಯನಿರ್ವಹಿಸಬೇಕು. ಎಸ್ತೇರಳಂತೆ ಉಪವಾಸದಿಂದ ಪ್ರಾರ್ಥಿಸಬೇಕು. ಹೌದು, ಇಂತಹ ಕಾಲಕ್ಕೆ ಸಹಾಯ ಮಾಡಲು ದೇವರು ನಮ್ಮನ್ನಿಟ್ಟಿದ್ದಾರೆ. ಆದ್ದರಿಂದ ನಾವು ಯಾವಾಗಲೂ ಸ್ತೋತ್ರಗಳೊಂದಿಗೆ ಕೂಡಿದ ವಿಜ್ಞಾಪನೆಗಳನ್ನು ದೇವರ ಸನ್ನಿಧಾನದಲ್ಲಿ ಸಮರ್ಪಿಸುತ್ತಲೇ ಇರೋಣ. ನಮ್ಮ ಏಕೈಕ ಉದ್ದೇಶ ದೇವರ ಎರಡನೇ ಬರುವಿಕೆಗಾಗಿ ನಾವು ವಾಸಿಸುತ್ತಿರುವ ತಮಿಳುನಾಡನ್ನು ಸಿದ್ಧಪಡಿಸಬೇಕೆಂಬುದೇ! ಈ ಭಾರ ನಮಗಿದ್ದರೆ, ದೇಶದ ಸ್ಥಿತಿಗಾಗಿ ಆಸಕ್ತಿಯಿಂದ ಸ್ಪಷ್ಟವಾಗಿ ಪ್ರಾರ್ಥಿಸದೇ ಇರಲು ಸಾಧ್ಯವೇ ಇಲ್ಲ.
- J. ಪೌಲ್ ರಾಜ್
ಪ್ರಾರ್ಥನಾ ಅಂಶ:
ಮೋಕ್ಷ ಪ್ರಯಾಣ ಎಂಬ ದೈನಂದಿನ ಧ್ಯಾನ ಪತ್ರಿಕೆಯನ್ನು ಮುದ್ರಿಸಲು ಅಗತ್ಯವಾದ ಅವಶ್ಯಕತೆಗಳು ಪೂರೈಸಲ್ಪಡಲು ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482