Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 23.07.2021 (Bible Characters Special)
Share:

By Village Missionary Movement

Friday, 23-Jul-2021

ಧೈನಂದಿನ ಧ್ಯಾನ(Kannada) – 23.07.2021 (Bible Characters Special)

 

ದಾನಿಯೇಲ

 

"...ದಾನಿಯೇಲನು... ಅಭಿವೃದ್ಧಿಯಾಗಿ ಬಾಳಿದನು." - ದಾನಿಯೇಲನು 6:

 

ನೆಬೂಕದ್ನೆಚ್ಚರನೆಂಬ ಬಾಬೆಲಿನ ಅರಸನು ಯೆರೂಸಲೇಮನ್ನು ಮುತ್ತಿಗೆ ಹಾಕಿ ಅಲ್ಲಿ ರೋಮಾಂಚಕವಾದ, ತಿಳುವಳಿಕೆಯುಳ್ಳಂತಹ  ಯೌವನಸ್ಥರನ್ನು ಬಾಬೆಲಿಗೆ ಸೆರೆ ಹಿಡಿದು ಕರೆದುಕೊಂಡು ಹೋದರು. ಅವರೊಳಗೆ ದಾನಿಯೇಲನೆಂಬ ಯೆಹೂದದ ಯೌವನಸ್ಥನೂ ಒಬ್ಬನು. ಬಾಬೆಲಿನ ಲ್ಲಿರುವ ಆಹಾರ ಪದ್ಧತಿ, ಅಭ್ಯಾಸಗಳು ಎಲ್ಲವನ್ನು ಗಮನಿಸಿದ ದಾನಿಯೇಲನು ಇವುಗಳಿಂದ ನನ್ನನ್ನು ಅಶುದ್ಧ ಪಡಿಸಿಕೊಳ್ಳುವುದಿಲ್ಲ ಎಂದು ತನ್ನ ಹೃದಯದಲ್ಲಿ ಒಂದು ತೀರ್ಮಾನವನ್ನು ಮಾಡಿದರು. ತನ್ನನ್ನು ಗಮನಿಸಲು, ಖಂಡಿಸಲು ಕುಟುಂಬದವರು ಯಾರೂ ಹತ್ತಿರದಲ್ಲಿಲ್ಲವೆಂಬ ಆಲೋಚನೆ ಅವರು ಮಾರ್ಗ ತಪ್ಪುವಂತೆ ಮಾಡಲಿಲ್ಲ. ಬದಲಾಗಿ ದೃಢವಾದ ತೀರ್ಮಾನವನ್ನು ತೆಗೆದುಕೊಂಡರು. ಊರು ಬಿಟ್ಟು, ದೇಶಬಿಟ್ಟು ದೂರ ಹೋಗದೆ ಜೀವಿಸಿದರು. ದಾನಿಯೇಲನು ಅಲ್ಲಿ ದೇವರಿಗಾಗಿ ವೈರಾಗ್ಯವಾಗಿ ನಿಂತುಕೊಂಡದ್ದರ ನಿಮಿತ್ತವಾಗಿ, ಹಲವು ಶೋಧನೆ ಹೋರಾಟಗಳನ್ನು ದಾಟಿ ಬಂದರು ಯಾವುದೂ ಅವರನ್ನು ಹಾನಿ ಮಾಡಲಿಲ್ಲ. ದಾನಿಯೇಲನ ಪ್ರಾರ್ಥನಾ ಜೀವನ ಮತ್ತು ದೇವರಿಗೆ ಭಯಪಡುವ ಭಯ ಇವು ಅವರನ್ನು ಅರಸನಿಗೆ ನಂತರದ ಸ್ಥಾನಕ್ಕೆ ಹೆಚ್ಚಿಸಲ್ಪಡಲು ಮುಖ್ಯ ಕಾರಣವಾಯಿತು

 

ಇಂದಿನ ಯೌವನಸ್ಥರ ಕೂಟಗಳಲ್ಲಿ ದಾನಿಯೇಲನನ್ನು ಸಂದೇಶ ಕೊಡಲು ಕರೆಯುವುದಾದರೆ ಅವರು ಏನು ಮಾತನಾಡುತ್ತಾರೆ?" ಯೌವನಸ್ಥನೇ! ನಾನೊಬ್ಬ ದಾಸನಾಗಿ ದೂರದೇಶಕ್ಕೆ ಹೋದ ಪ್ರಕಾರ ನೀವೂ ಕೂಡಾ ವಿದ್ಯಾಭ್ಯಾಸದ ನಿಮಿತ್ತವಾಗಿಯೋ ಅಥವಾ ಕೆಲಸದ ವಿಷಯವಾಗಿಯೋ ನಿಮ್ಮ ಹೆತ್ತವರನ್ನು ಬಿಟ್ಟು ದೂರದಲ್ಲಿರಬಹುದು. ನಿಮ್ಮನ್ನು ದೂರವಾಣಿ, ವಾಟ್ಸಪ್ ಮೂಲಕ ಸಂಪರ್ಕಿಸುವ ನಿಮ್ಮ ಹೆತ್ತವರೊಂದಿಗೆ ನೀವು  ಒಳ್ಳೆಯವರಂತೆಯೇ ಮಾತನಾಡಬಹುದು. ನಿಮ್ಮ ವಾಟ್ಸಪ್ ಡಿಸ್ಪ್ಲೇ ಪಿಚ್ಚರ್ ನಲ್ಲಿ ಕೂಡ ದೇವರ ವಾಕ್ಯವೇ ಇರಬಹುದು. ಆದರೆ ದೇವರನ್ನು ಹುಡುಕುವ ಹೃದಯ, ಸುತ್ತಲಿರುವ ಅಶುದ್ಧವಾದ ಕಾರ್ಯಗಳಿಂದ ನನ್ನನ್ನು ಅಶುದ್ಧ ಮಾಡಿಕೊಳ್ಳುವುದಿಲ್ಲ ಎಂಬ ತೀರ್ಮಾನ ನಿಮ್ಮಲ್ಲಿ ಇದೆಯಾ? ಆಲಯವಿಲ್ಲದ,  ವಿಶ್ವಾಸಿಗಳೊಂದಿಗೆ ಐಕ್ಯತೆ ಇಲ್ಲದ, ಹೆತ್ತವರ  ಗಮನಿಸುವಿಕೆ ಇಲ್ಲದ ಈ ಸ್ಥಳದಲ್ಲಿ ದೇವರೊಂದಿಗಿರುವ ಸಂಬಂಧ ಮಾತ್ರವೇ ನಿಮ್ಮನ್ನು ಭದ್ರವಾಗಿ ಕಾಪಾಡುತ್ತದೆ. ಕೆಲಸದ ಸ್ಥಳದಲ್ಲಿ ನಾನು ಅಭಿವೃದ್ಧಿಯಾಗುತ್ತಿರುವದನ್ನು ಸಹಿಸಲಾಗದೆ ನನ್ನೊಂದಿಗೆ ಕೆಲಸ ಮಾಡುವವರು ನನಗೆ ವಿರುದ್ಧವಾಗಿ  ಕುತಂತ್ರಗಳನ್ನು ಮಾಡಿದರೂ ನಾನು ಯಾವುದಕ್ಕೂ ಹೆದರಲಿಲ್ಲ. ಪತ್ರಕ್ಕೆ ಸಹಿ ಹಾಕಲಾಗಿದೆ ಎಂದು ತಿಳಿದ ಕೂಡಲೇ, ಮಹಡಿಯ ಮೇಲಿರುವ ನನ್ನ ಕೋಣೆಗೆ ಹೋಗಿ ಕಿಟಕಿಗಳನ್ನು ತೆರೆದು ಯೆರೂಸಲೇಮನ್ನು ನೋಡಿ ನಾನು ಯಾವಾಗಲೂ ಮಾಡುತ್ತಿದ್ದ ಅಭ್ಯಾಸದ ಪ್ರಕಾರವೇ ಪ್ರಾರ್ಥಿಸಿದೆನು. ಹೌದು, ದೇವರ ಕಾರ್ಯ ಎಂದು ಬಂದರೆ ಅರಸನಿಗಲ್ಲ, ರಾಜಾಧಿರಾಜ ನಾಗಿರುವ ದೇವರಿಗೇ ವಿಧೇಯರಾಗಿ ಬೇಕು. ನೀವು ಕೆಲಸ ಮಾಡುವ ಸ್ಥಳದಲ್ಲಿ ದೇವರಿಗಾಗಿ ವೈರಾಗ್ಯವಾಗಿ ಜೀವಿಸಿರಿ. ನನ್ನ ಕಾರ್ಯಗಳನ್ನು ಜಯಕರವಾಗಿ ಮಾರ್ಪಡಿಸಿದ ದೇವರು ನಿಮ್ಮ ಜೀವನದಲ್ಲಿಯೂ ಜಯವನ್ನು ಕೊಡುತ್ತಾರೆ. ಪುನಃ ನಿಮ್ಮನ್ನು ಪರಮ ಕಾನಾನ್ ದೇಶದಲ್ಲಿ ಭೇಟಿಯಾಗಲು ನಾನು ಆತುರದಿಂದಿದ್ದೇ

- J. ಪೌಲ್ ರಾಜ್ನೆ

 

ಪ್ರಾರ್ಥನಾ

Media ಸೇವೆಗಳಲ್ಲಿ ಕೆಲಸ ಮಾಡುತ್ತಿರುವ ಸೇವಕರನ್ನು ದೇವರು ತನ್ನ ಜ್ಞಾನದಿಂದ ತುಂಬಿಸಿ ಉಪಯೋಗಿಸುವಂತೆ ಪ್ರಾರ್ಥಿಸಿರಿ

 

*Whatsap

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ

 

www.vmm.org.

ಈಮೈಲ್:- reachvmm@gmail.co

Android App: https://play.google.com/store/apps/details?id=com.infobells.vmmorgi

       

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-62600

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482l1 nmin.p*. ಅಂಶ:..28ನುl1 nmin.p*. ಅಂಶ:..28ನುl1 nmin.p*. ಅಂಶ:..28ನುl1 nmin.p*. ಅಂಶ:..28ನುl1 nmin.p*. ಅಂಶ:..28ನು :- +919345540482



hacklink satın al