By Village Missionary Movement
Tuesday, 13-Jul-2021ಧೈನಂದಿನ ಧ್ಯಾನ(Kannada) – 13.07.2021 (Bible Characters Special)
ಅಬೀಗೈಲಳು
"ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವದು; ಬಿರುನುಡಿಯು ಸಿಟ್ಟನ್ನೇರಿಸುವದು." - ಜ್ಞಾನೋಕ್ತಿಗಳು 15:1
ಬೆಳಗಾಗುವಷ್ಟರಲ್ಲಿ ನಾಬಾಲನನ್ನು ಅವನಿಗುಂಟಾಗಿರುವ ಸಮಸ್ತವನ್ನು ಸಂಪೂರ್ಣವಾಗಿ ಸಂಹಾರ ಮಾಡಿ ಕೊಲ್ಲಬೇಕೆಂಬ ಆತುರದೊಂದಿಗೆ ಹೊರಟ ದಾವೀದನನ್ನು ಯಾರು ತಡೆಯಲು ಸಾಧ್ಯ? ದಾವೀದನು ಮಾತ್ರವಾ? ದಾವಿದನೊಂದಿಗಿದ್ದ 400 ಜನರ ದೊಡ್ಡ ಗುಂಪಿನೊಂದಿಗೆ ಬಂದ ಎಲ್ಲರನ್ನೂ ಹೇಗೆ ಸಮಾಧಾನ ಮಾಡುವುದು? ಇದನ್ನು ಅಬೀಗೈಲಳೆಂಬ ಒಬ್ಬ ಮಹಿಳೆ ಏಕವ್ಯಕ್ತಿಯಾಗಿ ಅವರನ್ನು ಸಮಾಧಾನ ಪಡಿಸಿದಳು ಎಂದು ಓದುವಾಗ ಆಶ್ಚರ್ಯವಾಗುತ್ತದಲ್ಲವೇ? ದೇವರು ತಮ್ಮ ಪಕ್ಷವಾಗಿ ದೊಡ್ಡ ಕಾರ್ಯಗಳನ್ನು ಮಾಡುವುದಕ್ಕೆ ಬಲಹೀನರಾದವರನ್ನು ಕೂಡ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಇಂದಿನ ಸಂದೇಶದಲ್ಲಿ ಧ್ಯಾನಿಸೋಣ.
ಅಬೀಗೈಲಳೆಂಬ ಈ ಹೆಸರಿಗೆ ಇರುವ ಅರ್ಥ ಸಂತೋಷವುಳ್ಳ ವ್ಯಕ್ತಿ ಆದರೆ ಮೂರ್ಖನಾದ ಗಂಡ ನಾಬಾಲನ ನಿಮಿತ್ತವಾಗಿ ಆಕೆ ಸಂತೋಷವಿಲ್ಲದೆ ಇದ್ದಿರಬಹುದು . ಆದರೆ ಆಕೆ ಬಹಳ ಬುದ್ಧಿಯುಳ್ಳ ಸ್ತ್ರೀಯಾಗಿದ್ದಳು. ತನ್ನ ಗಂಡನಾದ ನಾಬಾಲನು ದಾವೀದನಿಗೆ ಮಾಡಿದ ಎಲ್ಲವನ್ನೂ ತಿಳಿದುಕೊಂಡ ಅಬೀಗೈಲಳು ಆತುರಪಟ್ಟು ದಾವೀದನನ್ನು ಸಮಾಧಾನಪಡಿಸಲು ವೇಗವಾಗಿ ಕಾರ್ಯ ಮಾಡಿದಳು. ಮೊದಲು ಉಪಚಾರ ಎಂಬ ಮಾರ್ಗವನ್ನು ಆಯ್ಕೆ ಮಾಡಿ ಅವರಿಗೆ ಔತಣ ವನ್ನು ಕೊಡುವಂತೆ ಆಕೆಗಿಂತ ಮೊದಲು ಕೆಲಸಗಾರರನ್ನು ಮುಂದೇ ಕಳುಹಿಸಿ ನಂತರ ಆಕೆ ಹೋಗಿ ದಾವೀದನನ್ನು ಭೇಟಿ ಮಾಡುತ್ತಾಳೆ. ಕತ್ತೆಯ ಮೇಲೆ ಬಂದವರಾರು? ಏತಕ್ಕಾಗಿ ತನಗೆ ಆಹಾರವನ್ನು ಕೊಡುತ್ತಿದ್ದಾರೆ ಎಂದು ದಾವೀದನು ಯೋಚಿಸುತ್ತಿರುವಾಗ ಅಬೀಗೈಲಳು ದಾವೀದನ ಪಾದಗಳ ಮೇಲೆ ಬಿದ್ದು ಸಾಷ್ಟಾಂಗವಾಗಿ ನಮಸ್ಕಾರ ಮಾಡಿದಳು. ತನ್ನ ಮುಂದೆ ಸಾಷ್ಟಾಂಗವಾಗಿ ಬಿದ್ದ ವ್ಯಕ್ತಿ ನಾ ಬಾಲನ ಹೆಂಡತಿ ಅಬೀಗೈಲಳು ಎಂದು ತಿಳಿದುಕೊಳ್ಳುವಷ್ಟರಲ್ಲಿ ಅಬೀಗೈಲಳು ತನ್ನ ಮೆಲ್ಲನೆಯ ಶಾಂತವಾದ ಮಾತುಗಳೊಂದಿಗೆ ದಾವಿದನ ಕಠಿಣವಾದ ಹೃದಯವು ಕರಗುವಂತೆ ಮಾಡಿದಳು. ಅಬೀಗೈಲಳ ಪದಗಳು ಬರೀ ಮಾತುಗಳ ರಾಶಿಯಲ್ಲ. ಅದರಲ್ಲಿ ದೇವರ ಸತ್ಯವು, ಕೃಪೆಯು ತುಂಬಿ ಕಾಣಲ್ಪಟ್ಟವು. ಅಬೀಗೈಲಳ ನಡುವಳಿಕೆಗಳು ದಾವೀದನನ್ನು ಮಾತ್ರವಲ್ಲ,ಜೊತೆ ಬಂದಿದ್ದ ಎಲ್ಲರನ್ನೂ ಶಾಂತಪಡಿಸಿತು ಎಂದರೆ ಅದು ಮಿತಿಯಿಲ್ಲದ್ದು. ಪ್ರೀತಿ ತುಂಬಿದ ಹೃದಯ, ಶಾಂತಿ ತುಂಬಿದ ಮೆಲ್ಲನೆಯ ಮಾತುಗಳು ಇವುಗಳನ್ನೆಲ್ಲ ಸೇರಿಸಿ ದಾವೀದನೊಳಗೆ ಕಾಣಲ್ಪಟ್ಟ ಮುಯ್ಯಿಗೆ ಮುಯ್ಯಿ, ರಕ್ತ ಸುರಿಸಲು ಬಯಸುವ ಕೊಲೆ ಮಾಡಬೇಕೆಂಬ ಗ್ರಹಿಕೆ ಇಂತಹ ದೊಡ್ಡ ಗೋಡೆಯನ್ನೇ ಹೊಡೆದು ಹಾಕಿ ನೆಲಮಟ್ಟವಾಗಿ ಮಾಡಿತು. ಹೌದು, ಅಬೀಗೈಲಳು ತನ್ನ ಸ್ವಭಾವದಿಂದ ಕಠಿಣವಾದ ಪರಿಸ್ಥಿತಿಗಳನ್ನು ಜಯಿಸಿದಳು. ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು (ಜ್ಞಾನೋಕ್ತಿಗಳು 14:1). ಹಲ್ಲೇಲೂಯ!
- Bro. P. ಜೇಕಬ್ ಶಂಕರ್
ಪ್ರಾರ್ಥನಾ ಅಂಶ:-
ಗೆತ್ಸೇಮನೆ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಕಟ್ಟಡದ ಕೆಲಸಗಳಿಗೆ ಅಗತ್ಯವಾದ ಆರ್ಥಿಕ ಸಹಾಯವನ್ನು ಕರ್ತನು ದಯಪಾಲಿಸುವಂತೆ ಪ್ರಾರ್ಥಿಸೋಣ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- reachvmm@gmail.com
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +919345540482