Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 30.06.2021
Share:

By Village Missionary Movement

Wednesday, 30-Jun-2021

ಧೈನಂದಿನ ಧ್ಯಾನ(Kannada) – 30.06.2021

 

ವಿಧೇಯತೆ ಎಂಬ ಸದ್ಗುಣ

 

"ಆತನ ತಾಯಿಯು ಕೆಲಸದವರಿಗೆ - ಆತನು ನಿಮಗೆ ಏನು ಹೇಳುವನೋ ಅದನ್ನು ಮಾಡಿರಿ ಅಂದಳು." - ಯೋಹಾನ 2:5

 

ಎರಡನೇ ಪ್ರಪಂಚ ಯುದ್ಧದಲ್ಲಿ ಪಾಲ್ಗೊಂಡವರ ಬಳಿ ಒಂದು ಇಂಟರ್ವ್ಯೂ ಮಾಡಲಾಯಿತು. ಅದರಲ್ಲಿ ಸೈನಿಕರು ಅವರು ಆ ಒಂದು ನಿರ್ದಿಷ್ಟವಾದ ದಿನವನ್ನು ಹೇಗೆ ಕಳೆದವೋ ಎಂಬುದನ್ನು ನೆನಪಿಸಿಕೊಂಡು ಹೇಳಿದರು. ಒಬ್ಬರು ನರಿಹಳ್ಳ ಎಂಬ ಹಳ್ಳದಲ್ಲಿ ದಿನಪೂರ್ತಿ ಹೊರಗೆ ಬರದೆ ಅದರಲ್ಲೇ ಬಚ್ಚಿಟ್ಟುಕೊಂಡಿದ್ದರು. ಅದರ ಪಕ್ಕದಲ್ಲಿ ಬರುವಾಗ ಜರ್ಮನ್ ಟ್ಯಾಂಕುಗಳನ್ನು ಒಂದೆರಡು ಬಾರಿ ಸುಟ್ಟರು. ಬೇರೆ ಕೆಲವರು ಇಸ್ಪೀಟ್ ಆಟವನ್ನು ಆಡುತ್ತಾ ಸಮಯ ಕಳೆಯುತ್ತಿದ್ದರು. ಇನ್ನು ಕೆಲವರು ತೀವ್ರವಾಗಿ ಎದುರಾಳಿಗಳೊಂದಿಗೆ ಯುದ್ಧ ಮಾಡುತ್ತಿದ್ದರು. ಅವರವರಿಗೆ ಕಮಾಂಡರ್ ಕೊಟ್ಟ ಆಜ್ಞೆಗಳಿಗೆ ಹಾಗೆ ವಿಧೇಯರಾದರು. ಸಾಮಾನ್ಯವಾಗಿ ಆ ದಿನ ಎಲ್ಲಾ ದಿನಗಳ ಹಾಗೆ ಕಳೆಯಿತು. ನಂತರ ಅವರು ತಾವು ಪ್ರಪಂಚ ಯುದ್ಧದ ಹಾದಿಯನ್ನೇ ಮಾರ್ಪಡಿಸುವ "ಬಲ್ಜ್ ಯುದ್ಧದಲ್ಲಿ" ಇರುವುದನ್ನು ತಿಳಿದುಕೊಂಡರು. ಆ ದಿನದಲ್ಲಿ ಅವರು ಮಾಡಲು ತೋರುವುದು ಅವರಿಗೆ ದೊಡ್ಡದಾಗಿ ಗೊತ್ತಾಗಲಿಲ್ಲ. ಏಕೆಂದರೆ ನಡೆಯುವ ಪೂರ್ತಿ ಯುದ್ಧದ ಬಗ್ಗೆ ತಿಳಿಯದೆ ಇದ್ದರು. ತನ್ನನ್ನು ಮುನ್ನಡೆಸಿದವರ ಆಜ್ಞೆಗೆ ಮಾತ್ರ ವಿಧೇಯರಾಗಿ ಕಾರ್ಯಗಳನ್ನು ಮಾಡಿದರು. ದೊಡ್ಡ ಜಯವನ್ನು ಸ್ವತಂತ್ರಿಸಿಕೊಂಡರು. ಇದರ ಮೂಲಕ ನಾವು ನಮ್ಮ ಜವಾಬ್ದಾರಿಯನ್ನು ಮಾಡುವಾಗ ದೊಡ್ಡ ಜಯವನ್ನು ಹೊಂದಿಕೊಳ್ಳಲು ಸಾಧ್ಯ ಎಂದು ತಿಳಿದುಕೊಳ್ಳುತ್ತೇವೆ.

 

ಇಂದಿನ ಸತ್ಯವೇದ ಭಾಗದಲ್ಲಿ, ಮೋವಾಬ್ಯ ಸ್ತ್ರೀಯಾದ ರೂತಳ ಬಗ್ಗೆ ಓದುತ್ತೇವೆ. ಗಂಡನು ಸತ್ತು ವಿಧವೆಯಾಗಿದ್ದರು ರೂತಳಿಗೆ ಅವರ ಅತ್ತೆ ನೊವೊಮಿ ಹೇಳಿದ ಕಾರ್ಯ ಸರಿಯಾದದ್ದು ಆಗಿರಲಿಲ್ಲ. ಆದರೂ ಕೂಡ ರೂತಳು ನೊವೊಮಿಯ ಮಾತಿಗೆ ಹಾಗೆಯೇ ವಿಧೇಯಳಾದಳು. ನೀನು ನನಗೆ ಹೇಳಿದ ಹಾಗೆಲ್ಲಾ ಮಾಡುತ್ತೇನೆ ಅಂದಳು (ರೂತು 3:5). ರೂತಳ ವಿಧೇಯತೆಗೆ ದೊರೆತ ಫಲವೇ ಇವಳ ಸಂತತಿಯಲ್ಲಿಯೇ ದಾವೀದನು, ಲೋಕ ರಕ್ಷಕನಾದ ಯೇಸುಕ್ರಿಸ್ತನು ಹುಟ್ಟಿದರು.

 

ವಿಧೇಯತೆ ಬಹು ಬೆಲೆಯುಳ್ಳ ಅಲಂಕಾರ ಎಂದು ಪೇತ್ರನು ತನ್ನ ಪತ್ರಿಕೆಯಲ್ಲಿ ವರ್ಣಿಸುತ್ತಾರೆ. ವಿಧೇಯತೆಯನ್ನು ಧರಿಸಿಕೊಳ್ಳಿರಿ ಎಂದು ನಮಗೆ ಎಚ್ಚರಿಸುತ್ತಿದ್ದಾರೆ (1 ಪೇತ್ರ 3:1-5) ಆದರೆ ಏನೋ ಒಬ್ಬರಿಗೊಬ್ಬರು ವಿಧೇಯ ರಾಗುವುದು ಎಂದರೆ ಬಹಳ ಕಹಿಯಾದ ವಿಷಯವಾಗಿ ಕಾಣುತ್ತಿದೆ. ರಣರಂಗದಲ್ಲಿ ಸೈನಿಕನಿಗೆ ವಿಧೇಯತೆಯು ಎಷ್ಟು ಮುಖ್ಯವೋ, ಅದರಂತೆ ಕ್ರೈಸ್ತ ಜೀವನ ಎಂಬ ಆತ್ಮಿಕ ಯುದ್ಧದಲ್ಲಿರುವ ಒಬ್ಬೊಬ್ಬರಿಗೂ ವಿಧೇಯತೆಯು ಬಹಳ ಅವಶ್ಯವಾಗಿದೆ. ಹೀಗೆ ವಿಧೇಯತೆ ಎಂಬ ಗುಣಲಕ್ಷಣ ಕ್ಕೆ ಬರುವಾಗ ನಿಮಗೆ ಬೇಸರವಾಗಬಹುದು. ಅಥವಾ ನೀವು ಬಹಳ ಬಳಲಿ ಹೋಗಬಹುದು. ಆದರೆ ವಿಧೇಯತೆಯನ್ನು ನಿಧಾನವಾಗಿ ಕಲಿತು ಕೊಳ್ಳುವಾಗ ಕೊನೆಯು ಆಶೀರ್ವಾದಕರವಾಗಿರುತ್ತದೆ.

- P. ಜೇಕಬ್ ಶಂಕರ್

 

ಪ್ರಾರ್ಥನಾ ಅಂಶ:-

ಸೇವೆಯಲ್ಲಿ ಉಪಯೋಗಿಸಲ್ಪಡುತ್ತಿರುವ ನಾಲ್ಕು ಚಕ್ರದ ವಾಹನಗಳು ಯಾವುದೇ ರೀತಿಯ ರಿಪೇರಿಗಳು ಬರದಂತೆ, ಮತ್ತು ಓಡಿಸುವಾಗ ದೇವರ ಕಾಯುವಿಕೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- reachvmm@gmail.com

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +919345540482



hacklink satın al