By Village Missionary Movement
Monday, 25-May-2026ಧೈನಂದಿನ ಧ್ಯಾನ(Kannada) – 25.05.2026
ದೇವರ ಮೇಲೆ ನಂಬಿಕೆ
"ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು." - ವಿಮೋ.20:3
ಒಬ್ಬ ಗ್ರಾಮ ಸೇವಕರು ಪ್ರತಿದಿನ ಪಕ್ಕದ ಹಳ್ಳಿಗಳಿಗೆ ಹೋಗಿ ಸೇವೆ ಮಾಡಿ ಬರುತ್ತಿದ್ದರು. ಒಬ್ಬ ಸಹೋದರ ಅವರನ್ನು ಭೇಟಿಯಾಗುವಾಗಲೆಲ್ಲಾ ಅವರಿಗೆ ಊಟ ತೆಗೆದುಕೊಡುವುದು ಅಭ್ಯಾಸವಾಗಿತ್ತು. ಒಂದು ದಿನ, ಆ ಸಹೋದರನು ಆ ಸೇವಕರ ಬಳಿ, ನನ್ನ ಹಳ್ಳಿಯ ಸುತ್ತಮುತ್ತಲಿನ ಸ್ಥಳಗಳಲ್ಲಿ ಸೇವೆ ಮಾಡಲು ಬನ್ನಿ ಎಂದು ಹೇಳಿದರು. ಆ ಸೇವಕರು ಇವತ್ತು ಪೂರ್ತಿ ಗಾಡಿಗೆ ಪೆಟ್ರೋಲ್, ಊಟ ಇವು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ ಎಂದು ಭಾವಿಸಿ ದಿನವಿಡೀ ಅವರೊಂದಿಗೆ ಸೇವೆ ಮಾಡಿದರು. ಸಂಜೆ, ಸೇವೆಯೆಲ್ಲಾ ಮುಗಿಸಿಬಿಟ್ಟು, ಮತ್ತೆ ಭೇಟಿಯಾಗೋಣ ಎಂದು ಹೇಳಿಬಿಟ್ಟು ಆ ಸಹೋದರನು ಹೊರಟು ಹೋದರು. ಈ ಸೇವಕರಿಗೆ ಒಂದು ಕಡೆ ಹಸಿವು ಮತ್ತು ಇನ್ನೊಂದು ಕಡೆ ದಣಿವು. ಮರುದಿನ ಬೆಳಿಗ್ಗೆ, ಸೇವೆಗೆ ಹೋಗಲು ಗಾಡಿಯಲ್ಲಿ ಪೆಟ್ರೋಲ್ ಇಲ್ಲ. ಆ ಪರಿಸ್ಥಿತಿಯಲ್ಲಿ, ಅವರಿಗೆ ಒಂದು ವಾಕ್ಯ ನೆನಪಾಯಿತು. "ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು". ನೀನು ಮನುಷ್ಯರನ್ನು ನಂಬಿದರೆ, ಅವರು ನಿನಗೆ ದೇವರಾಗಿಬಿಡುತ್ತಾರೆ ಎಂದು ಪ್ರೇರೇಪಿಸಿದರು. ತಕ್ಷಣ ಅವರು ತನ್ನ ತಪ್ಪನ್ನು ಅರಿತುಕೊಂಡು ದೇವರೇ, ನಿಮ್ಮ ಚಿತ್ತದಂತೆ ನನ್ನನ್ನು ನಡೆಸಿ ಎಂದು ತನ್ನನ್ನು ಸಂಪೂರ್ಣವಾಗಿ ಅವರ ಕೈಗಳಲ್ಲಿ ಒಪ್ಪಿಸಿಕೊಟ್ಟು ಪ್ರಾರ್ಥಿಸಿದರು. ಆಗ ಒಂದು ಸಹೋದರಿ ಅವರನ್ನು ಕರೆದು, ನಮ್ಮ ಮನೆಗೆ ಬಂದು ಊಟ ಮಾಡಿಕೊಂಡು ಪ್ರಾರ್ಥಿಸಿ ಹೋಗಿ ಎಂದು ಕರೆದರು. ಆ ಮನೆಗೆ ಹೋಗಿ, ಪ್ರಾರ್ಥಿಸಿ, ಊಟ ಮಾಡಿದ ನಂತರ, ಆ ಮನೆಯವರು ಅವರ ಕೈಯಲ್ಲಿ ಕಾಣಿಕೆ ನೀಡಿದರು. ಆ ಕಾಣಿಕೆಯೊಂದಿಗೆ, ಮರುದಿನದ ಸೇವೆಯು ಯಾವುದೇ ಅಡೆತಡೆಯಿಲ್ಲದೆ ನಡೆಯಿತು.
ಸತ್ಯವೇದದಲ್ಲಿ, ಯೆಶಾಯ 55:8,9 ರಲ್ಲಿ, ಯೆಹೋವನು ಹೀಗನ್ನುತ್ತಾನೆ - ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ" ಎಂದು ಕರ್ತನು ಹೇಳುತ್ತಾರೆ. ನಾವು ಕೂಡ ಅನೇಕ ಬಾರಿ ನಮ್ಮ ಶಿಕ್ಷಣ, ಸಾಮರ್ಥ್ಯ, ಸಂಪತ್ತು ಮತ್ತು ಸ್ಥಾನಮಾನದಂತಹ ಅನೇಕ ವಿಷಯಗಳಲ್ಲಿ ನಮ್ಮ ನಂಬಿಕೆಯನ್ನು ಇಡುತ್ತೇವೆ. ನಮ್ಮ ಸೃಷ್ಟಿಕರ್ತನನ್ನು ಮತ್ತು ಆತನ ಸೃಷ್ಟಿಯ ಉದ್ದೇಶವನ್ನು ನೆನಪಿಸಿಕೊಳ್ಳುವುದಿಲ್ಲ. ಹಲವು ಬಾರಿ, ನಮ್ಮ ಕಣ್ಣುಗಳು ಈ ಲೋಕದಲ್ಲಿ ನಮ್ಮ ಸುತ್ತಲಿನವರ ಮೇಲೆ ಇರುತ್ತವೆ. ಆದರೆ ಕೀರ್ತನೆಗಾರನು ಹೇಳುತ್ತಾರೆ, ಮನುಷ್ಯರಲ್ಲಿ ಭರವಸವಿಡುವದಕ್ಕಿಂತ ಯೆಹೋವನನ್ನು ಆಶ್ರಯಿಸುವದು ಒಳ್ಳೇದು ಎಂದು.
ಪ್ರಿಯರೇ, ನಾವು ನಮಗೆ ಕೊಟ್ಟಿರುವ ಕೆಲಸ ಅಥವಾ ಸೇವೆಯನ್ನು ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಉತ್ಸಾಹ, ನಿಷ್ಠೆ ಮತ್ತು ದೇವರ ಸಹಾಯದಿಂದ ಮಾಡುವಾಗ, ದೇವರು ನಮ್ಮನ್ನು ಅದ್ಭುತವಾಗಿ ಮುನ್ನಡೆಸುತ್ತಾರೆ. ನಾವು ನಮ್ಮ ಮಾರ್ಗವನ್ನು ದೇವರಿಗೆ ಒಪ್ಪಿಸಿ ಆತನಲ್ಲಿ ನಂಬಿಕೆ ಇಟ್ಟಾಗ, ಆತನು ನಮ್ಮ ಕಾರ್ಯವನ್ನು ಸಾಧ್ಯವಾಗಿಸುತ್ತಾರೆ. ಆದ್ದರಿಂದ, ನಾವು ಪೂರ್ಣ ಹೃದಯದಿಂದ ಆತನನ್ನೇ ದೃಷ್ಟಿಸಿ ನೋಡೋಣ. ಪ್ರೀತಿಯಿಂದ ತುಂಬಿ ಪ್ರತಿದಿನವು ಕ್ರಿಯೆಮಾಡೋಣ.
- N. ಜಸ್ಟಿನ್ ಬಾಲಾಜಿ
ಪ್ರಾರ್ಥನಾ ಅಂಶ:
ವಿಲೇಜ್ ಟಿವಿಯಲ್ಲಿ ವಿಬಿಎಸ್ ನೋಡುವ ಮಕ್ಕಳು ಮತ್ತು ವಯಸ್ಕರ ಹೃದಯಗಳಲ್ಲಿ ಬದಲಾವಣೆ ಉಂಟಾಗುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482