By Village Missionary Movement
Thursday, 21-May-2026ಧೈನಂದಿನ ಧ್ಯಾನ(Kannada) – 21.05.2026
ಮನತಿರುಗಿರಿ
"ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪವಾಗಿದೆ..." - ಮತ್ತಾಯ 3:2
ಪರ್ವತಗಳಲ್ಲಿರುವ ಪ್ರಾಣಿಗಳು ಕೆಲವೊಮ್ಮೆ ತಮ್ಮ ಸ್ಥಳವನ್ನು ಬಿಟ್ಟು ಎತ್ತರದ ನೆಲಕ್ಕೆ ಧಾವಿಸುತ್ತವೆ. ಇದು ಭೂಕಂಪದ ಅಪಾಯದ ಬಗ್ಗೆ ಎಚ್ಚರಿಸುತ್ತದೆ. ಹಾಗೆ ಮಾಡುವುದರಿಂದ, ಅವು ತಮ್ಮನ್ನು ಮತ್ತು ತಮ್ಮ ಜಾತಿಗಳನ್ನು ರಕ್ಷಿಸಿಕೊಳ್ಳುತ್ತವೆ. ಈ ಕ್ರಿಯೆಯು ಅವುಗಳ ಎಚ್ಚರಿಕೆಯ ನಡವಳಿಕೆಯನ್ನು ತೋರಿಸುವುದಲ್ಲದೆ, ತಕ್ಷಣವೇ ಕಾರ್ಯನಿರ್ವಹಿಸುವ ಅವುಗಳ ಬುದ್ಧಿವಂತಿಕೆಯನ್ನು ಸಹ ಬಹಿರಂಗಪಡಿಸುತ್ತದೆ. ಮರಗಳಲ್ಲಿ ವಾಸಿಸುವ ಪಕ್ಷಿಗಳು ಮತ್ತು ಅಳಿಲುಗಳು ಸಹ, ಶತ್ರುವನ್ನು ಕಂಡರೆ, ಒಂದು ಭಯದಿಂದ ಕೂಡಿದ ನಡಗುವ ಶಬ್ಧದೊಂದಿಗೆ ಎಚ್ಚರಿಕೆಯನ್ನು ನೀಡುತ್ತವೆ. ಈ ಶಬ್ದವನ್ನು ಕೇಳಿದ ಇತರ ಪಕ್ಷಿಗಳು ಸಹ ತಮ್ಮ ತೀಕ್ಷ್ಣವಾದ ಕಣ್ಣುಗಳಿಂದ ಶತ್ರುವನ್ನು ಗುರುತಿಸುತ್ತವೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಐದು ಇಂದ್ರಿಯಗಳನ್ನು ಹೊಂದಿರುವ ಪ್ರಾಣಿಗಳು ಸಹ ಈ ಎಚ್ಚರಿಕೆಗಳನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ.
ಸತ್ಯವೇದದಲ್ಲಿ, ಮಾರ್ಕ 3 ರಲ್ಲಿ, ಸ್ನಾನಿಕನಾದ ಯೋಹಾನನು ಯೂದಾಯದ ಅರಣ್ಯದಲ್ಲಿ, “ಮಾನಸಾಂತರ ಪಡಿರಿ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಬೋಧಿಸುತ್ತಾ ಬಂದರು. ಅನೇಕರು ಅವರಿಂದ ದೀಕ್ಷಾಸ್ನಾನ ಪಡೆಯಲು ಬರುವುದನ್ನು ಅವರು ನೋಡಿದಾಗ, “ಓ ಸರ್ಪ ಸಂತತಿಯವರೇ, ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು? ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲಗಳನ್ನು ಫಲಿಸಿರಿ ಎಂದರು. ಮನುಷ್ಯರಾಗಿರುವ ನಾವು, ಬೈಬಲ್ನ ಎಚ್ಚರಿಕೆಗಳನ್ನು ತಿಳಿದ ನಂತರ, ನಮ್ಮ ಪರಿಸ್ಥಿತಿಯನ್ನು ಬಿಟ್ಟು ಮನತಿರುಗಲು ಸಿದ್ಧರಿದ್ದೇವೆಯೇ? ಅಥವಾ ನಾವು ಬೇರೆ ಹಾದಿಯಲ್ಲಿ ಅಜಾಗರೂಕತೆಯಿಂದ ನಡೆಯುತ್ತಿದ್ದೇವೆಯೇ? ಇದು ನಮ್ಮನ್ನು ನಾವು ಪರೀಕ್ಷಿಸಿಕೊಳ್ಳುವ ಸಮಯ.
ಪ್ರಿಯ ದೇವರ ಮಕ್ಕಳೇ, ಜ್ಞಾನೋಕ್ತಿ 29:1 ರಲ್ಲಿ, "ಅನೇಕ ಸಲ ಗದರಿಸಲ್ಪಟ್ಟರೂ ಬಗ್ಗದಕುತ್ತಿಗೆಯವನು ಏಳದ ಹಾಗೆ ಫಕ್ಕನೆ ಮುರಿದು ಬೀಳುವನು"ಎಂಬ ಎಚ್ಚರಿಕೆಯ ವಚನವನ್ನು ಕಾಣುತ್ತೇವೆ. ನಮ್ಮ ಕ್ರಿಯೆಗಳು ಹೇಗಿವೆ? ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳೋಣ, ನಮ್ಮನ್ನು ನಾವು ಸರಿಮಾಡಿಕೊಳ್ಳೋಣ ಮತ್ತು ಯೇಸುವಿನ ಬರೋಣವನ್ನು ಸಂಧಿಸಿ ಆತನೊಂದಿಗೆ ಹೋಗಲು ನಮ್ಮನ್ನು ಅರ್ಹರಾಗಿಸಿ ಸಿದ್ಧವಾಗೋಣ.
- Mrs. ಎಮೀಮಾ ಸೌಂದರರಾಜನ್
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482