By Village Missionary Movement
Tuesday, 19-May-2026ಧೈನಂದಿನ ಧ್ಯಾನ(Kannada) – 19.05.2026
ಕಾಯುವಿಕೆ
“ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು; ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು" - ಜ್ಞಾನೋಕ್ತಿ 13:12
ಬೆಥೆಸ್ಡಾ ಕೊಳವು ವಿಭಿನ್ನವಾಗಿರುತ್ತದೆ. ಕೆಲವೊಮ್ಮೆ ಒಬ್ಬ ದೇವದೂತನು ಇಳಿದು ಕೊಳದಲ್ಲಿನ ನೀರನ್ನು ಕಲಕುತ್ತಿದ್ದನು. ನಂತರ ಮೊದಲು ಕೆಳಗಿಳಿದವನು ಯಾವುದೇ ಕಾಯಿಲೆಯನ್ನು ಹೊಂದಿದ್ದರೂ ಗುಣಮುಖನಾಗುತ್ತಿದ್ದನು. ಆದ್ದರಿಂದ ಕೊಳದ ಸುತ್ತಲಿನ ಐದು ಮಂಟಪಗಳಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಜನರು ಇರುತ್ತಿದ್ದರು. ಮೂವತ್ತೆಂಟು ವರ್ಷಗಳಿಂದ ಅಸ್ವಸ್ಥನಾಗಿದ್ದ ಒಬ್ಬ ಮನುಷ್ಯನಿದ್ದನು. ಯೇಸು ಅಲ್ಲಿಗೆ ಹೋಗಿ ಅವನನ್ನು ಗುಣಪಡಿಸಿದರು.
ಆ ಮನುಷ್ಯನನ್ನು ಮಾತ್ರ ಹುಡುಕಿ ಹೋಗಲು ಕಾರಣವೆಂದರೆ ಅವರು ಮೂವತ್ತೆಂಟು ವರ್ಷಗಳಿಂದ ಅದೇ ಸ್ಥಳದಲ್ಲಿ ನಂಬಿಕೆಯಿಂದ ಕಾಯುತ್ತಿದ್ದರು. ಯೇಸು ಅವರನ್ನು ಗುಣಮುಖನಾಗಲು ಬಯಸುತ್ತೀಯಾ ಎಂದು ಕೇಳಿದಾಗ, ಅವರು ತನ್ನ ನಂಬಿಕೆಯನ್ನು ಅರಿಕೆ ಮಾಡುತ್ತಾರೆ. ಕೊಳದಲ್ಲಿನ ನೀರನ್ನು ಕಲಕುವಾಗ, ಅಲ್ಲಿಗೆ ಕರೆದುಕೊಂಡು ಹೋಗಿ ಬಿಡಲು ಒಬ್ಬರೂ ಇಲ್ಲ ಎಂದು ಹೇಳುತ್ತಾರೆ. ಹಾಗೆ ಕರೆದೊಯ್ದರೆ ಗುಣಮುಖನಾಗುತ್ತೇನೆ ಎಂದು ನಂಬುತ್ತಿದ್ದಾರೆ. ಆ ನಂಬಿಕೆ ಮತ್ತು ಕಾಯುವಿಕೆಯನ್ನು ನೋಡಿ, ಯೇಸು ಸ್ವತಃ ಅವರನ್ನು ಹುಡುಕಿಕೊಂಡು ಹೋದರು. ನನಗೆ ಯಾವುದೇ ಆರೋಗ್ಯ ಸಿಗುವುದಿಲ್ಲ, ನಾನು ಹೋಗಲು ಸಾಧ್ಯವಿಲ್ಲ, ನಾನು ಇಲ್ಲಿದರೂ ಯಾವ ಪ್ರಯೋಜನವೂ ಇಲ್ಲ ಎಂದು ಭಾವಿಸದೆ ಕಾಯುತ್ತಿದ್ದರು. ಆದ್ದರಿಂದ, ಮನುಷ್ಯರು ಸಹಾಯ ಮಾಡದಿದ್ದರೂ, ದೇವರು ಅವರನ್ನು ಹುಡುಕಿಕೊಂಡು ಹೋಗಿ ಅವರಿಗೆ ಸ್ವಸ್ಥತೆಯನ್ನು ಕೊಟ್ಟರು.
ಪ್ರಿಯರೇ, ನೀವು ಸಹ ಪ್ರಾರ್ಥನೆಯನ್ನು ಕೇಳುವವರ ಬಳಿ ಪ್ರಾರ್ಥಿಸಿದರೂ ಫಲವೇ ಇಲ್ಲ ಎಂದು ಭಾವಿಸುತ್ತಿದ್ದೀರಾ? ಮೂವತ್ತೆಂಟು ವರ್ಷಗಳ ಕಾಲ ಕಾಯುತ್ತಿದ್ದವ ಬಗ್ಗೆ ನೆನಪಿಸಿಕೊಳ್ಳಿರಿ. ಆದ್ದರಿಂದ, ನಿಮ್ಮ ಪ್ರಾರ್ಥನೆಗೆ ಉತ್ತರ ಸಿಗುವವರೆಗೂ ನಂಬಿಕೆಯಿಂದ ಪ್ರಾರ್ಥಿಸಿರಿ. ದೇವರು ಸ್ವತಃ ಬಂದು ನಿಮಗಾಗಿ ಅದ್ಬುತ ಮಾಡುತ್ತಾರೆ. ನಂಬಿಕೆಯಿಂದ ಕಾಯಿರಿ. ಅದ್ಬುತವನ್ನು ಹೊಂದಿಕೊಳ್ಳಿರಿ.
- Sis.ಲತಾ
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482