By Village Missionary Movement
Saturday, 09-May-2026ಧೈನಂದಿನ ಧ್ಯಾನ(Kannada) – 09.05.2026
ಕರ್ತನಿಗೆ ಸಾಕ್ಷಿಗಳಾಗಿರೋಣ
"ನನ್ನನ್ನು ಬಲಪಡಿಸುವಾತನಲ್ಲಿದ್ದು ಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ." - ಫಿಲಿಪ್ಪಿ 4:13
ಒಮ್ಮೆ, ದಕ್ಷಿಣ ಕೊರಿಯಾದಲ್ಲಿ 144 ನಿಷೇಧ ಕಾಯ್ದೆಯನ್ನು ಹೊರಡಿಸಿದಾಗ, ಜನರು ಒಟ್ಟುಗೂಡಲು ಬಹಳ ನಿರ್ಣಾಯಕ ಪರಿಸ್ಥಿತಿ ಇತ್ತು. ಕೆಲವರು ಅಲ್ಲಿನ ಅಧಿಕಾರಿಯ ಬಳಿಗೆ ಬಂದು, "ಅಯ್ಯಾ, ದಯವಿಟ್ಟು ನಮ್ಮ ಸಭೆಗೆ ಹೋಗಿ ದೇವರನ್ನು ಆರಾಧಿಸಲು ಮಾತ್ರ ನಮಗೆ ಸ್ವಲ್ಪ ಅವಕಾಶ ನೀಡಿ" ಎಂದು ಬೇಡಿಕೊಂಡರು. ಅಧಿಕಾರಿ ಸ್ವಲ್ಪ ಹೊತ್ತು ಯೋಚಿಸಿ, "ಸರಿ, ನೀವು ಆರಾಧಿಸಬಹುದು, ಆದರೆ ಒಂದು ಷರತ್ತಿನ ಮೇಲೆ. ಸದ್ದಿಲ್ಲದೆ ಆರಾಧಿಸಿ" ಎಂದು ಹೇಳಿದರು. ಇದನ್ನು ಕೇಳಿ, ಜನರು ತುಂಬಾ ಸಂತೋಷಪಟ್ಟರು. ನಂತರ, ಕೆಲವು ಜನರು ಒಟ್ಟುಗೂಡಿ ಸರ್ವಶಕ್ತನಾದ ದೇವರನ್ನು ಆರಾಧಿಸಲು ಪ್ರಾರಂಭಿಸಿದರು, ಕೈ ಚಪ್ಪಾಳೆ ತಟ್ಟಿದರು. ಆ ಗದ್ದಲವನ್ನು ಕೇಳಿದವರು, ದೇವಾಲಯದ ಸುತ್ತಲೂ ಬೆಂಕಿ ಹಚ್ಚಿದರು. ಆದರೆ ನಡೆದದ್ದೇನು ಗೊತ್ತಾ? ಯಾವುದೇ ಆತಂಕವಿಲ್ಲದೆ, ಅವರು ದೇವರನ್ನು ಇನ್ನಷ್ಟು ಜೋರಾಗಿ ಆರಾಧಿಸಿದರು. ಸ್ವಲ್ಪ ಸಮಯದಲ್ಲಿ, ಅವರೆಲ್ಲರೂ ದೇವರಿಗೆ ಸಾಕ್ಷಿಗಳಾಗಿ ಸತ್ತರು. ಇಂದಿಗೂ, 'ದಕ್ಷಿಣ ಕೊರಿಯಾ' ಅನೇಕ ಕ್ರೈಸ್ತರು ವಾಸಿಸುವ ದೇಶವಾಗಿಯೇ ಇದೆ.
ಸತ್ಯವೇದದಲ್ಲಿ ದೇವರನ್ನು ಆರಾಧಿಸಬಾರದು ಎಂಬ ಷರತ್ತು ಇದ್ದರೂ, ಶದ್ರಕ್, ಮೇಶಕ್ ಮತ್ತು ಅಬೇದ್ನೆಗೋ ಎಂಬ ಮೂವರು ಯೌವನಸ್ಥರನ್ನು ಉರಿಯುತ್ತಿರುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಎಸೆಯಲಾಯಿತು. ಆದರೆ ಅವರು ದೇವರಲ್ಲಿ ನಂಬಿಕೆ ಮತ್ತು ಭರವಸೆಯನ್ನು ಇಟ್ಟದ್ದರಿಂದ, ಕಟ್ಟಲ್ಪಡದ ನಾಲ್ವರು ಬೆಂಕಿಯ ಮಧ್ಯದಲ್ಲಿ ನಡೆಯುತ್ತಿದ್ದರು. ನಾಲ್ಕನೆಯವನ ರೂಪವು ದೇವ ಕುಮಾರನ ಹಾಗಿತ್ತು. ಅವರ ಶರೀರದ ಮೇಲೆ ಬೆಂಕಿಯ ಅಧಿಕಾರವು ಇಲ್ಲದಿ ರುವದನ್ನೂ ಅವರ ತಲೇಕೂದಲುಗಳಲ್ಲಿ ಒಂದಾದರೂ ಸುಡದಿರುವದನ್ನೂ ಅವರ ಅಂಗಿಗಳು ಬದಲಾಗದಿರುವದನ್ನೂ ಬೆಂಕಿಯ ವಾಸನೆಯೂ ಸಹ ಅವರನ್ನು ಮುಟ್ಟದೇ ಇರುವುದನ್ನು ಕಂಡರು. ಆಮೇಲೆ ಅರಸನಾದ ನೆಬೂಕದ್ನೆಚ್ಚರನು, ದೇವರು ತನ್ನ ದೂತನನ್ನು ಕಳುಹಿಸಿ ತನ್ನ ಸೇವಕರುಗಳನ್ನು ರಕ್ಷಿಸಿದ್ದಾರೆ ಎಂದು ಸಾಕ್ಷಿ ಹೇಳಿದರು. ದೇವರು ಅವರನ್ನು ಬೆಂಕಿಯಿಂದ ರಕ್ಷಿಸಿದರು. ಬೆಂಕಿಯ ಜ್ವಾಲೆಯು ಶದ್ರಕ್ ಮೇಷಕ್ ಅಬೇದ್ನೆಗೋ ಎಂಬವರನ್ನು ಎತ್ತಿಹಾಕಿದ ಆ ಮನುಷ್ಯರನ್ನೇ ಸಂಹರಿಸಿತು. ಆದರೆ ಬೆಂಕಿಯೊಳಗೆ ಎಸೆಯಲ್ಪಟ್ಟ ವ್ಯಕ್ತಿಗಳು ರಕ್ಷಿಸಲ್ಪಟ್ಟರು.
ಇದನ್ನೆಲ್ಲಾ ಓದಿದ ನಂತರ ನಾವು ಯೇಸುವಿನ ಬಗ್ಗೆ ಇತರರಿಗೆ ಏಕೆ ಹೇಳಲು ಸಾಧ್ಯವಿಲ್ಲ? ಇತ್ತೀಚೆಗೆ, ಭಾರತೀಯ ತಂಡ ಗೆದ್ದಾಗ ಮೈದಾನದಲ್ಲಿದ್ದ ಸಾವಿರಾರು ಜನರ ಮುಂದೆ ಭಾರತೀಯ ಕ್ರಿಕೆಟಿಗ ಸಂಜು ಸ್ಯಾಮ್ಸನ್ ಯೇಸುವಿಗೆ ಧನ್ಯವಾದ ಹೇಳಿದರು. ಆ ಸಮಯದಲ್ಲಿ, ಆನ್ಲೈನ್ನಲ್ಲಿ ವೀಕ್ಷಿಸುತ್ತಿದ್ದ ಜನರಿಗೆ 'ಯೇಸುವಿಗೆ ಮನುಷ್ಯನನ್ನು ಗೆಲ್ಲಿಸಲು ಸಾಧ್ಯ' ಎಂಬುದನ್ನು ಅದರ ಮೂಲಕ ಸಾಕ್ಷಿಯಾಗಿ ತಿಳಿಸಿದರು. ಆದರೆ ನಾವು ಯೇಸುವಿನ ಪ್ರೀತಿಯ ಬಗ್ಗೆ ಇತರರಿಗೆ ಯಾವಾಗ ಹೇಳಲಿದ್ದೇವೆ? ಈಗಲೇ ಸಿದ್ಧರಾಗಬಹುದಲ್ಲಾ.
- Mrs. ಭುವಿತಾ ಎಬಿನೆಜರ್
ಪ್ರಾರ್ಥನಾ ಅಂಶ:
ವಿಬಿಎಸ್ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿರುವವರೆಲ್ಲರೂ, ಸೇವೆ ಮಾಡುವಂತೆ ದೇವರು ಅವರನ್ನು ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482