Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 24.04.2026
Share:

By Village Missionary Movement

Friday, 24-Apr-2026

ಧೈನಂದಿನ ಧ್ಯಾನ(Kannada) – 24.04.2026

 

ತಾಳ್ಮೆಯಿಂದ ಕಾದಿರು

 

"ನಾನು ಯೆಹೋವನಿಗೋಸ್ಕರ ನಿರೀಕ್ಷಿಸಿಯೇ ನಿರೀಕ್ಷಿಸಿದೆನು; ಆತನು ನನ್ನ ಮೊರೆಗೆ ಕಿವಿಗೊಟ್ಟು ಲಕ್ಷಿಸಿದನು." - ಕೀರ್ತನೆ 40:1

 

ವಿಜ್ಞಾನ, ಅರ್ಥಶಾಸ್ತ್ರ ಮತ್ತು ರಾಜಕೀಯದಂತಹ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿಯನ್ನು ನಾವು ನೋಡಿದಾಗ, ನಾವು ಆಶ್ಚರ್ಯಚಕಿತರಾಗುತ್ತೇವೆ. ಆದರೆ ಎಲ್ಲಾ ಆವಿಷ್ಕಾರಗಳ ಹಿಂದೆ, ಅನೇಕ ತ್ಯಾಗಗಳಿವೆ.

 

ಜಾರ್ಜ್ ಸ್ಟೀಫನ್ಸನ್ ಎಂದ ಕೂಡಲೇ ನಮ್ಮ ನೆನಪಿಗೆ ಬರುವುದು ಅವರು ಒಬ್ಬ ಮಹಾನ್ ವಿಜ್ಞಾನಿ ಮತ್ತು (steam locomotive) ಹೊಗೆ ಬಂಡಿಯನ್ನು ಕಂಡುಹಿಡಿದವರು ಎಂಬುದೇ. ಆದರೆ ಅವರ ಸಂಶೋಧನೆಗಳ ಹಿಂದೆ, ಅವರ ಕಣ್ಣೀರಿನ ಜೀವನದ ಅನೇಕ ಕಥೆಗಳಿವೆ. ಅವರು ಮಹಾನ್ ಬುದ್ಧಿವಂತಿಕೆ ಮತ್ತು ಸಾಮರ್ಥ್ಯದ ವ್ಯಕ್ತಿಯಾಗಿದ್ದರೂ, ಅವರು ತಮ್ಮ ಬಡತನದ ಜೀವನವನ್ನು ಬಹಳ ತಾಳ್ಮೆಯಿಂದ ಸಹಿಸಿಕೊಂಡರು, ದೇವರಲ್ಲಿ ನಂಬಿಕೆಯಿಂದ ಕಾದಿದ್ದು ಉನ್ನತಿಯನ್ನು ಪಡೆದರು.

 

ಶಾಲೆಗೆ ಹೋಗಲು ಸಾಧ್ಯವಾಗದೆ, ಅವರು ಹಗಲಿರುಳು ಹಸುಗಳನ್ನು ಮೇಯಿಸುತ್ತಿದ್ದರು ಮತ್ತು ರಾತ್ರಿಯಲ್ಲಿ ಶಾಲೆಗೆ ಹೋಗುತ್ತಿದ್ದರು. ವೈಜ್ಞಾನಿಕ ಉಪಕರಣಗಳಲ್ಲಿನ ತಂತ್ರಜ್ಞಾನಗಳನ್ನು ಅನ್ವೇಷಿಸುವಲ್ಲಿ ಅವರು ತುಂಬಾ ಆಸಕ್ತಿ ಹೊಂದಿದ್ದರು ಮತ್ತು ಅದಕ್ಕಾಗಿ ಪ್ರಯತ್ನಗಳನ್ನು ಮಾಡಿದರು. ಅವರು ತಮ್ಮ ದೈನಂದಿನ ಅಗತ್ಯಗಳಿಗಾಗಿ ಶೂ ತಯಾರಕರಾಗಿ (cobbler) ಕೆಲಸ ಮಾಡಿದರು.

 

ತಮ್ಮ ಯೌವನದಲ್ಲಿ, ಅವರು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುತ್ತಿದ್ದರು. ಒಮ್ಮೆ, ಅನೇಕ ಜನರು ಮುರಿದ ಯಂತ್ರವನ್ನು ಸರಿಪಡಿಸಲು ಪ್ರಯತ್ನಿಸಿದರು, ಆದರೆ ಸಮಸ್ಯೆಯನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ಅತ್ಯಲ್ಪ ಎಂದು ಪರಿಗಣಿಸಲ್ಪಟ್ಟ ಸ್ಟೀಫನ್ಸನ್ ಅವರನ್ನು ಯಾರೂ ಆಹ್ವಾನಿಸದಿದ್ದರೂ, ಅವರು ಮುಂದೆ ಬಂದು ಯಂತ್ರದ ಸಮಸ್ಯೆಯನ್ನು ಸ್ವಂತ ಉಪಕ್ರಮದಿಂದ ಸರಿಪಡಿಸಿದರು. ಎಲ್ಲರೂ ಆಶ್ಚರ್ಯಚಕಿತರಾದರು. ಬಾಸ್ ಕೂಡ ಅವರನ್ನು ಹೊಗಳಿದರು ಮತ್ತು ಅವರಿಗೆ ದೊಡ್ಡ ಮೊತ್ತದ ಹಣವನ್ನು ಉಡುಗೊರೆಯಾಗಿ ನೀಡಿದರು. ಆ ಹಣದ ಮೂಲಕವಾಗಿಯೇ ಹೊಗೆಬಂಡಿಯನ್ನು ಕಂಡುಹಿಡಿದರು. ಅವರಂತೆ ಯಾರೂ ತಮ್ಮ ವಿದ್ಯಾರ್ಥಿ ಜೀವನದ ಕಷ್ಟಗಳನ್ನು ಅನುಭವಿಸಬಾರದು ಎಂದು ಅವರು ಅನೇಕ ಉಚಿತ ಪ್ರಯೋಗಾಲಯಗಳನ್ನು ಸ್ಥಾಪಿಸಿದರು.

 

ಬೈಬಲ್‌ನಲ್ಲಿಯೂ ಸಹ, ಅಬ್ರಹಾಮನು ತಾಳ್ಮೆಯಿಂದ ಕಾಯುತ್ತಿದ್ದರು ಮತ್ತು ವಾಗ್ದಾನ ಮಾಡಿದ ಸಂತತಿಯನ್ನು ಕಂಡರು. ಮೋಶೆಯು ಸಹ ಕರ್ತನ ವಾಕ್ಯವನ್ನು ಕೇಳಿ ಅನೇಕ ಸವಾಲುಗಳನ್ನು ಜಯಿಸಿ ತಾಳ್ಮೆಯಿಂದ ಇಸ್ರಾಯೇಲ್ಯರನ್ನು ಕಾನಾನ್‌ಗೆ ಕರೆದೊಯ್ದರು. ಯಾಕೋಬ 5:11 ರಲ್ಲಿ “ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ! ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ" ಎಂದು ಓದುತ್ತೇವೆ. ನಾವು ಸಹ ತಾಳ್ಮೆಯಿಂದ ಕಾದಿದ್ದು ಕರ್ತನು ನಮಗೆ ವಾಗ್ದಾನ ಮಾಡಿದ್ದನ್ನು ಪಡೆಯೋಣ. ಆಮೆನ್. 

- ಶ್ರೀಮತಿ ಜಾಸ್ಮಿನ್ ಪಾಲ್ 

 

ಪ್ರಾರ್ಥನಾ ಟಿಪ್ಪಣಿ:-

ಬೈಬಲ್ ಪಡೆದಿರುವ ನಮ್ಮಲ್ಲಿ, ದಯವಿಟ್ಟು ಪ್ರತಿದಿನ ಅದನ್ನು ಉತ್ಸಾಹದಿಂದ ಓದಲು ಪ್ರಾರ್ಥಿಸಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al casibom giriş casibom casibom holiganbet vaycasino giriş casibom giriş casibom giriş vaycasino casibom casibom casibom giriş