By Village Missionary Movement
Thursday, 09-Apr-2026ಧೈನಂದಿನ ಧ್ಯಾನ(Kannada) – 09.04.2026
ಗೊಂದಲವು ಸ್ತುತಿಯಾಗಿ ಮಾರ್ಪಟ್ಟಿತು
“ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು." - ವಿಮೋ. 14:14
ಇಸ್ರಾಯೇಲ್ ಜನರು 400 ವರ್ಷಗಳಿಗೂ ಹೆಚ್ಚು ಕಾಲ ಐಗುಪ್ತದಲ್ಲಿ ಗುಲಾಮರಾಗಿದ್ದರು. ಐಗುಪ್ತ್ಯರು ಇಸ್ರಾಯೇಲ್ ಜನರ ಮೇಲೆ ಹಗಲು ರಾತ್ರಿ ಕಠಿಣ ಪರಿಶ್ರಮದಿಂದ ಅವರನ್ನು ಹಿಂಸಿಸಲು ಕಾರ್ಯಾಚರಣಾ ಅಧಿಕಾರಿಗಳನ್ನು ನೇಮಿಸಿದರು. ಅವರು ಇಸ್ರಾಯೇಲ್ ಜನರನ್ನು ಕಠಿಣವಾಗಿ ಕೆಲಸ ಮಾಡುವಂತೆ ಮಾಡಿದರು. ದೇವರು ಅವರನ್ನು ರಕ್ಷಿಸಲು ಮೋಶೆಯನ್ನು ಆರಿಸಿಕೊಂಡರು. ಆದರೆ ಫರೋಹನ ಹೃದಯವು ಕಠಿಣವಾಯಿತು. ಆದ್ದರಿಂದ, ದೇವರು 10 ಬಾಧೆಗಳ ಮೂಲಕ ಐಗುಪ್ತರ ದೃಷ್ಟಿಯಲ್ಲಿ ಅದ್ಭುತಗಳನ್ನು ಮಾಡಿದರು. ಆದ್ದರಿಂದ ಫರೋಹನು ಇಸ್ರಾಯೇಲ್ ಜನರನ್ನು ಬಿಡುಗಡೆ ಮಾಡಿದನು. ಇಸ್ರಾಯೇಲ್ ಜನರು ಗುಂಪುಗಳಾಗಿ ಐಗುಪ್ತ ದೇಶವನ್ನು ತೊರೆದರು.
ದಾರಿಯಲ್ಲಿ, ಕೆಂಪು ಸಮುದ್ರವು ಇಸ್ರಾಯೇಲ್ ಜನರ ಮುಂದೆ ಇತ್ತು. ಅವರ ಹಿಂದೆ, ಐಗುಪ್ತದ ಸೈನ್ಯವು ಅವರನ್ನು ಹಿಂಬಾಲಿಸುತ್ತಿತ್ತು. ಅವರು ಬಹಳ ಭಯಭೀತರಾಗಿ ಮೋಶೆಗೆ, “ಐಗುಪ್ತದಲ್ಲಿ ಸಮಾಧಿಗಳಿಲ್ಲದ ಕಾರಣ, ಅರಣ್ಯದಲ್ಲಿ ಸಾಯಲು ನಮ್ಮನ್ನು ಹೊರಗೆ ತಂದಿದ್ದೀಯಾ? ನೀನು ನಮಗೆ ಹೀಗೆ ಮಾಡಿದ್ದೇನು?” ಎಂದು ಕೇಳಿದರು. ಅರಣ್ಯದಲ್ಲಿ ಸಾಯುವುದಕ್ಕಿಂತ ನಾವು ಐಗುಪ್ತ್ಯರ ಸೇವೆ ಮಾಡುವುದೇ ಮೇಲು ಎಂದು ಅವರು ಅಳಲು ಪ್ರಾರಂಭಿಸಿದರು. ಆಗ ಮೋಶೆ ಜನರಿಗೆ ಭಯಪಡಬೇಡಿ, ಯೆಹೋವನು ಇಂದು ನಿಮಗೆ ತೋರಿಸುವ ರಕ್ಷಣೆಯನ್ನು ನೋಡಿರಿ ಎಂದು ಹೇಳಿದರು. ನೀವು ಇಂದು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದಿಗೂ ನೋಡುವುದಿಲ್ಲ: ಯೆಹೋವನೇ ನಿಮಗಾಗಿ ಯುದ್ಧಮಾಡುವನು; ನೀವಂತು ಸುಮ್ಮನೇ ಇರ್ರಿ ಎಂದು ಹೇಳಿದನು. ಮೋಶೆಯು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿದಾಗ ಸಮುದ್ರವು ಇಬ್ಭಾಗವಾಯಿತು. ಎಲ್ಲಾ ಜನರು ಕೆಂಪು ಸಮುದ್ರದ ಮಧ್ಯದಲ್ಲಿ ನಡೆದು ಹೋದರು. ಎಲ್ಲಾ ಜನರು ದಾಟಿದ ನಂತರ, ಐಗುಪ್ತದ ಸೈನ್ಯವು ಕೆಂಪು ಸಮುದ್ರದ ಮಧ್ಯದಲ್ಲಿ ಬಂದಿತು. ಕರ್ತನು ಕೆಂಪು ಸಮುದ್ರವನ್ನು ಮುಚ್ಚಿಬಿಟ್ಟರು, ಮತ್ತು ಐಗುಪ್ತದ ಸೈನ್ಯವು ಸಮುದ್ರದಲ್ಲಿ ಮುಳುಗಿತು; ಅವರಲ್ಲಿ ಒಬ್ಬನೂ ತಪ್ಪಿಸಿಕೊಳ್ಳಲಿಲ್ಲ. ಮತ್ತು ಆರೋನನ ಸಹೋದರಿ ಮಿರ್ಯಾಮಳು ತನ್ನ ಕೈಯಲ್ಲಿ ತಂಬೂರಿಯನ್ನು ತೆಗೆದುಕೊಂಡಳು. ಇಸ್ರಾಯೇಲ್ ಜನರಲ್ಲಿರುವ ಎಲ್ಲಾ ಮಹಿಳೆಯರು ಒಟ್ಟಾಗಿ ಸೇರಿ ದೇವರನ್ನು ಹಾಡಿ ಸ್ತುತಿಸಿದರು.
ನಮ್ಮ ಜೀವನದಲ್ಲಿ, ದೇವರು ನಮ್ಮನ್ನು ನಡೆಸುವ ಹಾದಿಯಲ್ಲಿ ನಾವು ನಡೆಯುವಾಗ, ನಮ್ಮ ದಾರಿಯಲ್ಲಿ ಬರುವ ಯಾವುದೇ ಪರೀಕ್ಷೆಗಳು, ಸಂಕಟಗಳು ಮತ್ತು ಸಮಸ್ಯೆಗಳನ್ನು ಆತನೇ ನೋಡಿಕೊಳ್ಳುತ್ತಾರೆ. ನಾವು ಸುಮ್ಮನಿದ್ದರೆ, ಕರ್ತನು ನಮಗಾಗಿ ಯುದ್ಧ ಮಾಡುತ್ತಾರೆ. ನಮ್ಮ ಮುಂದೆ ಹೋಗುವ ದೇವರ ಸಾನಿಧ್ಯವನ್ನು ನಾವು ನಂಬಿ ಮುಂದೆ ಸಾಗಿದರೆ ಸಾಕು. ಹಾಗೆ ಮಾಡುವಾಗ, ನಮ್ಮ ಹೃದಯದಲ್ಲಿರುವ ಎಲ್ಲಾ ಗೊಂದಲಗಳು ಸ್ತುತಿಯಾಗಿ ಬದಲಾಗುತ್ತವೆ.
- Bro. A. ಕೆವಿನ್ ಜಾಕೋಬ್
ಪ್ರಾರ್ಥನಾ ಅಂಶ:
ನಮ್ಮೊಂದಿಗೆ ಸೇರಿರುವ ಸಹ ಸೇವಕರನ್ನು ದೇವರು ಶಕ್ತಿಯುತವಾಗಿ ಉಪಯೋಗಿಸುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482