Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 21.03.2026
Share:

By Village Missionary Movement

Saturday, 21-Mar-2026

ಧೈನಂದಿನ ಧ್ಯಾನ(Kannada) – 21.03.2026

 

ಭೇಟಿ ಮಾಡುವ ಸಮಯ 

 

“...ನೀನು ಆದುಕೊಂಡವರ ಸುಖವನ್ನು ನಾನು ನೋಡಿ ನಿನ್ನ ಜನಾಂಗದ ಸಂತೋಷ ದೊಂದಿಗೆ ಸಂತೋಷಿಸಿ ನಿನ್ನ ಬಾಧ್ಯತೆಯ ಸಂಗಡ ಹೊಗಳಿಕೊಳ್ಳುವೆನು" - ಕೀರ್ತನೆ 106:5

 

ಯೌವನಸ್ತನಾಗಿ ಫುಟ್ಬಾಲ್ ಆಡುತ್ತಿದ್ದ ಬಿಲ್ಲಿ ಗ್ರಹಾಂರವರನ್ನು ಕರ್ತನು ಆಟದ ಮೈದಾನದಲ್ಲಿ ಭೇಟಿ ಮಾಡಿ ಸೇವೆಯ ಕರೆಯುವಿಕೆಯನ್ನು ನೀಡಿದರು. “ನನ್ನ ಮಗನೇ, ಕೇವಲ ನೀನು ಫುಟ್ಬಾಲ್ ಆಡುತ್ತಾ ನಿನ್ನ ಸಮಯವನ್ನು ವ್ಯರ್ಥ ಮಾಡುತ್ತೀಯಾ? ನಿನ್ನ ಕಣ್ಣುಗಳನ್ನು ಮೇಲಕ್ಕೆತ್ತಿ ನೋಡು. ಸುಗ್ಗಿಯು ಹೇರಳವಾಗಿದೆ, ಆದರೆ ಕೆಲಸಗಾರರು ಇಲ್ಲ. ನೀನು ನನ್ನ ಸುವಾರ್ತೆ ಸೇವೆಗೆ ಬರುತ್ತೀಯಾ?” ಎಂದು ಕರ್ತನು ಮಾತನಾಡಿದ ಮಾತು ಬಿಲ್ಲಿ ಗ್ರಹಾಂನ ಹೃದಯವನ್ನು ಮುರಿಯಿತು. ಅವರು ತನ್ನ ಜೀವನವನ್ನು ದೇವರ ಸೇವೆಗೆ ಅರ್ಪಿಸಿದರು. ಆ ಕರೆಯ ಶಬ್ದವು ಅವರನ್ನು ಫುಟ್ಬಾಲ್ ಆಟಗಾರನಿಂದ ವಿಶ್ವಪ್ರಸಿದ್ಧ ಸುವಾರ್ತಾಬೋಧಕನನ್ನಾಗಿ ಪರಿವರ್ತಿಸಿತು.

 

ಪರಿಶುದ್ಧ ಗ್ರಂಥದಲ್ಲಿ, ಅಪೊಸ್ತಲರ ಕೃತ್ಯಗಳು 9 ನೇ ಅಧ್ಯಾಯದಲ್ಲಿ, ದೇವರು ಇದ್ದಕ್ಕಿದ್ದಂತೆ ದಮಸ್ಕುವಿಗೆ ಹೋಗುವ ದಾರಿಯಲ್ಲಿ ನಡೆಯುತ್ತಿದ್ದ ಸೌಲನೆಂಬ ಯುವಕನನ್ನು ಭೇಟಿಯಾದರು. ಕರ್ತನ ಬೆಳಕು ಸೌಲನ ಮೇಲೆ ಹೊಳೆಯಿತು ಮತ್ತು ಅವನು ಕೆಳಗೆ ಬಿದ್ದನು. ಆ ಭೇಟಿಯು ಅವನ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಸೌಲನು ಪೌಲನಾದನು. ಅದರ ನಂತರ, ಅವರು ದೇವರಿಗಾಗಿ ತನ್ನ ಜೀವನವನ್ನೇ ಸುರಿದು ಬಿಟ್ಟರು. ಹೌದು, ಕರ್ತನು ನಮ್ಮನ್ನು ಭೇಟಿಯಾಗುವ ಸಮಯವು ಅದ್ಭುತ ಸಮಯ. ಆ ಭೇಟಿಯ ಮೂಲಕ ಆತನು ಅಪಾರ ಪ್ರಯೋಜನಗಳನ್ನು ಆಜ್ಞಾಪಿಸುತ್ತಾರೆ. ಆ ಭೇಟಿಯು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಪ್ರಸಂಗಿ 3:1-8 ರ ವಚನಗಳಲ್ಲಿ, ಸೊಲೊಮೋನನು ವಿವಿಧ ರೀತಿಯ ಸಮಯಗಳ ಬಗ್ಗೆ ಮಾತನಾಡುತ್ತಾರೆ. ಹೌದು, ಎಲ್ಲದಕ್ಕೂ ಒಂದು ಸಮಯವಿದೆ. ಕರ್ತನು ನಮ್ಮನ್ನು ಭೇಟಿಯಾಗುವ ಸಮಯವಿದೆ. ರಕ್ಷಿಸಲ್ಪಡುವ ಅಗತ್ಯವನ್ನು ಆತನು ನಮಗೆ ಅರಿತುಕೊಳ್ಳುವಂತೆ ಮಾಡುವ ಸಮಯವಿದೆ. ನಮ್ಮೊಂದಿಗೆ ಮಾತಾಡಿ ನಮ್ಮನ್ನು ಪುನರುಜ್ಜೀವನಗೊಳಿಸುವ ಸಮಯವಿದೆ. ಆತನು ನಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳುವ ಮತ್ತು ನಮ್ಮನ್ನು ಉನ್ನತೀಕರಿಸುವ ಸಮಯವೂ ಇದೆ. ನಾವು ನಮ್ಮ ಜೀವನವನ್ನು ದೇವರಿಗೆ ಒಪ್ಪಿಸಬೇಕಾದ, ಕಾರ್ಯನಿರ್ವಹಿಸಬೇಕಾದ ಮತ್ತು ನಮ್ಮ ಪಾಲನ್ನು ನೀಡಬೇಕಾದ ಸಮಯವಿದೆ. ದಿನಗಳು ಬಹಳ ಬೇಗನೆ ಕಳೆದುಹೋಗುತ್ತವೆ. ಮನಸ್ಸಿಗೆ ಬಂದ ಹಾಗೆ ಸಮಯದ ಮೌಲ್ಯವನ್ನು ತಿಳಿಯದೆ ಜೀವಿಸುತ್ತಿರುವ ಜನರ ಬಗ್ಗೆ ಯೇಸು ಕ್ರಿಸ್ತನು ಇಂದಿಗೂ ಪರಿತಪಿಸುವವರಾಗಿದ್ದಾರೆ. 

 

ಪ್ರೀತಿಯ ದೇವರ ಮಕ್ಕಳೇ, ಕರ್ತನು ನಿಮ್ಮನ್ನು ಭೇಟಿ ಮಾಡಿದ್ದಾರೆಯೇ? ನಿಮ್ಮ ಜೀವನ ಬದಲಾಗಿದೆಯೇ? ಹಾಗಾದರೆ ನೀವು ಖಂಡಿತವಾಗಿಯೂ ನಾಶವಾಗುತ್ತಿರುವ ಆತ್ಮಗಳ ರಕ್ಷಣೆಗಾಗಿ ಕೆಲಸ ಮಾಡಬೇಕು. ಒಂದೇ ಒಂದು ಆತ್ಮವೂ ರಕ್ಷಣೆ ಹೊಂದದೆ ಬರಿಗೈಯಲ್ಲಿ ನೀವು ಅವರನ್ನು ಭೇಟಿಯಾಗಲು ಸಾಧ್ಯವೇ? ನಿಮ್ಮ ಜೀವನದ ಅಮೂಲ್ಯ ಸಮಯವನ್ನು ಅವರಿಗೆ ನೀಡಿ, ನಿಮ್ಮ ಸಮಯವನ್ನು ಅವರಿಗಾಗಿ ಕಳೆಯಿರಿ. ನೀವು ಯೋಚಿಸುವುದಕ್ಕಿಂತ, ಪ್ರಾರ್ಥಿಸುವುದಕ್ಕಿಂತ ಹೆಚ್ಚಿನ ಸಾವಿರಾರು ಆತ್ಮಗಳೊಂದಿಗೆ ದೇವರು ನಿಮ್ಮನ್ನು ಆಶೀರ್ವದಿಸುತ್ತಾರೆ. ನಿಮ್ಮನ್ನು ಭೇಟಿ ಮಾಡಿದ ಯೇಸುವನ್ನು ನೀವು ಭೇಟಿಯಾದಾಗ ಹರ್ಷಿಸಿ ಉಲ್ಲಾಸಪಡುವಿರಿ. ಹಲ್ಲೆಲೂಯ.

- Mrs.ಜೆಬಕನಿ ಶೇಖರ್

 

ಪ್ರಾರ್ಥನಾ ಅಂಶ:

ದೊರ್ಕಳು ಹೊಲಿಗೆ ತರಬೇತಿ ಕೇಂದ್ರದ ಮೂಲಕ ಅನೇಕ ಮಹಿಳೆಯರು ಆಶೀರ್ವಾದ ಹೊಂದುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al