Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 16.03.2026
Share:

By Village Missionary Movement

Monday, 16-Mar-2026

ಧೈನಂದಿನ ಧ್ಯಾನ(Kannada) – 16.03.2026

 

ಫಲದಾಯಕ ಜೀವನ 

 

"ನೀವೆಲ್ಲರು ದೇವರ ವಿವಿಧ ಕೃಪೆಯ ವಿಷಯದಲ್ಲಿ ಒಳ್ಳೇ ಮನೆವಾರ್ತೆಯವರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಯಲ್ಲಿ ಉಪಯೋಗಿಸಲಿ" - 1 ಪೇತ್ರ 4:10

 

ಕ್ರಿಸ್ತನಿಗಾಗಿ ಬದುಕುವ ಜೀವನ ಎಂಬುದು ಪದಗಳಲ್ಲಿ ಅಲ್ಲ, ಸಮರ್ಪಣೆಯಲ್ಲಿ ವ್ಯಕ್ತವಾಗುತ್ತದೆ. ದೇವರು ಪ್ರತಿಯೊಬ್ಬ ನಂಬಿಕೆಯುಳ್ಳವರಿಗೂ ಮೂರು ಅಮೂಲ್ಯ ಉಡುಗೊರೆಗಳನ್ನು ನೀಡಿದ್ದಾರೆ: ಸಮಯ, ಪ್ರತಿಭೆ ಮತ್ತು ಸಂಪತ್ತು. ನಾವು ಈ ಮೂರನ್ನು ದೇವರ ಮಹಿಮೆಗಾಗಿ ಬಳಸಿದಾಗ, ನಮ್ಮ ಜೀವನವು ಫಲಪ್ರದವಾಗುತ್ತದೆ.

 

ಒಬ್ಬ ಬುದ್ಧಿವಂತ ರೈತನು ಉತ್ತಮ ಫಸಲನ್ನು ಕೊಯ್ಯಲು ಸಮಯ, ಉಪಕರಣ ಮತ್ತು ನೀರು ಈ ಮೂರನ್ನು ಕಳೆದುಕೊಳ್ಳುವುದಿಲ್ಲ. ಅದೇ ರೀತಿ, ನಂಬಿಕೆಯುಳ್ಳವನ ಜೀವನದಲ್ಲಿ, ಸಮಯವು ಬೀಜದಂತೆ, ಪ್ರತಿಭೆಯು ಸಾಧನದಂತೆ ಮತ್ತು ಸಂಪತ್ತು ಜೀವ ನೀಡುವ ನೀರಿನಂತೆ. ಈ ಮೂರು ಒಟ್ಟಿಗೆ ಸೇರಿದಾಗ ಮಾತ್ರವೇ ಆಧ್ಯಾತ್ಮಿಕ ಸುಗ್ಗಿಯು ಸಿಗುತ್ತದೆ.

 

ಸಮಯ ಎಂಬುದು ತಿರುಗಿ ಸಿಗದಂತಹ ದೇವರ ವರವಾಗಿದೆ. ಈ ಸಮಯವನ್ನು ಪ್ರಾರ್ಥನೆ, ಬೈಬಲ್ ಓದುವಿಕೆ ಮತ್ತು ಸೇವೆಗಾಗಿ ಮೀಸಲಿಡಬೇಕು. ಸಮಯವು ಬಿತ್ತಿದ ಬೀಜದಂತೆ (ಎಫೆಸ 5:16). ಪ್ರತಿಭೆ ಎಂಬುದು ದೇವರು ಕೊಟ್ಟ ತಲಾಂತುಗಳಾಗಿದೆ. ಹಾಡುವುದಾಗಲಿ, ಬೋಧನೆಯಾಗಲಿ, ಬರಹವಾಗಲಿ, ಆಡಳಿತವಾಗಲಿ ಅದನ್ನು ಕ್ರಿಸ್ತನಿಗಾಗಿ ಬಳಸಿದಾಗ, ಅದು ಅನೇಕರಿಗೆ ಆಶೀರ್ವಾದವಾಗುತ್ತದೆ. ಸಂಪತ್ತು ಕೇವಲ ಹಣವಲ್ಲ; ಅದು ದೇವರು ಕೊಟ್ಟ ಎಲ್ಲಾ ಸಂಪನ್ಮೂಲಗಳು! ಅವುಗಳನ್ನು ದೇವರ ರಾಜ್ಯಕ್ಕಾಗಿ ಹಂಚುವಾಗ, ಅದು ಬೀಜಕ್ಕೆ ನೀರು ಹಾಕಿದಂತೆ ಕಾರ್ಯನಿರ್ವಹಿಸುತ್ತದೆ. (ಮತ್ತಾಯ 6:21).

 

ಈ ಮೂರನ್ನು ಸರಿಯಾಗಿ ಉಪಯೋಗಿಸಿದ ಸತ್ಯವೇದದ ಮನುಷ್ಯರು ಅಪೊಸ್ತಲನಾದ ಪೌಲ ಮತ್ತು ನೆಹೆಮಿಯ! ಪೌಲನು ತನ್ನ ಎಲ್ಲಾ ಸಮಯ, ಜ್ಞಾನ ಮತ್ತು ಶ್ರಮವನ್ನು ಸುವಾರ್ತೆಗಾಗಿ ಸಮರ್ಪಿಸಿ "ಶ್ರೇಷ್ಠ ಹೋರಾಟವನ್ನು ಮಾಡಿದ್ದೇನೆ, ನನ್ನ ಓಟವನ್ನು ಕಡೆಗಾಣಿಸಿದ್ದೇನೆ" ಎಂಬ ಸಾಕ್ಷಿಯನ್ನು ಬಿಟ್ಟು ಹೋದರು (2 ತಿಮೊ. 4:7). ನೆಹೆಮಿಯ ಪ್ರಾರ್ಥನೆಯಲ್ಲಿ ಸಮಯವನ್ನು ಕಳೆದರು, ನಾಯಕತ್ವ ಕೌಶಲ್ಯಗಳೊಂದಿಗೆ ಕೆಲಸ ಮಾಡಿದರು, ಜನರಿಗೆ ತಮ್ಮ ಸಂಪನ್ಮೂಲಗಳನ್ನು ಹಂಚಿ, ಕುಸಿದ ಗೋಡೆಯನ್ನು ಕಡಿಮೆ ಸಮಯದಲ್ಲಿ ಪುನರ್ನಿರ್ಮಿಸಿದರು.(ನೆಹೆಮಿಯ 6:15).

 

ಸಮಯವನ್ನು ಬಿತ್ತಿದರೆ, ಪ್ರತಿಭೆಯಿಂದ ಕೆಲಸ ಮಾಡಿದರೆ, ಸಂಪತ್ತನ್ನು ಹಂಚಿಕೊಂಡರೆ - ಒಬ್ಬ ವಿಶ್ವಾಸಿಯ ಜೀವನ ಪೂರ್ಣ ಸುಗ್ಗಿಯಾಗಿ ಮಾರ್ಪಡುತ್ತದೆ. ಕ್ರಿಸ್ತನಿಗೆ ಸಮರ್ಪಿತವಾದ ಈ ಮೂರು ಉಡುಗೊರೆಗಳು ಭೂಮಿಯ ಮೇಲೆ ಫಲ ನೀಡುತ್ತವೆ ಮತ್ತು ನಿತ್ಯತ್ವದಲ್ಲಿ ಫಲವನ್ನು ಕೂಡಿಸುತ್ತದೆ. ಸಮಯವನ್ನು ಬಿತ್ತಿ, ಪ್ರತಿಭೆಯನ್ನು ಹೂಡಿಕೆ ಮಾಡಿದರೆ ಮತ್ತು ಸಂಪತ್ತನ್ನು ಹಂಚಿಕೊಂಡರೆ, ನಿಮ್ಮ ಜೀವನವು ಫಲಪ್ರದವಾಗುತ್ತದೆ.

- Mrs. ಬೆರ್ಲಿನ್ ಸೆಲ್ಲಾಬಾಯ್

 

ಪ್ರಾರ್ಥನಾ ಅಂಶ:

ಆಸ್ಪತ್ರೆಯಲ್ಲಿರುವವರು ಪರಿಹಾರಕನಾದ ಕ್ರಿಸ್ತನನ್ನು ಅರಿತುಕೊಳ್ಳಲು ಮತ್ತು ನಮ್ಮ ಸೇವಕರನ್ನು ದೇವರು ಉಪಯೋಗಿಸುವಂತೆ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al