By Village Missionary Movement
Monday, 02-Mar-2026ಧೈನಂದಿನ ಧ್ಯಾನ(Kannada) – 02.03.2026
ಸೇವಕರ ಕೊಡುಗೆ
"ವಿವೇಕಿಯ ತುಟಿಗಳಿಂದ ಜ್ಞಾನ;..." - ಜ್ಞಾನೋಕ್ತಿ 10:13
ಅನೇಕ ಯುದ್ಧಭೂಮಿಗಳನ್ನು ಕಂಡು ಗೆದ್ದ ಒಬ್ಬ ಮಹಾನ್ ಸೇನಾ ನಾಯಕ ಕುಷ್ಠರೋಗದಿಂದ ಬಳಲುತ್ತಿದ್ದರು. ಅವರ ದೇಹದಲ್ಲಿನ ಕುಷ್ಠವು ಬದಲಾಗಿ ಒಂದು ಮಾನಸಾಂತರ ಉಂಟಾಗಲು, ಅವರ ಬಳಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಕೊಡುಗೆಯು ಮುಖ್ಯ ಕಾರಣವಾಗಿತ್ತು. ಅದು ಬೇರೆ ಯಾರೂ ಅಲ್ಲ. ನಾಮಾನನ ದೈಹಿಕ ದೌರ್ಬಲ್ಯವು ಬದಲಾಗಿ ಮಾನಸಾಂತರ ಉಂಟಾಗಲು ಕಾರಣ ಗುಲಾಮಳಾಗಿ ಹೋಗಿದ್ದ ಒಂದು ಪುಟ್ಟ ಹುಡುಗಿ ಹೇಳಿದ ಮಾತು. ಆ ಪುಟ್ಟ ಹುಡುಗಿ ತನ್ನ ಕಷ್ಟಗಳು ಮತ್ತು ನೋವುಗಳ ಮಧ್ಯದಲ್ಲೂ ಒಳ್ಳೆಯದನ್ನು ಮಾಡಲು ಬಯಸಿದ್ದಳು.
ಅಷ್ಟೇ ಅಲ್ಲ, ಆಶೀರ್ವಾದದ ಹತ್ತಿರ ಬಂದಾಗ, ನಾಮಾನನು ಕೋಪದಿಂದ ಅದನ್ನು ಕಳೆದುಕೊಳ್ಳುವ ಪರಿಸ್ಥಿತಿ ಬಂತು. ಆಗ ಅವರೊಂದಿಗೆ ಬಂದ ಸೇವಕರು ಹತ್ತಿರ ಬಂದು ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲಾ. ಇದು ಸುಲಭವಾದ ಕಾರ್ಯ, ಮಾಡಬೇಕಲ್ಲವೇ ಎಂದು ಹೇಳಿದಾಗ ನಾಮಾನನ ಮನಸ್ಸು ಬದಲಾಗುತ್ತದೆ. ಚಿಕ್ಕ ಹುಡುಗಿ ಪ್ರವಾದಿಯನ್ನು ಪರಿಚಯಿಸುತ್ತಾಳೆ. ಇನ್ನೊಬ್ಬ ಸೇವಕನು ದೇವರ ಆಶೀರ್ವಾದವನ್ನು ಕಳೆದುಕೊಳ್ಳದೆ ಬಿಡುಗಡೆ ಹೊಂದುವಂತೆ ದಾರಿ ತೋರುತ್ತಾನೆ. ಇಬ್ಬರೂ ಬುದ್ಧಿವಂತಿಕೆಯಿಂದ ಮಾತನಾಡುತ್ತಾರೆ. ಸೈನ್ಯದ ನಾಯಕನಾದ ನಾಮಾನನು ತನ್ನ ದೇಹದಲ್ಲಿ ಗುಣಮುಖರಾಗುತ್ತಾರೆ ಮತ್ತು ಆತ್ಮದಲ್ಲಿ ಬಿಡುಗಡೆಯನ್ನೂ ಹೊಂದುತ್ತಾರೆ. ಹೌದು, ಇಸ್ರಾಯೇಲ್ ದೇಶದಲ್ಲಿರುವ ದೇವರ ಹೊರತಾಗಿ ಲೋಕದಲ್ಲಿ ಬೇರೆ ದೇವರು ಇರುವದೇ ಇಲ್ಲವೆಂಬದು ಈಗ ನನಗೆ ಗೊತ್ತಾಯಿತು ಎಂದು ಹೇಳುತ್ತಾರೆ. ಇಬ್ಬರು ಸೇವಕರ ಕೊಡುಗೆಯು ಸಿರಿಯಾ ದೇಶವು ಇಸ್ರಾಯೇಲ್ ದೇವರನ್ನು ತಿಳಿದುಕೊಳ್ಳುವಂತೆ ಮಾಡಿತು. ಅವರ ಹೆಸರುಗಳನ್ನು ಸತ್ಯವೇದದಲ್ಲಿ ಬರೆಯಲಾಗಿಲ್ಲ. ಆದರೂ ಅವರು ಕೊಡುಗೆ ನೀಡಿದ್ದಾರೆ. ದೇವರು ನಿಮ್ಮನ್ನು ತುಂಬಾ ಆಶೀರ್ವದಿಸಿದ್ದಾರೆ. ಅದಕ್ಕಾಗಿ ಕೃತಜ್ಞತೆಯನ್ನು ತೋರಿಸುವ ಒಂದು ಮಾರ್ಗವಾಗಿ ನೀವು ದೇವರಿಗೆ ನಿಮ್ಮ ಕೊಡುಗೆಯನ್ನು ನೀಡಬಹುದು. ನೀವು ನೀಡುವ ಕೊಡುಗೆ ಚಿಕ್ಕದಾಗಿದ್ದರೂ, ದೇವರು ನಿಮಗೆ ದೊಡ್ಡ ಪ್ರತಿಫಲಗಳನ್ನು ಕಾಣುವಂತೆ ಮಾಡುತ್ತಾರೆ.
ಪ್ರಿಯರೇ, ಆ ಪುಟ್ಟ ಹುಡುಗಿ ತನ್ನನ್ನು ಗುಲಾಮಳಾಗಿ ಕರೆತಂದ ಮತ್ತು ತನ್ನನ್ನು ಮಗುವೆಂದು ಪರಿಗಣಿಸದೆ ತನ್ನ ಸೇವೆ ಮಾಡುವಂತೆ ಮಾಡಿದ ಒಬ್ಬ ಯಜಮಾನನನ್ನು ಪ್ರೀತಿಸುತ್ತಿದ್ದಳು. ಹಾಗಾದರೆ ನಾವು ನಮ್ಮನ್ನು ಪರಾಮರ್ಶಿಸಿ, ಕಾಪಾಡಿ, ತಿಳುವಳಿಕೆ ಉಂಟಾಗುವಂತೆ ಮಾತಾಡಿ, ತನ್ನೊಟ್ಟಿಗೆ ಇಟ್ಟುಕೊಳ್ಳುವಂತೆ ಶಾಶ್ವತವಾದ ಒಂದು ಸ್ಥಳವನ್ನು ಸಿದ್ಧಪಡಿಸಲು, ಪಾಪಿಗಳಾದ ನಮಗಾಗಿ ತನ್ನನ್ನೇ ಕೊಟ್ಟ ಯೇಸು ಕ್ರಿಸ್ತನಿಗಾಗಿ ನಾವು ನಮ್ಮ ಕೊಡುಗೆಯನ್ನು ಹೇಗೆ ಕೊಡಬೇಕು ಎಂದು ಯೋಚಿಸುತ್ತಿದ್ದೀರಾ? ಅದನ್ನು ನೀವು ತಿಳಿದುಕೊಳ್ಳಲು ಈ ತಿಂಗಳು ಕೊಡುಗೆಗಳ ವಿಶೇಷ ಸಂಚಿಕೆಯನ್ನು ಪ್ರಕಟಿಸಿದ್ದೇವೆ. ಈ ತಿಂಗಳ ಕೊನೆಯಲ್ಲಿ ದೇವರಿಗೆ ನನ್ನ ಕೊಡುಗೆಯನ್ನು ಹೇಗೆ ಸಲ್ಲಿಬಹುದು ಎಂಬುದನ್ನು ನಿರ್ಧರಿಸಲು ಇದು ನಿಮಗೆ ಸಹಾಯ ಮಾಡುತ್ತದೆ. ಸತತವಾಗಿ ಓದಿರಿ, ನಿಮ್ಮ ಕೊಡುಗೆಯನ್ನು ನೀಡಿರಿ ಮತ್ತು ಪರಿಣಾಮವಾಗಿ ಅಮೂಲ್ಯವಾದ ಆತ್ಮಗಳನ್ನು ಸಂಪಾದಿಸಿರಿ. ದೇವರು ನಿಮ್ಮನ್ನು ಆಶೀರ್ವದಿಸಲಿ.
- Bro.ಡೇವಿಡ್ ಗಣೇಶನ್
ಪ್ರಾರ್ಥನಾ ಅಂಶ:
ಈ ತಿಂಗಳ ಸೇವೆಗಳಲ್ಲಿ ದೇವರ ಹಸ್ತವು ಜೊತೆ ಇರುವಂತೆ ಪ್ರಾರ್ಥಿಸಿರಿ.
*Whatsapp*
ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.
www.vmm.org.in
ಈಮೈಲ್:- info@vmm.org.in
Android App: https://play.google.com/store/apps/details?id=com.infobells.vmmorgin
ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001
ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482