Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 03.02.2026
Share:

By Village Missionary Movement

Tuesday, 03-Feb-2026

ಧೈನಂದಿನ ಧ್ಯಾನ(Kannada) – 03.02.2026

 

ಹಿಂಜರಿಯಬಾರದು

 

"ಒಳ್ಳೆಯದನ್ನು ಮಾಡಲು ಕಲಿತುಕೊಳ್ಳಿರಿ;..." - ಯೆಶಾಯ 1:17

 

ದೇವಾನ್ ಮತ್ತು ಅವನೊಂದಿಗೆ ಆರು ಮಕ್ಕಳು ಶಾಲೆಗೆ ಹೋಗುವಾಗ ರೈಲ್ವೆ ಹಳಿ ದಾಟಿ ಹೋಗುತ್ತಿದ್ದರು. ಒಂದು ದಿನ ದೇವಾನ್ ರೈಲ್ವೆ ಹಳಿಯಲ್ಲಿ ಕೆಲವು ಅಡ್ಡಪಟ್ಟಿಗಳು ತೆಗೆದಿರುವುದನ್ನು ನೋಡಿ ಅಪಘಾತ ಸಂಭವಿಸಬಹುದು ಎಂದು ಚಿಂತಿತನಾದನು. ಅವನು ಅದರ ಬಗ್ಗೆ ತನ್ನ ಸ್ನೇಹಿತರಿಗೆ ಹೇಳಿದನು, ಆದರೆ ಅವರು ಅದನ್ನು ಲೆಕ್ಕಿಸಲಿಲ್ಲ. ಶಾಲೆಗೆ ತಡವಾಗುತ್ತದೆ ಎಂದು ಭಾವಿಸಿದರು. ಒಂದು ವೇಳೆ ಇದರಿಂದ ಅಪಾಯ ಸಂಭವಿಸುತ್ತದಾ? ರೈಲು ನಿಲ್ಲಿಸಿದರೆ ನನ್ನನ್ನು ಬೈಯ್ಯುತ್ತಾರಾ? ಎಂಬ ಆಲೋಚನೆಗಳು ದೇವಾನ್ ತಲೆಯಲ್ಲಿ ಓಡುತ್ತಿರುವಾಗಲೇ, ಅವನಿಗೆ ರೈಲಿನ ವಿಷಲ್ ಶಬ್ದ ಕೇಳಿಸಿತು. ಅವನಿಗೆ ಯೋಚಿಸಲು ಸಮಯವಿರಲಿಲ್ಲ. ಅದೃಷ್ಟವಶಾತ್, ಆ ದಿನ ಅವನು ಕೆಂಪು ಶರ್ಟ್ ಧರಿಸಿದ್ದನು, ಆದ್ದರಿಂದ ಅವನು ತನ್ನ ಶರ್ಟ್ ತೆಗೆದು ರೈಲ್ವೆ ಹಳಿಯ ಉದ್ದಕ್ಕೂ ಓಡಿದನು, ಅದನ್ನು ಬೀಸಿದನು.

 

ಎಂಜಿನ್ ಚಾಲಕ, ಅದು ಕೆಂಪು ಧ್ವಜದಂತೆ ಕಾಣುತ್ತಿದೆ ಎಂದು ಭಾವಿಸಿ, ಬ್ರೇಕ್ ಹಾಕಿದನು. ರೈಲು ನಿಧಾನವಾಗಿ ನಿಂತಾಗ, ದೇವಾನ್ ಅವರನ್ನು ಕರೆದುಕೊಂಡು ಹೋಗಿ ಹಳಿಯಲ್ಲಿನ ಬಿರುಕನ್ನು ತೋರಿಸಿದನು. ಆಘಾತಕ್ಕೊಳಗಾದ ಚಾಲಕ ದೇವಾನ್ ಅನ್ನು ಅಪ್ಪಿಕೊಂಡು ಧನ್ಯವಾದ ಹೇಳಿದರು. ರೈಲ್ವೆ ಅಧಿಕಾರಿಗಳು ಬಂದು ಸ್ಥಳವನ್ನು ಪರಿಶೀಲಿಸಿದರು. ಅವರು ದೇವಾನ್ ಅನ್ನು ಏನು ಉಡುಗೊರೆ ಬೇಕು ಎಂದು ಕೇಳಿದರು. ಅದಕ್ಕೆ ಅವನು, "ಅಯ್ಯಾ, ನಾವು ಹತ್ತು ಕಿ.ಮೀ ನಡೆಯಬೇಕಾಗಿರುವುದರಿಂದ, ನಮ್ಮಲ್ಲಿ ಕೆಲವರು ಮಾತ್ರ ನಮ್ಮ ಹಳ್ಳಿಯಿಂದ ಶಾಲೆಗೆ ಹೋಗುತ್ತಾರೆ. ನಮ್ಮ ಗ್ರಾಮದಲ್ಲಿ ಒಂದು ನಿಲ್ದಾಣವಿದ್ದರೆ, ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಾರೆ. ದಯವಿಟ್ಟು ಅದಕ್ಕಾಗಿ ವ್ಯವಸ್ಥೆ ಮಾಡಿಕೊಡಿ ಎಂದು ಉತ್ತರಿಸಿದನು" ಅಧಿಕಾರಿಗಳು ಅದಕ್ಕಾಗಿ ವ್ಯವಸ್ಥೆಗಳನ್ನು ಸಹ ಮಾಡಿದರು.

 

ನನ್ನ ಪ್ರೀತಿಯ ದೇವರ ಮಕ್ಕಳೇ! ಸೇವಕರೇ! ನಾವು ಕೊನೆಯ ಕಾಲಕ್ಕೆ ಬಂದಿದ್ದೇವೆ. ಈ ವರ್ಷ ದೇವರಿಗೆ ನಮ್ಮ ಪಾಲನ್ನು ಬಹು ವಿಶೇಷವಾಗಿ ಕೊಟ್ಟು ನೆರವೇರಿಸಬೇಕು. ದೇವಾನ್ ಒಳ್ಳೆಯ ಕಾರ್ಯಗಳಿಂದ ಅನೇಕ ಜನರನ್ನು ರಕ್ಷಿಸಲ್ಪಟ್ಟನು. ಅಷ್ಟೇ ಅಲ್ಲ, ಅನೇಕ ಮಕ್ಕಳು ಶಿಕ್ಷಣವನ್ನು ಸಹ ಪಡೆದರು. ಅವನು ತನ್ನ ಕೆಂಪು ಅಂಗಿಯೊಂದಿಗೆ ರೈಲನ್ನು ನಿಲ್ಲಿಸಿ ಅನೇಕರ ಜೀವಗಳನ್ನು ಉಳಿಸಿದಂತೆ, ನಮ್ಮ ರಕ್ಷಣೆದೊಂದಿಗೆ ಅನೇಕರ ಆತ್ಮಗಳನ್ನು ರಕ್ಷಿಸಲು ನಾವು ಇಂದೇ ರಂಗದಲ್ಲಿ ಪ್ರವೇಶಿಸಬೇಕು. ರೈಲಿನಲ್ಲಿ ಬಿರುಕು ನೋಡಿ ಅದನ್ನು ನಿರ್ಲಕ್ಷಿಸಿದ ಇತರರಂತೆ ನಾವು ಇರಬಾರದು.

 

ಆ ದೇವಾನ್ ನಂತೆ, ಅನೇಕರನ್ನು ಪಾಪದ ಸಂಬಳವಾಗಿರುವ ಮರಣದಿಂದ ತಪ್ಪಿಸಲು ನಮ್ಮ ರಕ್ಷಣೆಯು ಸಹಾಯವಾಗಬೇಕು. ಈ ವರ್ಷ ದೇವರಿಗೆ ನಮ್ಮ ಪಾಲನ್ನು ಹೆಚ್ಚಾಗಿ ನೀಡಲು ಇಂದೇ ಒಪ್ಪಿಸೋಣ. ಅನೇಕರ ರಕ್ಷಣೆಗಾಗಿ ನಮ್ಮ ಪಾತ್ರ ಅಗತ್ಯವಿದೆ. ಮಾಡೋಣ, ಶ್ರಮಿಸೋಣ. ಕರ್ತನು ನಮ್ಮನ್ನು ಆಶೀರ್ವದಿಸಲಿ! ಆಮೆನ್. ಹಲ್ಲೆಲೂಯಾ!

- Rev. S.A. ಇಮ್ಮಾನುವೇಲ್ 

 

ಪ್ರಾರ್ಥನಾ ಅಂಶ:

ಸೇವಕರ ಪ್ರಯಾಣಗಳಲ್ಲಿ ದೇವರ ಸುರಕ್ಷತೆಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al