Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 20.01.2026
Share:

By Village Missionary Movement

Tuesday, 20-Jan-2026

ಧೈನಂದಿನ ಧ್ಯಾನ(Kannada) – 20.01.2026

 

ಪ್ರತಿಫಲವಿದೆ 

 

"ನಿಮ್ಮ ಕೈಗಳು ಜೋಲು ಬೀಳದಿರಲಿ. ನಿಮ್ಮ ಪ್ರಯತ್ನಕ್ಕೆ ಫಲತಪ್ಪದು ಎಂದು ಹೇಳಿದನು." - 2 ಪೂರ್ವಕಾಲ 15:7

 

ಈ ಲೋಕದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅನೇಕ ಜನರು ತಾವು ಮೋಸ ಹೋಗಿದ್ದೇವೆ ಎಂಬುದಾಗಿಯೂ, ತಮ್ಮ ಕೆಲಸಕ್ಕೆ ಯಾವುದೇ ಪ್ರತಿಫಲವೂ ಇಲ್ಲ ಎಂಬುದಾಗಿಯೂ ಭಾವಿಸುತ್ತಾರೆ. ಹಲವು ವರ್ಷಗಳು ಸೇವೆಮಾಡಿ ನಿವೃತ್ತಿ ಪಡೆದ ನಂತರ, ತಮ್ಮ ಜೀವನವೇ ವ್ಯರ್ಥವಾದಂತೆ ಭಾವಿಸುತ್ತಾರೆ. ಹಲವು ವರ್ಷಗಳು ಸೇವೆಮಾಡಿ ನಿವೃತ್ತಿ ಪಡೆದ ನಂತರ, ತಮಗೆ ವಾಸಿಸಲು ಮನೆಯೂ ಇಲ್ಲವಲ್ಲಾ ಎಂದು ಭಾವಿಸುವವರೂ ಇದ್ದಾರೆ. ನಾನು ಪ್ರಾಮಾಣಿಕವಾಗಿ ಮಾಡಿದ ಸೇವೆಗೆ ಪ್ರತಿಫಲ ಏನು ಎಂಬ ಪ್ರಶ್ನೆಯಿಂದ ಅವರು ಪೀಡಿಸಲ್ಪಡುತ್ತಾರೆ. ಜೋಸೆಫ್ ಗ್ರಾಟ್ಜಿಲ್ ಎಂಬವರು ಅಪಾರ್ಟ್ಮೆಂಟ್ ಕಟ್ಟಡದಲ್ಲಿ ಲಿಫ್ಟ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ 14,000 ಡಾಲರ್ ಮೌಲ್ಯದ ಮೂರು ಚೆಕ್‌ಗಳು ಕಾಣೆಯಾಗಿದ್ದವು. ಹಲವು ಗಂಟೆಗಳ ಹುಡುಕಾಟದ ನಂತರ, ಅವರು ಮೂರು ಚೆಕ್‌ಗಳನ್ನು ಕಂಡುಕೊಂಡರು ಮತ್ತು ಅವುಗಳನ್ನು ಸರಿಯಾದ ಮಾಲೀಕರಿಗೆ ಹಸ್ತಾಂತರಿಸಿದರು. ಈ ಒಳ್ಳೆಯ ಕಾರ್ಯಕ್ಕಾಗಿ ಅವರಿಗೆ ನೀಡಲಾದ ಪ್ರತಿಫಲ ಕೇವಲ 15 ಅಮೆರಿಕನ್ ಡಾಲರ್ ಮಾತ್ರವೇ. ಈ ಲೋಕದಲ್ಲಿ ಅನೇಕರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಗೆ ಪ್ರತಿಫಲ ಸಿಗುತ್ತಿಲ್ಲ ಎಂದು ಭಾವಿಸುತ್ತಿದ್ದಾರೆ.

 

ವಿಶ್ವಾಸಿಗಳು ಸಹ, "ದೇವರನ್ನು ಸೇವಿಸುವದು ವ್ಯರ್ಥ; ನಾವು ಆತನ ನಿಯಮವನ್ನು ಅನುಸರಿಸಿ ಸೇನಾಧೀಶ್ವರ ಯೆಹೋವನ ಮುಂದೆ ದುಃಖದಿಂದ ವಿಕಾರಿಗಳಾಗಿ ನಡೆದುಕೊಂಡದರಿಂದ ಆದ ಲಾಭವೇನು ಎಂದು ಯೋಚಿಸುತ್ತಾರೆ. (ಮಲಾಕಿಯ 3:14). ಏಕೆಂದರೆ ಈ ಲೋಕದಲ್ಲಿ ದೇವರ ಮಕ್ಕಳು ಬಳಲುತ್ತಿರುವಾಗ ದುಷ್ಟರು ಏಳಿಗೆ ಹೊಂದುತ್ತಿದ್ದಾರೆ ಮತ್ತು ಬೆಳೆಯುತ್ತಿದ್ದಾರೆ ಎಂದು ತೋರುತ್ತದೆ.

 

ದೇವರ ಮಕ್ಕಳೇ! ನಿಮ್ಮ ನಂಬಿಗಸ್ತಿಕೆ, ತಾಳ್ಮೆ, ಕಠಿಣ ಪರಿಶ್ರಮ ಮತ್ತು ನೀವು ಮಾಡುವ ಸೇವೆಯು ಈ ಲೋಕದಲ್ಲಿ ಗಮನಕ್ಕೆ ಬಾರದೆ ಹೋಗಬಹುದು ಮತ್ತು ಪ್ರತಿಫಲವಿಲ್ಲದೆ ಹೋಗಬಹುದು. ಆದರೆ ಅವು ಪರಲೋಕದಲ್ಲಿ ಮರೆಯಲ್ಪಡುವುದಿಲ್ಲ. "ಒಬ್ಬನು ಆ ಅಸ್ತಿವಾರದ ಮೇಲೆ ಕಟ್ಟಿದ್ದು ಉಳಿದರೆ ಅವನಿಗೆ ಸಂಬಳ ಬರುವದು" ಎಂಬುದು ದೇವರ ವಾಕ್ಯ (1 ಕೊರಿಂಥ 3:14). ಆದ್ದರಿಂದ ಧೈರ್ಯದಿಂದಿರಿ. ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲವಿದೆ. ನಮಗೆ ಪ್ರತಿಫಲ ದೇವರಿಂದ ಪಡೆಯುತ್ತೇವೆ. “ನೀತಿವಂತನು ಇನ್ನೂ ನೀತಿಯನ್ನು ಅನುಸರಿಸಲಿ; ಪವಿತ್ರನು ತನ್ನನ್ನು ಇನ್ನೂ ಪವಿತ್ರಮಾಡಿಕೊಳ್ಳಲಿ. "ಇಗೋ, ಬೇಗ ಬರುತ್ತೇನೆ; ನಾನು ಪ್ರತಿಯೊಬ್ಬನಿಗೆ ಅವನವನ ನಡತೆಯ ಪ್ರಕಾರ ಕೊಡತಕ್ಕ ಪ್ರತಿಫಲವು ನನ್ನ ಕೈಯಲ್ಲಿ ಅದೆ" ಎಂದು ದೇವರು ಹೇಳುತ್ತಾರೆ (ಪ್ರಕ. 22:11,12). ಆದ್ದರಿಂದ, ಮುಖ್ಯ ಕುರುಬನು ಕಾಣಿಸಿಕೊಳ್ಳುವಾಗ ಮಹಿಮೆಯಿಂದ ತುಂಬಿರುವ ನಿತ್ಯ ಕಿರೀಟಕ್ಕಾಗಿ ತಾಳ್ಮೆಯಿಂದ ಕಾದಿರೋಣ. 

- Mrs.ಕಲೈಚೆಲ್ವಿ ಪಾಲ್ ರಾಜ್

 

ಪ್ರಾರ್ಥನಾ ಅಂಶ:

ಒಡಿಶಾದಲ್ಲಿ ನಡೆಯುತ್ತಿರುವ ಸೇವೆಗಳಿಗಾಗಿ ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al