Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 19.11.2025
Share:

By Village Missionary Movement

Wednesday, 19-Nov-2025

ಧೈನಂದಿನ ಧ್ಯಾನ(Kannada) – 19.11.2025

 

ಪ್ರಶ್ನೆ ಕೇಳದ ವಿಧೇಯತೆ

 

"ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ..." - ಆದಿಕಾಂಡ 26:5

 

ಹಲವು ವರ್ಷಗಳ ಹಿಂದೆ, ಒಬ್ಬ ಶ್ರೀಮಂತನು ಕೆಲಸಕ್ಕಾಗಿ ಜಾಹೀರಾತು ನೀಡಿದ್ದರು. ಅನೇಕ ಯುವಕರು ಜಾಹೀರಾತನ್ನು ನೋಡಿ ಬಂದರು. ಎರಡು ದಿನಗಳವರೆಗೆ ಅವರು ಹೇಳಿದ ಕೆಲಸವನ್ನು ಮಾಡಿದರು. ಆದರೆ ಮರುದಿನದಿಂದ ಅವರು ಕೆಲಸಕ್ಕೆ ಬರಲಿಲ್ಲ. ಕೊನೆಗೆ, ಒಬ್ಬ ಯುವಕ ಕೆಲಸಕ್ಕೆ ಬಂದನು. ಶ್ರೀಮಂತನು ಅಲ್ಲಿ ಬಿದ್ದಿದ್ದ ಜಲ್ಲಿಕಲ್ಲುಗಳನ್ನು ತೆಗೆದುಕೊಂಡು ಸ್ವಲ್ಪ ದೂರ ಹೋಗಿ ಹಾಕಲು ಹೇಳಿದರು. ಮರುದಿನ, ಅದನ್ನು ಎತ್ತಿ ಮೊದಲಿದ್ದ ಸ್ಥಳಕ್ಕೆ ಪುನಃ ಹಾಕಲು ಹೇಳಿದರು. ಅವರು ಅವನಿಗೆ ಒಂದು ವಾರ ಪೂರ್ತಿ ಹೀಗೆ ಮಾಡಲು ಹೇಳಿದರು. ನಂತರ ಅವರು, "ಭಾನುವಾರ ನಿನಗೆ ರಜೆ ದಿನ" ಎಂದು ಹೇಳಿದರು. ಅವನಿಗೆ ಒಂದು ವಾರದ ಸಂಬಳವನ್ನೂ ಕೊಟ್ಟರು. ಸೋಮವಾರ ಯುವಕ ಬರುತ್ತಾನೆಂದು ಅವರು ನಿರೀಕ್ಷಿಸಿರಲಿಲ್ಲ. ಆದರೆ ಯುವಕ ಸೋಮವಾರ ಬೆಳಿಗ್ಗೆ ನಿಗದಿತ ಸಮಯಕ್ಕೆ ಕೆಲಸಕ್ಕೆ ಬಂದನು. ಯಾಕೆ? ಏನು? ಎಂದೆಲ್ಲಾ ಯಾವುದೇ ಪ್ರಶ್ನೆಗಳನ್ನು ಕೇಳದೆ, ಅವನು ಯಜಮಾನನ ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸಿದ್ದರಿಂದ ಆ ಯುವಕನಿಗೆ ಅವನ ಶಿಕ್ಷಣ ಮತ್ತು ಕೌಶಲ್ಯಗಳಿಗೆ ಸೂಕ್ತವಾದ ಉನ್ನತ ಮಟ್ಟದ ಕೆಲಸವನ್ನು ನೀಡಿ, ಪ್ರಮುಖ ಜವಾಬ್ದಾರಿಗಳನ್ನು ಕೊಟ್ಟು ರಹಸ್ಯಗಳನ್ನು ಕಾಪಾಡಲು ನೇಮಿಸಿದರು.

 

ಭೂಮಿಯ ಮೇಲೆ ಪಾಪ ಹೆಚ್ಚಾದಂತೆ, ದೇವರು ಲೋಕವನ್ನು ನಾಶಮಾಡಲು ದೃಢನಿಶ್ಚಯ ಮಾಡಿ ದೇವರ ಮನುಷ್ಯನಾದ ನೋಹನೊಂದಿಗೆ ಮಾತನಾಡಿದರು. ನಿರಂತರ ಮಳೆ ಬೀಳಲಿದೆ, ಆದ್ದರಿಂದ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಆ ವಿನಾಶದಿಂದ ರಕ್ಷಿಸಿಕೊಳ್ಳಲು ಒಂದು ನಾವೆಯನ್ನು ನಿರ್ಮಿಸು ಎಂದು ಹೇಳಿದರು. ನೋಹನು ಯಾವುದೇ ಪ್ರಶ್ನೆಗಳನ್ನು ಕೇಳದೆ ಕರ್ತನು ಹೇಳಿದಂತೆಯೇ ಮಾಡಿದರು. ವಿನಾಶದಿಂದ ರಕ್ಷಿಸಲ್ಪಟ್ಟರು.

 

ಕರ್ತನು ಅಬ್ರಹಾಮನಿಗೆ 100 ನೇ ವಯಸ್ಸಿನಲ್ಲಿ ಜನಿಸಿದ ತನ್ನ ಮಗನನ್ನು ಮೋರಿಯಾ ಪರ್ವತಕ್ಕೆ ಕರೆದುಕೊಂಡು ಹೋಗಿ ಬಲಿಕೊಡಲು ಹೇಳಿದರು. ಅಬ್ರಹಾಮನು ತನ್ನ ಹೆಂಡತಿಗೂ ಹೇಳದೆ ಕರ್ತನ ಮಾತನ್ನು ಪಾಲಿಸಿದರು, ಅವಳಿಗೆ ಹೇಳಿದರೆ, ಅವಳು ಅಳುತ್ತಾಳೆ ಮತ್ತು ಅವನನ್ನು ತಡೆಯುತ್ತಾಳೆ ಎಂದು ಭಾವಿಸಿದ್ದರಿಂದ ಅವರು ತನ್ನ ಇಬ್ಬರು ಸೇವಕರನ್ನು ಕರೆದುಕೊಂಡು ಬೆಳಿಗ್ಗೆ ಬೇಗನೆ ಹೊರಟುಹೋದರು. ಕರ್ತನು ತನ್ನ ಪ್ರಶ್ನಾತೀತ ವಿಧೇಯತೆಯನ್ನು ಕರ್ತನು ಆಶೀರ್ವಾದವಾಗಿ ಪರಿವರ್ತಿಸಿದರು. ಅಬ್ರಹಾಮನು ಕರ್ತನ ಮಾತಿಗೆ ವಿಧೇಯನಾಗಿ ಎಲ್ಲಿಗೆ ಹೋಗುತ್ತಿದ್ದಾನೆಂದು ತಿಳಿಯದೆಯೇ ದೇವರ ಮಾತಿಗೆ ಹಾಗೆಯೇ ವಿಧೇಯನಾಗಿ, ನಮಗೆಲ್ಲರಿಗೂ ಮೂಲ ಮಾದರಿಯಾಗಿದ್ದಾರೆ.

 

ಒಬ್ಬ ವ್ಯಕ್ತಿಯ ಜೀವನದಲ್ಲಿ ಅರ್ಧಂಬರ್ಧ ವಿಧೇಯತೆ ಇದ್ದರೆ, ಅದು ಅಪಾಯಕಾರಿ. ನಾವು ಸಹ ಪ್ರತಿದಿನ ದೇವರ ಶಬ್ದವನ್ನು ಕೇಳಿ ದೇವರ ಚಿತ್ತವನ್ನು ಮಾಡುವವರಾಗಿ ಮಾರ್ಪಡೋಣ, ದೇವರು ನೀಡುವ ಹೆಚ್ಚಿನ ಆಶೀರ್ವಾದಗಳನ್ನು ಹೊಂದಿಕೊಂಡು ಆನಂದಿಸೋಣ.

- Mrs. ಸೆಲ್ವಾ ಬೆಂಜಮಿನ್

 

ಪ್ರಾರ್ಥನಾ ಅಂಶ:

ಕಣ್ಮಣಿಯೇ ಕೇಳ್, ಯೆಹೋಶುವಾ ಎದ್ದೇಳು ಪತ್ರಿಕೆಗಳ ಮೂಲಕ ಅನೇಕ ಯೌವನಸ್ಥರು ಕ್ರಿಸ್ತನಿಗಾಗಿ ಕಾರ್ಯ ಮಾಡುವವರಾಗಿ ಮಾರ್ಪಡಲು ಪ್ರಾರ್ಥಿಸಿರಿ.

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al