Village Missionary Movement         கிராம மிஷனரி இயக்கம்

ಧೈನಂದಿನ ಧ್ಯಾನ(Kannada) – 11.11.2025
Share:

By Village Missionary Movement

Tuesday, 11-Nov-2025

ಧೈನಂದಿನ ಧ್ಯಾನ(Kannada) – 11.11.2025

 

ಕುಂಟ ನಾಯಿಮರಿ

 

"ಆತನು ದೀನನನ್ನು ಧೂಳಿಯಿಂದ ಎತ್ತಿ ದರಿದ್ರನನ್ನು ತಿಪ್ಪೆಯಿಂದ ಎಬ್ಬಿಸಿ..." - 1 ಸಮುವೇಲ 2:8

 

ಒಬ್ಬ ಹುಡುಗ ನಾಯಿಮರಿಯನ್ನು ಖರೀದಿಸಲು ಅಂಗಡಿಗೆ ಹೋದನು. ಅಲ್ಲಿ ಮೂರು ನಾಯಿಮರಿಗಳಿದ್ದವು. ಪ್ರತಿ ನಾಯಿಮರಿಯ ಬೆಲೆ 300 ರೂ, ಆದರೆ ಹುಡುಗನ ಬಳಿ ಕೇವಲ 200 ರೂ. ಇತ್ತು. ಆದಾಗ್ಯೂ, ಅವನು ನಾಯಿಮರಿಗಳನ್ನು ನೋಡಿಬಿಟ್ಟು ಹೊರಟು ಹೋಗುವ ಆಲೋಚನೆಯೊಂದಿಗೆ ಒಳಗೆ ಹೋದನು. ಅವುಗಳನ್ನು ಒಂದೊಂದಾಗಿ ಕೈಯಲ್ಲಿ ಎತ್ತಿಕೊಂಡು ನೋಡಿದನು. ಒಂದು ನಾಯಿಮರಿಗೆ ಕಾಲು ದುರ್ಬಲವಾಗಿತ್ತು. ಅವನು ಅದನ್ನು ನೋಡುತ್ತಲೇ ಇದ್ದನು. ಅಂಗಡಿಯವನು ಅವನಿಗೆ, "ನೀನು ಆ ನಾಯಿಮರಿಯನ್ನು ತೆಗೆದುಕೊಳ್ಳಲು ಬಯಸಿದರೆ, ಅದನ್ನು ನಿನಗೆ 200 ರೂ.ಗೆ ಕೊಡುತ್ತೇನೆ" ಎಂದು ಹೇಳಿದರು. ಆ ಹುಡುಗ, "ನಾನು ಸ್ವಲ್ಪ ಸಮಯದ ನಂತರ ಬಂದು ಈ ನಾಯಿಮರಿಯನ್ನು ಖರೀದಿಸುತ್ತೇನೆ" ಎಂದು ಹೇಳಿಬಿಟ್ಟು ಮನೆಗೆ ಹೋಗಿ, ತನ್ನ ತಾಯಿಯಿಂದ 100 ರೂಪಾಯಿಯನ್ನು ತೆಗೆದುಕೊಂಡು, ಅಂಗಡಿಗೆ ಬಂದನು. ಅವನು ಅಂಗವಿಕಲ ನಾಯಿಮರಿಯನ್ನು ಕೈಯಲ್ಲಿ ತೆಗೆದುಕೊಂಡು ಅಂಗಡಿಯವನಿಗೆ 300 ರೂಪಾಯಿಗಳನ್ನು ಕೊಟ್ಟನು. ಅವರು ಆಶ್ಚರ್ಯದಿಂದ "ಅದು ಕುಂಟ ನಾಯಿಮರಿ. ಇದಕ್ಕೆ 200 ರೂಪಾಯಿ ಸಾಕು" ಎಂದರು. ನಂತರ ಹುಡುಗ ತನ್ನ ಪ್ಯಾಂಟ್‌ನ ಬಲಭಾಗವನ್ನು ಎತ್ತಿ ಅವನಿಗೆ ತನ್ನ ಕಾಲನ್ನು ತೋರಿಸಿದನು. ಅವನಿಗೆ ಬಲಗಾಲಿರಲಿಲ್ಲ, ಆದರೆ ಮರದ ಕಾಲಿತ್ತು. ಅಯ್ಯಾ, ನಾನೊಬ್ಬ ಕುಂಟ ಎಂದು ಇತರರು ಕೀಳಾಗಿ ನೋಡುವುದನ್ನು ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಅದರಂತೆ "ಈ ಕುಂಟ ನಾಯಿಮರಿಯನ್ನು ಕೀಳಾಗಿ ಕಾಣಲು ನನಗೆ ಮನಸ್ಸಿಲ್ಲ" ಎಂದು ಹೇಳಿದನು. 

 

ಮೂಲಪಿತೃಗಳಲ್ಲಿ ಒಬ್ಬರು ಯಾಕೋಬನು. ಅವರ ಹೆಂಡತಿಯರು ರಾಹೇಲ್ ಮತ್ತು ಲೇಯಾ. ಯಾಕೋಬನು ಲೇಯಾಳಿಗಿಂತ ರಾಹೇಲಳನ್ನು ಹೆಚ್ಚಾಗಿ ಪ್ರೀತಿಸಿ, ಇನ್ನೂ ಏಳು ವರ್ಷಗಳ ಕಾಲ ಲಾಬಾನನ ಸೇವೆ ಮಾಡಿದನು. ಮಂದ ದೃಷ್ಟಿಯುಳ್ಳ ಲೇಯಾಳನ್ನು ಅತ್ಯಲ್ಪವಾಗಿ ಪರಿಗಣಿಸಲಾಯಿತು. ಅವಳು ಅತ್ಯಲ್ಪವಾಗಿ ಎಣಿಸಲ್ಪಡಲು, ಅವಳ ದೃಷ್ಟಿ ದೋಷವೋ ಅಥವಾ ಬೇರೆ ಯಾವುದೋ ಕಾರಣವೋ ಇದ್ದಿರಬಹುದು. ಇದನ್ನು ಕರ್ತನು ಕಂಡು, ಅವಳನ್ನು ಗರ್ಭಿಣಿಯನ್ನಾಗಿ ಮಾಡಿದರು. ರಾಹೇಲಳು ಹಲವು ವರ್ಷಗಳ ಕಾಲ ಬಂಜೆಯಾಗಿದ್ದಳು. ಲೇಯಾ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದಳು. ಹೀಗೆ, ತನ್ನ ಅಂಗವೈಕಲ್ಯದಿಂದಾಗಿ ಅತ್ಯಲ್ಪ ಎಂದು ಪರಿಗಣಿಸಲ್ಪಟ್ಟವಳ ಸಂತತಿಯನ್ನು ಕರ್ತನು ಹೆಚ್ಚಿಸಿದರು. 

 

ಪ್ರಿಯರೇ! ಯಾವ ಪರಿಸ್ಥಿತಿಯಲ್ಲಿ ಇದ್ದರೂ ನಿಮ್ಮನ್ನು ನೀವು ಕೀಳಾಗಿ ಕಾಣಬೇಡಿ. ಇತರರನ್ನೂ ಕೀಳಾಗಿ ಕಾಣಬೇಡಿ. ಏಕೆಂದರೆ ದೈಹಿಕ ಅಂಗವೈಕಲ್ಯದಿಂದ ಜನಿಸಿದವರು ದೇವರ ಪ್ರತಿರೂಪದಲ್ಲಿಯೂ ಸೃಷ್ಟಿಸಲ್ಪಟ್ಟಿದ್ದಾರೆ. ಈ ಜಗತ್ತಿನಲ್ಲಿ ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟ ಎಲ್ಲರಲ್ಲಿ ದೇವರು ಕೆಲವು ವಿಶೇಷ ಸಾಮರ್ಥ್ಯವನ್ನು ಇಟ್ಟಿದ್ದಾರೆ. ನಮ್ಮೊಳಗಿರುವ ತಾಳ್ಮೆಯ ಮನೋಭಾವ ನಮ್ಮ ಪ್ರಗತಿಯನ್ನು ತಡೆಯುತ್ತದೆ. ನಮ್ಮ ಸಂತೋಷಕ್ಕೆ ಪೂರ್ಣವಿರಾಮ ಹಾಕುತ್ತದೆ. ತಾಳ್ಮೆಯ ಮನೋಭಾವಕ್ಕೆ "ಟಾ ಟಾ" ಹೇಳುವವರು ಮಾತ್ರವೇ ಜೀವನದಲ್ಲಿ ಏನು ಬೇಕಾದರೂ ಸಾಧಿಸಲು ಸಾಧ್ಯ.

- Bro. ಶಂಕರ್ ರಾಜ್

 

ಪ್ರಾರ್ಥನಾ ಅಂಶ:

ಪ್ರತಿ ಜಿಲ್ಲೆಯಲ್ಲೂ ಮನೆ ಪ್ರಾರ್ಥನಾ ಗುಂಪುಗಳನ್ನು ಪ್ರಾರಂಭಿಸುವಂತೆ ಪ್ರಾರ್ಥಿಸಿರಿ..

 

*Whatsapp*

ಈ ಧ್ಯಾನ ಸಂದೇಶವನ್ನು ತಮಿಳು, ಇಂಗ್ಲಿಷ್, ಹಿಂದಿ, ಮಲಯಾಳಂ, ತೆಲುಗು, ಕನ್ನಡ, ಪಂಜಾಬಿ ಮತ್ತು ಒರಿಯಾ ಭಾಷೆಗಳಲ್ಲಿ ವಾಟ್ಸಾಪ್‌ನಲ್ಲಿ ಪಡೆದುಕೊಳ್ಳಲು *+91 94440 11864* ಈ ಸಂಖ್ಯೆಯನ್ನು ಸಂಪರ್ಕಿಸಿ.

 

www.vmm.org.in

ಈಮೈಲ್:- info@vmm.org.in

Android App: https://play.google.com/store/apps/details?id=com.infobells.vmmorgin

        

ವಿಲೇಜ್ ಮಿಷಿನರಿ ಮೊಮೆಂಟ್ ವಿರುಧುನಗರ್, ಇಂಡಿಯಾ-626001

ಪ್ರಾರ್ಥನಾ ಅವಶ್ಯಕತೆಗಾಗಿ :- +91 93455 40482



hacklink satın al